<p>ಆಲಮೇಲ: ಅತ್ಯಂತ ವಿಶ್ವಾಸಾರ್ಹ ಸುದ್ದಿಗಳನ್ನು ನೀಡುವಲ್ಲಿ ಪ್ರಜಾವಾಣಿಯ ಪಾತ್ರ ಗಮನಾರ್ಹವಾದುದು ಎಂದು ಸ್ಥಳೀಯ ಹೀರಾಬಾಯಿ ನಂದಿ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಎನ್. ಬಿರಾದಾರ ಅಭಿಪ್ರಾಯಪಟ್ಟರು.<br /> <br /> ಇತ್ತೀಚೆಗೆ ಇಲ್ಲಿನ ಆಲಮೇಲ್ ಶಿಕ್ಷಣ ಸಮಿತಿಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ `ಪ್ರಜಾವಾಣಿ ಸಮೀಕ್ಷಾ ಸಪ್ತಾಹ~ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ನೈಜ ಸಂಗತಿಗಳನ್ನು ನೀಡುವ ಮೂಲಕ ಪ್ರಜಾವಾಣಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತ ಮಾರ್ಗದರ್ಶನ ನೀಡುವ ಏಕೈಕ ದಿನಪತ್ರಿಕೆ ಎಂದು ಶ್ಲಾಘಿಸಿದರು.<br /> <br /> ಪತ್ರಿಕೆಯನ್ನು ಕೊಂಡು ಓದುವವರ ಸಂಖ್ಯೆ ಇಂದು ಕಡಿಮೆಯಾಗಿದೆ. ಮುಂದುವರಿದ ಇಂದಿನ ಡಿಜಿಟಲ್ ಕಾಲದಲ್ಲೂ ಪತ್ರಿಕೆಯ ಅವಶ್ಯಕತೆ ಇದೆ ಎಂದು ಹೇಳಿದ ಅವರು, ಸಮಾಜದ ಸಾಮರಸ್ಯ ಕದಡದಂತೆ ಸುದ್ದಿಗಳನ್ನು ನೀಡುವುದು ಪತ್ರಿಕೆಗಳ ಧರ್ಮ ಎಂದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ವರದಿಗಾರ ರಮೇಶ ಕತ್ತಿ `ಪ್ರಜಾವಾಣಿ ಓದುವ ಅಗತ್ಯದ ಬಗ್ಗೆ ತಿಳಿಸಿದರು. ಇಂದಿನಿಂದ 7 ದಿನಗಳ ಕಾಲ ಶ್ರದ್ಧೆಯಿಂದ ಪತ್ರಿಕೆಯನ್ನು ಓದುವ ಹಾಗೂ ನಂತರ ಪರೀಕ್ಷೆ ಎದುರಿಸುವ ಕುರಿತು ಕಾರ್ಯಕ್ರಮ ಸಂಯೋಜಕ ಬಸವರಾಜ ಕೆಸರೆಟ್ಟಿ ಮಾಹಿತಿ ನೀಡಿದರು. <br /> <br /> ಅಧೀಕ್ಷಕ ಎಸ್. ಜಿ. ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರಾಚಾರ್ಯ ಆರ್.ಎಸ್.ಶಾಬಾದಿ, ಯು.ಎಸ್. ವಾಡೇಕರ, ಎಸ್.ಬಿ. ಕುಂಬಾರ, ಎಸ್. ಎಸ್. ಶಿವಗೊಂಡ ಮೊದಲಾದವರು ಭಾಗವಹಿಸಿದ್ದರು. <br /> <br /> ಒಟ್ಟು 7 ದಿನಗಳ ಕಾಲ ನಡೆಯುವ ಈ ಸಮೀಕ್ಷೆಯಲ್ಲಿ ತರಬೇತಿ ಕೇಂದ್ರದ 43 ಪ್ರಶಿಕ್ಷಣಾರ್ಥಿಗಳು ಭಾಗವಹಿಸುವರು. ಎಸ್.