<p><strong>ಬೆಂಗಳೂರು:</strong> ‘ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ನೀರಾವರಿ ಬಳಕೆಯ ನೀರಿಗೂ ಸೂಕ್ತ ದರ ನಿಗದಿ ಮಾಡಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅಭಿಪ್ರಾಯಪಟ್ಟರು.<br /> <br /> ಕೃಷ್ಣ ಭಾಗ್ಯ ಜಲ ನಿಗಮವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಸಣ್ಣ ನೀರಾವರಿ ಹಾಗೂ ನಿರ್ವಹಣೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ನೀರಿನ ಮೌಲ್ಯದ ಬಗ್ಗೆ ತಿಳಿವಳಿಕೆಯಿಲ್ಲದೇ ಇರುವುದರಿಂದ ನೀರು ಪೋಲಾಗುತ್ತಿದೆ. ಹಾಗಾಗಿ ನೀರಾವರಿ ಬಳಕೆಯ ನೀರಿಗೂ ದರ ವಿಧಿಸಬೇಕು’ ಎಂದು ಹೇಳಿದರು.<br /> <br /> ‘ಹನಿ ನೀರಾವರಿ ಪದ್ದತಿಯಿಂದ ನೀರಿನ ಸದ್ಬಳಕೆಯಾಗುವುದಲ್ಲದೇ ಭೂಮಿ ಫಲವತ್ತತೆಯಿಂದ ಕೂಡಿರುತ್ತದೆ. ರೈತರು ಆದಷ್ಟು ಹನಿ ನೀರಾವರಿ ಪದ್ಧತಿಗೆ ಒತ್ತು ನೀಡಬೇಕು’ ಎಂದು ತಿಳಿಸಿದರು. ‘ಹನಿ ನೀರಾವರಿ ಪದ್ಧತಿಗೆ ಸರ್ಕಾರ ಶೇ 90ರಷ್ಟು ಧನಸಹಾಯ ಒದಗಿಸುತ್ತಿದೆ. ಧನಸಹಾಯ ನೀಡುವುದಕ್ಕೆ ಮುಂಚೆ ಜನರು ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಗಮನ ಹರಿಸಿರಲಿಲ್ಲ’ ಎಂದು ತಿಳಿಸಿದರು.<br /> <br /> ‘ನೀರನ್ನು ಮಿತವಾಗಿ ಬಳಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಲಿದೆ. ವಿಶ್ವದ ನಾನಾ ಭಾಗಗಳಲ್ಲಿ ಶುದ್ಧ ನೀರಿಗಾಗಿ ಹೋರಾಟ ನಡೆಯುತ್ತಿದೆ’ ಎಂದು ಹೇಳಿದರು.<br /> <br /> ಇಸ್ರೇಲ್ ರಾಯಭಾರಿ ಮೆಹನಾನ್ ಕನಾಫಿ, ‘ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿ ಪದ್ಧತಿಯ ಅಳವಡಿಕೆಗೆ ರಾಜ್ಯದಲ್ಲಿ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಹನಿ ನೀರಾವರಿ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದೆ’ ಎಂದು ತಿಳಿಸಿದರು.<br /> <br /> <strong>ವ್ಯರ್ಥ ಬಳಕೆ ಸಲ್ಲ</strong><br /> ‘ನೀರಾವರಿ ಬಳಕೆ ನೀರಿನ ಮೇಲೆ ದರ ವಿಧಿಸುವ ಬಗ್ಗೆ ಯಾವುದೇ ಚಿಂತನೆ ಇಲ್ಲ. ಆದರೆ, ವ್ಯರ್ಥ ಬಳಕೆ ತಪ್ಪಿಸಲು ಜನರಿಂದಲೇ ದರ ವಿಧಿಸುವ ಬಗ್ಗೆ ಒತ್ತಾಯ ಬರಬೇಕು’ ಎಂದು ಕೌಶಿಕ್ ಮುಖರ್ಜಿ ತಿಳಿಸಿದರು.<br /> <br /> ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಬಯಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇದರ ಅನುಷ್ಠಾನಕ್ಕೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ’ ಎಂದು ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ನೀರಾವರಿ ಬಳಕೆಯ ನೀರಿಗೂ ಸೂಕ್ತ ದರ ನಿಗದಿ ಮಾಡಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅಭಿಪ್ರಾಯಪಟ್ಟರು.