<p>ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ನೀರು ಸೋರುತ್ತಿರುವುದು, ಹೆಗ್ಗಣಗಳು ಮನೆ ಮಾಡಿರುವುದು, ಕಟ್ಟಡದ ಮೆಟ್ಟಿಲು ಮತ್ತು ನೆಲಹಾಸುಗಳಲ್ಲಿ ಪಾಚಿ ಕಟ್ಟಿರುವ ಕುರಿತು ವಿಧಾನ ಪರಿಷತ್ನಲ್ಲಿ ಮಂಗಳವಾರ ಬಿರುಸಿನ ಚರ್ಚೆ ನಡೆಯಿತು. ತಕ್ಷಣವೇ ನವೀಕರಣ ಕಾಮಗಾರಿ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂತು.<br /> <br /> ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಬಿಜೆಪಿಯ ಅಮರನಾಥ ಪಾಟೀಲ, ವಿಧಾನಸೌಧದ ಕೆಲವೆಡೆ ಮಳೆನೀರು ಸೋರುತ್ತಿರುವುದು, ಮೆಟ್ಟಿಲುಗಳ ಬಣ್ಣ ಮಾಸಿರುವುದು, ಕಾರಂಜಿಗಳು ಹಾಳಾಗಿರುವ ಕುರಿತು ವಿವರ ನೀಡಿದರು. ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಅವರು ಹೆಗ್ಗಣಗಳ ಸಮಸ್ಯೆ ಬಿಡಿಸಿಟ್ಟರು.<br /> <br /> ಬಳಿಕ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನೀಡಿದ ಉತ್ತರದಲ್ಲಿ `ವಿಧಾನಸೌಧ ಪಾರಂಪರಿಕ ಕಟ್ಟಡ' ಎಂಬ ಉಲ್ಲೇಖ ಇತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, `ಈ ಕಟ್ಟಡಕ್ಕೆ 56 ವರ್ಷ ಆಗಿದೆ ಅಷ್ಟೆ. 100 ವರ್ಷ ಆದ ಕಟ್ಟಡಗಳಿಗೆ ಮಾತ್ರ ಪಾರಂಪರಿಕ ಕಟ್ಟಡದ ಸ್ಥಾನಮಾನ ನೀಡಲಾಗುತ್ತದೆ. ಕೆಲಸ ಮಾಡಲಾಗದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಾರೆ' ಎಂದು ಎಚ್ಚರಿಸಿದರು.<br /> <br /> ಈ ವಿಷಯ ತಮಗೂ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಈ ವರ್ಷ ವಿಧಾನಸೌಧದಲ್ಲಿನ ನವೀಕರಣ ಕಾಮಗಾರಿಗಳಿಗಾಗಿ 2.70 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ಪರಿಶೀಲನೆ ನಡೆಸಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ನೀರು ಸೋರುತ್ತಿರುವುದು, ಹೆಗ್ಗಣಗಳು ಮನೆ ಮಾಡಿರುವುದು, ಕಟ್ಟಡದ ಮೆಟ್ಟಿಲು ಮತ್ತು ನೆಲಹಾಸುಗಳಲ್ಲಿ ಪಾಚಿ ಕಟ್ಟಿರುವ ಕುರಿತು ವಿಧಾನ ಪರಿಷತ್ನಲ್ಲಿ ಮಂಗಳವಾರ ಬಿರುಸಿನ ಚರ್ಚೆ ನಡೆಯಿತು. ತಕ್ಷಣವೇ ನವೀಕರಣ ಕಾಮಗಾರಿ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂತು.<br /> <br /> ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಬಿಜೆಪಿಯ ಅಮರನಾಥ ಪಾಟೀಲ, ವಿಧಾನಸೌಧದ ಕೆಲವೆಡೆ ಮಳೆನೀರು ಸೋರುತ್ತಿರುವುದು, ಮೆಟ್ಟಿಲುಗಳ ಬಣ್ಣ ಮಾಸಿರುವುದು, ಕಾರಂಜಿಗಳು ಹಾಳಾಗಿರುವ ಕುರಿತು ವಿವರ ನೀಡಿದರು. ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಅವರು ಹೆಗ್ಗಣಗಳ ಸಮಸ್ಯೆ ಬಿಡಿಸಿಟ್ಟರು.<br /> <br /> ಬಳಿಕ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನೀಡಿದ ಉತ್ತರದಲ್ಲಿ `ವಿಧಾನಸೌಧ ಪಾರಂಪರಿಕ ಕಟ್ಟಡ' ಎಂಬ ಉಲ್ಲೇಖ ಇತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, `ಈ ಕಟ್ಟಡಕ್ಕೆ 56 ವರ್ಷ ಆಗಿದೆ ಅಷ್ಟೆ. 100 ವರ್ಷ ಆದ ಕಟ್ಟಡಗಳಿಗೆ ಮಾತ್ರ ಪಾರಂಪರಿಕ ಕಟ್ಟಡದ ಸ್ಥಾನಮಾನ ನೀಡಲಾಗುತ್ತದೆ. ಕೆಲಸ ಮಾಡಲಾಗದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಾರೆ' ಎಂದು ಎಚ್ಚರಿಸಿದರು.<br /> <br /> ಈ ವಿಷಯ ತಮಗೂ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಈ ವರ್ಷ ವಿಧಾನಸೌಧದಲ್ಲಿನ ನವೀಕರಣ ಕಾಮಗಾರಿಗಳಿಗಾಗಿ 2.70 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ಪರಿಶೀಲನೆ ನಡೆಸಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>