<p><strong>ಶಿರಾ: </strong>ಈ ವಿಧಾನಸಭಾ ಕ್ಷೇತ್ರ ಒಳಗೊಂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಕಣಕ್ಕಿಳಿಯುತ್ತಿದ್ದಂತೆ ಅವರು ಹಿಂದೆ ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡಿದ್ದರು ಎಂಬ ವಿಷಯವೇ ಪರ ವಿರೋಧಿಗಳಿಗೆ ಬಂಡವಾಳವಾಗಿದೆ.<br /> <br /> ‘ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡಿದ್ದವರಲ್ಲವೆ ಗೂಳಿಹಟ್ಟಿ ಶೇಖರ್’ ಎಂದು ಸಾಮಾನ್ಯ ಮತದಾರರು ಅವರನ್ನು ಗುರುತಿಸುತಿದ್ದು, ಅವರ ವಿರೋಧಿಗಳಿಗೂ ಬಟ್ಟೆ ಹರಿದುಕೊಂಡಿದ್ದೇ ಅವರ ವಿರುದ್ದ ವಾಗ್ದಾಳಿ ನಡೆಸಲು ಪ್ರಮುಖ ಬಂಡವಾಳವಾಗಿದೆ.<br /> ಜೆಡಿಎಸ್ ಮುಖಂಡರು ಕೂಡ ಪದೇ ಪದೇ ಅದೇ ವಿಷಯವನ್ನು ಸಭೆ ಸಮಾರಂಭಗಳಲ್ಲಿ ಪ್ರಸ್ತಾಪಿಸುತ್ತಾ ಗೂಳಿಹಟ್ಟಿ ಶೇಖರ್ಗೆ ಇರಿಸು ಮುರಿಸು ಉಂಟು ಮಾಡುತ್ತಿದ್ದಾರೆ.<br /> <br /> ‘ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡು ಬೆಂಚ್ ಹತ್ತಿ ನಿಂತು ಗೂಳಿ ತರ ಪ್ರತಿಭಟಿಸಿದ ನಮ್ಮ ಶೇಖರಣ್ಣ ಲೋಕಸಭೆಗೆ ಹೋಗಬೇಕು..ಅಲ್ಲಿಯೂ ಇಂಥದ್ದೇ ಪ್ರತಿಭಟನೆ ಮೂಲಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಡೆಯಬೇಕು...’ ಎಂದು ಜೆಡಿಎಸ್ ಮುಖಂಡರು ಪ್ರತಿಪಾದಿಸುತಿದ್ದಾರೆ.<br /> <br /> ಅವರು ಒಳ್ಳೆಯ ಅರ್ಥದಲ್ಲಿ ಆಡುವ ಇದೇ ಮಾತು ವಿರೋಧಿಗಳ ಪಾಳಯದಲ್ಲಿ ಛೇಡಿಸುವ ಮಾತಾಗಿ ಬಳಕೆಯಾಗುತ್ತಿದೆ. ‘ಪವಿತ್ರವಾದ ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡು ಸದನಕ್ಕೆ ಅವಮಾನ ಮಾಡಿದ ಗೂಳಿಹಟ್ಟಿ ಶೇಖರ್ ಮತ್ತೊಮ್ಮೆ ನಮ್ಮ ಪ್ರತಿನಿಧಿಯಾಗಿ ಲೋಕಸಭೆಗೆ ಹೋಗಬೇಕಾ..? ಅಲ್ಲಿಯೂ ಬಟ್ಟೆ ಹರಿದುಕೊಂಡು ಈ ಲೋಕಸಭಾ ಕ್ಷೇತ್ರದ ಜನತೆಯ ಮರ್ಯಾದೆ ಹರಾಜಿಗಿಡಬೇಕಾ...?’ ಎಂದು ನೇರ ವಾಗ್ದಾಳಿ ನಡೆಸುತ್ತಾರೆ.<br /> <br /> ಇಂಥ ವಾಗ್ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನೇ ನೀಡುತ್ತಿರುವ ಜೆಡಿಎಸ್ ಮುಖಂಡರು ‘ಹೌದೌದು, ನಮ್ಮ ಶೇಖರಣ್ಣ ತನಗೆ ಆದ ಅನ್ಯಾಯಕ್ಕೆ ಬಟ್ಟೆ ಹರಿದುಕೊಂಡರೇ ಹೊರತು; ಸದನದಲ್ಲೇ ಬ್ಲೂಫಿಲಂ ನೋಡಿ ವಿಧಾನಸಭೆಗೆ ಅಪಚಾರವೆಸಗಲಿಲ್ಲ’ ಎಂದು ತಿರುಗೇಟು ನೀಡುತಿದ್ದಾರೆ.<br /> <br /> ಈ ರೀತಿಯಾಗಿ ಬಟ್ಟೆ ಹರಿದುಕೊಂಡಿದ್ದರ ಪರ–ವಿರೋಧವಾಗಿ ಭಾರೀ ಚರ್ಚೆಯೇ ನಡೆಯುತಿದ್ದು, ಸ್ವತಃ ಗೂಳಿಹಟ್ಟಿ ಶೇಖರ್ ಈ ಬಗ್ಗೆ ಅಂದು ಏನಾಯಿತು ಎಂಬ ಬಗ್ಗೆ ವಿವರಣೆ ನೀಡಿ, ‘ಬಟ್ಟೆ ನಾನು ಹರಿದುಕೊಳ್ಳಲಿಲ್ಲ. ಮಾರ್ಷಲ್ಗಳು ಹರಿದರು’ ಎಂದರೂ ಯಾರೂ ಅದಕ್ಕೆ ಕಿವಿಗೊಡುತ್ತಿಲ್ಲ.<br /> <br /> ವಿಧಾನಸಭೆಯಲ್ಲಿ ಏನಾಯಿತು ಎಂಬ ವಾಸ್ತವ ಅರಿಯಲು ಯಾರೂ ಸಿದ್ಧರಿಲ್ಲ. ‘ಇಲ್ಲಿನ ಮತದಾರರಿಗೆ ಗೂಳಿಹಟ್ಟಿ ಶೇಖರ್ ಅಂಗಿ ಹರಿದುಕೊಂಡಿದ್ದು ಇಷ್ಟವಾಗಿದೆ’ ಎಂದು ಭಾವಿಸಿರುವ ಜೆಡಿಎಸ್ ನಾಯಕರು ತಮ್ಮ ಅಭ್ಯರ್ಥಿಯ ವರ್ಚಸ್ಸು ಹಾಳುಗೆಡವುತ್ತಿದ್ದಾರೆ. ವಿರೋಧಿಗಳಿಗೆ ರೆಡಿಮೇಡ್ ದಾಳ ಒದಗಿಸಿಕೊಟ್ಟಿದ್ದಾರೆ.<br /> <br /> ಸ್ಥಳೀಯ ಸಮಸ್ಯೆಗಳನ್ನು ಕಡೆಗಣಿಸಿರುವ ಮೂರೂ ಪಕ್ಷಗಳು ಸಲ್ಲದ ವಿಚಾರದ ಬಗ್ಗೆಯೇ ಚರ್ಚೆ ನಡೆಸುತ್ತಿರುವುದು ಮತದಾರರ ಅಸಮಾಧಾನಕ್ಕೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ: </strong>ಈ ವಿಧಾನಸಭಾ ಕ್ಷೇತ್ರ ಒಳಗೊಂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಕಣಕ್ಕಿಳಿಯುತ್ತಿದ್ದಂತೆ ಅವರು ಹಿಂದೆ ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡಿದ್ದರು ಎಂಬ ವಿಷಯವೇ ಪರ ವಿರೋಧಿಗಳಿಗೆ ಬಂಡವಾಳವಾಗಿದೆ.<br /> <br /> ‘ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡಿದ್ದವರಲ್ಲವೆ ಗೂಳಿಹಟ್ಟಿ ಶೇಖರ್’ ಎಂದು ಸಾಮಾನ್ಯ ಮತದಾರರು ಅವರನ್ನು ಗುರುತಿಸುತಿದ್ದು, ಅವರ ವಿರೋಧಿಗಳಿಗೂ ಬಟ್ಟೆ ಹರಿದುಕೊಂಡಿದ್ದೇ ಅವರ ವಿರುದ್ದ ವಾಗ್ದಾಳಿ ನಡೆಸಲು ಪ್ರಮುಖ ಬಂಡವಾಳವಾಗಿದೆ.