ಎಚ್. ಆವಜಿ ಸ್ವಾಗತಿಸಿದರು. ಎ. ಎನ್. ಆಸಂಗಿಹಾಳ ವಂದಿಸಿದರು. ಎಲ್. ಬಿ. ಹರಿಂದ್ರಾಳ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಲಮೇಲ: ಅತ್ಯಂತ ವಿಶ್ವಾಸಾರ್ಹ ಸುದ್ದಿಗಳನ್ನು ನೀಡುವಲ್ಲಿ ಪ್ರಜಾವಾಣಿಯ ಪಾತ್ರ ಗಮನಾರ್ಹವಾದುದು ಎಂದು ಸ್ಥಳೀಯ ಹೀರಾಬಾಯಿ ನಂದಿ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಎನ್. ಬಿರಾದಾರ ಅಭಿಪ್ರಾಯಪಟ್ಟರು.<br /> <br /> ಇತ್ತೀಚೆಗೆ ಇಲ್ಲಿನ ಆಲಮೇಲ್ ಶಿಕ್ಷಣ ಸಮಿತಿಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ `ಪ್ರಜಾವಾಣಿ ಸಮೀಕ್ಷಾ ಸಪ್ತಾಹ~ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ನೈಜ ಸಂಗತಿಗಳನ್ನು ನೀಡುವ ಮೂಲಕ ಪ್ರಜಾವಾಣಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತ ಮಾರ್ಗದರ್ಶನ ನೀಡುವ ಏಕೈಕ ದಿನಪತ್ರಿಕೆ ಎಂದು ಶ್ಲಾಘಿಸಿದರು.<br /> <br /> ಪತ್ರಿಕೆಯನ್ನು ಕೊಂಡು ಓದುವವರ ಸಂಖ್ಯೆ ಇಂದು ಕಡಿಮೆಯಾಗಿದೆ. ಮುಂದುವರಿದ ಇಂದಿನ ಡಿಜಿಟಲ್ ಕಾಲದಲ್ಲೂ ಪತ್ರಿಕೆಯ ಅವಶ್ಯಕತೆ ಇದೆ ಎಂದು ಹೇಳಿದ ಅವರು, ಸಮಾಜದ ಸಾಮರಸ್ಯ ಕದಡದಂತೆ ಸುದ್ದಿಗಳನ್ನು ನೀಡುವುದು ಪತ್ರಿಕೆಗಳ ಧರ್ಮ ಎಂದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ವರದಿಗಾರ ರಮೇಶ ಕತ್ತಿ `ಪ್ರಜಾವಾಣಿ ಓದುವ ಅಗತ್ಯದ ಬಗ್ಗೆ ತಿಳಿಸಿದರು. ಇಂದಿನಿಂದ 7 ದಿನಗಳ ಕಾಲ ಶ್ರದ್ಧೆಯಿಂದ ಪತ್ರಿಕೆಯನ್ನು ಓದುವ ಹಾಗೂ ನಂತರ ಪರೀಕ್ಷೆ ಎದುರಿಸುವ ಕುರಿತು ಕಾರ್ಯಕ್ರಮ ಸಂಯೋಜಕ ಬಸವರಾಜ ಕೆಸರೆಟ್ಟಿ ಮಾಹಿತಿ ನೀಡಿದರು. <br /> <br /> ಅಧೀಕ್ಷಕ ಎಸ್. ಜಿ. ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರಾಚಾರ್ಯ ಆರ್.ಎಸ್.ಶಾಬಾದಿ, ಯು.ಎಸ್. ವಾಡೇಕರ, ಎಸ್.ಬಿ. ಕುಂಬಾರ, ಎಸ್. ಎಸ್. ಶಿವಗೊಂಡ ಮೊದಲಾದವರು ಭಾಗವಹಿಸಿದ್ದರು. <br /> <br /> ಒಟ್ಟು 7 ದಿನಗಳ ಕಾಲ ನಡೆಯುವ ಈ ಸಮೀಕ್ಷೆಯಲ್ಲಿ ತರಬೇತಿ ಕೇಂದ್ರದ 43 ಪ್ರಶಿಕ್ಷಣಾರ್ಥಿಗಳು ಭಾಗವಹಿಸುವರು. ಎಸ್.ಎಚ್. ಆವಜಿ ಸ್ವಾಗತಿಸಿದರು. ಎ. ಎನ್. ಆಸಂಗಿಹಾಳ ವಂದಿಸಿದರು. ಎಲ್. ಬಿ. ಹರಿಂದ್ರಾಳ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>