<p>ಬೆಕ್ಕಣ್ಣ ವಾರದಿಂದ ನಿರ್ಮಲಕ್ಕನ ಬಜೆಟ್ ಮಂಡನೆಗೆ ಕಾಯುತ್ತಿತ್ತು.</p>.<p>‘ಯಾವ ಬಜೆಟ್ ಬಂದರೂ ಶ್ರೀಸಾಮಾನ್ಯರ ಬದುಕಿನಲ್ಲಿ ಏನಂಥ ವ್ಯತ್ಯಾಸ ಆಗಲ್ಲ ಬಿಡು’ ಎಂದು ನಾನು ಹೇಳಿದರೆ, ‘ಜಿಡಿಪಿ ಎಷ್ಟ್ ಹೆಚ್ಚಾಗೈತೆ ನೋಡು’ ಎಂದು ಗುರುಗುಟ್ಟಿತು. </p>.<p>‘ಆಕಿ 9ನೇ ಸಲ ಬಜೆಟ್ ಮಂಡನೆ ಮಾಡಾತಾಳೆ ಅನ್ನೂದೆ ಐತಿಹಾಸಿಕ ಮಹತ್ವದ್ದು, ತಿಳಕೋ!’ ಎಂದು ನನ್ನ ಮುಖಕ್ಕೆ ತಿವಿದು ಬೆಳಗ್ಗೆಯೇ ಟಿ.ವಿ ಮುಂದೆ ವಿರಾಜಮಾನವಾಗಿತ್ತು.</p>.<p>ನಿರ್ಮಲಕ್ಕ ಕೆನ್ನೇರೆಳೆ ಬಣ್ಣದ ಸೀರೆಯುಟ್ಟಿದ್ದು ನೋಡಿ, ತಾನೂ ಅಂಥದ್ದೇ ಬಣ್ಣದ ಅಂಗಿ ಹಾಕಿಕೊಂಡು ಕೂತಿತು.</p>.<p>‘ಫಸ್ಟಿಗೇ ಆಕಿ ಕರ್ತವ್ಯ ಮಂತ್ರದ ಬಗ್ಗೆ ಹೇಳ್ಯಾಳೆ. ಬಜೆಟ್ನಾಗೆ ರಾಜ್ಯಕ್ಕೆ ಕೇಂದ್ರ ಏನು ಕೊಡತದೋ ಬಿಡತದೋ, ಆದರೆ ರಾಜ್ಯಗಳು ತಮ್ಮ ಕರ್ತವ್ಯಪಾಲನೆ ಮಾಡಬಕು’ ಎಂದು ಗುಣಗಾನ ಮಾಡಿತು.</p>.<p>‘ಈ ಸಲ ಏನೇನು ಅಗ್ಗ ಆಗತೈತಿ, ವೈಯಕ್ತಿಕ ತೆರಿಗೆವಳಗೆ ಏನು ಕಡಿಮೆ ಮಾಡತಾರೆ, ನೋಡೂಣು ಇರು’ ಎಂದೆ ನಾನು ಆಸೆಯಿಂದ.</p>.<p>‘ಏಳು ಹೈಸ್ಪೀಡ್ ರೈಲು ಬಿಡತಾರಂತೆ... ಅದ್ರಾಗೆ ಎರಡು ಬೆಂಗಳೂರಿಂದ ಹೊರಡತಾವೆ’ ಎಂದು ಬೆಕ್ಕಣ್ಣ ಖುಷಿಯಿಂದ ಕುಣಿಯಿತು.</p>.<p>‘ವಂದೇ ಭಾರತ್ ರೈಲನ್ನೇ ಶ್ರೀಸಾಮಾನ್ಯರು ಹತ್ತಾಕೆ ಆಗಂಗಿಲ್ಲ. ಇನ್ನು ಹೈಸ್ಪೀಡ್ ರೈಲಿನ ಟಿಕೀಟು ತೆಗೆಯೂ ಮಾತೆಲ್ಲಿ? ತೆರಿಗೆಯಲ್ಲಿ ಬದಲಾವಣೆ ಇಲ್ಲ ಅಂದರೆ ಮಧ್ಯಮವರ್ಗಕ್ಕೆ ಸಿಹಿಯಿಲ್ಲ. ಕೆಲವು ಔಷಧಗಳು ಅಗ್ಗವಾಗಿದ್ದನ್ನು ಬಿಟ್ಟರೆ, ಶ್ರೀಸಾಮಾನ್ಯರಿಗೂ ಸಿಹಿ ಅನ್ನುವಂಥದ್ದು ಏನೂ ಇಲ್ಲ’ ಎಂದೆ ನಾನು ನಿರಾಸೆಯಿಂದ.