<p>ಬೆಂಗಳೂರಿನ ಕೇಂದ್ರ ಭಾಗದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸಿದ ವಕೀಲರ ವರ್ತನೆ ಅವರು ಪ್ರತಿನಿಧಿಸುವ ವೃತ್ತಿ ಸಮುದಾಯಕ್ಕೆ ತಕ್ಕುದಾಗಿರಲಿಲ್ಲ. ವಕೀಲರು ಒಡ್ಡಿದ ರಸ್ತೆ ತಡೆಯನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಮುಂದಾಗದ ಪೊಲೀಸರ ಹೊಣೆಗೇಡಿತನವೂ ಖಂಡನೀಯ. <br /> <br /> ವಕೀಲರೊಬ್ಬರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದರೆನ್ನಲಾದ ಪ್ರಕರಣ ಈ ಘಟನೆಗೆ ಕಾರಣ. ದೌರ್ಜನ್ಯದ ಪ್ರಕರಣಗಳಲ್ಲಿ ನ್ಯಾಯ ಮತ್ತು ಪರಿಹಾರ ಪಡೆಯುವುದಕ್ಕೆ ಕಾನೂನು ಪ್ರಕಾರ ಯಾವ ಮಾರ್ಗವಿದೆ ಎಂಬುದು ವಕೀಲರಿಗೆ ಗೊತ್ತಿಲ್ಲದ ಸಂಗತಿಯಲ್ಲ. <br /> <br /> ಆದರೆ ಕಾನೂನು ಮಾರ್ಗವನ್ನು ಬಿಟ್ಟು ರಸ್ತೆಗಿಳಿದು ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ, ಯಾವುದೇ ಬಗೆಯ ಸಂಧಾನ ಮಾತುಕತೆಗಳಿಗೂ ಒಪ್ಪದೆ ಹಠಮಾರಿ ಧೋರಣೆಯನ್ನು ಪ್ರದರ್ಶಿಸಿದ್ದು ಸಲ್ಲದ ವರ್ತನೆ. <br /> <br /> ರಸ್ತೆ ತಡೆಯನ್ನು ತೆರವುಗೊಳಿಸಲು ಬಂದ ಪೊಲೀಸರು ಮತ್ತು ತಮ್ಮನ್ನು ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ವಕೀಲರ ದುಂಡಾವರ್ತನೆ, ನ್ಯಾಯಕ್ಕಾಗಿ ಹೋರಾಟ ನಡೆಸುವ ನ್ಯಾಯವಾದಿಗಳಿಗೆ ಶೋಭೆ ತರುವಂಥದ್ದಲ್ಲ. <br /> <br /> ಅಶಿಕ್ಷಿತ ಜನರಂತೆ, ತೋಳ್ಬಲವನ್ನು ಮಾತ್ರವೇ ಅವಲಂಬಿಸಿದವರಂತೆ, ತಮ್ಮ ಬೇಡಿಕೆಯನ್ನು ತಕ್ಷಣವೇ ಒಪ್ಪಿ ಕ್ರಮ ಕೈಗೊಳ್ಳಬೇಕು ಎಂದು ಬೀದಿಗಿಳಿದು ನಡೆಸಿದ ಈ ಹೋರಾಟದ ವಿಧಾನ ಎಷ್ಟರಮಟ್ಟಿಗೆ ಸಮರ್ಥನೀಯ ಎಂಬುದನ್ನು ನ್ಯಾಯವಾದಿಗಳ ವೃತ್ತಿ ಸಂಘಟನೆಗಳು ಹೇಳಬೇಕಾಗಿದೆ.