<p><strong>ಹೂವಿನಹಡಗಲಿ</strong>: ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಹೊಸ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಕೆಜಿಗೆ 1 ರೂಪಾಯಿ ಯಂತೆ 30 ಕೆಜಿ ಅಕ್ಕಿ ವಿತರಿಸುವ ಘೋಷಣೆ ಮಾಡುತ್ತಿದ್ದಂತೆ ಬಿಪಿಎಲ್ ಕಾರ್ಡ್ ಪಡೆಯಲು ಫಲಾನುಭವಿಗಳು ಹರಸಾಹಸ ನಡೆಸಿದ್ದಾರೆ.<br /> <br /> ಇನ್ನೂ ಗ್ರಾಮೀಣ ಫಲಾನುಭವಿ ಗಳಿಗೆ ಹೊಸ ಕಾರ್ಡ್ ನೀಡಲು ಸರ್ಕಾರ ಆದೇಶ ಹೊರಡಿಸಿಲ್ಲ. ಕಾರ್ಡ್ ಪಡೆ ಯುಲ್ಲಿ ಇರುವ ತೊಡಕುಗಳನ್ನು ನಿವಾರಿಸಿಕೊಳ್ಳಲು ನೂಕು ನುಗ್ಗಲು ಆರಂಭವಾಗಿದೆ.<br /> <br /> ಪಡಿತರ ಕಾರ್ಡ್ನಲ್ಲಿರುವ ಲೋಪ ದೋಷ ಸರಿಪಡಿಸಿಕೊಳ್ಳಲು, ಕಾರ್ಡ್ ಚಲಾವಣೆಯಲ್ಲಿದೆಯೋ ಇಲ್ಲವೋ ತಿಳಿದುಕೊಳ್ಳಲು ತಾಲ್ಲೂಕಿನಾದ್ಯಂತ ನಿತ್ಯ ಸಾವಿರಾರು ಫಲಾನುಭವಿಗಳು ಇಲ್ಲಿನ ವಿನಿವಿಧಾನಸೌಧದಲ್ಲಿರುವ ಆಹಾರ ಶಾಖೆಗೆ ಭೇಟಿ ಕೊಡುತ್ತಿದ್ದಾರೆ.<br /> <br /> ಲೋಪ ಸರಿಪಡಿಸಿಕೊಳ್ಳಲು ಕಳೆದ 6 ತಿಂಗಳ ಹಿಂದೆ ಆಹಾರ ಇಲಾಖೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿದ್ದವು. ಕಾರ್ಡ್ ತಿದ್ದುಪಡಿ, ಹೊಸ ಸೇರ್ಪಡೆ, ಪೋತಿಯಾದವರ ಹೆಸರು ತೆಗೆದು ಹಾಕುವುದು, ಹೊಂದಾಣಿಕೆಯಾಗದ ಫೋಟೋ ಮತ್ತು ಬೆರಳಚ್ಚು ಸರಿಪಡಿ ಸುವಂತೆ ಕೋರಿ ದಿನನಿತ್ಯ ಸಾವಿರಾರು ಫಲಾನುಭವಿಗಳು ಬರುತ್ತಿದ್ದಾರೆ.<br /> <br /> ಇಡೀ ತಾಲ್ಲೂಕಿನ 24 ಗ್ರಾ.ಪಂ. ಗಳ ಕಾರ್ಡ್ ತಿದ್ದುಪಡಿ ಕೆಲಸ ಒಂದೇ ಕಡೆ ಆಗಬೇಕಿ ರುವುದರಿಂದ ಆಹಾರ ಶಾಖೆಯ ಮೇಲೆ ಸಹಜವಾಗಿಯೇ ಒತ್ತಡ ಬಿದ್ದಿದೆ.<br /> <br /> ಈಗಿರುವ ಸಿಬ್ಬಂದಿ ಮತ್ತು ಕಂಪ್ಯೂಟರ್ ವ್ಯವಸ್ಥೆಯಲ್ಲಿ ಪ್ರತಿದಿನ 300 ಕಾರ್ಡ್ಗಳ ಲೋಪಗಳನ್ನು ಸರಿಪಡಿಸಿ ಹೊಸ ಕಾರ್ಡ್ ಗಳನ್ನು ಮುದ್ರಿಸಿ ಕೊಡಬಹುದಾಗಿದೆ. ಕನಿಷ್ಠ ಐದಾರು ನೂರು ಫಲಾನು ಭವಿಗಳು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ನಿರಾಸೆಯಿಂದ ವಾಪಾಸ್ಸಾಗುತ್ತಿದ್ದಾರೆ.