<p><strong style="font-size: 26px;">ಗಂಗಾವತಿ: </strong><span style="font-size: 26px;">ಹತ್ತನೇ ವರ್ಗದ ಫಲಿತಾಂಶ ಸುಧಾರಣೆಗೆ ತರಬೇಕು ಎಂಬ ಏಕೈಕ ಕಾರಣಕ್ಕೆ ಮಕ್ಕಳನ್ನು ತಪ್ಪುಹಾದಿಗೆ ಎಳೆಯುವುದು ಇಲ್ಲವೇ ಶಿಕ್ಷಕರು ಸಾಮೂಹಿಕ ನಕಲಿಯಂಥ ವಾಮಮಾರ್ಗಕ್ಕೆ ಯತ್ನಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ವೀರಣ್ಣ ಶಿಕ್ಷಕರಿಗೆ ಕರೆ ನೀಡಿದರು.</span><br /> <br /> ನಗರದ ಮಾಂತಗೊಂಡ ನೀಲಮ್ಮ ಮೂಕಪ್ಪ ಸ್ಮಾರಕ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ವಿಭಾಗದಲ್ಲಿ ಗುರುವಾರ ಗಣಿತ ಶಿಕ್ಷಕರ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಾ ಪರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> ಫಲಿತಾಂಶ ಸುಧಾರಿಸಬೇಕು ಎಂದು ಮ್ಯಾಜಿಕ್ ಮಾಡಿದರೆ ಕೇವಲ ಬೆರಳೆಣಿಕೆಯಷ್ಟು ದಿನಗಳಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಉತ್ತಮ ಫಲಿತಾಂಶಕ್ಕಾಗಿ ನಿರಂತರ ಪರಿಶ್ರಮ ಅಗತ್ಯ. ಈಗಿನಿಂದಲೇ ಶಿಕ್ಷಕರು ಕ್ರೀಯಾಯೋಜನೆ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ ಎಂದರು.<br /> <br /> 2012-13ನೇ ಸಾಲಿನ ಫಲಿತಾಂಶದಲ್ಲಿ 27ನೇ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 16ನೇ ಸ್ಥಾನಕ್ಕೆ ಬಂದಿರುವುದು ಸಂತಸ. ಆದರೆ ಅದರಲ್ಲೆ ಮೈಮರೆಯುವಂತಿಲ್ಲ. ಇನ್ನಷ್ಟು ಸ್ಥಾನ ಮೇಲಕ್ಕೇರಲು ಎಲ್ಲ ಶಿಕ್ಷಕರ ಸಾಮೂಹಿಕ ಯತ್ನ ಅಗತ್ಯ ಎಂದರು.<br /> <br /> ಜಿಲ್ಲೆಯ ಫಲಿತಾಂಶದಲ್ಲಿ ಯಲಬುರ್ಗಾ ಮೊದಲ ಸ್ಥಾನದಲ್ಲಿದ್ದರೆ ಕುಷ್ಟಗಿ, ಗಂಗಾವತಿ, ಕೊಪ್ಪಳ ನಂತರದ ಸ್ಥಾನದಲ್ಲಿವೆ. ವಿಷಯವಾರು ಗಣಿತದಲ್ಲಿ 3, ಇಂಗ್ಲಿಷ್ 4, ವಿಜ್ಞಾನ 5 ಹಾಗೂ ಕನ್ನಡದಲ್ಲಿ ಗಂಗಾವತಿ 6ನೇ ಸ್ಥಾನದಲ್ಲಿದೆ. ಇದು ಸುಧಾರಣೆಯಾಗಬೇಕು ಎಂದು ಸಲಹೆ ನೀಡಿದರು.<br /> <br /> ಬಿಇಒ ಸೋಮಶೇಖರಗೌಡ, ಶಿಕ್ಷಣ ಇಲಾಖೆ ಸಂಘದ ಪ್ರಮುಖರಾದ ಗುರುಬಸವರಾಜ, ಪಂಡಿತ್ ಯಲ್ಲಪ್ಪ, ಪಂಪನಗೌಡ, ಹುಂಬಣ್ಣ ರಾಠೋಡ್, ಮಲ್ಲನಗೌಡಗೌಡರ್, ಸುಬ್ರಹ್ಮಣ್ಯ ರಾಯ್ಕರ್, ಆರ್.ಟಿ.