<p><strong>ಬೆಂಗಳೂರು: `</strong>ಅತ್ಯಾಧುನಿಕ ತಂತ್ರಜ್ಞಾನ ಬಂದರೂ ಪುಸ್ತಕ ಓದುವುದರಿಂದ ಸಿಗುವ ಸಂತಸ ಸಿಗುವುದಿಲ್ಲ. ನನ್ನಲ್ಲಿರುವ ತಿಳಿವಳಿಕೆಯೂ ಪುಸ್ತಕ ಓದುವುದರಿಂದಲೇ ಬಂದದ್ದು~ ಎಂದು ಚಿತ್ರನಟ ಪುನೀತ್ ರಾಜ್ಕುಮಾರ್ ನುಡಿದರು.<br /> <br /> ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಇಂಡ್ಯಾ ಕಾಮಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಏರ್ಪಡಿಸಿದ್ದ `ಪುಸ್ತಕ ಪ್ರಪಂಚ~ದ ಸಮಾರೋಪದಲ್ಲಿ ಅವರು ಮಾತನಾಡಿದರು.<br /> <br /> `ಮೊಬೈಲ್ ಫೋನ್, ಐಪಾಡ್, ಕಂಪ್ಯೂಟರ್ಗಳು ಬಳಕೆಯಲ್ಲಿವೆ. ಐಪಾಡ್ಗಳಲ್ಲೂ ಪುಸ್ತಕಗಳನ್ನು ಓದುವ ಅವಕಾಶ ಕಲ್ಪಿಸಿರುವುದು, ಪುಸ್ತಕ ಸಂಸ್ಕೃತಿಯ ಮಹತ್ವವನ್ನು ತೋರಿಸುತ್ತದೆ~ ಎಂದರು.<br /> <br /> `ನನ್ನ ತಂದೆ ಡಾ.ರಾಜ್ಕುಮಾರ್ ಅವರ ಹೆಸರಿನ ಟ್ರಸ್ಟ್ ಮೂಲಕ ಇಂಥ ಕಾರ್ಯಕ್ರಮಗಳನ್ನು ಸಂಘಟಿಸಲು ವಿಶ್ವವಿದ್ಯಾಲಯ ನೆರವು ಕೋರಿದರೆ ನೀಡಲು ಸಿದ್ಧ~ ಎಂದು ಭರವಸೆ ನೀಡಿದರು.<br /> <br /> ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, `ಈ ಬಾರಿಯ ಪುಸ್ತಕ ಮೇಳದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಾಂದರ್ಭಿಕ ಪುಸ್ತಕಗಳು ಹೆಚ್ಚು ಸಂಖ್ಯೆಯಲ್ಲಿ ಇರಲಿಲ್ಲ. ಈ ಲೋಪವನ್ನು ಮುಂಬರುವ ಪುಸ್ತಕ ಮೇಳದಲ್ಲಿ ಸರಿಪಡಿಸಿಕೊಳ್ಳಲಾಗುವುದು~ ಎಂದರು. <br /> <br /> ರಾಜ್ಯ ಸರ್ಕಾರ ಪುಸ್ತಕ ಸಂಸ್ಕೃತಿಯನ್ನು ಜನರಲ್ಲಿ ಬೆಳೆಸುವ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಸ್ತಾವನೆಯೊಂದನ್ನು ತಯಾರಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ. `ಓದು ಕರ್ನಾಟಕ~ ಎಂಬ ಶೀರ್ಷಿಕೆಯ ಈ ಪ್ರಸ್ತಾವನೆಯಂತೆ ಪ್ರತಿ ತಾಲ್ಲೂಕು ಕೇಂದ್ರಗಳಿಗೆ ಒಂದೊಂದು ಸಂಚಾರಿ ಗ್ರಂಥಾಲಯಗಳನ್ನು ಸ್ಥಾಪಿಸುವುದು ಮತ್ತು ಎಲ್ಲ ತಾಲ್ಲೂಕುಗಳಿಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ಸ್ಥಾಪಿಸಬೇಕೆನ್ನುವ ಸಲಹೆಗಳು ಇದರಲ್ಲಿ ಸೇರಿವೆ ಎಂದರು.<br /> <br /> ಕುಲಸಚಿವ ಡಾ.ಆರ್.ಎಂ.ರಂಗನಾಥ್ ಸ್ವಾಗತಿಸಿದರು. ಸಿಂಡಿಕೇಟ್ ಸದಸ್ಯರಾದ ಡಾ.