<p><strong>ಆನೇಕಲ್:</strong> ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿರತೆಯೊಂದು ಪಂಜರದಿಂದ ಹೊರಬಂದು ಮರವೇರಿದ ಪರಿಣಾಮ ಉದ್ಯಾನದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ಶನಿವಾರ ಸಂಜೆ ನಡೆಯಿತು.<br /> <br /> ಉದ್ಯಾನದ ಆಸ್ಪತ್ರೆ ಮುಂಭಾಗದ ಪಂಜರದಲ್ಲಿದ್ದ ಚಿರತೆಯು ಬೋನಿನ ಮೇಲಿದ್ದ ಕೋತಿಗಳನ್ನು ಹಿಡಿಯುವ ಪ್ರಯತ್ನದಲ್ಲಿ ಪಂಜರವನ್ನು ಮುರಿದುಹಾಕಿತು. ನಂತರ ತಪ್ಪಿಸಿಕೊಂಡ ಅದು ಸಮೀಪವೇ ಇದ್ದ ಮರವೇರಿ ಎಲ್ಲರಲ್ಲೂ ಗಾಬರಿ ಉಂಟುಮಾಡಿತು.<br /> <br /> ಈ ಘಟನೆಯನ್ನು ನೋಡುತ್ತಿದ್ದಂತೆಯೇ ಉದ್ಯಾನದಲ್ಲಿದ್ದ ಪ್ರವಾಸಿಗರು ಭಯಗೊಂಡು ಓಡಲು ಪ್ರಾರಂಭಿಸಿದರು. ಉದ್ಯಾನದ ಸಿಬ್ಬಂದಿಗೆ ದಿಕ್ಕು ತೋಚದಂತಾಯಿತು. ಮುಂದೇನು ಮಾಡುವುದು ಎಂಬ ಚಿಂತನೆ ಮಾಡುತ್ತಿದ್ದರು. <br /> <br /> ತುಂಬ ವೇಗವಾಗಿ ಮರದಿಂದ ಮರಕ್ಕೆ ನೆಗೆಯುವ ಸಾಮರ್ಥ್ಯ ಇರುವ ಚಿರತೆಯಿಂದ ಏನಾಗುವುದೋ ಎಂಬ ಆತಂಕ ಕಾಡುತ್ತಿತ್ತು. ಆಶ್ಚರ್ಯ ಎಂಬಂತೆ ಕೆಲವೇ ನಿಮಿಷಗಳಲ್ಲಿ ಚಿರತೆ ಮರಳಿ ಪಂಜರ ಸೇರಿದ್ದರಿಂದ ಉದ್ಯಾನದ ಸಿಬ್ಬಂದಿ ನಿಟ್ಟುಸಿರುಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್:</strong> ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿರತೆಯೊಂದು ಪಂಜರದಿಂದ ಹೊರಬಂದು ಮರವೇರಿದ ಪರಿಣಾಮ ಉದ್ಯಾನದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ಶನಿವಾರ ಸಂಜೆ ನಡೆಯಿತು.<br /> <br /> ಉದ್ಯಾನದ ಆಸ್ಪತ್ರೆ ಮುಂಭಾಗದ ಪಂಜರದಲ್ಲಿದ್ದ ಚಿರತೆಯು ಬೋನಿನ ಮೇಲಿದ್ದ ಕೋತಿಗಳನ್ನು ಹಿಡಿಯುವ ಪ್ರಯತ್ನದಲ್ಲಿ ಪಂಜರವನ್ನು ಮುರಿದುಹಾಕಿತು. ನಂತರ ತಪ್ಪಿಸಿಕೊಂಡ ಅದು ಸಮೀಪವೇ ಇದ್ದ ಮರವೇರಿ ಎಲ್ಲರಲ್ಲೂ ಗಾಬರಿ ಉಂಟುಮಾಡಿತು.<br /> <br /> ಈ ಘಟನೆಯನ್ನು ನೋಡುತ್ತಿದ್ದಂತೆಯೇ ಉದ್ಯಾನದಲ್ಲಿದ್ದ ಪ್ರವಾಸಿಗರು ಭಯಗೊಂಡು ಓಡಲು ಪ್ರಾರಂಭಿಸಿದರು. ಉದ್ಯಾನದ ಸಿಬ್ಬಂದಿಗೆ ದಿಕ್ಕು ತೋಚದಂತಾಯಿತು. ಮುಂದೇನು ಮಾಡುವುದು ಎಂಬ ಚಿಂತನೆ ಮಾಡುತ್ತಿದ್ದರು. <br /> <br /> ತುಂಬ ವೇಗವಾಗಿ ಮರದಿಂದ ಮರಕ್ಕೆ ನೆಗೆಯುವ ಸಾಮರ್ಥ್ಯ ಇರುವ ಚಿರತೆಯಿಂದ ಏನಾಗುವುದೋ ಎಂಬ ಆತಂಕ ಕಾಡುತ್ತಿತ್ತು. ಆಶ್ಚರ್ಯ ಎಂಬಂತೆ ಕೆಲವೇ ನಿಮಿಷಗಳಲ್ಲಿ ಚಿರತೆ ಮರಳಿ ಪಂಜರ ಸೇರಿದ್ದರಿಂದ ಉದ್ಯಾನದ ಸಿಬ್ಬಂದಿ ನಿಟ್ಟುಸಿರುಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>