<p><strong>ಬೆಂಗಳೂರು: </strong>ಒಂದೆಡೆ ನಿಧಾನಗತಿಯಲ್ಲಿ ನಡೆಯುತ್ತಿರುವ `ನಮ್ಮ ಮೆಟ್ರೊ~ ಕಾಮಗಾರಿ, ಇನ್ನೊಂದೆಡೆ ಸದಾ ಜನಜಂಗುಳಿಯಿಂದಿರುವ ಮಾರುಕಟ್ಟೆ, ನಿತ್ಯ ಜಾತ್ರೆಯಿರಬಹುದು ಎಂದೆನಿಸುವ ಬನಶಂಕರಿ ದೇವಾಲಯ... ಹೀಗೆ ಕನಪುರ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರತಿ ನಿತ್ಯ ಜನ ಕಿರಿಕಿರಿ ಅನುಭವಿಸುವುದಕ್ಕೆ ಇವಿಷ್ಟು ಸಾಕು...<br /> <br /> ರಸ್ತೆಯ ಎರಡು ಬದಿಯ ಅಂಚಿನಲ್ಲಿರುವ ಪಾದಚಾರಿ ಮಾರ್ಗದಲ್ಲಿ ಹೂವು, ಹಣ್ಣು ತರಕಾರಿ ಮಾರಾಟಗಾರರು, ಮಧ್ಯ ಭಾಗದಲ್ಲಿ ತೆವಳುತ್ತಾ ಸಾಗಿರುವ ಮೆಟ್ರೊ ಕಾಮಗಾರಿ, ಈ ಮಧ್ಯೆ ನುಸುಳುವ ಪಾದಚಾರಿಗಳು, ಇವೆಲ್ಲದರ ನಡುವೆ ಇರುವ ಇಕ್ಕಟ್ಟಾದ ಜಾಗದಲ್ಲಿ ವಾಹನ ಓಡಿಸಬೇಕಾದ ಅನಿವಾರ್ಯತೆ ವಾಹನ ಸವಾರರದ್ದು. ಇನ್ನು, ಬಸ್ಸು ಅಥವಾ ನಾಲ್ಕು ಚಕ್ರದ ವಾಹನಗಳು ಬಂದರೆ ಉಳಿದವರಿಗೆ ಸಂಚರಿಸಲು ಜಾಗವೇ ಇರದು.<br /> <br /> ಶುಕ್ರವಾರ ಮತ್ತು ವಿಶೇಷ ದಿನಗಳಲ್ಲಿ ದೇವಸ್ಥಾನಕ್ಕೆ ದಾಂಗುಡಿಯಿಡುವ ಭಕ್ತಸಾಗರ ಮತ್ತು ಬೀದಿ ಬದಿಯ ಮಾರಾಟಗಾರರು ಕೂಡ ಅಸ್ತವ್ಯಸ್ತದ ಒಂದು ಭಾಗವೇ ಆಗಿ ಹೋಗಿದ್ದಾರೆ. <br /> <br /> <strong>ಪಾದಚಾರಿ ಸ್ಥಿತಿ ದೇವರಿಗೆ ಪ್ರೀತಿ!</strong><br /> ವಾಹನ ನಿಲುಗಡೆ, ಬಸ್ಸಿಗಾಗಿ ಕಾಯುವ ಪ್ರಯಾಣಿಕರ ನಿಮಿತ್ತ ಸಂಚಾರ ನಿಯಮಗಳನ್ನು ಸರಿಯಾಗಿ ಅನುಸರಿಸಲು ಸಾಧ್ಯವೇ ಇರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ರಸ್ತೆ ವಿಭಜಕಗಳಿಗೇ ಸದ್ಯದ ಮಟ್ಟಿಗೆ ಸ್ಥಳವಿಲ್ಲ.<br /> <br /> ಓಡಾಡುವ ರಸ್ತೆ ಹೊಂಡ ದಿಣ್ಣೆಗಳಿಂದ ಕೂಡಿವೆ. ಈ ಮಾರ್ಗದಲ್ಲಿ ಚಲಿಸುವ ವಾಹನ ಸವಾರರೂ ಪ್ರತಿ ದಿನ ನರಕಯಾತನೆ ಅನುಭವಿಸುವಂತಾಗಿದೆ. ನಾಲ್ಕು ರಸ್ತೆಗಳು ಕೂಡುವ ಈ ಭಾಗದಲ್ಲಿ ವಾಹನಗಳ ಭರಾಟೆ ಹೆಚ್ಚಿರುವುದರಿಂದ ಪಾದಚಾರಿಗಳ ಸ್ಥಿತಿ ದೇವರಿಗೆ ಪ್ರೀತಿ.