<p><strong>ಪಿರಿಯಾಪಟ್ಟಣ: </strong>ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಅಬ್ಬಳತಿ ಸಂಪಿಗೆಕಟ್ಟೆ ಗ್ರಾಮದಲ್ಲಿ ಆನೆಗಳ ಹಿಂಡು ಇತ್ತೀಚೆಗೆ ರಾತ್ರಿ ವೇಳೆ ದಾಳಿ ನಡೆಸಿದ್ದು ಹಲವು ರೈತರ ಬೆಳೆಯನ್ನು ಹಾಳು ಮಾಡಿವೆ. ಅಬ್ಬಳತಿ ಸಂಪಿಗೆಕಟ್ಟೆ ಗ್ರಾಮದಲ್ಲಿ 7 ಆನೆಗಳ ಹಿಂಡು ನುಗಿದ್ದು ವಿ.ಡಿ.ತಮ್ಮಯ್ಯ ಎಂಬುವವರಿಗೆ ಸೇರಿದ 1/2 ಎಕರೆಯಷ್ಟು ಭತ್ತದ ಪಸಲನ್ನು ಹಾಳು ಮಾಡಿವೆ.<br /> <br /> ಅಬ್ಬಳತಿ ಸಂಪಿಗೆಕಟ್ಟೆ ಪಿ.ಟಿ.ರಘುನಾಥ್ ಎಂಬುವವರಿಗೆ ಸೇರಿದ 1 ಎಕರೆಯಷ್ಟು ಮುಸುಕಿನ ಜೋಳವನ್ನು ತಿಂದು ಹಾಕಿವೆ. ನವೀನ್ಕುಮಾರ್ರವರ ಜಮೀನಿನಲ್ಲಿ ಜೋಳ, ನವೀನ್ಮುಂಡ ಪೂಜಾರಿರವರ ಜಮೀನಿನಲ್ಲಿ 1ಎಕರೆ ಮುಸುಕಿನ ಜೋಳ ತಿಂದು ಹಾಳು ಮಾಡಿವೆ ಹಾಗೂ ಪತ್ರೋಸ್ ಎಂಬುವವರ 1/2 ಎಕರೆ ಗದ್ದೆಯಲ್ಲಿ ಪೈರನ್ನು ತುಳಿದು ಹಾಳು ಮಾಡಿವೆ.<br /> <br /> ಅಲ್ಲದೆ ಜಮೀನಿಗೆ ಅಳವಡಿಸಲಾಗಿದ್ದ ತಂತಿಬೇಲಿಗಳನ್ನು ತುಂಡುಮಾಡಿದ್ದು ನಷ್ಟ ಉಂಟುಮಾಡಿವೆ. ಹೀಗೆ ಪ್ರತಿದಿನ ರಾತ್ರಿ ಆಗುತ್ತಿದ್ದಂತೆ ಆನೆಗಳ ಕಾಟ ಹೆಚ್ಚಾಗಿದ್ದು ಕಾಡಂಚಿನಲ್ಲಿ ತೆಗೆಯಲಾಗಿದ್ದ ಟ್ರಂಚ್ ಮುಚ್ಚಿಹೋಗಿದ್ದು ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ. <br /> <br /> ಅನೇಕ ಬಾರಿ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದೆ. ಇದರಿಂದ ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ಆನೆಗಳ ಪಾಲಾಗುತ್ತಿದ್ದು ಇದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ ಎಂದು ರೈತ ಪಿ.ಟಿ.ರಘುನಾಥ್ ಆರೋಪಿಸಿದ್ದಾರೆ.<br /> <br /> ಈ ಬಗ್ಗೆ ಅರಣ್ಯ ಇಲಾಖೆ ಇನ್ನಾದರು ಎಚ್ಚೆತ್ತು ಕಾಡಿನಿಂದ ಹೊರಬರುವ ಆನೆಗಳು ಜಮೀನಿನ ಕಡೆ ಬರದಂತೆ ಆನೆಕ್ಯಾಂಪ್ ಹಾಕಬೇಕು ಹಾಗೂ ಇಲಾಖೆಯವರು ಇದಕ್ಕೆ ಸೂಕ್ತ ಟ್ರಂಚ್ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.<br /> <br /> <strong>ಎಚ್.ಡಿ.ಕೋಟೆ ವರದಿ<br /> ಎಚ್.ಡಿ.