<p>ಚಿಕ್ಕಮಗಳೂರು: ಅಸ್ಸಾಂ ಗಲಭೆಯನ್ನು ಖಂಡಿಸಿ, ನುಸುಳುಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬುಧವಾರ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.<br /> <br /> ಐಡಿಎಸ್ಜಿ ಸರ್ಕಾರಿ ಕಾಲೇಜು ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾ ನಿರತರು, ಕೆ.ಎಂ. ರಸ್ತೆ ಹಾಗೂ ಎಂ.ಜಿ. ರಸ್ತೆಯಲ್ಲಿ ಸಾಗಿದರು. ಆಜಾದ್ ಮೈದಾನ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಸಿದರು.<br /> <br /> ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾ ನಿರತರು, `ಬಾಂಗ್ಲಾದ ವಲಸಿಗರನ್ನು ಹೊರಗಟ್ಟಬೇಕು~ `ಎಚ್ಚರ ಜಾಗೃತಗೊಂಡಿದೆ ಯುವಜನತೆ~ ಎಂದು ಸಾರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.<br /> <br /> ಅಸ್ಸಾಂನಲ್ಲಿ ಗಲಭೆಗೆ ಕಾರಣರಾದವರನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಮೂಲನಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.<br /> <br /> ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಮುಖಂಡ ದಯಾನಂದ ತಿರುಗುಣ, ಅಸ್ಸಾಂನ ಮೂಲ ನಿವಾಸಿಗಳು ಅಲ್ಲಿ ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಅವರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.<br /> <br /> `ಅಸ್ಸಾಂನಲ್ಲಿ ಗಲಭೆ ಉಂಟಾಗುತ್ತಿದ್ದಂತೆ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಆ ರಾಜ್ಯಕ್ಕೆ ತೆರಳಿದ್ದಾರೆ. ಅವರು ಕೂಡಲೇ ವಿದ್ಯಾಭ್ಯಾಸಕ್ಕೆ ಹಿಂದಿರುಗಬೇಕು. ನಾವು ಜತೆಗೆ ಇರುತ್ತೇವೆ~ ಎಂದು ಮನವಿ ಮಾಡಿದರು.<br /> <br /> ವಿದ್ಯಾರ್ಥಿ ಸಂಘಟನೆ ಮುಖಂಡ ಸಂತೋಷ್ ಕೋಟ್ಯಾನ್ ಮಾತನಾಡಿ, ಗಲಭೆಗೆ ಕಾರಣರಾದ ಕೆಲವರನ್ನು ಮಾತ್ರ ಪೊಲೀಸ್ ಇಲಾಖೆ ವಶಕ್ಕೆ ತೆಗೆದುಕೊಂಡಿದೆ. ದೇಶದೊಳಗೆ ನುಸುಳಿರುವವರನ್ನು ಪತ್ತೆಹಚ್ಚಿ, ಕೂಡಲೇ ಅವರನ್ನು ದೇಶದಿಂದ ಹೊರಗಟ್ಟಬೇಕು ಎಂದರು.<br /> <br /> ಮುಖಂಡರಾದ ದರ್ಶನ್ ಹಿರೇಮಠ್, ನವೀನ್ ಪೂಜಾರಿ, ಜೀವನ್ ಕೋಟೆ, ಸ್ವರೂಪ್, ಲವಕುಶ, ಶರತ್, ನೌಷದ್, ಸ್ವರೂಪ್, ಕಿಶೋರ್, ಇಮ್ರಾನ್, ವಿದ್ಯಾರ್ಥಿ ಮುಖಂಡರಾದ ಪೂಜಾಗೌಡ, ಪೂಜಾ, ಸಂತೋಷ್, ರಂಗಸ್ವಾಮಿ, ಅಂಕುಶ್, ಜುನೈದ್ ಪ್ರತಿಭಟನೆ ಮುಂಚೂಣಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಅಸ್ಸಾಂ ಗಲಭೆಯನ್ನು ಖಂಡಿಸಿ, ನುಸುಳುಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬುಧವಾರ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.<br /> <br /> ಐಡಿಎಸ್ಜಿ ಸರ್ಕಾರಿ ಕಾಲೇಜು ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾ ನಿರತರು, ಕೆ.ಎಂ. ರಸ್ತೆ ಹಾಗೂ ಎಂ.ಜಿ. ರಸ್ತೆಯಲ್ಲಿ ಸಾಗಿದರು. ಆಜಾದ್ ಮೈದಾನ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಸಿದರು.<br /> <br /> ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾ ನಿರತರು, `ಬಾಂಗ್ಲಾದ ವಲಸಿಗರನ್ನು ಹೊರಗಟ್ಟಬೇಕು~ `ಎಚ್ಚರ ಜಾಗೃತಗೊಂಡಿದೆ ಯುವಜನತೆ~ ಎಂದು ಸಾರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.<br /> <br /> ಅಸ್ಸಾಂನಲ್ಲಿ ಗಲಭೆಗೆ ಕಾರಣರಾದವರನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಮೂಲನಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.<br /> <br /> ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಮುಖಂಡ ದಯಾನಂದ ತಿರುಗುಣ, ಅಸ್ಸಾಂನ ಮೂಲ ನಿವಾಸಿಗಳು ಅಲ್ಲಿ ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಅವರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.<br /> <br /> `ಅಸ್ಸಾಂನಲ್ಲಿ ಗಲಭೆ ಉಂಟಾಗುತ್ತಿದ್ದಂತೆ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಆ ರಾಜ್ಯಕ್ಕೆ ತೆರಳಿದ್ದಾರೆ. ಅವರು ಕೂಡಲೇ ವಿದ್ಯಾಭ್ಯಾಸಕ್ಕೆ ಹಿಂದಿರುಗಬೇಕು. ನಾವು ಜತೆಗೆ ಇರುತ್ತೇವೆ~ ಎಂದು ಮನವಿ ಮಾಡಿದರು.<br /> <br /> ವಿದ್ಯಾರ್ಥಿ ಸಂಘಟನೆ ಮುಖಂಡ ಸಂತೋಷ್ ಕೋಟ್ಯಾನ್ ಮಾತನಾಡಿ, ಗಲಭೆಗೆ ಕಾರಣರಾದ ಕೆಲವರನ್ನು ಮಾತ್ರ ಪೊಲೀಸ್ ಇಲಾಖೆ ವಶಕ್ಕೆ ತೆಗೆದುಕೊಂಡಿದೆ. ದೇಶದೊಳಗೆ ನುಸುಳಿರುವವರನ್ನು ಪತ್ತೆಹಚ್ಚಿ, ಕೂಡಲೇ ಅವರನ್ನು ದೇಶದಿಂದ ಹೊರಗಟ್ಟಬೇಕು ಎಂದರು.<br /> <br /> ಮುಖಂಡರಾದ ದರ್ಶನ್ ಹಿರೇಮಠ್, ನವೀನ್ ಪೂಜಾರಿ, ಜೀವನ್ ಕೋಟೆ, ಸ್ವರೂಪ್, ಲವಕುಶ, ಶರತ್, ನೌಷದ್, ಸ್ವರೂಪ್, ಕಿಶೋರ್, ಇಮ್ರಾನ್, ವಿದ್ಯಾರ್ಥಿ ಮುಖಂಡರಾದ ಪೂಜಾಗೌಡ, ಪೂಜಾ, ಸಂತೋಷ್, ರಂಗಸ್ವಾಮಿ, ಅಂಕುಶ್, ಜುನೈದ್ ಪ್ರತಿಭಟನೆ ಮುಂಚೂಣಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>