<br /> <br /> ಈ ಭಾಗದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣವು ಸಾರ್ವಜನಿಕ ಬಳಕೆಗೆ ಮುಕ್ತವಾಗದೇ ಇರುವುದರಿಂದ ಸಂಚಾರ ಅಸ್ತವ್ಯಸ್ತಗೊಳ್ಳುತ್ತಾ, ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. <br /> <br /> ಕೇಂದ್ರ ಸರ್ಕಾರದ `ನರ್ಮ್~ ಯೋಜನೆಯಡಿ 32 ಕೋಟಿ ರೂಪಾಯಿ ವೆಚ್ಚದಲ್ಲಿ ಬನಶಂಕರಿ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಆದರೆ ಉದ್ಘಾಟನೆಯ ಭಾಗ್ಯ ಇನ್ನೂ ಕಂಡಿಲ್ಲ!<br /> <br /> ನಿಲ್ದಾಣದ ಕುರಿತು: ಒಂದೂವರೆ ಎಕರೆ ಜಾಗದಲ್ಲಿರುವ ಬಸ್ಸು ನಿಲ್ದಾಣವು ಮೂರು ಅಂಕಗಳನ್ನು ಹೊಂದಿದೆ. ಕೆಳ ಮಹಡಿಯಲ್ಲಿ ಇರುವ ಕಾರು ನಿಲುಗಡೆ ಸ್ಥಳವು ಸುಮಾರು 200 ಕಾರುಗಳನ್ನು ನಿಲ್ಲಿಸಲು ಶಕ್ತವಾಗಿದೆ. <br /> ಒಂದನೇ ಮಹಡಿಯಲ್ಲಿ ದೈನಿಕ ಮತ್ತು ಮಾಸಿಕ ಪಾಸ್ ಕೌಂಟರ್ಗಳು, ಪುರುಷರು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಶೌಚಾಲಯ ಕೊಠಡಿಗಳಿವೆ. ಉಳಿದ 2 ಮತ್ತು 3ನೇ ಮಹಡಿಯು ಸಾರಿಗೆ ಸಿಬ್ಬಂದಿಗಳಿಗೆ ಮೀಸಲಾಗಿದೆ. <br /> <br /> ನಗರದ ಕೇಂದ್ರ ಭಾಗದಲ್ಲಿರುವ ಬನಶಂಕರಿ ನಿಲ್ದಾಣದಿಂದ ಪ್ರತಿ ದಿನ 220 ಶೆಡ್ಯೂಲ್ಗಳಲ್ಲಿ 1,600 ಬಸ್ಸುಗಳು ನಗರದ ವಿವಿಧ ಭಾಗಗಳಿಗೆ ತೆರಳುತ್ತವೆ. ದೊಡ್ಡ ಪ್ರಮಾಣದಲ್ಲಿ ಜನ ಸಂಚಾರವಿರುವ ಪ್ರದೇಶಕ್ಕೆ ಅವಶ್ಯವಿರುವ ಬಸ್ಸು ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳೇ ಕಳೆದಿವೆ. <br /> <br /> ಆದರೆ ಜನಪ್ರತಿನಿಧಿಗಳು ಇದನ್ನು ಉದ್ಘಾಟಿಸಲು ಮೀನ ಮೇಷ ಎಣಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. <br /> <br /> ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭುದಾಸ್ಅವರು, `ಬನಶಂಕರಿ ವಾರ್ಡ್ನ ಉಪ ಚುನಾವಣೆ ಮತ್ತು ರಾಜಕೀಯ ಬಿಕ್ಕಟ್ಟು ಎದುರಾಗಿದ್ದರಿಂದ ಬಸ್ ನಿಲ್ದಾಣ ಉದ್ಘಾಟನೆ ವಿಳಂಬವಾಯಿತು. ನಗರಾಭಿವೃದ್ಧಿ ಸಚಿವಾಲಯಕ್ಕೆ ಈ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದೆ. ನಿಲ್ದಾಣವ ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ~ ಎಂದು ತಿಳಿಸಿದರು.