ಕೆ.ಬಿ.ವೇದಮೂರ್ತಿ, ಗಿರೀಶ್, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಆರ್.ಸುಬ್ರಹ್ಮಣ್ಯ, ಗ್ರಂಥಪಾಲಕ ಡಾ.ಪಿ.ವಿ.ಕೊಣ್ಣೂರ, ಇಂಡ್ಯಾ ಕಾಮಿಕ್ಸ್ನ ಮುಖ್ಯಸ್ಥ ಬಿ.ಎಸ್.ರಘುರಾಮ್ ಉಪಸ್ಥಿತರಿದ್ದರು.<br /> <br /> <strong>ಅತ್ಯುತ್ತಮ ಮಳಿಗೆಗಳಿಗೆ ಪ್ರಶಸ್ತಿ<br /> </strong>ಪುಸ್ತಕ ಪ್ರದರ್ಶನ ಮೇಳದಲ್ಲಿ ಭಾಗವಹಿಸಿದ್ದ 250 ಪ್ರಕಾಶನ ಸಂಸ್ಥೆಗಳಲ್ಲಿ ಏಳು ಸಂಸ್ಥೆಗಳಿಗೆ ನಾಲ್ಕು <br /> <br /> ವಿಭಾಗಗಳಲ್ಲಿ ಅತ್ಯುತ್ತಮ ಮಳಿಗೆಗಳೆಂದು ಆಯ್ಕೆ ಮಾಡಿ ಪ್ರಶಸ್ತಿಗಳನ್ನು ನೀಡಲಾಯಿತು.<br /> <br /> ಕನ್ನಡ ವಿಭಾಗ: ಸಾಹಿತ್ಯ ಭಂಡಾರ, ಹೇಮಂತ ಸಾಹಿತ್ಯ. <br /> <br /> ಇಂಗ್ಲಿಷ್ ವಿಭಾಗ: ಹ್ಯಾಚೆಟ್ ಇಂಡಿಯಾ, ಆಕ್ಸ್ಫರ್ಡ್ ಬುಕ್ ಸ್ಟೋರ್. <br /> <br /> ಇತರೆ ವಿಭಾಗ: ಎಡಬ್ಲ್ಯೂಯು ಸೇಬರ್ ಕ್ಯಾಸಲ್ ಮತ್ತು ಪೇಜ್ 3. <br /> <br /> ವಿಶೇಷ ಪ್ರಶಸ್ತಿ: ಪಾಂಡವಪುರದ ಅಂಕೇಗೌಡ ಜ್ಞಾನ ಪ್ರತಿಷ್ಠಾನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಅತ್ಯಾಧುನಿಕ ತಂತ್ರಜ್ಞಾನ ಬಂದರೂ ಪುಸ್ತಕ ಓದುವುದರಿಂದ ಸಿಗುವ ಸಂತಸ ಸಿಗುವುದಿಲ್ಲ. ನನ್ನಲ್ಲಿರುವ ತಿಳಿವಳಿಕೆಯೂ ಪುಸ್ತಕ ಓದುವುದರಿಂದಲೇ ಬಂದದ್ದು~ ಎಂದು ಚಿತ್ರನಟ ಪುನೀತ್ ರಾಜ್ಕುಮಾರ್ ನುಡಿದರು.<br /> <br /> ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಇಂಡ್ಯಾ ಕಾಮಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಏರ್ಪಡಿಸಿದ್ದ `ಪುಸ್ತಕ ಪ್ರಪಂಚ~ದ ಸಮಾರೋಪದಲ್ಲಿ ಅವರು ಮಾತನಾಡಿದರು.<br /> <br /> `ಮೊಬೈಲ್ ಫೋನ್, ಐಪಾಡ್, ಕಂಪ್ಯೂಟರ್ಗಳು ಬಳಕೆಯಲ್ಲಿವೆ. ಐಪಾಡ್ಗಳಲ್ಲೂ ಪುಸ್ತಕಗಳನ್ನು ಓದುವ ಅವಕಾಶ ಕಲ್ಪಿಸಿರುವುದು, ಪುಸ್ತಕ ಸಂಸ್ಕೃತಿಯ ಮಹತ್ವವನ್ನು ತೋರಿಸುತ್ತದೆ~ ಎಂದರು.<br /> <br /> `ನನ್ನ ತಂದೆ ಡಾ.ರಾಜ್ಕುಮಾರ್ ಅವರ ಹೆಸರಿನ ಟ್ರಸ್ಟ್ ಮೂಲಕ ಇಂಥ ಕಾರ್ಯಕ್ರಮಗಳನ್ನು ಸಂಘಟಿಸಲು ವಿಶ್ವವಿದ್ಯಾಲಯ ನೆರವು ಕೋರಿದರೆ ನೀಡಲು ಸಿದ್ಧ~ ಎಂದು ಭರವಸೆ ನೀಡಿದರು.