<br /> <br /> ಪಡಿತರ ಕಾರ್ಡ್ನ ಲೋಪದೋಷ, ಬೆರಳಚ್ಚು ಗುರುತುಗಳನ್ನು ಸರಿಪಡಿ ಸುವ ಕೆಲಸ ಒಂದೇ ಕಡೆ ಆಗಿರುವು ದರಿಂದ ತೀವ್ರ ತೊಂದರೆಯಾಗಿದೆ. ಕೂಲಿ ಕೆಲಸ ಬಿಟ್ಟು ಇಡೀ ದಿನ ಕಾದು ಕುಳಿತರೂ ಕಾರ್ಡ್ ತಿದ್ದುಪಡಿಯಾಗದೇ ಬರಿಗೈಯಲ್ಲಿ ವಾಪಾಸ್ಸಾಗುತ್ತಿದ್ದೇನೆ ಎಂದು ಹಗರನೂರಿನ ತಿಮ್ಮಪ್ಪ ಬೇಸರ ವ್ಯಕ್ತಪಡಿಸುತ್ತಾರೆ.<br /> <br /> ಕಾರ್ಡ್ ತಿದ್ದುಪಡಿ ಕೆಲಸವನ್ನು ಪ್ರತಿ ಗ್ರಾ.ಪಂ.ನಲ್ಲಿ ನಡೆಸುವ ಮೂಲಕ ಬಡವರ ನೆರವಿಗೆ ಸರ್ಕಾರ ಬರಲಿ ಎಂದು ಒತ್ತಾಯಿಸಿದರು.<br /> <br /> ನಗರ ಪ್ರದೇಶಗಳಲ್ಲಿನ ಫಲಾನುಭವಿ ಗಳಿಂದ ಹೊಸ ಕಾರ್ಡ್ಗೆ ಅರ್ಜಿ ಸ್ವೀಕರಿಸಲು ಸರ್ಕಾರ ಆದೇಶಿಸಿದೆ. ಸಮರ್ಪಕ ಮಾಹಿತಿ ಇಲ್ಲದ ಗ್ರಾಮೀಣ ಪ್ರದೇಶದ ಜನತೆ ಈಗಲೇ ಹೊಸ ಕಾರ್ಡ್ ನೀಡುವಂತೆ ಆಹಾರ ಇಲಾಖೆ ಅಧಿಕಾರಿಗಳಲ್ಲಿ ಮೊರೆ ಇಡುತ್ತಿದ್ದಾರೆ.<br /> <br /> ಅಗ್ಗ ದರದಲ್ಲಿ ಅಕ್ಕಿ ನೀಡುವ ಸರ್ಕಾರದ ಘೋಷಣೆಯಿಂದ ಬಿಪಿಎಲ್ ಕಾರ್ಡ್ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೊಸ ಅರ್ಜಿ ಸ್ವೀಕರಿಸಲು ಸರ್ಕಾರ ಆದೇಶಿಸಿದರೆ ಮತ್ತೆ ಲೆಕ್ಕವಿಲ್ಲದಷ್ಟು ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಹೊಸ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಕೆಜಿಗೆ 1 ರೂಪಾಯಿ ಯಂತೆ 30 ಕೆಜಿ ಅಕ್ಕಿ ವಿತರಿಸುವ ಘೋಷಣೆ ಮಾಡುತ್ತಿದ್ದಂತೆ ಬಿಪಿಎಲ್ ಕಾರ್ಡ್ ಪಡೆಯಲು ಫಲಾನುಭವಿಗಳು ಹರಸಾಹಸ ನಡೆಸಿದ್ದಾರೆ.<br /> <br /> ಇನ್ನೂ ಗ್ರಾಮೀಣ ಫಲಾನುಭವಿ ಗಳಿಗೆ ಹೊಸ ಕಾರ್ಡ್ ನೀಡಲು ಸರ್ಕಾರ ಆದೇಶ ಹೊರಡಿಸಿಲ್ಲ. ಕಾರ್ಡ್ ಪಡೆ ಯುಲ್ಲಿ ಇರುವ ತೊಡಕುಗಳನ್ನು ನಿವಾರಿಸಿಕೊಳ್ಳಲು ನೂಕು ನುಗ್ಗಲು ಆರಂಭವಾಗಿದೆ.<br /> <br /> ಪಡಿತರ ಕಾರ್ಡ್ನಲ್ಲಿರುವ ಲೋಪ ದೋಷ ಸರಿಪಡಿಸಿಕೊಳ್ಳಲು, ಕಾರ್ಡ್ ಚಲಾವಣೆಯಲ್ಲಿದೆಯೋ ಇಲ್ಲವೋ ತಿಳಿದುಕೊಳ್ಳಲು ತಾಲ್ಲೂಕಿನಾದ್ಯಂತ ನಿತ್ಯ ಸಾವಿರಾರು ಫಲಾನುಭವಿಗಳು ಇಲ್ಲಿನ ವಿನಿವಿಧಾನಸೌಧದಲ್ಲಿರುವ ಆಹಾರ ಶಾಖೆಗೆ ಭೇಟಿ ಕೊಡುತ್ತಿದ್ದಾರೆ.