<br /> <strong><br /> ಸಮಸ್ಯೆಯ ಬಗ್ಗೆ ಜನಾಭಿಪ್ರಾಯ</strong><br /> ಸದಾ ಜನಜಂಗುಳಿಯಿರುವ ಈ ಪ್ರದೇಶಕ್ಕೆ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಎಂದಾಗ ಸಂಚಾರ ವ್ಯವಸ್ಥೆಯ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಬಗೆಹರಿಯಬಹುದು ಎಂದುಕೊಂಡೆವು. ಆದರೆ ಕಾಮಗಾರಿ ಪೂರ್ಣಗೊಂಡರೂ ಅದು ಜನರ ಬಳಕೆಗೆ ಮುಕ್ತವಾಗಿಲ್ಲ. <br /> <strong> - ಅಂಜನಪ್ಪ (ಹೂವಿನ ವ್ಯಾಪಾರಿ)</strong><br /> <br /> ಅತಿಯಾದ ಜನಸಂಖ್ಯೆ ಇರುವುದರಿಂದ ಈ ಭಾಗದಲ್ಲಿ ವಾಹನ ಸವಾರಿ ನಡೆಸುವುದು ಬಲು ಕಷ್ಟ. ಇದಕ್ಕೆ ಪೂರಕವಾಗಿ `ನಮ್ಮ ಮೆಟ್ರೊ~ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರು ಇನ್ನಷ್ಟು ತೊಂದರೆ ಪಡುವಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಸಾರ್ವಜನಿಕರ ಯೋಗ ಕ್ಷೇಮವನ್ನು ಕಡೆಗಣಿಸಿ ರಾಜಕೀಯ ಜಂಜಾಟದಲ್ಲಿ ಮುಳುಗಿರುವುದು ವಿಪರ್ಯಾಸ. <br /> <strong> -ರಾಜೇಶ್ (ಬೈಕ್ ಸವಾರ)</strong><br /> <br /> ಯಾವುದೇ ಸಂಚಾರ ನಿಯಮಗಳನ್ನು ಅನುಸರಿಸಲು ಅವಕಾಶವಿಲ್ಲದಷ್ಟು ಜನ ಮತ್ತು ವಾಹನಗಳು ಒಟ್ಟಿಗೆ ನುಗ್ಗುವುದರಿಂದ ಅಪಘಾತಗಳಾಗದೇ ಇರುವುದೇ ದೊಡ್ಡ ವಿಷಯ. ಆದಷ್ಟು ಬೇಗನೇ ನಿಲ್ದಾಣ ಉದ್ಘಾಟನೆಯಾಗಬೇಕು. ಇದರೊಂದಿಗೆ ಮೆಟ್ರೊ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸಂಚಾರ ಸಮಸ್ಯೆಯನ್ನು ಬಗೆಹರಿಸಲು ಬಿಎಂಟಿಸಿ ಚಿಂತನೆ ನಡೆಸಬೇಕು. <br /> <strong> -ರವಿ ( ವಿದ್ಯಾರ್ಥಿ )<br /> </strong><br /> ಕಾಮಗಾರಿ ಪೂರ್ಣವಾದ ನಂತರವೂ ಉದ್ಘಾಟನೆಗಾಗಿ ಜನಪ್ರತಿನಿಧಿಗಳನ್ನು ಕಾಯುವುದರಲ್ಲಿ ಅರ್ಥವಿಲ್ಲ. ನಿಲ್ದಾಣದಿಂದ ಜನರು ರಸ್ತೆಯಲ್ಲಿ ನಿಲ್ಲುವುದು ತಪ್ಪುತ್ತದೆ. ಇದರಿಂದ ವಾಹನ ಸವಾರರ ದಾರಿಯೂ ಸಲೀಸಾಗುತ್ತದೆ. ಆದ್ದರಿಂದ ಸಾರಿಗೆ ಇಲಾಖೆ ಶೀಘ್ರವೇ ಉದ್ಘಾಟನೆ ಮಾಡುವತ್ತ ಚಿಂತಿಸಬೇಕು. <br /> <strong> -ಹೇಮಂತ್ ( ಇನ್ಫೋಸಿಸ್ ಉದ್ಯೋಗಿ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಒಂದೆಡೆ ನಿಧಾನಗತಿಯಲ್ಲಿ ನಡೆಯುತ್ತಿರುವ `ನಮ್ಮ ಮೆಟ್ರೊ~ ಕಾಮಗಾರಿ, ಇನ್ನೊಂದೆಡೆ ಸದಾ ಜನಜಂಗುಳಿಯಿಂದಿರುವ ಮಾರುಕಟ್ಟೆ, ನಿತ್ಯ ಜಾತ್ರೆಯಿರಬಹುದು ಎಂದೆನಿಸುವ ಬನಶಂಕರಿ ದೇವಾಲಯ... ಹೀಗೆ ಕನಪುರ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರತಿ ನಿತ್ಯ ಜನ ಕಿರಿಕಿರಿ ಅನುಭವಿಸುವುದಕ್ಕೆ ಇವಿಷ್ಟು ಸಾಕು...<br /> <br /> ರಸ್ತೆಯ ಎರಡು ಬದಿಯ ಅಂಚಿನಲ್ಲಿರುವ ಪಾದಚಾರಿ ಮಾರ್ಗದಲ್ಲಿ ಹೂವು, ಹಣ್ಣು ತರಕಾರಿ ಮಾರಾಟಗಾರರು, ಮಧ್ಯ ಭಾಗದಲ್ಲಿ ತೆವಳುತ್ತಾ ಸಾಗಿರುವ ಮೆಟ್ರೊ ಕಾಮಗಾರಿ, ಈ ಮಧ್ಯೆ ನುಸುಳುವ ಪಾದಚಾರಿಗಳು, ಇವೆಲ್ಲದರ ನಡುವೆ ಇರುವ ಇಕ್ಕಟ್ಟಾದ ಜಾಗದಲ್ಲಿ ವಾಹನ ಓಡಿಸಬೇಕಾದ ಅನಿವಾರ್ಯತೆ ವಾಹನ ಸವಾರರದ್ದು. ಇನ್ನು, ಬಸ್ಸು ಅಥವಾ ನಾಲ್ಕು ಚಕ್ರದ ವಾಹನಗಳು ಬಂದರೆ ಉಳಿದವರಿಗೆ ಸಂಚರಿಸಲು ಜಾಗವೇ ಇರದು.<br /> <br /> ಶುಕ್ರವಾರ ಮತ್ತು ವಿಶೇಷ ದಿನಗಳಲ್ಲಿ ದೇವಸ್ಥಾನಕ್ಕೆ ದಾಂಗುಡಿಯಿಡುವ ಭಕ್ತಸಾಗರ ಮತ್ತು ಬೀದಿ ಬದಿಯ ಮಾರಾಟಗಾರರು ಕೂಡ ಅಸ್ತವ್ಯಸ್ತದ ಒಂದು ಭಾಗವೇ ಆಗಿ ಹೋಗಿದ್ದಾರೆ. <br /> <br /> <strong>ಪಾದಚಾರಿ ಸ್ಥಿತಿ ದೇವರಿಗೆ ಪ್ರೀತಿ!</strong><br /> ವಾಹನ ನಿಲುಗಡೆ, ಬಸ್ಸಿಗಾಗಿ ಕಾಯುವ ಪ್ರಯಾಣಿಕರ ನಿಮಿತ್ತ ಸಂಚಾರ ನಿಯಮಗಳನ್ನು ಸರಿಯಾಗಿ ಅನುಸರಿಸಲು ಸಾಧ್ಯವೇ ಇರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ರಸ್ತೆ ವಿಭಜಕಗಳಿಗೇ ಸದ್ಯದ ಮಟ್ಟಿಗೆ ಸ್ಥಳವಿಲ್ಲ.<br /> <br /> ಓಡಾಡುವ ರಸ್ತೆ ಹೊಂಡ ದಿಣ್ಣೆಗಳಿಂದ ಕೂಡಿವೆ. ಈ ಮಾರ್ಗದಲ್ಲಿ ಚಲಿಸುವ ವಾಹನ ಸವಾರರೂ ಪ್ರತಿ ದಿನ ನರಕಯಾತನೆ ಅನುಭವಿಸುವಂತಾಗಿದೆ. ನಾಲ್ಕು ರಸ್ತೆಗಳು ಕೂಡುವ ಈ ಭಾಗದಲ್ಲಿ ವಾಹನಗಳ ಭರಾಟೆ ಹೆಚ್ಚಿರುವುದರಿಂದ ಪಾದಚಾರಿಗಳ ಸ್ಥಿತಿ ದೇವರಿಗೆ ಪ್ರೀತಿ.