<p><strong>ಬೆಂಗಳೂರು:</strong> ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸಶಸ್ತ್ರ ಪಡೆಗಳು ಆಫ್ಘಾನಿಸ್ತಾನವನ್ನು ತೊರೆದ ನಂತರ, ತಾಲಿಬಾನಿಗಳು ಪಾಕಿಸ್ತಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನುಸುಳುವ ಸಾಧ್ಯತೆ ಇದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎನ್.ಎ.ಕೆ ಬ್ರೌನ್ ಹೇಳಿದರು.<br /> <br /> ಇಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ (ಎಚ್ಎಎಲ್) ಶನಿವಾರ ಆಯೋಜಿಸಿದ್ದ ಏರ್ ಚೀಫ್ ಮಾರ್ಷಲ್ ಎಲ್.ಎಂ. ಖತ್ರೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಭಾರತ- ಪಾಕಿಸ್ತಾನದ ನಡುವಿನ ವಾಘಾ ಗಡಿಯತ್ತ ತಾಲಿಬಾನ್ ಉಗ್ರಗಾಮಿಗಳು ಬರುವ ಸಾಧ್ಯತೆ ಇದೆ.<br /> <br /> ಇದು ಜಮ್ಮು ಮತ್ತು ಕಾಶ್ಮೀರಕ್ಕೂ ಅಪಾಯ ತಂದೊಡ್ಡಬಲ್ಲದು~ ಎಂದು ಹೇಳಿದರು.ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಕಾರಣ, ಬಾಹ್ಯಾಕಾಶ ಸಮರ ಎದುರಿಸುವ ವಾಯುಪಡೆಯ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ಕೆ ಅಗತ್ಯ ಉತ್ತೇಜನ ದೊರೆತಿಲ್ಲ ಎಂದು ಬ್ರೌನ್ ಬೇಸರ ವ್ಯಕ್ತಪಡಿಸಿದರು.<br /> <br /> `ಮಿಲಿಟರಿಯ ಬಳಕೆಗಾಗಿ ಜಿಸ್ಯಾಟ್ 7ಎ ಮತ್ತು ಜಿಸ್ಯಾಟ್ 7ಸಿ ಉಪಗ್ರಹ ಉಡಾವಣೆ ಮಾಡುವ ಸಂಬಂಧ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಜೊತೆ ಮಾತುಕತೆ ನಡೆಸಲಾಗಿದೆ. ಆದರೆ ಈ ಉಪಗ್ರಹಗಳ ಉಡಾವಣೆ ಶೀಘ್ರದಲ್ಲಿ ಆಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.<br /> <br /> ನಾಗರಿಕ ಅವಶ್ಯಕತೆಗಳಿಗೆ ಉಪಗ್ರಹಗಳನ್ನು ಬಳಸುವ ವಿಷಯದಲ್ಲಿ ದೇಶ ಪ್ರಗತಿ ಸಾಧಿಸಿದೆ. ಆದರೆ ಬೇಹುಗಾರಿಕಾ ಉಪಗ್ರಹಗಳ ಅಭಿವೃದ್ಧಿಯಲ್ಲಿ ಈ ಪ್ರಮಾಣದ ಅಭಿವೃದ್ಧಿ ಸಾಧ್ಯವಾಗಿಲ್ಲ. ಚೀನಾ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ ಎಂದರು.<br /> <br /> ಫ್ರಾನ್ಸ್ ನಿರ್ಮಿತ 126 ಮಧ್ಯಮ ಬಹುಪಯೋಗಿ ಯುದ್ಧ ವಿಮಾನ `ರಫೇಲ್~ ಖರೀದಿಗಾಗಿ 2012-13ನೇ ಸಾಲಿನಲ್ಲಿ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಒಪ್ಪಂದದ ಪ್ರಕ್ರಿಯೆ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.