ನಾಯಕ್, ನಾಗಭೂಷಣ, ವಿಜಯಕುಮಾರ, ರಾಮಣ್ಣ, ಶರಣಯ್ಯ ಮೊದಲಾದವರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong style="font-size: 26px;">ಗಂಗಾವತಿ: </strong><span style="font-size: 26px;">ಹತ್ತನೇ ವರ್ಗದ ಫಲಿತಾಂಶ ಸುಧಾರಣೆಗೆ ತರಬೇಕು ಎಂಬ ಏಕೈಕ ಕಾರಣಕ್ಕೆ ಮಕ್ಕಳನ್ನು ತಪ್ಪುಹಾದಿಗೆ ಎಳೆಯುವುದು ಇಲ್ಲವೇ ಶಿಕ್ಷಕರು ಸಾಮೂಹಿಕ ನಕಲಿಯಂಥ ವಾಮಮಾರ್ಗಕ್ಕೆ ಯತ್ನಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ವೀರಣ್ಣ ಶಿಕ್ಷಕರಿಗೆ ಕರೆ ನೀಡಿದರು.</span><br /> <br /> ನಗರದ ಮಾಂತಗೊಂಡ ನೀಲಮ್ಮ ಮೂಕಪ್ಪ ಸ್ಮಾರಕ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ವಿಭಾಗದಲ್ಲಿ ಗುರುವಾರ ಗಣಿತ ಶಿಕ್ಷಕರ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಾ ಪರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> ಫಲಿತಾಂಶ ಸುಧಾರಿಸಬೇಕು ಎಂದು ಮ್ಯಾಜಿಕ್ ಮಾಡಿದರೆ ಕೇವಲ ಬೆರಳೆಣಿಕೆಯಷ್ಟು ದಿನಗಳಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಉತ್ತಮ ಫಲಿತಾಂಶಕ್ಕಾಗಿ ನಿರಂತರ ಪರಿಶ್ರಮ ಅಗತ್ಯ. ಈಗಿನಿಂದಲೇ ಶಿಕ್ಷಕರು ಕ್ರೀಯಾಯೋಜನೆ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ ಎಂದರು.<br /> <br /> 2012-13ನೇ ಸಾಲಿನ ಫಲಿತಾಂಶದಲ್ಲಿ 27ನೇ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 16ನೇ ಸ್ಥಾನಕ್ಕೆ ಬಂದಿರುವುದು ಸಂತಸ. ಆದರೆ ಅದರಲ್ಲೆ ಮೈಮರೆಯುವಂತಿಲ್ಲ. ಇನ್ನಷ್ಟು ಸ್ಥಾನ ಮೇಲಕ್ಕೇರಲು ಎಲ್ಲ ಶಿಕ್ಷಕರ ಸಾಮೂಹಿಕ ಯತ್ನ ಅಗತ್ಯ ಎಂದರು.<br /> <br /> ಜಿಲ್ಲೆಯ ಫಲಿತಾಂಶದಲ್ಲಿ ಯಲಬುರ್ಗಾ ಮೊದಲ ಸ್ಥಾನದಲ್ಲಿದ್ದರೆ ಕುಷ್ಟಗಿ, ಗಂಗಾವತಿ, ಕೊಪ್ಪಳ ನಂತರದ ಸ್ಥಾನದಲ್ಲಿವೆ. ವಿಷಯವಾರು ಗಣಿತದಲ್ಲಿ 3, ಇಂಗ್ಲಿಷ್ 4, ವಿಜ್ಞಾನ 5 ಹಾಗೂ ಕನ್ನಡದಲ್ಲಿ ಗಂಗಾವತಿ 6ನೇ ಸ್ಥಾನದಲ್ಲಿದೆ. ಇದು ಸುಧಾರಣೆಯಾಗಬೇಕು ಎಂದು ಸಲಹೆ ನೀಡಿದರು.<br /> <br /> ಬಿಇಒ ಸೋಮಶೇಖರಗೌಡ, ಶಿಕ್ಷಣ ಇಲಾಖೆ ಸಂಘದ ಪ್ರಮುಖರಾದ ಗುರುಬಸವರಾಜ, ಪಂಡಿತ್ ಯಲ್ಲಪ್ಪ, ಪಂಪನಗೌಡ, ಹುಂಬಣ್ಣ ರಾಠೋಡ್, ಮಲ್ಲನಗೌಡಗೌಡರ್, ಸುಬ್ರಹ್ಮಣ್ಯ ರಾಯ್ಕರ್, ಆರ್.ಟಿ.ನಾಯಕ್, ನಾಗಭೂಷಣ, ವಿಜಯಕುಮಾರ, ರಾಮಣ್ಣ, ಶರಣಯ್ಯ ಮೊದಲಾದವರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>