</p>.<p>‘ಶ್ರೀಸಾಮಾನ್ಯರ ಬದುಕಿಗೆ ಅಗತ್ಯವಾಗಿದ್ದನ್ನು ಮಾಡುವ ಕರ್ತವ್ಯ ರಾಜ್ಯಗಳದ್ದು’ ಎಂದು ಬೆಕ್ಕಣ್ಣ ವಾದಿಸಿತು.</p>.<p>‘ಹಂಗಾರೆ ರಾಜ್ಯಗಳಿಗೆ ಅವರ ತೆರಿಗೆ ಪಾಲನ್ನೂ ನ್ಯಾಯಯುತವಾಗಿ ಕೊಡಬೇಕು’ ಎಂದು ನಾನು ವಾದಿಸಿದೆ. </p>.<p>‘ಹೋಗಲಿಬಿಡು, ನನಗೆ ನಿನಗೆ ಜಗಳ ಯಾಕೆ? ಈಗ ವಿದೇಶ ಪ್ರವಾಸ ಪ್ಯಾಕೇಜ್ ಅಗ್ಗವಂತೆ... ನಾವಿಬ್ಬರೂ ವಿದೇಶ ಪ್ರವಾಸಕ್ಕೆ ಹೋಗೂಣೇನು?’ ಎಂದು ಮೆತ್ತಗೆ ಉಲಿಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಕ್ಕಣ್ಣ ವಾರದಿಂದ ನಿರ್ಮಲಕ್ಕನ ಬಜೆಟ್ ಮಂಡನೆಗೆ ಕಾಯುತ್ತಿತ್ತು.</p>.<p>‘ಯಾವ ಬಜೆಟ್ ಬಂದರೂ ಶ್ರೀಸಾಮಾನ್ಯರ ಬದುಕಿನಲ್ಲಿ ಏನಂಥ ವ್ಯತ್ಯಾಸ ಆಗಲ್ಲ ಬಿಡು’ ಎಂದು ನಾನು ಹೇಳಿದರೆ, ‘ಜಿಡಿಪಿ ಎಷ್ಟ್ ಹೆಚ್ಚಾಗೈತೆ ನೋಡು’ ಎಂದು ಗುರುಗುಟ್ಟಿತು. </p>.<p>‘ಆಕಿ 9ನೇ ಸಲ ಬಜೆಟ್ ಮಂಡನೆ ಮಾಡಾತಾಳೆ ಅನ್ನೂದೆ ಐತಿಹಾಸಿಕ ಮಹತ್ವದ್ದು, ತಿಳಕೋ!’ ಎಂದು ನನ್ನ ಮುಖಕ್ಕೆ ತಿವಿದು ಬೆಳಗ್ಗೆಯೇ ಟಿ.ವಿ ಮುಂದೆ ವಿರಾಜಮಾನವಾಗಿತ್ತು.</p>.<p>ನಿರ್ಮಲಕ್ಕ ಕೆನ್ನೇರೆಳೆ ಬಣ್ಣದ ಸೀರೆಯುಟ್ಟಿದ್ದು ನೋಡಿ, ತಾನೂ ಅಂಥದ್ದೇ ಬಣ್ಣದ ಅಂಗಿ ಹಾಕಿಕೊಂಡು ಕೂತಿತು.</p>.