<p>ರಾಜ್ಯದ ಈ ವರ್ಷದ ಮುಂಗಡ ಪತ್ರದ ಹಿನ್ನೆಲೆಯಲ್ಲಿ ಕೆಲವು ಮಠಾಧಿಪತಿಗಳು ಮುಖ್ಯಮಂತ್ರಿಯವರನ್ನು ಇತ್ತೀಚೆಗೆ ಭೇಟಿ ಮಾಡಿ ತಮ್ಮ ಸಮುದಾಯಗಳಿಗೆ ಹೆಚ್ಚಿನ ಅನುದಾನ ಕೊಡುವಂತೆ ಒತ್ತಾಯ ಮಾಡಿದರೆಂಬ ವರದಿಗಳನ್ನು ಓದಿ ಬೇಸರವಾಯಿತು.<br /> <br /> ರಾಜ್ಯದ ಎಲ್ಲ ಜಾತಿ, ಜನ ವರ್ಗಗಳ ಅಭಿವೃದ್ಧಿ ಸರ್ಕಾರದ ಜವಾಬ್ದಾರಿ. ಅದು ಸಾಮಾಜಿಕ ನ್ಯಾಯದ ಒಂದು ಭಾಗ. ಯಾವುದೇ ಸಮುದಾಯದ ಅಭಿವೃದ್ಧಿ ಎಂದರೆ ಆ ಸಮುದಾಯಗಳ ಕವಿ, ಸಮಾಜ ಸುಧಾರಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಭವನಗಳನ್ನು ಕಟ್ಟುವುದು, ಜಯಂತಿ ಆಚರಿಸುವುದು, ಅಂದು ಸರ್ಕಾರಿ ರಜೆ ಕೊಡುವುದು ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದು ನಿಂತಿದೆ.<br /> <br /> ಹೀಗಾಗಿ ಎಲ್ಲ ಜಾತಿಗಳ ಜನರನ್ನು ಓಲೈಸುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ. ಅನುದಾನಕ್ಕೆ ಮಠಾಧಿಪತಿಗಳು ಒತ್ತಾಯಿಸುವುದು ಈ ಓಲೈಕೆಯ ಮುಂದುವರಿದ ಭಾಗ.<br /> <br /> ಮುಂಗಡ ಪತ್ರ ರಾಜ್ಯದ ಜನರ ತೆರಿಗೆ ಹಣದ ಸದುಪಯೋಗದ ಕಾರ್ಯಸೂಚಿ ಎನ್ನುವುದನ್ನು ಸರ್ಕಾರ ಮತ್ತು ಮಠಾಧಿಪತಿಗಳು ಮರೆತಿದ್ದಾರೆ. ತೆರಿಗೆ ಹಣ ಸರ್ಕಾರದ ಜನಪ್ರಿಯತೆಗೆ ಮತ್ತು ಚುನಾವಣೆಯಲ್ಲಿ ಮತ ಗಳಿಕೆಗೆ ಬಳಕೆಯಾಗುತ್ತಿದೆ.<br /> <br /> ಸರ್ಕಾರ ಮುಂಗಡ ಪತ್ರ ತಯಾರಿಸುವಾಗ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕೇ ವಿನಾ ಕೆಲ ಜಾತಿಗಳ ಅಭಿವೃದ್ಧಿಯನ್ನಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದ ಈ ವರ್ಷದ ಮುಂಗಡ ಪತ್ರದ ಹಿನ್ನೆಲೆಯಲ್ಲಿ ಕೆಲವು ಮಠಾಧಿಪತಿಗಳು ಮುಖ್ಯಮಂತ್ರಿಯವರನ್ನು ಇತ್ತೀಚೆಗೆ ಭೇಟಿ ಮಾಡಿ ತಮ್ಮ ಸಮುದಾಯಗಳಿಗೆ ಹೆಚ್ಚಿನ ಅನುದಾನ ಕೊಡುವಂತೆ ಒತ್ತಾಯ ಮಾಡಿದರೆಂಬ ವರದಿಗಳನ್ನು ಓದಿ ಬೇಸರವಾಯಿತು.<br /> <br /> ರಾಜ್ಯದ ಎಲ್ಲ ಜಾತಿ, ಜನ ವರ್ಗಗಳ ಅಭಿವೃದ್ಧಿ ಸರ್ಕಾರದ ಜವಾಬ್ದಾರಿ. ಅದು ಸಾಮಾಜಿಕ ನ್ಯಾಯದ ಒಂದು ಭಾಗ. ಯಾವುದೇ ಸಮುದಾಯದ ಅಭಿವೃದ್ಧಿ ಎಂದರೆ ಆ ಸಮುದಾಯಗಳ ಕವಿ, ಸಮಾಜ ಸುಧಾರಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಭವನಗಳನ್ನು ಕಟ್ಟುವುದು, ಜಯಂತಿ ಆಚರಿಸುವುದು, ಅಂದು ಸರ್ಕಾರಿ ರಜೆ ಕೊಡುವುದು ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದು ನಿಂತಿದೆ.<br /> <br /> ಹೀಗಾಗಿ ಎಲ್ಲ ಜಾತಿಗಳ ಜನರನ್ನು ಓಲೈಸುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ. ಅನುದಾನಕ್ಕೆ ಮಠಾಧಿಪತಿಗಳು ಒತ್ತಾಯಿಸುವುದು ಈ ಓಲೈಕೆಯ ಮುಂದುವರಿದ ಭಾಗ.<br /> <br /> ಮುಂಗಡ ಪತ್ರ ರಾಜ್ಯದ ಜನರ ತೆರಿಗೆ ಹಣದ ಸದುಪಯೋಗದ ಕಾರ್ಯಸೂಚಿ ಎನ್ನುವುದನ್ನು ಸರ್ಕಾರ ಮತ್ತು ಮಠಾಧಿಪತಿಗಳು ಮರೆತಿದ್ದಾರೆ. ತೆರಿಗೆ ಹಣ ಸರ್ಕಾರದ ಜನಪ್ರಿಯತೆಗೆ ಮತ್ತು ಚುನಾವಣೆಯಲ್ಲಿ ಮತ ಗಳಿಕೆಗೆ ಬಳಕೆಯಾಗುತ್ತಿದೆ.<br /> <br /> ಸರ್ಕಾರ ಮುಂಗಡ ಪತ್ರ ತಯಾರಿಸುವಾಗ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕೇ ವಿನಾ ಕೆಲ ಜಾತಿಗಳ ಅಭಿವೃದ್ಧಿಯನ್ನಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>