ಕೋಟೆ:</strong> ಕಾಡಾನೆ ದಾಳಿ ಯಿಂದ ತಾಲ್ಲೂಕಿನ ಬೂದನೂರು ಸಮೀಪದ ವಿವಿಧ ಗ್ರಾಮಗಳ ರೈತರ ಬೆಳೆಗಳು ನಾಶವಾದರೆ ಇನ್ನೊಂದುಕಡೆ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರು ಮತ್ತು ಮಕ್ಕಳು ಆತಂಕಗೊಂಡ ಘಟನೆ ಶುಕ್ರವಾರ ನಡೆಯಿತು.</p>.<p>ಎಡತೊರೆ ಗ್ರಾಮದ ಜಮೀನುಗಳಲ್ಲಿ ಕಾಣಿಸಿಕೊಂಡ ಮೂರು ಆನೆಗಳಲ್ಲಿ ಒಂದು ಗಂಡಾನೆ ಬೇರ್ಪಟ್ಟು ಸಿಕ್ಕ ಸಿಕ್ಕ ಕಡೆ ನಡೆಯತೊಡಗಿತು. ಈ ಹಿನ್ನಲೆ ಯಲ್ಲಿ ಜಮೀನುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೈತರು, ಮಹಿಳೆಯರು ಹಾಗೂ ಮಕ್ಕಳೂ ಸೇರಿದಂತೆ ಎಲ್ಲರೂ ಆತಂಕಗೊಂಡರು.<br /> <br /> ಕಾಡಂಚಿನ ಭಾಗದ ರೈತರುಗಳ ಕುಟುಂಬದವರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದ್ದು, ಕಾಡು ಪ್ರಾಣಿಗಳ ದಾಳಿಯಿಂದ ಯಾವಾಗ ಏನು ತೊಂದರೆ ಕಾದಿದೆಯೋ ಗೊತ್ತಿಲ್ಲದಂತಾಗಿದೆ. ರೈತರು ಬೆಳೆದಿದ್ದ ಹತ್ತಿ,ರಾಗಿ, ಜೋಳ, ಬಾಳೆ ಮತ್ತು ಕಬ್ಬಿನಗದ್ದೆಗಳಿಗೆ ದಾಳಿಯಿಟ್ಟು ಲಕ್ಷಾಂತರ ಬೆಳೆ ನಷ್ಟವುಂಟು ಮಾಡಿದೆ ಎಂದು ರೈತರು ಆರೋಪಿಸಿದ್ದಾರೆ.<br /> <br /> ಬೆಳೆಗಳ ನಾಶವಾದರೆ ಅಲ್ಪ ಸ್ವಲ್ಪ ಪರಿಹಾರ ನೀಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿ ಸುಮ್ಮನಾಗುತ್ತಾರೆ. ಬೆಳೆ ನಷ್ಟದ ಪರಿಹಾರವನ್ನು ನೀಡುವುದೇ ಇಲ್ಲ, ಅವರು ನೀಡುವ ಐನೂರು ಸಾವಿರ ರೂಗಳಿಗೆ ವಾರಗಟ್ಟಲೆ ಅಲೆಸುತ್ತಾರೆ ಎಂದು ರವೀಶ್ಬೂದನೂರು ಆರೋಪಿಸಿದ್ದಾರೆ.<br /> <br /> ಒಂಟಿ ಸಲಗದ ಕೋಪಕ್ಕೆ ಬೂದನೂರು ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದ ಕುಡಿಯುವ ನೀರಿನ ಪಂಪ್ಸೆಟ್ ಮನೆ ಹಾಳಾಗಿದೆ. ಕೆಲ ಗಿರಿಜನರು ಮತ್ತು ಯುವಕರು ಆನೆಯನ್ನು ಹಿಂಬಾಲಿಸಿ ಓಡುತ್ತಿದ್ದು, ಕಲ್ಲು ಎಸೆತದಲ್ಲಿ ತಡಗಿದ್ದರು ಇದರಿಂದ ಕೆರಳಿದ ಆನೆ ಜನರತ್ತ ಕೋಪದಿಂದ ಅಟ್ಟಾಡಿಸಿದ ಘಟನೆ ನಡೆಯಿತು.