<p>‘ಫಸ್ಟಿಗೇ ಆಕಿ ಕರ್ತವ್ಯ ಮಂತ್ರದ ಬಗ್ಗೆ ಹೇಳ್ಯಾಳೆ. ಬಜೆಟ್ನಾಗೆ ರಾಜ್ಯಕ್ಕೆ ಕೇಂದ್ರ ಏನು ಕೊಡತದೋ ಬಿಡತದೋ, ಆದರೆ ರಾಜ್ಯಗಳು ತಮ್ಮ ಕರ್ತವ್ಯಪಾಲನೆ ಮಾಡಬಕು’ ಎಂದು ಗುಣಗಾನ ಮಾಡಿತು.</p>.<p>‘ಈ ಸಲ ಏನೇನು ಅಗ್ಗ ಆಗತೈತಿ, ವೈಯಕ್ತಿಕ ತೆರಿಗೆವಳಗೆ ಏನು ಕಡಿಮೆ ಮಾಡತಾರೆ, ನೋಡೂಣು ಇರು’ ಎಂದೆ ನಾನು ಆಸೆಯಿಂದ.</p>.<p>‘ಏಳು ಹೈಸ್ಪೀಡ್ ರೈಲು ಬಿಡತಾರಂತೆ... ಅದ್ರಾಗೆ ಎರಡು ಬೆಂಗಳೂರಿಂದ ಹೊರಡತಾವೆ’ ಎಂದು ಬೆಕ್ಕಣ್ಣ ಖುಷಿಯಿಂದ ಕುಣಿಯಿತು.</p>.<p>‘ವಂದೇ ಭಾರತ್ ರೈಲನ್ನೇ ಶ್ರೀಸಾಮಾನ್ಯರು ಹತ್ತಾಕೆ ಆಗಂಗಿಲ್ಲ. ಇನ್ನು ಹೈಸ್ಪೀಡ್ ರೈಲಿನ ಟಿಕೀಟು ತೆಗೆಯೂ ಮಾತೆಲ್ಲಿ? ತೆರಿಗೆಯಲ್ಲಿ ಬದಲಾವಣೆ ಇಲ್ಲ ಅಂದರೆ ಮಧ್ಯಮವರ್ಗಕ್ಕೆ ಸಿಹಿಯಿಲ್ಲ. ಕೆಲವು ಔಷಧಗಳು ಅಗ್ಗವಾಗಿದ್ದನ್ನು ಬಿಟ್ಟರೆ, ಶ್ರೀಸಾಮಾನ್ಯರಿಗೂ ಸಿಹಿ ಅನ್ನುವಂಥದ್ದು ಏನೂ ಇಲ್ಲ’ ಎಂದೆ ನಾನು ನಿರಾಸೆಯಿಂದ.</p>.<p>‘ಶ್ರೀಸಾಮಾನ್ಯರ ಬದುಕಿಗೆ ಅಗತ್ಯವಾಗಿದ್ದನ್ನು ಮಾಡುವ ಕರ್ತವ್ಯ ರಾಜ್ಯಗಳದ್ದು’ ಎಂದು ಬೆಕ್ಕಣ್ಣ ವಾದಿಸಿತು.</p>.<p>‘ಹಂಗಾರೆ ರಾಜ್ಯಗಳಿಗೆ ಅವರ ತೆರಿಗೆ ಪಾಲನ್ನೂ ನ್ಯಾಯಯುತವಾಗಿ ಕೊಡಬೇಕು’ ಎಂದು ನಾನು ವಾದಿಸಿದೆ. </p>.<p>‘ಹೋಗಲಿಬಿಡು, ನನಗೆ ನಿನಗೆ ಜಗಳ ಯಾಕೆ? ಈಗ ವಿದೇಶ ಪ್ರವಾಸ ಪ್ಯಾಕೇಜ್ ಅಗ್ಗವಂತೆ... ನಾವಿಬ್ಬರೂ ವಿದೇಶ ಪ್ರವಾಸಕ್ಕೆ ಹೋಗೂಣೇನು?’ ಎಂದು ಮೆತ್ತಗೆ ಉಲಿಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>