<br /> <br /> ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದ ಘಟನೆಯನ್ನು ಬಗೆಹರಿಸಿಕೊಳ್ಳಲು ನಗರದ ಕೇಂದ್ರ ಭಾಗದಲ್ಲಿ ಏಳು ಗಂಟೆಗಳ ಕಾಲ ರಸ್ತೆ ತಡೆಯಂಥ ಹೋರಾಟ ಕ್ರಮ ಅವಶ್ಯಕವೆಂದರೆ ಈ ವೃತ್ತಿ ಸಮುದಾಯದ ನಾಗರಿಕ ಪ್ರಜ್ಞೆಯ ಬಗ್ಗೆಯೇ ಸಾರ್ವಜನಿಕರು ಸಂಶಯಪಡುವಂತಾಗುತ್ತದೆ.<br /> <br /> ವಕೀಲರು ಪೂರ್ವಸೂಚನೆ ನೀಡದೆ ಆರಂಭಿಸಿದ ರಸ್ತೆ ತಡೆಯನ್ನು ತೆರವುಗೊಳಿಸಲು ಪೊಲೀಸರು ವಿಫಲರಾಗಿದ್ದಾರೆ. ಆಸ್ಪತ್ರೆಗಳಿಗೆ ತುರ್ತಾಗಿ ಹೋಗಬೇಕಾದ ರೋಗಿಗಳು, ಶಾಲೆ ಮುಗಿಸಿ ಮನೆಗೆ ತೆರಳಬೇಕಾದ ಮಕ್ಕಳು, ವ್ಯಾಪಾರ ವಹಿವಾಟು, ಕಚೇರಿ ಕೆಲಸಗಳಿಗಾಗಿ ಓಡಾಟ ನಡೆಸುವವರು, ಸಂಚಾರದಟ್ಟಣೆಯಲ್ಲಿ ಸಿಲುಕಿಕೊಂಡು ಸಂಕಷ್ಟಪಡುವುದಕ್ಕೆ ಪೊಲೀಸರು ನಿರ್ಲಕ್ಷ್ಯವೂ ಕಾರಣ.<br /> <br /> ಅದು ಪೊಲೀಸರ ಕರ್ತವ್ಯದಲ್ಲಿ ಲೋಪ. ವಕೀಲರು ಬೀದಿಗಿಳಿದು ಪ್ರತಿಭಟನೆ ನಡೆಸಿದಾಗಲೆಲ್ಲ ಪೊಲೀಸರ ಉದಾಸೀನ ಧೋರಣೆ ಇದು ಮೊದಲೇನೂ ಅಲ್ಲ. ವಕೀಲರೊಂದಿಗೆ ಸಂಘರ್ಷಕ್ಕೆಇಳಿದರೆ ನ್ಯಾಯಾಂಗದ ಕೋಪಕ್ಕೆ ಗುರಿಯಾಗಬಹುದೆಂಬ ಅಳುಕು ಪೊಲೀಸ್ ಇಲಾಖೆಗೆ ಇರುವಂತೆ ತೋರುತ್ತದೆ. <br /> <br /> ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡುವ ನ್ಯಾಯವಾದಿಗಳು, ಜನತೆಗೆ ರಕ್ಷಣೆ ನೀಡಬೇಕಾದ ಪೊಲೀಸರು ಪರಸ್ಪರ ಮುಖಾಮುಖಿಯಾದಾಗ ಹೆಚ್ಚಾಗಿ ಸಂಕಷ್ಟಕ್ಕೆ ಒಳಗಾಗುವವರು ಸಾಮಾನ್ಯ ಜನತೆ ಎಂಬುದು ಈ ಘಟನೆಯಲ್ಲಿ ನಿಚ್ಚಳವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಜನತೆಯ ನೆರವಿಗೆ ಬರಬೇಕಾಗುತ್ತದೆ. <br /> <br /> ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿಯೇ ವಕೀಲರ ರಸ್ತೆ ತಡೆ ಇಡೀ ದಿನ ಮುಂದುವರಿದಿದ್ದರೂ ಅದರತ್ತ ಒಳಾಡಳಿತ ನಿರ್ವಹಣೆ ಹೊಣೆ ಹೊತ್ತ ಗೃಹಸಚಿವರ ಚಿತ್ತ ಹರಿಯಲೇ ಇಲ್ಲ. ವಕೀಲರು ಮತ್ತು ಪೊಲೀಸರಂತೆ ಸರ್ಕಾರವೂ ಜನವಿರೋಧಿಯಾಗಿರುವಂತೆ ತೋರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನ ಕೇಂದ್ರ ಭಾಗದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸಿದ ವಕೀಲರ ವರ್ತನೆ ಅವರು ಪ್ರತಿನಿಧಿಸುವ ವೃತ್ತಿ ಸಮುದಾಯಕ್ಕೆ ತಕ್ಕುದಾಗಿರಲಿಲ್ಲ. ವಕೀಲರು ಒಡ್ಡಿದ ರಸ್ತೆ ತಡೆಯನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಮುಂದಾಗದ ಪೊಲೀಸರ ಹೊಣೆಗೇಡಿತನವೂ ಖಂಡನೀಯ. <br /> <br /> ವಕೀಲರೊಬ್ಬರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದರೆನ್ನಲಾದ ಪ್ರಕರಣ ಈ ಘಟನೆಗೆ ಕಾರಣ. ದೌರ್ಜನ್ಯದ ಪ್ರಕರಣಗಳಲ್ಲಿ ನ್ಯಾಯ ಮತ್ತು ಪರಿಹಾರ ಪಡೆಯುವುದಕ್ಕೆ ಕಾನೂನು ಪ್ರಕಾರ ಯಾವ ಮಾರ್ಗವಿದೆ ಎಂಬುದು ವಕೀಲರಿಗೆ ಗೊತ್ತಿಲ್ಲದ ಸಂಗತಿಯಲ್ಲ. <br /> <br /> ಆದರೆ ಕಾನೂನು ಮಾರ್ಗವನ್ನು ಬಿಟ್ಟು ರಸ್ತೆಗಿಳಿದು ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ, ಯಾವುದೇ ಬಗೆಯ ಸಂಧಾನ ಮಾತುಕತೆಗಳಿಗೂ ಒಪ್ಪದೆ ಹಠಮಾರಿ ಧೋರಣೆಯನ್ನು ಪ್ರದರ್ಶಿಸಿದ್ದು ಸಲ್ಲದ ವರ್ತನೆ. <br /> <br /> ರಸ್ತೆ ತಡೆಯನ್ನು ತೆರವುಗೊಳಿಸಲು ಬಂದ ಪೊಲೀಸರು ಮತ್ತು ತಮ್ಮನ್ನು ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ವಕೀಲರ ದುಂಡಾವರ್ತನೆ, ನ್ಯಾಯಕ್ಕಾಗಿ ಹೋರಾಟ ನಡೆಸುವ ನ್ಯಾಯವಾದಿಗಳಿಗೆ ಶೋಭೆ ತರುವಂಥದ್ದಲ್ಲ. <br /> <br /> ಅಶಿಕ್ಷಿತ ಜನರಂತೆ, ತೋಳ್ಬಲವನ್ನು ಮಾತ್ರವೇ ಅವಲಂಬಿಸಿದವರಂತೆ, ತಮ್ಮ ಬೇಡಿಕೆಯನ್ನು ತಕ್ಷಣವೇ ಒಪ್ಪಿ ಕ್ರಮ ಕೈಗೊಳ್ಳಬೇಕು ಎಂದು ಬೀದಿಗಿಳಿದು ನಡೆಸಿದ ಈ ಹೋರಾಟದ ವಿಧಾನ ಎಷ್ಟರಮಟ್ಟಿಗೆ ಸಮರ್ಥನೀಯ ಎಂಬುದನ್ನು ನ್ಯಾಯವಾದಿಗಳ ವೃತ್ತಿ ಸಂಘಟನೆಗಳು ಹೇಳಬೇಕಾಗಿದೆ.