<br /> <br /> ಸ್ಥಳಕ್ಕೆ ಅಗಮಿಸಿದ ವಲಯ ಅರಣ್ಯಾಧಿಕಾಗಳಾದ ಪ್ರವೀಣ್ಕುಮಾರ್ ಮತ್ತು ಸಂತೋಷ್ನಾಯಕ್ ಮತ್ತು ಸಿಬ್ಬಂದಿಗಳು ಮೇಟಿಕುಪ್ಪೆ ರಸ್ತೆಯ ಮೂಲಕ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿರಿಯಾಪಟ್ಟಣ: </strong>ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಅಬ್ಬಳತಿ ಸಂಪಿಗೆಕಟ್ಟೆ ಗ್ರಾಮದಲ್ಲಿ ಆನೆಗಳ ಹಿಂಡು ಇತ್ತೀಚೆಗೆ ರಾತ್ರಿ ವೇಳೆ ದಾಳಿ ನಡೆಸಿದ್ದು ಹಲವು ರೈತರ ಬೆಳೆಯನ್ನು ಹಾಳು ಮಾಡಿವೆ. ಅಬ್ಬಳತಿ ಸಂಪಿಗೆಕಟ್ಟೆ ಗ್ರಾಮದಲ್ಲಿ 7 ಆನೆಗಳ ಹಿಂಡು ನುಗಿದ್ದು ವಿ.ಡಿ.ತಮ್ಮಯ್ಯ ಎಂಬುವವರಿಗೆ ಸೇರಿದ 1/2 ಎಕರೆಯಷ್ಟು ಭತ್ತದ ಪಸಲನ್ನು ಹಾಳು ಮಾಡಿವೆ.<br /> <br /> ಅಬ್ಬಳತಿ ಸಂಪಿಗೆಕಟ್ಟೆ ಪಿ.ಟಿ.ರಘುನಾಥ್ ಎಂಬುವವರಿಗೆ ಸೇರಿದ 1 ಎಕರೆಯಷ್ಟು ಮುಸುಕಿನ ಜೋಳವನ್ನು ತಿಂದು ಹಾಕಿವೆ. ನವೀನ್ಕುಮಾರ್ರವರ ಜಮೀನಿನಲ್ಲಿ ಜೋಳ, ನವೀನ್ಮುಂಡ ಪೂಜಾರಿರವರ ಜಮೀನಿನಲ್ಲಿ 1ಎಕರೆ ಮುಸುಕಿನ ಜೋಳ ತಿಂದು ಹಾಳು ಮಾಡಿವೆ ಹಾಗೂ ಪತ್ರೋಸ್ ಎಂಬುವವರ 1/2 ಎಕರೆ ಗದ್ದೆಯಲ್ಲಿ ಪೈರನ್ನು ತುಳಿದು ಹಾಳು ಮಾಡಿವೆ.<br /> <br /> ಅಲ್ಲದೆ ಜಮೀನಿಗೆ ಅಳವಡಿಸಲಾಗಿದ್ದ ತಂತಿಬೇಲಿಗಳನ್ನು ತುಂಡುಮಾಡಿದ್ದು ನಷ್ಟ ಉಂಟುಮಾಡಿವೆ. ಹೀಗೆ ಪ್ರತಿದಿನ ರಾತ್ರಿ ಆಗುತ್ತಿದ್ದಂತೆ ಆನೆಗಳ ಕಾಟ ಹೆಚ್ಚಾಗಿದ್ದು ಕಾಡಂಚಿನಲ್ಲಿ ತೆಗೆಯಲಾಗಿದ್ದ ಟ್ರಂಚ್ ಮುಚ್ಚಿಹೋಗಿದ್ದು ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ. <br /> <br /> ಅನೇಕ ಬಾರಿ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದೆ. ಇದರಿಂದ ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ಆನೆಗಳ ಪಾಲಾಗುತ್ತಿದ್ದು ಇದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ ಎಂದು ರೈತ ಪಿ.ಟಿ.ರಘುನಾಥ್ ಆರೋಪಿಸಿದ್ದಾರೆ.<br /> <br /> ಈ ಬಗ್ಗೆ ಅರಣ್ಯ ಇಲಾಖೆ ಇನ್ನಾದರು ಎಚ್ಚೆತ್ತು ಕಾಡಿನಿಂದ ಹೊರಬರುವ ಆನೆಗಳು ಜಮೀನಿನ ಕಡೆ ಬರದಂತೆ ಆನೆಕ್ಯಾಂಪ್ ಹಾಕಬೇಕು ಹಾಗೂ ಇಲಾಖೆಯವರು ಇದಕ್ಕೆ ಸೂಕ್ತ ಟ್ರಂಚ್ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.<br /> <br /> <strong>ಎಚ್.ಡಿ.ಕೋಟೆ ವರದಿ<br /> ಎಚ್.ಡಿ.