<br /> <br /> ಲೋಪ ಸರಿಪಡಿಸಿಕೊಳ್ಳಲು ಕಳೆದ 6 ತಿಂಗಳ ಹಿಂದೆ ಆಹಾರ ಇಲಾಖೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿದ್ದವು. ಕಾರ್ಡ್ ತಿದ್ದುಪಡಿ, ಹೊಸ ಸೇರ್ಪಡೆ, ಪೋತಿಯಾದವರ ಹೆಸರು ತೆಗೆದು ಹಾಕುವುದು, ಹೊಂದಾಣಿಕೆಯಾಗದ ಫೋಟೋ ಮತ್ತು ಬೆರಳಚ್ಚು ಸರಿಪಡಿ ಸುವಂತೆ ಕೋರಿ ದಿನನಿತ್ಯ ಸಾವಿರಾರು ಫಲಾನುಭವಿಗಳು ಬರುತ್ತಿದ್ದಾರೆ.<br /> <br /> ಇಡೀ ತಾಲ್ಲೂಕಿನ 24 ಗ್ರಾ.ಪಂ. ಗಳ ಕಾರ್ಡ್ ತಿದ್ದುಪಡಿ ಕೆಲಸ ಒಂದೇ ಕಡೆ ಆಗಬೇಕಿ ರುವುದರಿಂದ ಆಹಾರ ಶಾಖೆಯ ಮೇಲೆ ಸಹಜವಾಗಿಯೇ ಒತ್ತಡ ಬಿದ್ದಿದೆ.<br /> <br /> ಈಗಿರುವ ಸಿಬ್ಬಂದಿ ಮತ್ತು ಕಂಪ್ಯೂಟರ್ ವ್ಯವಸ್ಥೆಯಲ್ಲಿ ಪ್ರತಿದಿನ 300 ಕಾರ್ಡ್ಗಳ ಲೋಪಗಳನ್ನು ಸರಿಪಡಿಸಿ ಹೊಸ ಕಾರ್ಡ್ ಗಳನ್ನು ಮುದ್ರಿಸಿ ಕೊಡಬಹುದಾಗಿದೆ. ಕನಿಷ್ಠ ಐದಾರು ನೂರು ಫಲಾನು ಭವಿಗಳು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ನಿರಾಸೆಯಿಂದ ವಾಪಾಸ್ಸಾಗುತ್ತಿದ್ದಾರೆ.<br /> <br /> ಪಡಿತರ ಕಾರ್ಡ್ನ ಲೋಪದೋಷ, ಬೆರಳಚ್ಚು ಗುರುತುಗಳನ್ನು ಸರಿಪಡಿ ಸುವ ಕೆಲಸ ಒಂದೇ ಕಡೆ ಆಗಿರುವು ದರಿಂದ ತೀವ್ರ ತೊಂದರೆಯಾಗಿದೆ. ಕೂಲಿ ಕೆಲಸ ಬಿಟ್ಟು ಇಡೀ ದಿನ ಕಾದು ಕುಳಿತರೂ ಕಾರ್ಡ್ ತಿದ್ದುಪಡಿಯಾಗದೇ ಬರಿಗೈಯಲ್ಲಿ ವಾಪಾಸ್ಸಾಗುತ್ತಿದ್ದೇನೆ ಎಂದು ಹಗರನೂರಿನ ತಿಮ್ಮಪ್ಪ ಬೇಸರ ವ್ಯಕ್ತಪಡಿಸುತ್ತಾರೆ.<br /> <br /> ಕಾರ್ಡ್ ತಿದ್ದುಪಡಿ ಕೆಲಸವನ್ನು ಪ್ರತಿ ಗ್ರಾ.ಪಂ.ನಲ್ಲಿ ನಡೆಸುವ ಮೂಲಕ ಬಡವರ ನೆರವಿಗೆ ಸರ್ಕಾರ ಬರಲಿ ಎಂದು ಒತ್ತಾಯಿಸಿದರು.<br /> <br /> ನಗರ ಪ್ರದೇಶಗಳಲ್ಲಿನ ಫಲಾನುಭವಿ ಗಳಿಂದ ಹೊಸ ಕಾರ್ಡ್ಗೆ ಅರ್ಜಿ ಸ್ವೀಕರಿಸಲು ಸರ್ಕಾರ ಆದೇಶಿಸಿದೆ. ಸಮರ್ಪಕ ಮಾಹಿತಿ ಇಲ್ಲದ ಗ್ರಾಮೀಣ ಪ್ರದೇಶದ ಜನತೆ ಈಗಲೇ ಹೊಸ ಕಾರ್ಡ್ ನೀಡುವಂತೆ ಆಹಾರ ಇಲಾಖೆ ಅಧಿಕಾರಿಗಳಲ್ಲಿ ಮೊರೆ ಇಡುತ್ತಿದ್ದಾರೆ.<br /> <br /> ಅಗ್ಗ ದರದಲ್ಲಿ ಅಕ್ಕಿ ನೀಡುವ ಸರ್ಕಾರದ ಘೋಷಣೆಯಿಂದ ಬಿಪಿಎಲ್ ಕಾರ್ಡ್ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೊಸ ಅರ್ಜಿ ಸ್ವೀಕರಿಸಲು ಸರ್ಕಾರ ಆದೇಶಿಸಿದರೆ ಮತ್ತೆ ಲೆಕ್ಕವಿಲ್ಲದಷ್ಟು ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>