<br /> <br /> ಈ ಭಾಗದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣವು ಸಾರ್ವಜನಿಕ ಬಳಕೆಗೆ ಮುಕ್ತವಾಗದೇ ಇರುವುದರಿಂದ ಸಂಚಾರ ಅಸ್ತವ್ಯಸ್ತಗೊಳ್ಳುತ್ತಾ, ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. <br /> <br /> ಕೇಂದ್ರ ಸರ್ಕಾರದ `ನರ್ಮ್~ ಯೋಜನೆಯಡಿ 32 ಕೋಟಿ ರೂಪಾಯಿ ವೆಚ್ಚದಲ್ಲಿ ಬನಶಂಕರಿ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಆದರೆ ಉದ್ಘಾಟನೆಯ ಭಾಗ್ಯ ಇನ್ನೂ ಕಂಡಿಲ್ಲ!<br /> <br /> ನಿಲ್ದಾಣದ ಕುರಿತು: ಒಂದೂವರೆ ಎಕರೆ ಜಾಗದಲ್ಲಿರುವ ಬಸ್ಸು ನಿಲ್ದಾಣವು ಮೂರು ಅಂಕಗಳನ್ನು ಹೊಂದಿದೆ. ಕೆಳ ಮಹಡಿಯಲ್ಲಿ ಇರುವ ಕಾರು ನಿಲುಗಡೆ ಸ್ಥಳವು ಸುಮಾರು 200 ಕಾರುಗಳನ್ನು ನಿಲ್ಲಿಸಲು ಶಕ್ತವಾಗಿದೆ. <br /> ಒಂದನೇ ಮಹಡಿಯಲ್ಲಿ ದೈನಿಕ ಮತ್ತು ಮಾಸಿಕ ಪಾಸ್ ಕೌಂಟರ್ಗಳು, ಪುರುಷರು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಶೌಚಾಲಯ ಕೊಠಡಿಗಳಿವೆ. ಉಳಿದ 2 ಮತ್ತು 3ನೇ ಮಹಡಿಯು ಸಾರಿಗೆ ಸಿಬ್ಬಂದಿಗಳಿಗೆ ಮೀಸಲಾಗಿದೆ. <br /> <br /> ನಗರದ ಕೇಂದ್ರ ಭಾಗದಲ್ಲಿರುವ ಬನಶಂಕರಿ ನಿಲ್ದಾಣದಿಂದ ಪ್ರತಿ ದಿನ 220 ಶೆಡ್ಯೂಲ್ಗಳಲ್ಲಿ 1,600 ಬಸ್ಸುಗಳು ನಗರದ ವಿವಿಧ ಭಾಗಗಳಿಗೆ ತೆರಳುತ್ತವೆ. ದೊಡ್ಡ ಪ್ರಮಾಣದಲ್ಲಿ ಜನ ಸಂಚಾರವಿರುವ ಪ್ರದೇಶಕ್ಕೆ ಅವಶ್ಯವಿರುವ ಬಸ್ಸು ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳೇ ಕಳೆದಿವೆ. <br /> <br /> ಆದರೆ ಜನಪ್ರತಿನಿಧಿಗಳು ಇದನ್ನು ಉದ್ಘಾಟಿಸಲು ಮೀನ ಮೇಷ ಎಣಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. <br /> <br /> ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭುದಾಸ್ಅವರು, `ಬನಶಂಕರಿ ವಾರ್ಡ್ನ ಉಪ ಚುನಾವಣೆ ಮತ್ತು ರಾಜಕೀಯ ಬಿಕ್ಕಟ್ಟು ಎದುರಾಗಿದ್ದರಿಂದ ಬಸ್ ನಿಲ್ದಾಣ ಉದ್ಘಾಟನೆ ವಿಳಂಬವಾಯಿತು. ನಗರಾಭಿವೃದ್ಧಿ ಸಚಿವಾಲಯಕ್ಕೆ ಈ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದೆ. ನಿಲ್ದಾಣವ ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ~ ಎಂದು ತಿಳಿಸಿದರು.