ಕೋಟೆ:</strong> ಕಾಡಾನೆ ದಾಳಿ ಯಿಂದ ತಾಲ್ಲೂಕಿನ ಬೂದನೂರು ಸಮೀಪದ ವಿವಿಧ ಗ್ರಾಮಗಳ ರೈತರ ಬೆಳೆಗಳು ನಾಶವಾದರೆ ಇನ್ನೊಂದುಕಡೆ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರು ಮತ್ತು ಮಕ್ಕಳು ಆತಂಕಗೊಂಡ ಘಟನೆ ಶುಕ್ರವಾರ ನಡೆಯಿತು.</p>.<p>ಎಡತೊರೆ ಗ್ರಾಮದ ಜಮೀನುಗಳಲ್ಲಿ ಕಾಣಿಸಿಕೊಂಡ ಮೂರು ಆನೆಗಳಲ್ಲಿ ಒಂದು ಗಂಡಾನೆ ಬೇರ್ಪಟ್ಟು ಸಿಕ್ಕ ಸಿಕ್ಕ ಕಡೆ ನಡೆಯತೊಡಗಿತು. ಈ ಹಿನ್ನಲೆ ಯಲ್ಲಿ ಜಮೀನುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೈತರು, ಮಹಿಳೆಯರು ಹಾಗೂ ಮಕ್ಕಳೂ ಸೇರಿದಂತೆ ಎಲ್ಲರೂ ಆತಂಕಗೊಂಡರು.<br /> <br /> ಕಾಡಂಚಿನ ಭಾಗದ ರೈತರುಗಳ ಕುಟುಂಬದವರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದ್ದು, ಕಾಡು ಪ್ರಾಣಿಗಳ ದಾಳಿಯಿಂದ ಯಾವಾಗ ಏನು ತೊಂದರೆ ಕಾದಿದೆಯೋ ಗೊತ್ತಿಲ್ಲದಂತಾಗಿದೆ. ರೈತರು ಬೆಳೆದಿದ್ದ ಹತ್ತಿ,ರಾಗಿ, ಜೋಳ, ಬಾಳೆ ಮತ್ತು ಕಬ್ಬಿನಗದ್ದೆಗಳಿಗೆ ದಾಳಿಯಿಟ್ಟು ಲಕ್ಷಾಂತರ ಬೆಳೆ ನಷ್ಟವುಂಟು ಮಾಡಿದೆ ಎಂದು ರೈತರು ಆರೋಪಿಸಿದ್ದಾರೆ.<br /> <br /> ಬೆಳೆಗಳ ನಾಶವಾದರೆ ಅಲ್ಪ ಸ್ವಲ್ಪ ಪರಿಹಾರ ನೀಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿ ಸುಮ್ಮನಾಗುತ್ತಾರೆ. ಬೆಳೆ ನಷ್ಟದ ಪರಿಹಾರವನ್ನು ನೀಡುವುದೇ ಇಲ್ಲ, ಅವರು ನೀಡುವ ಐನೂರು ಸಾವಿರ ರೂಗಳಿಗೆ ವಾರಗಟ್ಟಲೆ ಅಲೆಸುತ್ತಾರೆ ಎಂದು ರವೀಶ್ಬೂದನೂರು ಆರೋಪಿಸಿದ್ದಾರೆ.<br /> <br /> ಒಂಟಿ ಸಲಗದ ಕೋಪಕ್ಕೆ ಬೂದನೂರು ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದ ಕುಡಿಯುವ ನೀರಿನ ಪಂಪ್ಸೆಟ್ ಮನೆ ಹಾಳಾಗಿದೆ. ಕೆಲ ಗಿರಿಜನರು ಮತ್ತು ಯುವಕರು ಆನೆಯನ್ನು ಹಿಂಬಾಲಿಸಿ ಓಡುತ್ತಿದ್ದು, ಕಲ್ಲು ಎಸೆತದಲ್ಲಿ ತಡಗಿದ್ದರು ಇದರಿಂದ ಕೆರಳಿದ ಆನೆ ಜನರತ್ತ ಕೋಪದಿಂದ ಅಟ್ಟಾಡಿಸಿದ ಘಟನೆ ನಡೆಯಿತು.<br /> <br /> ಸ್ಥಳಕ್ಕೆ ಅಗಮಿಸಿದ ವಲಯ ಅರಣ್ಯಾಧಿಕಾಗಳಾದ ಪ್ರವೀಣ್ಕುಮಾರ್ ಮತ್ತು ಸಂತೋಷ್ನಾಯಕ್ ಮತ್ತು ಸಿಬ್ಬಂದಿಗಳು ಮೇಟಿಕುಪ್ಪೆ ರಸ್ತೆಯ ಮೂಲಕ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>