<br /> <br /> ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, `ಈ ಬಾರಿಯ ಪುಸ್ತಕ ಮೇಳದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಾಂದರ್ಭಿಕ ಪುಸ್ತಕಗಳು ಹೆಚ್ಚು ಸಂಖ್ಯೆಯಲ್ಲಿ ಇರಲಿಲ್ಲ. ಈ ಲೋಪವನ್ನು ಮುಂಬರುವ ಪುಸ್ತಕ ಮೇಳದಲ್ಲಿ ಸರಿಪಡಿಸಿಕೊಳ್ಳಲಾಗುವುದು~ ಎಂದರು. <br /> <br /> ರಾಜ್ಯ ಸರ್ಕಾರ ಪುಸ್ತಕ ಸಂಸ್ಕೃತಿಯನ್ನು ಜನರಲ್ಲಿ ಬೆಳೆಸುವ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಸ್ತಾವನೆಯೊಂದನ್ನು ತಯಾರಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ. `ಓದು ಕರ್ನಾಟಕ~ ಎಂಬ ಶೀರ್ಷಿಕೆಯ ಈ ಪ್ರಸ್ತಾವನೆಯಂತೆ ಪ್ರತಿ ತಾಲ್ಲೂಕು ಕೇಂದ್ರಗಳಿಗೆ ಒಂದೊಂದು ಸಂಚಾರಿ ಗ್ರಂಥಾಲಯಗಳನ್ನು ಸ್ಥಾಪಿಸುವುದು ಮತ್ತು ಎಲ್ಲ ತಾಲ್ಲೂಕುಗಳಿಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ಸ್ಥಾಪಿಸಬೇಕೆನ್ನುವ ಸಲಹೆಗಳು ಇದರಲ್ಲಿ ಸೇರಿವೆ ಎಂದರು.<br /> <br /> ಕುಲಸಚಿವ ಡಾ.ಆರ್.ಎಂ.ರಂಗನಾಥ್ ಸ್ವಾಗತಿಸಿದರು. ಸಿಂಡಿಕೇಟ್ ಸದಸ್ಯರಾದ ಡಾ.ಕೆ.ಬಿ.ವೇದಮೂರ್ತಿ, ಗಿರೀಶ್, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಆರ್.ಸುಬ್ರಹ್ಮಣ್ಯ, ಗ್ರಂಥಪಾಲಕ ಡಾ.ಪಿ.ವಿ.ಕೊಣ್ಣೂರ, ಇಂಡ್ಯಾ ಕಾಮಿಕ್ಸ್ನ ಮುಖ್ಯಸ್ಥ ಬಿ.ಎಸ್.ರಘುರಾಮ್ ಉಪಸ್ಥಿತರಿದ್ದರು.<br /> <br /> <strong>ಅತ್ಯುತ್ತಮ ಮಳಿಗೆಗಳಿಗೆ ಪ್ರಶಸ್ತಿ<br /> </strong>ಪುಸ್ತಕ ಪ್ರದರ್ಶನ ಮೇಳದಲ್ಲಿ ಭಾಗವಹಿಸಿದ್ದ 250 ಪ್ರಕಾಶನ ಸಂಸ್ಥೆಗಳಲ್ಲಿ ಏಳು ಸಂಸ್ಥೆಗಳಿಗೆ ನಾಲ್ಕು <br /> <br /> ವಿಭಾಗಗಳಲ್ಲಿ ಅತ್ಯುತ್ತಮ ಮಳಿಗೆಗಳೆಂದು ಆಯ್ಕೆ ಮಾಡಿ ಪ್ರಶಸ್ತಿಗಳನ್ನು ನೀಡಲಾಯಿತು.<br /> <br /> ಕನ್ನಡ ವಿಭಾಗ: ಸಾಹಿತ್ಯ ಭಂಡಾರ, ಹೇಮಂತ ಸಾಹಿತ್ಯ. <br /> <br /> ಇಂಗ್ಲಿಷ್ ವಿಭಾಗ: ಹ್ಯಾಚೆಟ್ ಇಂಡಿಯಾ, ಆಕ್ಸ್ಫರ್ಡ್ ಬುಕ್ ಸ್ಟೋರ್. <br /> <br /> ಇತರೆ ವಿಭಾಗ: ಎಡಬ್ಲ್ಯೂಯು ಸೇಬರ್ ಕ್ಯಾಸಲ್ ಮತ್ತು ಪೇಜ್ 3. <br /> <br /> ವಿಶೇಷ ಪ್ರಶಸ್ತಿ: ಪಾಂಡವಪುರದ ಅಂಕೇಗೌಡ ಜ್ಞಾನ ಪ್ರತಿಷ್ಠಾನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>