<p><strong>ಅರಸೀಕೆರೆ:</strong> ನಗರದ ರಸ್ತೆಗಳಲ್ಲಿ ದಿನನಿತ್ಯ ಜಾನುವಾರುಗಳು ವಾಹನಗಳಿಗೆ ಸಿಲುಕಿ ಗಾಯಗೊಳ್ಳುತ್ತಿವೆ. ಈ ವಿಚಾರ ಗಮನಕ್ಕೆ ತಂದಿದ್ದರೂ ಪುರಸಭೆ ಮುಖ್ಯಾಧಿಕಾರಿ ಹಾಗೂ ನೌಕರರು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದರು. <br /> <br /> ನಗರ ಬಿಜೆಪಿ ಕಾರ್ಯದರ್ಶಿ ನವೀನ ಕಟ್ಟೆಹಳ್ಳಿ, ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಶ್ರೀನಿವಾಸ ಗೌಡ, ಕಾರ್ಯ ದರ್ಶಿ ಬಾಣಾವರ ವಿರೂಪಾಕ್ಷ, ಶ್ರೀಧರ್, ವಿಶ್ವ ಹಿಂದೂ ಪರಿಷತ್ ಮುಖಂಡ ನಾಗರಾಜ್ ಹೆಬ್ಬಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. <br /> <br /> ಗುರುವಾರ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಎರಡು ಹಸುಗಳನ್ನು ಪಟ್ಟಣದ ಪಿ.ಪಿ ವೃತ್ತದಲ್ಲಿರಿಸಿ ಪ್ರತಿ ಭಟನೆ ನಡೆಸಿದರು. ನವೀನ ಕಟ್ಟೆಹಳ್ಳಿ ಮಾತನಾಡಿ, ಪಟ್ಟಣದ ಕಸಾಯಿಖಾನೆಗಳಲ್ಲಿ ಜಾನು ವಾರು ಹತ್ಯೆ ರಾಜಾರೋಷವಾಗಿ ನಡೆ ಯುತ್ತಿದೆ ಎಂದು ಆರೋಪಿಸಿದರು. </p>.<p><br /> ರಸ್ತೆಗಳಲ್ಲಿ ಬಿಡಾಡಿ ದನಗಳು ನಿರ್ಭಯವಾಗಿ ಸಂಚರಿಸಿ ಪ್ರಯಾ ಣಕ್ಕೆ ತೊಂದರೆ ಉಂಟುಮಾಡುತ್ತಿವೆ. ಇದರಿಂದ ಜಾನುವಾರುಗಳಿಗೆ ಮಾತ್ರ ವಲ್ಲ ಅಪಘಾತ ಸಂಭವಿಸಿ ಸಾರ್ವಜ ನಿಕರೂ ತೊಂದರೆಗೆ ಒಳಗಾಗಿದ್ದಾರೆ. ಈ ವಿಚಾರ ತಿಳಿದಿದ್ದರೂ ಪುರಸಭೆ ಆಡಳಿತ ಸಂಬಂಧವಿಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ:</strong> ನಗರದ ರಸ್ತೆಗಳಲ್ಲಿ ದಿನನಿತ್ಯ ಜಾನುವಾರುಗಳು ವಾಹನಗಳಿಗೆ ಸಿಲುಕಿ ಗಾಯಗೊಳ್ಳುತ್ತಿವೆ. ಈ ವಿಚಾರ ಗಮನಕ್ಕೆ ತಂದಿದ್ದರೂ ಪುರಸಭೆ ಮುಖ್ಯಾಧಿಕಾರಿ ಹಾಗೂ ನೌಕರರು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದರು. <br /> <br /> ನಗರ ಬಿಜೆಪಿ ಕಾರ್ಯದರ್ಶಿ ನವೀನ ಕಟ್ಟೆಹಳ್ಳಿ, ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಶ್ರೀನಿವಾಸ ಗೌಡ, ಕಾರ್ಯ ದರ್ಶಿ ಬಾಣಾವರ ವಿರೂಪಾಕ್ಷ, ಶ್ರೀಧರ್, ವಿಶ್ವ ಹಿಂದೂ ಪರಿಷತ್ ಮುಖಂಡ ನಾಗರಾಜ್ ಹೆಬ್ಬಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. <br /> <br /> ಗುರುವಾರ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಎರಡು ಹಸುಗಳನ್ನು ಪಟ್ಟಣದ ಪಿ.ಪಿ ವೃತ್ತದಲ್ಲಿರಿಸಿ ಪ್ರತಿ ಭಟನೆ ನಡೆಸಿದರು. ನವೀನ ಕಟ್ಟೆಹಳ್ಳಿ ಮಾತನಾಡಿ, ಪಟ್ಟಣದ ಕಸಾಯಿಖಾನೆಗಳಲ್ಲಿ ಜಾನು ವಾರು ಹತ್ಯೆ ರಾಜಾರೋಷವಾಗಿ ನಡೆ ಯುತ್ತಿದೆ ಎಂದು ಆರೋಪಿಸಿದರು. </p>.<p><br /> ರಸ್ತೆಗಳಲ್ಲಿ ಬಿಡಾಡಿ ದನಗಳು ನಿರ್ಭಯವಾಗಿ ಸಂಚರಿಸಿ ಪ್ರಯಾ ಣಕ್ಕೆ ತೊಂದರೆ ಉಂಟುಮಾಡುತ್ತಿವೆ. ಇದರಿಂದ ಜಾನುವಾರುಗಳಿಗೆ ಮಾತ್ರ ವಲ್ಲ ಅಪಘಾತ ಸಂಭವಿಸಿ ಸಾರ್ವಜ ನಿಕರೂ ತೊಂದರೆಗೆ ಒಳಗಾಗಿದ್ದಾರೆ. ಈ ವಿಚಾರ ತಿಳಿದಿದ್ದರೂ ಪುರಸಭೆ ಆಡಳಿತ ಸಂಬಂಧವಿಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>