<p>ಚಿಂತಾಮಣಿ: ನಗರದ ಬಾಲಕರ ಸರ್ಕಾರಿ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ತಾಲ್ಲೂಕಿನ ಲಕ್ಷ್ಮೀದೇವನಕೋಟೆ ಗ್ರಾಮದಲ್ಲಿ ಶುಕ್ರವಾರ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥಾ ನಡೆಸಿದರು.<br /> <br /> ಜಾಥಾದಲ್ಲಿ ಆರೋಗ್ಯ ರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ, ಶಿಕ್ಷಣದ ಮಹತ್ವ, ಅಂತರ್ಜಲ ಮತ್ತು ಪರಿಸರದ ಸಂರಕ್ಷಣೆ ಸಾರುವ ಭಿತ್ತಿಚಿತ್ರಗಳನ್ನು ಹಿಡಿದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು.<br /> <br /> ‘ಕಾಡನ್ನು ಬೆಳೆಸಿ ನಾಡನ್ನು ಉಳಿಸಿ’, ‘ಮನೆಗೊಂದು ಮರ, ಊರಿಗೊಂದು ವನ’, ‘ಶೌಚಾಲಯ ಬಳಸಿ ಪರಿಸರ ಉಳಿಸಿ’ ಮುಂತಾದ ಘೋಷ ವಾಕ್ಯಗಳ ಕರಪತ್ರಗಳನ್ನು ಮನೆ ಮನೆಗೂ ವಿತರಿಸಿದರು.<br /> <br /> ವಿದ್ಯಾರ್ಥಿಗಳಿಬ್ಬರು ಮರಗಳ ವೇಷ ಧರಿಸಿ ‘ನಮ್ಮನ್ನು ಕೊಲ್ಲದಿರಿ’ ಎಂಬ ನಾಮಫಲಕದೊಂದಿಗೆ ಭಾಗವಹಿಸಿದ್ದು ಜಾಥಾದ ವಿಶೇಷವಾಗಿತ್ತು. ವಿದ್ಯಾರ್ಥಿಗಳು ಮನೆ ಮನೆಗೂ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳಾದ ಚಿಕುನ್ಗುನ್ಯಾ, ಡೆಂಗೆ, ಮಲೇರಿಯಾ ಮತ್ತಿತರ ಕಾಯಿಲೆ ತಡೆಗೆ ಮುನ್ನಚ್ಚರಿಕೆ ಕುರಿತು ತಿಳಿವಳಿಕೆ ನೀಡಿದರು.<br /> <br /> ನಂತರ ನಡೆದ ಕಾರ್ಯಕ್ರಮದಲ್ಲಿ ನೆಲ ಮತ್ತು ಅಂತರ್ಜಲ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದ ಪ್ರಾಧ್ಯಾಪಕಿ ಎಚ್.ಜಿ.ಸುಗುಣಾ, ದೊರೆಯುವ ಜಲ ಸಂಪನ್ಮೂಲವನ್ನು ಹಿತಮಿತವಾಗಿ ಬಳಸುವುದೇ ಜಲಕ್ಷಾಮ ತಡೆಯಬಹುದು ಎಂದರು.<br /> <br /> ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಿಕ್ಷಕ ರಾಜಗೋಪಾಲ್ ನಗೆಹಬ್ಬ, ವಿದ್ಯಾರ್ಥಿಗಳ ಜನಪದ ಗೀತೆ, ಪರಿಸರ ಗೀತೆ, ವರದಕ್ಷಿಣೆ ಮತ್ತು ಹೆಣ್ಣು ಭ್ರೂಣ ಹತ್ಯೆಯ ಅರಿವು ಮೂಡಿಸುವ ನಾಟಕ ಆಕರ್ಷಣೀಯವಾಗಿ ಮೂಡಿಬಂದವು.<br /> <br /> ಪ್ರಾಧ್ಯಾಪಕ ಕೆ.ಎನ್.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಸ್.ಎಂ.ವೆಂಕಟೇಶಪ್ಪ, ಎಚ್.ಆರ್.