<br /> <br /> ಇದಕ್ಕೂ ಮುನ್ನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಪಾಕಿಸ್ತಾನ ಮತ್ತು ಚೀನಾ ನಮ್ಮ ದೇಶದ ಭದ್ರತೆಗೆ ಸವಾಲಾಗಿದ್ದರೂ, ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ನಮ್ಮ ದೇಶದ ಭದ್ರತೆ ಹಾಗೂ ಆರ್ಥಿಕ ಸ್ಥಿರತೆಯನ್ನು ಬಯಸುತ್ತಿವೆ~ ಎಂದು ಅಭಿಪ್ರಾಯಪಟ್ಟರು.<br /> <br /> ದಶಕಗಳಿಂದ ಉಳಿದುಕೊಂಡಿರುವ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಚೀನಾ ದೇಶಕ್ಕೆ ಮನಸ್ಸಿಲ್ಲ. ವಿವಾದವನ್ನು ತನ್ನದೇ ಆದ ಮಾರ್ಗದಲ್ಲಿ ಬಗೆಹರಿಸಿಕೊಳ್ಳುವ ಆಸೆ ಚೀನಾಕ್ಕಿದೆ. ಎರಡೂ ದೇಶಗಳು ಆರ್ಥಿಕವಾಗಿ ಬಲಾಢ್ಯ ಆಗುತ್ತಿರುವಂತೆ, ಗಡಿ ಸಮಸ್ಯೆ ವಿವಾದದ ಮೂಲವಾಗಿ ಪರಿಣಮಿಸಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.<br /> <br /> ತನ್ನ ನೆರೆಯಲ್ಲಿ ಅಣ್ವಸ್ತ್ರಗಳಿಂದ ಸಜ್ಜಿತವಾದ ಎರಡು ರಾಷ್ಟ್ರಗಳನ್ನು ಹೊಂದಿರುವುದು ಜಗತ್ತಿನಲ್ಲಿ ಭಾರತ ಮಾತ್ರ. ಈ ಎರಡೂ ನೆರೆ ರಾಷ್ಟ್ರಗಳ ಜೊತೆ ಭಾರತ ಯುದ್ಧ ನಡೆಸಿದೆ ಎಂದು ಹೇಳಿದರು.ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ.ಪಿ.ಎಸ್. ಕೃಷ್ಣನ್, ಎಚ್ಎಎಲ್ ಅಧ್ಯಕ್ಷ ಆರ್.ಕೆ. ತ್ಯಾಗಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸಶಸ್ತ್ರ ಪಡೆಗಳು ಆಫ್ಘಾನಿಸ್ತಾನವನ್ನು ತೊರೆದ ನಂತರ, ತಾಲಿಬಾನಿಗಳು ಪಾಕಿಸ್ತಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನುಸುಳುವ ಸಾಧ್ಯತೆ ಇದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎನ್.ಎ.ಕೆ ಬ್ರೌನ್ ಹೇಳಿದರು.<br /> <br /> ಇಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ (ಎಚ್ಎಎಲ್) ಶನಿವಾರ ಆಯೋಜಿಸಿದ್ದ ಏರ್ ಚೀಫ್ ಮಾರ್ಷಲ್ ಎಲ್.ಎಂ. ಖತ್ರೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಭಾರತ- ಪಾಕಿಸ್ತಾನದ ನಡುವಿನ ವಾಘಾ ಗಡಿಯತ್ತ ತಾಲಿಬಾನ್ ಉಗ್ರಗಾಮಿಗಳು ಬರುವ ಸಾಧ್ಯತೆ ಇದೆ.<br /> <br /> ಇದು ಜಮ್ಮು ಮತ್ತು ಕಾಶ್ಮೀರಕ್ಕೂ ಅಪಾಯ ತಂದೊಡ್ಡಬಲ್ಲದು~ ಎಂದು ಹೇಳಿದರು.ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಕಾರಣ, ಬಾಹ್ಯಾಕಾಶ ಸಮರ ಎದುರಿಸುವ ವಾಯುಪಡೆಯ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ಕೆ ಅಗತ್ಯ ಉತ್ತೇಜನ ದೊರೆತಿಲ್ಲ ಎಂದು ಬ್ರೌನ್ ಬೇಸರ ವ್ಯಕ್ತಪಡಿಸಿದರು.