<br /> <br /> ಕೃಷ್ಣ ಭಾಗ್ಯ ಜಲ ನಿಗಮವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಸಣ್ಣ ನೀರಾವರಿ ಹಾಗೂ ನಿರ್ವಹಣೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ನೀರಿನ ಮೌಲ್ಯದ ಬಗ್ಗೆ ತಿಳಿವಳಿಕೆಯಿಲ್ಲದೇ ಇರುವುದರಿಂದ ನೀರು ಪೋಲಾಗುತ್ತಿದೆ. ಹಾಗಾಗಿ ನೀರಾವರಿ ಬಳಕೆಯ ನೀರಿಗೂ ದರ ವಿಧಿಸಬೇಕು’ ಎಂದು ಹೇಳಿದರು.<br /> <br /> ‘ಹನಿ ನೀರಾವರಿ ಪದ್ದತಿಯಿಂದ ನೀರಿನ ಸದ್ಬಳಕೆಯಾಗುವುದಲ್ಲದೇ ಭೂಮಿ ಫಲವತ್ತತೆಯಿಂದ ಕೂಡಿರುತ್ತದೆ. ರೈತರು ಆದಷ್ಟು ಹನಿ ನೀರಾವರಿ ಪದ್ಧತಿಗೆ ಒತ್ತು ನೀಡಬೇಕು’ ಎಂದು ತಿಳಿಸಿದರು. ‘ಹನಿ ನೀರಾವರಿ ಪದ್ಧತಿಗೆ ಸರ್ಕಾರ ಶೇ 90ರಷ್ಟು ಧನಸಹಾಯ ಒದಗಿಸುತ್ತಿದೆ. ಧನಸಹಾಯ ನೀಡುವುದಕ್ಕೆ ಮುಂಚೆ ಜನರು ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಗಮನ ಹರಿಸಿರಲಿಲ್ಲ’ ಎಂದು ತಿಳಿಸಿದರು.<br /> <br /> ‘ನೀರನ್ನು ಮಿತವಾಗಿ ಬಳಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಲಿದೆ. ವಿಶ್ವದ ನಾನಾ ಭಾಗಗಳಲ್ಲಿ ಶುದ್ಧ ನೀರಿಗಾಗಿ ಹೋರಾಟ ನಡೆಯುತ್ತಿದೆ’ ಎಂದು ಹೇಳಿದರು.<br /> <br /> ಇಸ್ರೇಲ್ ರಾಯಭಾರಿ ಮೆಹನಾನ್ ಕನಾಫಿ, ‘ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿ ಪದ್ಧತಿಯ ಅಳವಡಿಕೆಗೆ ರಾಜ್ಯದಲ್ಲಿ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಹನಿ ನೀರಾವರಿ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದೆ’ ಎಂದು ತಿಳಿಸಿದರು.<br /> <br /> <strong>ವ್ಯರ್ಥ ಬಳಕೆ ಸಲ್ಲ</strong><br /> ‘ನೀರಾವರಿ ಬಳಕೆ ನೀರಿನ ಮೇಲೆ ದರ ವಿಧಿಸುವ ಬಗ್ಗೆ ಯಾವುದೇ ಚಿಂತನೆ ಇಲ್ಲ. ಆದರೆ, ವ್ಯರ್ಥ ಬಳಕೆ ತಪ್ಪಿಸಲು ಜನರಿಂದಲೇ ದರ ವಿಧಿಸುವ ಬಗ್ಗೆ ಒತ್ತಾಯ ಬರಬೇಕು’ ಎಂದು ಕೌಶಿಕ್ ಮುಖರ್ಜಿ ತಿಳಿಸಿದರು.<br /> <br /> ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಬಯಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇದರ ಅನುಷ್ಠಾನಕ್ಕೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ’ ಎಂದು ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>