ಶಿವಕುಮಾರ್, ಪ್ರೇಮಾ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂತಾಮಣಿ: ನಗರದ ಬಾಲಕರ ಸರ್ಕಾರಿ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ತಾಲ್ಲೂಕಿನ ಲಕ್ಷ್ಮೀದೇವನಕೋಟೆ ಗ್ರಾಮದಲ್ಲಿ ಶುಕ್ರವಾರ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥಾ ನಡೆಸಿದರು.<br /> <br /> ಜಾಥಾದಲ್ಲಿ ಆರೋಗ್ಯ ರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ, ಶಿಕ್ಷಣದ ಮಹತ್ವ, ಅಂತರ್ಜಲ ಮತ್ತು ಪರಿಸರದ ಸಂರಕ್ಷಣೆ ಸಾರುವ ಭಿತ್ತಿಚಿತ್ರಗಳನ್ನು ಹಿಡಿದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು.<br /> <br /> ‘ಕಾಡನ್ನು ಬೆಳೆಸಿ ನಾಡನ್ನು ಉಳಿಸಿ’, ‘ಮನೆಗೊಂದು ಮರ, ಊರಿಗೊಂದು ವನ’, ‘ಶೌಚಾಲಯ ಬಳಸಿ ಪರಿಸರ ಉಳಿಸಿ’ ಮುಂತಾದ ಘೋಷ ವಾಕ್ಯಗಳ ಕರಪತ್ರಗಳನ್ನು ಮನೆ ಮನೆಗೂ ವಿತರಿಸಿದರು.<br /> <br /> ವಿದ್ಯಾರ್ಥಿಗಳಿಬ್ಬರು ಮರಗಳ ವೇಷ ಧರಿಸಿ ‘ನಮ್ಮನ್ನು ಕೊಲ್ಲದಿರಿ’ ಎಂಬ ನಾಮಫಲಕದೊಂದಿಗೆ ಭಾಗವಹಿಸಿದ್ದು ಜಾಥಾದ ವಿಶೇಷವಾಗಿತ್ತು. ವಿದ್ಯಾರ್ಥಿಗಳು ಮನೆ ಮನೆಗೂ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳಾದ ಚಿಕುನ್ಗುನ್ಯಾ, ಡೆಂಗೆ, ಮಲೇರಿಯಾ ಮತ್ತಿತರ ಕಾಯಿಲೆ ತಡೆಗೆ ಮುನ್ನಚ್ಚರಿಕೆ ಕುರಿತು ತಿಳಿವಳಿಕೆ ನೀಡಿದರು.<br /> <br /> ನಂತರ ನಡೆದ ಕಾರ್ಯಕ್ರಮದಲ್ಲಿ ನೆಲ ಮತ್ತು ಅಂತರ್ಜಲ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದ ಪ್ರಾಧ್ಯಾಪಕಿ ಎಚ್.ಜಿ.ಸುಗುಣಾ, ದೊರೆಯುವ ಜಲ ಸಂಪನ್ಮೂಲವನ್ನು ಹಿತಮಿತವಾಗಿ ಬಳಸುವುದೇ ಜಲಕ್ಷಾಮ ತಡೆಯಬಹುದು ಎಂದರು.<br /> <br /> ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಿಕ್ಷಕ ರಾಜಗೋಪಾಲ್ ನಗೆಹಬ್ಬ, ವಿದ್ಯಾರ್ಥಿಗಳ ಜನಪದ ಗೀತೆ, ಪರಿಸರ ಗೀತೆ, ವರದಕ್ಷಿಣೆ ಮತ್ತು ಹೆಣ್ಣು ಭ್ರೂಣ ಹತ್ಯೆಯ ಅರಿವು ಮೂಡಿಸುವ ನಾಟಕ ಆಕರ್ಷಣೀಯವಾಗಿ ಮೂಡಿಬಂದವು.<br /> <br /> ಪ್ರಾಧ್ಯಾಪಕ ಕೆ.ಎನ್.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಸ್.ಎಂ.ವೆಂಕಟೇಶಪ್ಪ, ಎಚ್.ಆರ್.ಶಿವಕುಮಾರ್, ಪ್ರೇಮಾ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>