<p>ಕೊಳ್ಳೇಗಾಲ: ನೇತ್ರದೋಷ ಪ್ರತಿಯೊಬ್ಬರಲ್ಲಿಯೂ ಬರುವ ತೊಂದರೆಯಾಗಿದ್ದು, ನೇತ್ರಗಳ ಬಗ್ಗೆ ಅಲಕ್ಷ್ಯ ವಹಿಸದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ನೇತ್ರಗಳನ್ನು ಜೋಪಾನಪಡಿಸಿಕೊಳ್ಳಬೇಕು ಎಂದು ಯಳಂದೂರು ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ತಿಳಿಸಿದರು.<br /> <br /> ತಾಲ್ಲೂಕಿನ ಹೊಂಡರಬಾಳು ಪಂಚಾಯಿತಿ ವ್ಯಾಪ್ತಿಯ ತಿಮ್ಮರಾಜೀಪುರ ಗ್ರಾಮದಲ್ಲಿ ಕಾಡಂಚಿನ ಜನತೆಗಾಗಿ ಕೊಳ್ಳೇಗಾಲ ವನ್ಯಜೀವಿ ವಲಯ ಮತ್ತು ಬೆಂಗಳೂರು ವಿಠ್ಠಲ ಇಂಟರ್ನ್ಯಾಷನಲ್ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.<br /> <br /> ಕಾಡಂಚಿನ ಗ್ರಾಮಗಳ ಜನತೆಯಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದರ ಜೊತೆ ಜೊತೆಯ್ಲ್ಲಲೇ ಕಾಡಂಚಿನ ಜನತೆಗೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಆರ್ಎಫ್ಒ ಬೋರಯ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ಗ್ರಾಮೀಣ ಜನತೆ ಕಣ್ಣಿನ ಸಂರಕ್ಷಣೆ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ನೇತ್ರ ತಜ್ಞ ಡಾ. ಪ್ರವೀಣ್ ಮಾಹಿತಿ ನೀಡಿದರು.<br /> <br /> ವಿಠ್ಠಲ ಕಣ್ಣಿನ ಆಸ್ಪತ್ರೆಯ ಪ್ರವೀಣ್ ಮತ್ತು ತಂಡ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರ ನೇತ್ರಗಳನ್ನು ಪರೀಕ್ಷಿಸಿ 40 ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.<br /> <br /> ಶಿಬಿರದಲ್ಲಿ ವನಪಾಲಕ ಅಶೋಕ್, ಪ್ರಭುಸ್ವಾಮಿ, ಅರಣ್ಯ ರಕ್ಷಕ ಮಂಜುನಾಥ್, ಗ್ರಾಮದ ಮುಖಂಡರುಗಳಾದ ಮಹಾದೇವಸ್ವಾಮಿ, ಬಸವರಾಜು, ಸೋಮಣ್ಣ, ಲೂಕಸ್, ಪಂದೇಗೌಡ ಇತರರು ಉಪಸ್ಥಿತರಿದ್ದರು.<br /> <br /> <strong>ಜ.31ರಂದು ವಚನ ಸಾಹಿತ್ಯ ಸಮ್ಮೇಳನ</strong><br /> ಗುಂಡ್ಲುಪೇಟೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಸಂಯುಕ್ತವಾಗಿ `ವಚನ ಸಾಹಿತ್ಯ ಸಮ್ಮೇಳನ~ವನ್ನು ಜನವರಿ 31 ರ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಪಟ್ಟಣದ ಜವಾಹರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ. ಪುಟ್ಟತಾಯಮ್ಮ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಳ್ಳೇಗಾಲ: ನೇತ್ರದೋಷ ಪ್ರತಿಯೊಬ್ಬರಲ್ಲಿಯೂ ಬರುವ ತೊಂದರೆಯಾಗಿದ್ದು, ನೇತ್ರಗಳ ಬಗ್ಗೆ ಅಲಕ್ಷ್ಯ ವಹಿಸದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ನೇತ್ರಗಳನ್ನು ಜೋಪಾನಪಡಿಸಿಕೊಳ್ಳಬೇಕು ಎಂದು ಯಳಂದೂರು ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ತಿಳಿಸಿದರು.<br /> <br /> ತಾಲ್ಲೂಕಿನ ಹೊಂಡರಬಾಳು ಪಂಚಾಯಿತಿ ವ್ಯಾಪ್ತಿಯ ತಿಮ್ಮರಾಜೀಪುರ ಗ್ರಾಮದಲ್ಲಿ ಕಾಡಂಚಿನ ಜನತೆಗಾಗಿ ಕೊಳ್ಳೇಗಾಲ ವನ್ಯಜೀವಿ ವಲಯ ಮತ್ತು ಬೆಂಗಳೂರು ವಿಠ್ಠಲ ಇಂಟರ್ನ್ಯಾಷನಲ್ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.<br /> <br /> ಕಾಡಂಚಿನ ಗ್ರಾಮಗಳ ಜನತೆಯಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದರ ಜೊತೆ ಜೊತೆಯ್ಲ್ಲಲೇ ಕಾಡಂಚಿನ ಜನತೆಗೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಆರ್ಎಫ್ಒ ಬೋರಯ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ಗ್ರಾಮೀಣ ಜನತೆ ಕಣ್ಣಿನ ಸಂರಕ್ಷಣೆ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ನೇತ್ರ ತಜ್ಞ ಡಾ. ಪ್ರವೀಣ್ ಮಾಹಿತಿ ನೀಡಿದರು.<br /> <br /> ವಿಠ್ಠಲ ಕಣ್ಣಿನ ಆಸ್ಪತ್ರೆಯ ಪ್ರವೀಣ್ ಮತ್ತು ತಂಡ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರ ನೇತ್ರಗಳನ್ನು ಪರೀಕ್ಷಿಸಿ 40 ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.<br /> <br /> ಶಿಬಿರದಲ್ಲಿ ವನಪಾಲಕ ಅಶೋಕ್, ಪ್ರಭುಸ್ವಾಮಿ, ಅರಣ್ಯ ರಕ್ಷಕ ಮಂಜುನಾಥ್, ಗ್ರಾಮದ ಮುಖಂಡರುಗಳಾದ ಮಹಾದೇವಸ್ವಾಮಿ, ಬಸವರಾಜು, ಸೋಮಣ್ಣ, ಲೂಕಸ್, ಪಂದೇಗೌಡ ಇತರರು ಉಪಸ್ಥಿತರಿದ್ದರು.<br /> <br /> <strong>ಜ.31ರಂದು ವಚನ ಸಾಹಿತ್ಯ ಸಮ್ಮೇಳನ</strong><br /> ಗುಂಡ್ಲುಪೇಟೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಸಂಯುಕ್ತವಾಗಿ `ವಚನ ಸಾಹಿತ್ಯ ಸಮ್ಮೇಳನ~ವನ್ನು ಜನವರಿ 31 ರ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಪಟ್ಟಣದ ಜವಾಹರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ. ಪುಟ್ಟತಾಯಮ್ಮ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>