<p><strong style="font-size: 26px;">ಧಾರವಾಡ: </strong><span style="font-size: 26px;">`ಪರಿಸರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದಿವೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಜಲ, ವಾಯು ಮಾಲಿನ್ಯ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಇದರ ಪರಿಹಾರಕ್ಕೆ ಸಂಘಟಿತ ಪ್ರಯತ್ನ ಅತ್ಯವಶ್ಯ' ಎಂದು ಡಾ.ಸಂಜೀವ ಕುಲಕರ್ಣಿ ಹೇಳಿದರು.</span><br /> <br /> ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಂಡಿತ ಮುಂಜಿ ಅವರು ಸಂಗ್ರಹಿಸಿದ ಅಂಚೆ ಚೀಟಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಪರಿಸರ ಕುರಿತಂತೆ ಜ್ಞಾನ, ಪ್ರೀತಿ ಹಾಗೂ ಕಾಳಜಿ ಎಲ್ಲರಲ್ಲಿ ಹೆಚ್ಚಾಗಬೇಕು. ಸೌಮ್ಯ ಸ್ವಭಾವದ ಪರಿಸರ ಕಾಳಜಿಯನ್ನು ಹೊಂದಿರುವ ಪಂಡಿತ ಮುಂಜಿ ಅವರ ಪರಿಸರ ಕಾಳಜಿ ಧಾರವಾಡಿಗರಿಗೆ ಮಾದರಿಯಾಗಿದೆ. ಅವರ ಮನೆಯ ಮುಂದಿರುವ ನಗರಪಾಲಿಕೆಯ ಉದ್ಯಾನವನವನ್ನು ಅವರು ಪೋಷಿಸುತ್ತಿರುವ ರೀತಿ ಶ್ಲಾಘನೀಯ' ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಸಂಚಾಲಕ ಪ್ರಕಾಶ ಉಡಿಕೇರಿ `ಪರಿಸರ ಸಂರಕ್ಷಣೆಯಲ್ಲಿ ಸಮಾಜದ ಎಲ್ಲ ವರ್ಗದವರು ಸಕ್ರಿಯವಾಗಿ ಭಾಗವಹಿಸಬೇಕು, ಅಂಚೆ ಚೀಟಿಗಳ ಮೂಲಕ ವಿಶ್ವದ ಬಗೆಬಗೆಯ ಪಕ್ಷಿಲೋಕದ ವಿವರಗಳನ್ನು ತಿಳಿಯಲು ಈ ಪ್ರದರ್ಶನ ನೆರವಾಗಿದೆ' ಎಂದರು.<br /> <br /> ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಬಿ.ಎಚ್.ಕರಡಿ, ಅಸ್ಲಾಂ ಅಟ್ಟಿಹಾಳ, ವಿಶ್ವನಾಥ ಬಿರಾದಾರ ಇದ್ದರು. ಶಶಿಧರ ಪಾಟೀಲ ವಂದಿಸಿದರು.70 ದೇಶಗಳ 1300 ಅಂಚೆಚೀಟಿಗಳು ಪ್ರದರ್ಶನದಲ್ಲಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong style="font-size: 26px;">ಧಾರವಾಡ: </strong><span style="font-size: 26px;">`ಪರಿಸರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದಿವೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಜಲ, ವಾಯು ಮಾಲಿನ್ಯ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಇದರ ಪರಿಹಾರಕ್ಕೆ ಸಂಘಟಿತ ಪ್ರಯತ್ನ ಅತ್ಯವಶ್ಯ' ಎಂದು ಡಾ.ಸಂಜೀವ ಕುಲಕರ್ಣಿ ಹೇಳಿದರು.</span><br /> <br /> ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಂಡಿತ ಮುಂಜಿ ಅವರು ಸಂಗ್ರಹಿಸಿದ ಅಂಚೆ ಚೀಟಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಪರಿಸರ ಕುರಿತಂತೆ ಜ್ಞಾನ, ಪ್ರೀತಿ ಹಾಗೂ ಕಾಳಜಿ ಎಲ್ಲರಲ್ಲಿ ಹೆಚ್ಚಾಗಬೇಕು. ಸೌಮ್ಯ ಸ್ವಭಾವದ ಪರಿಸರ ಕಾಳಜಿಯನ್ನು ಹೊಂದಿರುವ ಪಂಡಿತ ಮುಂಜಿ ಅವರ ಪರಿಸರ ಕಾಳಜಿ ಧಾರವಾಡಿಗರಿಗೆ ಮಾದರಿಯಾಗಿದೆ. ಅವರ ಮನೆಯ ಮುಂದಿರುವ ನಗರಪಾಲಿಕೆಯ ಉದ್ಯಾನವನವನ್ನು ಅವರು ಪೋಷಿಸುತ್ತಿರುವ ರೀತಿ ಶ್ಲಾಘನೀಯ' ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಸಂಚಾಲಕ ಪ್ರಕಾಶ ಉಡಿಕೇರಿ `ಪರಿಸರ ಸಂರಕ್ಷಣೆಯಲ್ಲಿ ಸಮಾಜದ ಎಲ್ಲ ವರ್ಗದವರು ಸಕ್ರಿಯವಾಗಿ ಭಾಗವಹಿಸಬೇಕು, ಅಂಚೆ ಚೀಟಿಗಳ ಮೂಲಕ ವಿಶ್ವದ ಬಗೆಬಗೆಯ ಪಕ್ಷಿಲೋಕದ ವಿವರಗಳನ್ನು ತಿಳಿಯಲು ಈ ಪ್ರದರ್ಶನ ನೆರವಾಗಿದೆ' ಎಂದರು.<br /> <br /> ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಬಿ.ಎಚ್.ಕರಡಿ, ಅಸ್ಲಾಂ ಅಟ್ಟಿಹಾಳ, ವಿಶ್ವನಾಥ ಬಿರಾದಾರ ಇದ್ದರು. ಶಶಿಧರ ಪಾಟೀಲ ವಂದಿಸಿದರು.70 ದೇಶಗಳ 1300 ಅಂಚೆಚೀಟಿಗಳು ಪ್ರದರ್ಶನದಲ್ಲಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>