<br /> <br /> `ಮಿಲಿಟರಿಯ ಬಳಕೆಗಾಗಿ ಜಿಸ್ಯಾಟ್ 7ಎ ಮತ್ತು ಜಿಸ್ಯಾಟ್ 7ಸಿ ಉಪಗ್ರಹ ಉಡಾವಣೆ ಮಾಡುವ ಸಂಬಂಧ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಜೊತೆ ಮಾತುಕತೆ ನಡೆಸಲಾಗಿದೆ. ಆದರೆ ಈ ಉಪಗ್ರಹಗಳ ಉಡಾವಣೆ ಶೀಘ್ರದಲ್ಲಿ ಆಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.<br /> <br /> ನಾಗರಿಕ ಅವಶ್ಯಕತೆಗಳಿಗೆ ಉಪಗ್ರಹಗಳನ್ನು ಬಳಸುವ ವಿಷಯದಲ್ಲಿ ದೇಶ ಪ್ರಗತಿ ಸಾಧಿಸಿದೆ. ಆದರೆ ಬೇಹುಗಾರಿಕಾ ಉಪಗ್ರಹಗಳ ಅಭಿವೃದ್ಧಿಯಲ್ಲಿ ಈ ಪ್ರಮಾಣದ ಅಭಿವೃದ್ಧಿ ಸಾಧ್ಯವಾಗಿಲ್ಲ. ಚೀನಾ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ ಎಂದರು.<br /> <br /> ಫ್ರಾನ್ಸ್ ನಿರ್ಮಿತ 126 ಮಧ್ಯಮ ಬಹುಪಯೋಗಿ ಯುದ್ಧ ವಿಮಾನ `ರಫೇಲ್~ ಖರೀದಿಗಾಗಿ 2012-13ನೇ ಸಾಲಿನಲ್ಲಿ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಒಪ್ಪಂದದ ಪ್ರಕ್ರಿಯೆ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.<br /> <br /> ಇದಕ್ಕೂ ಮುನ್ನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಪಾಕಿಸ್ತಾನ ಮತ್ತು ಚೀನಾ ನಮ್ಮ ದೇಶದ ಭದ್ರತೆಗೆ ಸವಾಲಾಗಿದ್ದರೂ, ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ನಮ್ಮ ದೇಶದ ಭದ್ರತೆ ಹಾಗೂ ಆರ್ಥಿಕ ಸ್ಥಿರತೆಯನ್ನು ಬಯಸುತ್ತಿವೆ~ ಎಂದು ಅಭಿಪ್ರಾಯಪಟ್ಟರು.<br /> <br /> ದಶಕಗಳಿಂದ ಉಳಿದುಕೊಂಡಿರುವ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಚೀನಾ ದೇಶಕ್ಕೆ ಮನಸ್ಸಿಲ್ಲ. ವಿವಾದವನ್ನು ತನ್ನದೇ ಆದ ಮಾರ್ಗದಲ್ಲಿ ಬಗೆಹರಿಸಿಕೊಳ್ಳುವ ಆಸೆ ಚೀನಾಕ್ಕಿದೆ. ಎರಡೂ ದೇಶಗಳು ಆರ್ಥಿಕವಾಗಿ ಬಲಾಢ್ಯ ಆಗುತ್ತಿರುವಂತೆ, ಗಡಿ ಸಮಸ್ಯೆ ವಿವಾದದ ಮೂಲವಾಗಿ ಪರಿಣಮಿಸಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.<br /> <br /> ತನ್ನ ನೆರೆಯಲ್ಲಿ ಅಣ್ವಸ್ತ್ರಗಳಿಂದ ಸಜ್ಜಿತವಾದ ಎರಡು ರಾಷ್ಟ್ರಗಳನ್ನು ಹೊಂದಿರುವುದು ಜಗತ್ತಿನಲ್ಲಿ ಭಾರತ ಮಾತ್ರ. ಈ ಎರಡೂ ನೆರೆ ರಾಷ್ಟ್ರಗಳ ಜೊತೆ ಭಾರತ ಯುದ್ಧ ನಡೆಸಿದೆ ಎಂದು ಹೇಳಿದರು.ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ.ಪಿ.ಎಸ್. ಕೃಷ್ಣನ್, ಎಚ್ಎಎಲ್ ಅಧ್ಯಕ್ಷ ಆರ್.ಕೆ. ತ್ಯಾಗಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>