<p>ಗ್ಲೋಬಲ್ ಆರ್ಗನೈಸೇಷನ್ ಫಾರ್ ಡಿವಿನಿಟಿ ಇಂಡಿಯಾ ಟ್ರಸ್ಟ್ ವಿದ್ಯಾರ್ಥಿಗಳಿಗಾಗಿ ಭಾರತೀಯ ವಿದ್ಯಾ ಭವನದಲ್ಲಿ ಅಂತರ್ಶಾಲಾ ರಸಪ್ರಶ್ನೆ ಕಾರ್ಯಕ್ರಮ `ಪುರಾನವ~ ಆಯೋಜಿಸಿತ್ತು. <br /> <br /> ಭಾರತೀಯ ಪುರಾಣ ಮತ್ತು ಪರಂಪರೆ ಆಧಾರಿತ ಪ್ರರ್ಶನಾವಳಿಗಳ `ಪುರಾನವ 2011~ ಸ್ಪರ್ಧೆ ವಿಜೇತರಾಗಿ ಹೊರಹೊಮ್ಮಿದ ಸದಾಶಿವನಗರದ ನಾಗಸೇನಾ ವಿದ್ಯಾಲಯದ ಸಚಿನ್ ಹೆಬ್ಬಾರ್ ಮತ್ತು ಶಿಶಿರ್ ಅವರಿಗೆ ಸುವರ್ಣ ಟ್ರೋಫಿ ಮತ್ತು ಸುವರ್ಣ ಪದಕವನ್ನು ಬಹುಮಾನವಾಗಿ ನೀಡಲಾಯಿತು.<br /> <br /> ದೇವಯ್ಯಪಾರ್ಕ್ ನಾಗಪ್ಪ ಬ್ಲಾಕ್ನ ಪವನ್ ಇಂಗ್ಲಿಷ್ ಸ್ಕೂಲ್ ರನ್ನರ್ಅಪ್ ಜೊತೆಗೆ ಬೆಳ್ಳಿ ಟ್ರೋಫಿ ಮತ್ತು ಬೆಳ್ಳಿ ಪದಕಗಳನ್ನು ಪಡೆದುಕೊಂಡಿತು. ಫೈನಲ್ನಲ್ಲಿ ಭಾಗವಹಿಸಿದ್ದ ಇತರೆ ನಾಲ್ಕು ಶಾಲೆಗಳಿಗೆ ಕಂಚಿನ ಟ್ರೋಫಿ ಮತ್ತು ಕಂಚಿನ ಪದಕ ದೊರೆಯಿತು.<br /> <br /> ವಲಯವಾರು ನಡೆದ ಸುತ್ತಿನಲ್ಲಿ 80 ಶಾಲೆಗಳು ಪಾಲ್ಗೊಂಡಿದ್ದವು. ಇದರಲ್ಲಿ 16 ಶಾಲೆಗಳು ಸೆಮಿಫೈನಲ್ಗೆ ಅರ್ಹತೆ ಪಡೆದವು. ನಂತರ 6 ಶಾಲೆಗಳು ಫೈನಲ್ಗೆ ಪ್ರವೇಶ ಪಡೆದಿದ್ದವು. ರಾಮಾಯಣ, ಮಹಾಭಾರತ, ದೇವಸ್ಥಾನ, ಸಂತರು, ದಶಾವತಾರ ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಕುರಿತ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಲಾಯಿತು. <br /> <br /> ಇನ್ಫೋಸಿಸ್ ಉಪಾಧ್ಯಕ್ಷ ಸಿ.ಎನ್. ರಘುಪತಿ ಅವರು ವಿಜೇತರಿಗೆ ಪ್ರಶಸ್ತಿ ಮತ್ತು ಪದಕಗಳನ್ನು ವಿತರಿಸಿದರು. ಗ್ಲೋಬಲ್ ಆರ್ಗನೈಸೇಷನ್ ಫಾರ್ ಡಿವಿನಿಟಿ ಸಂಸ್ಥೆ ಪುರಾತನ ವಿವೇಚನೆಯೊಂದಿಗೆ ಆಧುನಿಕ ಯುವಜನತೆಯ ನಡುವೆ ಸಂಪರ್ಕ ಕಲ್ಪಿಸಲು `ಪುರಾನವ~ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗ್ಲೋಬಲ್ ಆರ್ಗನೈಸೇಷನ್ ಫಾರ್ ಡಿವಿನಿಟಿ ಇಂಡಿಯಾ ಟ್ರಸ್ಟ್ ವಿದ್ಯಾರ್ಥಿಗಳಿಗಾಗಿ ಭಾರತೀಯ ವಿದ್ಯಾ ಭವನದಲ್ಲಿ ಅಂತರ್ಶಾಲಾ ರಸಪ್ರಶ್ನೆ ಕಾರ್ಯಕ್ರಮ `ಪುರಾನವ~ ಆಯೋಜಿಸಿತ್ತು. <br /> <br /> ಭಾರತೀಯ ಪುರಾಣ ಮತ್ತು ಪರಂಪರೆ ಆಧಾರಿತ ಪ್ರರ್ಶನಾವಳಿಗಳ `ಪುರಾನವ 2011~ ಸ್ಪರ್ಧೆ ವಿಜೇತರಾಗಿ ಹೊರಹೊಮ್ಮಿದ ಸದಾಶಿವನಗರದ ನಾಗಸೇನಾ ವಿದ್ಯಾಲಯದ ಸಚಿನ್ ಹೆಬ್ಬಾರ್ ಮತ್ತು ಶಿಶಿರ್ ಅವರಿಗೆ ಸುವರ್ಣ ಟ್ರೋಫಿ ಮತ್ತು ಸುವರ್ಣ ಪದಕವನ್ನು ಬಹುಮಾನವಾಗಿ ನೀಡಲಾಯಿತು.<br /> <br /> ದೇವಯ್ಯಪಾರ್ಕ್ ನಾಗಪ್ಪ ಬ್ಲಾಕ್ನ ಪವನ್ ಇಂಗ್ಲಿಷ್ ಸ್ಕೂಲ್ ರನ್ನರ್ಅಪ್ ಜೊತೆಗೆ ಬೆಳ್ಳಿ ಟ್ರೋಫಿ ಮತ್ತು ಬೆಳ್ಳಿ ಪದಕಗಳನ್ನು ಪಡೆದುಕೊಂಡಿತು. ಫೈನಲ್ನಲ್ಲಿ ಭಾಗವಹಿಸಿದ್ದ ಇತರೆ ನಾಲ್ಕು ಶಾಲೆಗಳಿಗೆ ಕಂಚಿನ ಟ್ರೋಫಿ ಮತ್ತು ಕಂಚಿನ ಪದಕ ದೊರೆಯಿತು.<br /> <br /> ವಲಯವಾರು ನಡೆದ ಸುತ್ತಿನಲ್ಲಿ 80 ಶಾಲೆಗಳು ಪಾಲ್ಗೊಂಡಿದ್ದವು. ಇದರಲ್ಲಿ 16 ಶಾಲೆಗಳು ಸೆಮಿಫೈನಲ್ಗೆ ಅರ್ಹತೆ ಪಡೆದವು. ನಂತರ 6 ಶಾಲೆಗಳು ಫೈನಲ್ಗೆ ಪ್ರವೇಶ ಪಡೆದಿದ್ದವು. ರಾಮಾಯಣ, ಮಹಾಭಾರತ, ದೇವಸ್ಥಾನ, ಸಂತರು, ದಶಾವತಾರ ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಕುರಿತ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಲಾಯಿತು. <br /> <br /> ಇನ್ಫೋಸಿಸ್ ಉಪಾಧ್ಯಕ್ಷ ಸಿ.ಎನ್. ರಘುಪತಿ ಅವರು ವಿಜೇತರಿಗೆ ಪ್ರಶಸ್ತಿ ಮತ್ತು ಪದಕಗಳನ್ನು ವಿತರಿಸಿದರು. ಗ್ಲೋಬಲ್ ಆರ್ಗನೈಸೇಷನ್ ಫಾರ್ ಡಿವಿನಿಟಿ ಸಂಸ್ಥೆ ಪುರಾತನ ವಿವೇಚನೆಯೊಂದಿಗೆ ಆಧುನಿಕ ಯುವಜನತೆಯ ನಡುವೆ ಸಂಪರ್ಕ ಕಲ್ಪಿಸಲು `ಪುರಾನವ~ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>