<p><strong>ಬೆಂಗಳೂರು:</strong> ಅಮೆರಿಕದಲ್ಲಿ ಸಾವನ್ನಪ್ಪಿದ ನಗರದ ಸಾಫ್ಟ್ವೇರ್ ಎಂಜಿನಿಯರ್ ಪವನ್ಕುಮಾರ್ ಶವವನ್ನು ಮಂಗಳವಾರ ರಾತ್ರಿ ನಗರಕ್ಕೆ ತರಲಾಯಿತು.<br /> <br /> `ಶವವನ್ನು ನಗರಕ್ಕೆ ತರಿಸುವ ಸಂಬಂಧ ಕೆಲ ದಾಖಲೆ ಪತ್ರಗಳಿಗೆ ಶುಕ್ರವಾರ (ಜು 6) ಸಹಿ ಮಾಡಿ ನ್ಯೂಜೆರ್ಸಿಗೆ ಕಳುಹಿಸಿಲಾಗಿತ್ತು. ಭಾನುವಾರ ಆ ದಾಖಲೆ ಪತ್ರಗಳು ನ್ಯೂಜೆರ್ಸಿ ಪೊಲೀಸರ ಕೈಸೇರಿತ್ತು. <br /> <br /> ಎಲ್ಲಾ ಪ್ರಕ್ರಿಯೆ ಮುಗಿದು ಪವನ್ ಮೃತದೇಹ 12 ಗಂಟೆ ಸುಮಾರಿಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು ಎಂದು ಪವನ್ ಚಿಕ್ಕಪ್ಪ ಗೋಪಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಆರ್.ಟಿ. ನಗರದಲ್ಲಿರುವ ಪವನ್ ಅಕ್ಕ ಗುಣಶೀಲಾರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಹೆಬ್ಬಾಳ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ~ ಎಂದರು. `ಪವನ್ನ ಪಾಸ್ಪೋರ್ಟ್ ಮತ್ತು ಮರಣ ದೃಢೀಕರಣ ಪತ್ರವನ್ನು ಏರ್ಲೈನ್ಸ್ ಅಧಿಕಾರಿಗಳು ನೀಡಿದ್ದಾರೆ. ಆದರೆ, ಆತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದಿಟ್ಟಿದ್ದ ಎನ್ನಲಾದ ಪತ್ರ ಕೈಸೇರಿಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಮೆರಿಕದಲ್ಲಿ ಸಾವನ್ನಪ್ಪಿದ ನಗರದ ಸಾಫ್ಟ್ವೇರ್ ಎಂಜಿನಿಯರ್ ಪವನ್ಕುಮಾರ್ ಶವವನ್ನು ಮಂಗಳವಾರ ರಾತ್ರಿ ನಗರಕ್ಕೆ ತರಲಾಯಿತು.<br /> <br /> `ಶವವನ್ನು ನಗರಕ್ಕೆ ತರಿಸುವ ಸಂಬಂಧ ಕೆಲ ದಾಖಲೆ ಪತ್ರಗಳಿಗೆ ಶುಕ್ರವಾರ (ಜು 6) ಸಹಿ ಮಾಡಿ ನ್ಯೂಜೆರ್ಸಿಗೆ ಕಳುಹಿಸಿಲಾಗಿತ್ತು. ಭಾನುವಾರ ಆ ದಾಖಲೆ ಪತ್ರಗಳು ನ್ಯೂಜೆರ್ಸಿ ಪೊಲೀಸರ ಕೈಸೇರಿತ್ತು. <br /> <br /> ಎಲ್ಲಾ ಪ್ರಕ್ರಿಯೆ ಮುಗಿದು ಪವನ್ ಮೃತದೇಹ 12 ಗಂಟೆ ಸುಮಾರಿಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು ಎಂದು ಪವನ್ ಚಿಕ್ಕಪ್ಪ ಗೋಪಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಆರ್.ಟಿ. ನಗರದಲ್ಲಿರುವ ಪವನ್ ಅಕ್ಕ ಗುಣಶೀಲಾರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಹೆಬ್ಬಾಳ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ~ ಎಂದರು. `ಪವನ್ನ ಪಾಸ್ಪೋರ್ಟ್ ಮತ್ತು ಮರಣ ದೃಢೀಕರಣ ಪತ್ರವನ್ನು ಏರ್ಲೈನ್ಸ್ ಅಧಿಕಾರಿಗಳು ನೀಡಿದ್ದಾರೆ. ಆದರೆ, ಆತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದಿಟ್ಟಿದ್ದ ಎನ್ನಲಾದ ಪತ್ರ ಕೈಸೇರಿಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>