<br /> <strong><br /> ಸಮಸ್ಯೆಯ ಬಗ್ಗೆ ಜನಾಭಿಪ್ರಾಯ</strong><br /> ಸದಾ ಜನಜಂಗುಳಿಯಿರುವ ಈ ಪ್ರದೇಶಕ್ಕೆ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಎಂದಾಗ ಸಂಚಾರ ವ್ಯವಸ್ಥೆಯ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಬಗೆಹರಿಯಬಹುದು ಎಂದುಕೊಂಡೆವು. ಆದರೆ ಕಾಮಗಾರಿ ಪೂರ್ಣಗೊಂಡರೂ ಅದು ಜನರ ಬಳಕೆಗೆ ಮುಕ್ತವಾಗಿಲ್ಲ. <br /> <strong> - ಅಂಜನಪ್ಪ (ಹೂವಿನ ವ್ಯಾಪಾರಿ)</strong><br /> <br /> ಅತಿಯಾದ ಜನಸಂಖ್ಯೆ ಇರುವುದರಿಂದ ಈ ಭಾಗದಲ್ಲಿ ವಾಹನ ಸವಾರಿ ನಡೆಸುವುದು ಬಲು ಕಷ್ಟ. ಇದಕ್ಕೆ ಪೂರಕವಾಗಿ `ನಮ್ಮ ಮೆಟ್ರೊ~ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರು ಇನ್ನಷ್ಟು ತೊಂದರೆ ಪಡುವಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಸಾರ್ವಜನಿಕರ ಯೋಗ ಕ್ಷೇಮವನ್ನು ಕಡೆಗಣಿಸಿ ರಾಜಕೀಯ ಜಂಜಾಟದಲ್ಲಿ ಮುಳುಗಿರುವುದು ವಿಪರ್ಯಾಸ. <br /> <strong> -ರಾಜೇಶ್ (ಬೈಕ್ ಸವಾರ)</strong><br /> <br /> ಯಾವುದೇ ಸಂಚಾರ ನಿಯಮಗಳನ್ನು ಅನುಸರಿಸಲು ಅವಕಾಶವಿಲ್ಲದಷ್ಟು ಜನ ಮತ್ತು ವಾಹನಗಳು ಒಟ್ಟಿಗೆ ನುಗ್ಗುವುದರಿಂದ ಅಪಘಾತಗಳಾಗದೇ ಇರುವುದೇ ದೊಡ್ಡ ವಿಷಯ. ಆದಷ್ಟು ಬೇಗನೇ ನಿಲ್ದಾಣ ಉದ್ಘಾಟನೆಯಾಗಬೇಕು. ಇದರೊಂದಿಗೆ ಮೆಟ್ರೊ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸಂಚಾರ ಸಮಸ್ಯೆಯನ್ನು ಬಗೆಹರಿಸಲು ಬಿಎಂಟಿಸಿ ಚಿಂತನೆ ನಡೆಸಬೇಕು. <br /> <strong> -ರವಿ ( ವಿದ್ಯಾರ್ಥಿ )<br /> </strong><br /> ಕಾಮಗಾರಿ ಪೂರ್ಣವಾದ ನಂತರವೂ ಉದ್ಘಾಟನೆಗಾಗಿ ಜನಪ್ರತಿನಿಧಿಗಳನ್ನು ಕಾಯುವುದರಲ್ಲಿ ಅರ್ಥವಿಲ್ಲ. ನಿಲ್ದಾಣದಿಂದ ಜನರು ರಸ್ತೆಯಲ್ಲಿ ನಿಲ್ಲುವುದು ತಪ್ಪುತ್ತದೆ. ಇದರಿಂದ ವಾಹನ ಸವಾರರ ದಾರಿಯೂ ಸಲೀಸಾಗುತ್ತದೆ. ಆದ್ದರಿಂದ ಸಾರಿಗೆ ಇಲಾಖೆ ಶೀಘ್ರವೇ ಉದ್ಘಾಟನೆ ಮಾಡುವತ್ತ ಚಿಂತಿಸಬೇಕು. <br /> <strong> -ಹೇಮಂತ್ ( ಇನ್ಫೋಸಿಸ್ ಉದ್ಯೋಗಿ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>