<p><strong>ಬಾಗೇಪಲ್ಲಿ:</strong> ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ದಲಿತರಿಗೆ ನಿವೇಶನ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಗೌನಿಪಲ್ಲಿ ಗ್ರಾಮದಿಂದ ತಾಲ್ಲೂಕು ಕಚೇರಿ ಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.<br /> <br /> ಗೌನಿಪಲ್ಲಿ ಗ್ರಾಮದಿಂದ ಹೊರಟ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ರೆಡ್ಡಿಕೆರೆ ಮೂಲಕ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ತಾಲ್ಲೂಕು ಕಚೇರಿಯ ಎದುರು ಜಮಾಯಿಸಿದ ಅವರು, `ದಲಿತರಿಗೆ ನಿವೇಶನ ಕಲ್ಪಿ ಸುವಲ್ಲಿ ತಾಲ್ಲೂಕು ಆಡಳಿತ ವರ್ಗ ವಿಫಲವಾಗಿದೆ~ ಎಂದು ಆರೋಪಿಸಿದರು. <br /> <br /> ಸಮಿತಿ ಸಂಚಾಲಕ ಕೆ.ಸಿ.ರಾಜಾ ಕಾಂತ್ ಮಾತನಾಡಿ, ` ಅಸ್ಪೃಶ್ಯತೆ ಮತ್ತು ಅಸಮಾನತೆಯಿಂದ ದಲಿತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಮೂಲ ಸೌಕರ್ಯಗಳಿಂದ ವಂಚಿತ ರಾಗುತ್ತಿದ್ದಾರೆ. ಇಂದಿಗೂ ದಲಿತರ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಗಳು ಆಗಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> `ಗೌನಿಪಲ್ಲಿ ಗ್ರಾಮದಲ್ಲಿ ದಲಿತರು ಮನೆ-ನಿವೇಶನಗಳಿಲ್ಲದೆ ಪರದಾಡು ತ್ತಿದ್ದಾರೆ. ಅವರಿಗೆ ವಿತರಿಸಿದ ತಾತ್ಕಾಲಿಕ ಪಡಿತರ ಚೀಟಿಗಳನ್ನು ಕಾಯಂ ಗೊಳಿಸಬೇಕು. ಕುಟುಂಬದ ಸದಸ್ಯರಿಗೆ ಅಗತ್ಯ ಇರುವಷ್ಟು ಧಾನ್ಯಗಳನ್ನು ವಿತರಿಸಬೇಕು~ ಎಂದು ಆಗ್ರಹಪಡಿಸಿದರು.<br /> <br /> ಸಮಿತಿ ಮುಖಂಡರಾದ ಬಿ.ವಿ.ವೆಂಕಟ ರವಣ, ಸಿ.ಜಿ ಗಂಗಪ್ಪ, ನಾರಾಯಣ ಸ್ವಾಮಿ, ಲಕ್ಷ್ಮೀನರಸಿಂಹಪ್ಪ, ಕೋಟಪ್ಪ, ಜಿ.ನರಸಿಂಹಪ್ಪ, ನಾರಾಯಣಪ್ಪ, ಪ್ರಕಾಶ, ರಾಜು, ಕೆ.ಸಿ.ರವಣಪ್ಪ, ಬಾಲಕೃಷ್ಣ, ಮಹೇಶ್, ನಾಗರಾಜ, ರಮಣ, ನರೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗೇಪಲ್ಲಿ:</strong> ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ದಲಿತರಿಗೆ ನಿವೇಶನ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಗೌನಿಪಲ್ಲಿ ಗ್ರಾಮದಿಂದ ತಾಲ್ಲೂಕು ಕಚೇರಿ ಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.<br /> <br /> ಗೌನಿಪಲ್ಲಿ ಗ್ರಾಮದಿಂದ ಹೊರಟ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ರೆಡ್ಡಿಕೆರೆ ಮೂಲಕ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ತಾಲ್ಲೂಕು ಕಚೇರಿಯ ಎದುರು ಜಮಾಯಿಸಿದ ಅವರು, `ದಲಿತರಿಗೆ ನಿವೇಶನ ಕಲ್ಪಿ ಸುವಲ್ಲಿ ತಾಲ್ಲೂಕು ಆಡಳಿತ ವರ್ಗ ವಿಫಲವಾಗಿದೆ~ ಎಂದು ಆರೋಪಿಸಿದರು. <br /> <br /> ಸಮಿತಿ ಸಂಚಾಲಕ ಕೆ.ಸಿ.ರಾಜಾ ಕಾಂತ್ ಮಾತನಾಡಿ, ` ಅಸ್ಪೃಶ್ಯತೆ ಮತ್ತು ಅಸಮಾನತೆಯಿಂದ ದಲಿತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಮೂಲ ಸೌಕರ್ಯಗಳಿಂದ ವಂಚಿತ ರಾಗುತ್ತಿದ್ದಾರೆ. ಇಂದಿಗೂ ದಲಿತರ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಗಳು ಆಗಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> `ಗೌನಿಪಲ್ಲಿ ಗ್ರಾಮದಲ್ಲಿ ದಲಿತರು ಮನೆ-ನಿವೇಶನಗಳಿಲ್ಲದೆ ಪರದಾಡು ತ್ತಿದ್ದಾರೆ. ಅವರಿಗೆ ವಿತರಿಸಿದ ತಾತ್ಕಾಲಿಕ ಪಡಿತರ ಚೀಟಿಗಳನ್ನು ಕಾಯಂ ಗೊಳಿಸಬೇಕು. ಕುಟುಂಬದ ಸದಸ್ಯರಿಗೆ ಅಗತ್ಯ ಇರುವಷ್ಟು ಧಾನ್ಯಗಳನ್ನು ವಿತರಿಸಬೇಕು~ ಎಂದು ಆಗ್ರಹಪಡಿಸಿದರು.<br /> <br /> ಸಮಿತಿ ಮುಖಂಡರಾದ ಬಿ.ವಿ.ವೆಂಕಟ ರವಣ, ಸಿ.ಜಿ ಗಂಗಪ್ಪ, ನಾರಾಯಣ ಸ್ವಾಮಿ, ಲಕ್ಷ್ಮೀನರಸಿಂಹಪ್ಪ, ಕೋಟಪ್ಪ, ಜಿ.ನರಸಿಂಹಪ್ಪ, ನಾರಾಯಣಪ್ಪ, ಪ್ರಕಾಶ, ರಾಜು, ಕೆ.ಸಿ.ರವಣಪ್ಪ, ಬಾಲಕೃಷ್ಣ, ಮಹೇಶ್, ನಾಗರಾಜ, ರಮಣ, ನರೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>