<br /> <br /> ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದ ಘಟನೆಯನ್ನು ಬಗೆಹರಿಸಿಕೊಳ್ಳಲು ನಗರದ ಕೇಂದ್ರ ಭಾಗದಲ್ಲಿ ಏಳು ಗಂಟೆಗಳ ಕಾಲ ರಸ್ತೆ ತಡೆಯಂಥ ಹೋರಾಟ ಕ್ರಮ ಅವಶ್ಯಕವೆಂದರೆ ಈ ವೃತ್ತಿ ಸಮುದಾಯದ ನಾಗರಿಕ ಪ್ರಜ್ಞೆಯ ಬಗ್ಗೆಯೇ ಸಾರ್ವಜನಿಕರು ಸಂಶಯಪಡುವಂತಾಗುತ್ತದೆ.<br /> <br /> ವಕೀಲರು ಪೂರ್ವಸೂಚನೆ ನೀಡದೆ ಆರಂಭಿಸಿದ ರಸ್ತೆ ತಡೆಯನ್ನು ತೆರವುಗೊಳಿಸಲು ಪೊಲೀಸರು ವಿಫಲರಾಗಿದ್ದಾರೆ. ಆಸ್ಪತ್ರೆಗಳಿಗೆ ತುರ್ತಾಗಿ ಹೋಗಬೇಕಾದ ರೋಗಿಗಳು, ಶಾಲೆ ಮುಗಿಸಿ ಮನೆಗೆ ತೆರಳಬೇಕಾದ ಮಕ್ಕಳು, ವ್ಯಾಪಾರ ವಹಿವಾಟು, ಕಚೇರಿ ಕೆಲಸಗಳಿಗಾಗಿ ಓಡಾಟ ನಡೆಸುವವರು, ಸಂಚಾರದಟ್ಟಣೆಯಲ್ಲಿ ಸಿಲುಕಿಕೊಂಡು ಸಂಕಷ್ಟಪಡುವುದಕ್ಕೆ ಪೊಲೀಸರು ನಿರ್ಲಕ್ಷ್ಯವೂ ಕಾರಣ.<br /> <br /> ಅದು ಪೊಲೀಸರ ಕರ್ತವ್ಯದಲ್ಲಿ ಲೋಪ. ವಕೀಲರು ಬೀದಿಗಿಳಿದು ಪ್ರತಿಭಟನೆ ನಡೆಸಿದಾಗಲೆಲ್ಲ ಪೊಲೀಸರ ಉದಾಸೀನ ಧೋರಣೆ ಇದು ಮೊದಲೇನೂ ಅಲ್ಲ. ವಕೀಲರೊಂದಿಗೆ ಸಂಘರ್ಷಕ್ಕೆಇಳಿದರೆ ನ್ಯಾಯಾಂಗದ ಕೋಪಕ್ಕೆ ಗುರಿಯಾಗಬಹುದೆಂಬ ಅಳುಕು ಪೊಲೀಸ್ ಇಲಾಖೆಗೆ ಇರುವಂತೆ ತೋರುತ್ತದೆ. <br /> <br /> ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡುವ ನ್ಯಾಯವಾದಿಗಳು, ಜನತೆಗೆ ರಕ್ಷಣೆ ನೀಡಬೇಕಾದ ಪೊಲೀಸರು ಪರಸ್ಪರ ಮುಖಾಮುಖಿಯಾದಾಗ ಹೆಚ್ಚಾಗಿ ಸಂಕಷ್ಟಕ್ಕೆ ಒಳಗಾಗುವವರು ಸಾಮಾನ್ಯ ಜನತೆ ಎಂಬುದು ಈ ಘಟನೆಯಲ್ಲಿ ನಿಚ್ಚಳವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಜನತೆಯ ನೆರವಿಗೆ ಬರಬೇಕಾಗುತ್ತದೆ. <br /> <br /> ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿಯೇ ವಕೀಲರ ರಸ್ತೆ ತಡೆ ಇಡೀ ದಿನ ಮುಂದುವರಿದಿದ್ದರೂ ಅದರತ್ತ ಒಳಾಡಳಿತ ನಿರ್ವಹಣೆ ಹೊಣೆ ಹೊತ್ತ ಗೃಹಸಚಿವರ ಚಿತ್ತ ಹರಿಯಲೇ ಇಲ್ಲ. ವಕೀಲರು ಮತ್ತು ಪೊಲೀಸರಂತೆ ಸರ್ಕಾರವೂ ಜನವಿರೋಧಿಯಾಗಿರುವಂತೆ ತೋರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>