<p>ನಮ್ಮ ಉಳಿವಿಗೆ, ಪ್ರಾಣಿ, ಪಕ್ಷಿ, ಸಸ್ಯ ಸಂಕುಲದ ಉಳಿವಿಗೆ ಪರಿಶುದ್ಧ ಹವೆ, ವೈಪರೀತ್ಯಗಳಿಲ್ಲದ ಹವಾಮಾನ ಅತ್ಯಗತ್ಯ. ಭೂಮಿ, ಜೀವಸಂಕುಲದ ಉಳಿವಿಗಾಗಿ ಹೋರಾಡುತ್ತಿರುವ ಗ್ರೀನ್ಪೀಸ್ ಸಂಘಟನೆ ಪರಿಸರ ಸ್ನೇಹಿ ಇಂಧನ ಬಳಕೆ ಕುರಿತು ಜಾಗೃತಿ ಮೂಡಿಸಲು `ಮೂವಿಂಗ್ ಪ್ಲಾನೆಟ್~ ಎಂಬ ವಿಶ್ವವ್ಯಾಪಿ ಅಭಿಯಾನ ಹಮ್ಮಿಕೊಂಡಿದೆ.<br /> <br /> ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡುವ ಈ ಅಭಿಯಾನದಲ್ಲಿ 167 ದೇಶಗಳ ಸಾವಿರಾರು ನಾಗರಿಕರು ಕೈಜೋಡಿಸಿದ್ದಾರೆ.<br /> <br /> `ಮೂವಿಂಗ್ ಪ್ಲಾನೆಟ್~ ಅಭಿಯಾನದ ಅಂಗವಾಗಿ ಗ್ರೀನ್ಪೀಸ್, 350 ಡಾಟ್ ಆರ್ಗ್ ಸಂಘಟನೆಯ ಸಹಯೋಗದಲ್ಲಿ ನಗರದಲ್ಲಿ ಇತ್ತೀಚೆಗೆ ಸೈಕಲ್ ರ್ಯಾಲಿ ಆಯೋಜಿಸಿತ್ತು. ಫ್ರೀಡಂ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಕಥಾನ್, ಟ್ರೆಷರ್ ಹಂಟ್ ಇತ್ಯಾದಿ ಚಟುವಟಿಕೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಯಿತು.<br /> <br /> ಹವಾಮಾನ ವೈಪರೀತ್ಯ ತಡೆಗಟ್ಟಲು, ಪರಿಸರಸ್ನೇಹಿ ಇಂಧನ ವ್ಯವಸ್ಥೆ ಜಾರಿಯಲ್ಲಿ ಇರಲು ಸರ್ಕಾರಗಳನ್ನು ಒತ್ತಾಯಿಸುವುದು ಈ ಆಂದೋಲನದ ಗುರಿ ಎಂದು ಗ್ರೀನ್ಪೀಸ್ ಕಾರ್ಯಕರ್ತ ಶಿವ ಶರ್ಮಾ ಹೇಳಿದರು. <br /> <br /> ಬೆಂಗಳೂರು ಹೊರತಾಗಿ ದೆಹಲಿ, ಮುಂಬೈ, ಆಂಧ್ರಪ್ರದೇಶದ ಓಂಗೊಲ್ನಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದ್ದು, ಇಲ್ಲಿನ ಛಾಯಾಚಿತ್ರಗಳನ್ನು ವಿಶ್ವಸಂಸ್ಥೆ ಕೇಂದ್ರ ಕಚೇರಿ ಎದುರು ನಡೆಯಲಿರುವ ರ್ಯಾಲಿಯಲ್ಲಿ ಪ್ರದರ್ಶಿಸಲಾಗುವುದು ಎಂದು ಗ್ರೀನ್ಪೀಸ್ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮ್ಮ ಉಳಿವಿಗೆ, ಪ್ರಾಣಿ, ಪಕ್ಷಿ, ಸಸ್ಯ ಸಂಕುಲದ ಉಳಿವಿಗೆ ಪರಿಶುದ್ಧ ಹವೆ, ವೈಪರೀತ್ಯಗಳಿಲ್ಲದ ಹವಾಮಾನ ಅತ್ಯಗತ್ಯ. ಭೂಮಿ, ಜೀವಸಂಕುಲದ ಉಳಿವಿಗಾಗಿ ಹೋರಾಡುತ್ತಿರುವ ಗ್ರೀನ್ಪೀಸ್ ಸಂಘಟನೆ ಪರಿಸರ ಸ್ನೇಹಿ ಇಂಧನ ಬಳಕೆ ಕುರಿತು ಜಾಗೃತಿ ಮೂಡಿಸಲು `ಮೂವಿಂಗ್ ಪ್ಲಾನೆಟ್~ ಎಂಬ ವಿಶ್ವವ್ಯಾಪಿ ಅಭಿಯಾನ ಹಮ್ಮಿಕೊಂಡಿದೆ.<br /> <br /> ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡುವ ಈ ಅಭಿಯಾನದಲ್ಲಿ 167 ದೇಶಗಳ ಸಾವಿರಾರು ನಾಗರಿಕರು ಕೈಜೋಡಿಸಿದ್ದಾರೆ.<br /> <br /> `ಮೂವಿಂಗ್ ಪ್ಲಾನೆಟ್~ ಅಭಿಯಾನದ ಅಂಗವಾಗಿ ಗ್ರೀನ್ಪೀಸ್, 350 ಡಾಟ್ ಆರ್ಗ್ ಸಂಘಟನೆಯ ಸಹಯೋಗದಲ್ಲಿ ನಗರದಲ್ಲಿ ಇತ್ತೀಚೆಗೆ ಸೈಕಲ್ ರ್ಯಾಲಿ ಆಯೋಜಿಸಿತ್ತು. ಫ್ರೀಡಂ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಕಥಾನ್, ಟ್ರೆಷರ್ ಹಂಟ್ ಇತ್ಯಾದಿ ಚಟುವಟಿಕೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಯಿತು.<br /> <br /> ಹವಾಮಾನ ವೈಪರೀತ್ಯ ತಡೆಗಟ್ಟಲು, ಪರಿಸರಸ್ನೇಹಿ ಇಂಧನ ವ್ಯವಸ್ಥೆ ಜಾರಿಯಲ್ಲಿ ಇರಲು ಸರ್ಕಾರಗಳನ್ನು ಒತ್ತಾಯಿಸುವುದು ಈ ಆಂದೋಲನದ ಗುರಿ ಎಂದು ಗ್ರೀನ್ಪೀಸ್ ಕಾರ್ಯಕರ್ತ ಶಿವ ಶರ್ಮಾ ಹೇಳಿದರು. <br /> <br /> ಬೆಂಗಳೂರು ಹೊರತಾಗಿ ದೆಹಲಿ, ಮುಂಬೈ, ಆಂಧ್ರಪ್ರದೇಶದ ಓಂಗೊಲ್ನಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದ್ದು, ಇಲ್ಲಿನ ಛಾಯಾಚಿತ್ರಗಳನ್ನು ವಿಶ್ವಸಂಸ್ಥೆ ಕೇಂದ್ರ ಕಚೇರಿ ಎದುರು ನಡೆಯಲಿರುವ ರ್ಯಾಲಿಯಲ್ಲಿ ಪ್ರದರ್ಶಿಸಲಾಗುವುದು ಎಂದು ಗ್ರೀನ್ಪೀಸ್ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>