<p><strong>ವಿಜಾಪುರ:</strong> ಇಲ್ಲಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಮೋಟಾರ್ ವಾಹನ ಇನ್ಸ್ಪೆಕ್ಟರೊಬ್ಬರು ಪಾನಮತ್ತನಾಗಿ ನಗರದಲ್ಲಿ ಬೆತ್ತಲೆ ತಿರುಗಿ ರಾದ್ಧಾಂತ ನಡೆಸಿದ ಘಟನೆ ಶುಕ್ರವಾರ ನಡೆದಿದೆ.<br /> <br /> `ಕುಡಿದ ಅಮಲಿನಲ್ಲಿ ಬಟ್ಟೆ ಬಿಚ್ಚಿ ರಾದ್ಧಾಂತ ಮಾಡಿದ ಅಧಿಕಾರಿ ಟಿ.ಆರ್.ಕೆ. ಕುಮಾರ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ~ ಎಂದು ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ತಿಳಿಸಿದರು.<br /> <br /> ಬೆಂಗಳೂರು ಮೂಲದ ಈ ಅಧಿಕಾರಿ ಹೋಳಿ ಹಬ್ಬದ ದಿನವಾದ ಶುಕ್ರವಾರ ಕುಡಿದು ಜೋಲಿ ಹೊಡೆಯುತ್ತ ಇಲ್ಲಿಯ ಕೋರ್ಟ್ ಸಂಕೀರ್ಣದ ಎದುರು ಬಂದರು. ತಾನು ತೊಟ್ಟಿದ್ದ ಅಂಗಿಯನ್ನು ಕಳಚಿ, ವಿಚಿತ್ರವಾಗಿ ವರ್ತಿಸಲಾರಂಭಿಸಿದ ಇವರನ್ನು ಗಮನಿಸಿದ ಸಾರ್ವಜನಿಕರು ತಮಗೆ ಮಾಹಿತಿ ನೀಡಿದರು ಎಂದು ಪೊಲೀಸರು ಹೇಳಿದ್ದಾರೆ.<br /> <br /> ಅಷ್ಟೊತ್ತಿಗಾಗಲೇ ಕುಮಾರ ಪೂರ್ಣ ಬೆತ್ತಲಾಗಿ ತಾನು ಕಾರ್ಯ ನಿರ್ವಹಿಸುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಎದುರು ಬಂದು ಅಲ್ಲಿಯೂ ಕೂಗಾಟ-ಚೀರಾಟ ನಡೆಸಿದರು. ಅಷ್ಟೊತ್ತಿಗಾಗಲೆ ಅಲ್ಲಿಗೆ ಬಂದ ಪೊಲೀಸರು ಅವರನ್ನು ಗಾಂಧಿಚೌಕ್ ಠಾಣೆಗೆ ಕರೆದೊಯ್ದರು.<br /> <br /> ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿಯೂ ಆತ ಬೆತ್ತಲಾಗಿ ಹೊರಳಾಡಲಾರಂಭಿಸಿದ. ರಂಪಾಟ ನಡೆಸಿದರು. ಆಗ ಪೊಲೀಸರು ಅವರನ್ನು ಹೊತ್ತೊಯ್ದು ಕೈಗೆ ಬೇಡಿ ಹಾಕಿ ಕೂಡ್ರಿಸಿದರು.ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ಜೇಮ್ಸ, ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ಅವರೊಂದಿಗೂ ಅನುಚಿತವಾಗಿ ವರ್ತಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> `ಎರಡು ದಿನಗಳಿಂದ ಕುಮಾರ ಅವರು ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡಿದ್ದು, ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದರಿಂದ ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ~ ಎಂದು ಟ್ರಾಸ್ಗರ್ ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ:</strong> ಇಲ್ಲಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಮೋಟಾರ್ ವಾಹನ ಇನ್ಸ್ಪೆಕ್ಟರೊಬ್ಬರು ಪಾನಮತ್ತನಾಗಿ ನಗರದಲ್ಲಿ ಬೆತ್ತಲೆ ತಿರುಗಿ ರಾದ್ಧಾಂತ ನಡೆಸಿದ ಘಟನೆ ಶುಕ್ರವಾರ ನಡೆದಿದೆ.<br /> <br /> `ಕುಡಿದ ಅಮಲಿನಲ್ಲಿ ಬಟ್ಟೆ ಬಿಚ್ಚಿ ರಾದ್ಧಾಂತ ಮಾಡಿದ ಅಧಿಕಾರಿ ಟಿ.ಆರ್.ಕೆ. ಕುಮಾರ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ~ ಎಂದು ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ತಿಳಿಸಿದರು.<br /> <br /> ಬೆಂಗಳೂರು ಮೂಲದ ಈ ಅಧಿಕಾರಿ ಹೋಳಿ ಹಬ್ಬದ ದಿನವಾದ ಶುಕ್ರವಾರ ಕುಡಿದು ಜೋಲಿ ಹೊಡೆಯುತ್ತ ಇಲ್ಲಿಯ ಕೋರ್ಟ್ ಸಂಕೀರ್ಣದ ಎದುರು ಬಂದರು. ತಾನು ತೊಟ್ಟಿದ್ದ ಅಂಗಿಯನ್ನು ಕಳಚಿ, ವಿಚಿತ್ರವಾಗಿ ವರ್ತಿಸಲಾರಂಭಿಸಿದ ಇವರನ್ನು ಗಮನಿಸಿದ ಸಾರ್ವಜನಿಕರು ತಮಗೆ ಮಾಹಿತಿ ನೀಡಿದರು ಎಂದು ಪೊಲೀಸರು ಹೇಳಿದ್ದಾರೆ.<br /> <br /> ಅಷ್ಟೊತ್ತಿಗಾಗಲೇ ಕುಮಾರ ಪೂರ್ಣ ಬೆತ್ತಲಾಗಿ ತಾನು ಕಾರ್ಯ ನಿರ್ವಹಿಸುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಎದುರು ಬಂದು ಅಲ್ಲಿಯೂ ಕೂಗಾಟ-ಚೀರಾಟ ನಡೆಸಿದರು. ಅಷ್ಟೊತ್ತಿಗಾಗಲೆ ಅಲ್ಲಿಗೆ ಬಂದ ಪೊಲೀಸರು ಅವರನ್ನು ಗಾಂಧಿಚೌಕ್ ಠಾಣೆಗೆ ಕರೆದೊಯ್ದರು.<br /> <br /> ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿಯೂ ಆತ ಬೆತ್ತಲಾಗಿ ಹೊರಳಾಡಲಾರಂಭಿಸಿದ. ರಂಪಾಟ ನಡೆಸಿದರು. ಆಗ ಪೊಲೀಸರು ಅವರನ್ನು ಹೊತ್ತೊಯ್ದು ಕೈಗೆ ಬೇಡಿ ಹಾಕಿ ಕೂಡ್ರಿಸಿದರು.ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ಜೇಮ್ಸ, ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ಅವರೊಂದಿಗೂ ಅನುಚಿತವಾಗಿ ವರ್ತಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> `ಎರಡು ದಿನಗಳಿಂದ ಕುಮಾರ ಅವರು ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡಿದ್ದು, ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದರಿಂದ ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ~ ಎಂದು ಟ್ರಾಸ್ಗರ್ ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>