<br /> ಜೆಡಿಎಸ್ ಮುಖಂಡರು ಕೂಡ ಪದೇ ಪದೇ ಅದೇ ವಿಷಯವನ್ನು ಸಭೆ ಸಮಾರಂಭಗಳಲ್ಲಿ ಪ್ರಸ್ತಾಪಿಸುತ್ತಾ ಗೂಳಿಹಟ್ಟಿ ಶೇಖರ್ಗೆ ಇರಿಸು ಮುರಿಸು ಉಂಟು ಮಾಡುತ್ತಿದ್ದಾರೆ.<br /> <br /> ‘ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡು ಬೆಂಚ್ ಹತ್ತಿ ನಿಂತು ಗೂಳಿ ತರ ಪ್ರತಿಭಟಿಸಿದ ನಮ್ಮ ಶೇಖರಣ್ಣ ಲೋಕಸಭೆಗೆ ಹೋಗಬೇಕು..ಅಲ್ಲಿಯೂ ಇಂಥದ್ದೇ ಪ್ರತಿಭಟನೆ ಮೂಲಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಡೆಯಬೇಕು...’ ಎಂದು ಜೆಡಿಎಸ್ ಮುಖಂಡರು ಪ್ರತಿಪಾದಿಸುತಿದ್ದಾರೆ.<br /> <br /> ಅವರು ಒಳ್ಳೆಯ ಅರ್ಥದಲ್ಲಿ ಆಡುವ ಇದೇ ಮಾತು ವಿರೋಧಿಗಳ ಪಾಳಯದಲ್ಲಿ ಛೇಡಿಸುವ ಮಾತಾಗಿ ಬಳಕೆಯಾಗುತ್ತಿದೆ. ‘ಪವಿತ್ರವಾದ ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡು ಸದನಕ್ಕೆ ಅವಮಾನ ಮಾಡಿದ ಗೂಳಿಹಟ್ಟಿ ಶೇಖರ್ ಮತ್ತೊಮ್ಮೆ ನಮ್ಮ ಪ್ರತಿನಿಧಿಯಾಗಿ ಲೋಕಸಭೆಗೆ ಹೋಗಬೇಕಾ..? ಅಲ್ಲಿಯೂ ಬಟ್ಟೆ ಹರಿದುಕೊಂಡು ಈ ಲೋಕಸಭಾ ಕ್ಷೇತ್ರದ ಜನತೆಯ ಮರ್ಯಾದೆ ಹರಾಜಿಗಿಡಬೇಕಾ...?’ ಎಂದು ನೇರ ವಾಗ್ದಾಳಿ ನಡೆಸುತ್ತಾರೆ.<br /> <br /> ಇಂಥ ವಾಗ್ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನೇ ನೀಡುತ್ತಿರುವ ಜೆಡಿಎಸ್ ಮುಖಂಡರು ‘ಹೌದೌದು, ನಮ್ಮ ಶೇಖರಣ್ಣ ತನಗೆ ಆದ ಅನ್ಯಾಯಕ್ಕೆ ಬಟ್ಟೆ ಹರಿದುಕೊಂಡರೇ ಹೊರತು; ಸದನದಲ್ಲೇ ಬ್ಲೂಫಿಲಂ ನೋಡಿ ವಿಧಾನಸಭೆಗೆ ಅಪಚಾರವೆಸಗಲಿಲ್ಲ’ ಎಂದು ತಿರುಗೇಟು ನೀಡುತಿದ್ದಾರೆ.<br /> <br /> ಈ ರೀತಿಯಾಗಿ ಬಟ್ಟೆ ಹರಿದುಕೊಂಡಿದ್ದರ ಪರ–ವಿರೋಧವಾಗಿ ಭಾರೀ ಚರ್ಚೆಯೇ ನಡೆಯುತಿದ್ದು, ಸ್ವತಃ ಗೂಳಿಹಟ್ಟಿ ಶೇಖರ್ ಈ ಬಗ್ಗೆ ಅಂದು ಏನಾಯಿತು ಎಂಬ ಬಗ್ಗೆ ವಿವರಣೆ ನೀಡಿ, ‘ಬಟ್ಟೆ ನಾನು ಹರಿದುಕೊಳ್ಳಲಿಲ್ಲ. ಮಾರ್ಷಲ್ಗಳು ಹರಿದರು’ ಎಂದರೂ ಯಾರೂ ಅದಕ್ಕೆ ಕಿವಿಗೊಡುತ್ತಿಲ್ಲ.<br /> <br /> ವಿಧಾನಸಭೆಯಲ್ಲಿ ಏನಾಯಿತು ಎಂಬ ವಾಸ್ತವ ಅರಿಯಲು ಯಾರೂ ಸಿದ್ಧರಿಲ್ಲ. ‘ಇಲ್ಲಿನ ಮತದಾರರಿಗೆ ಗೂಳಿಹಟ್ಟಿ ಶೇಖರ್ ಅಂಗಿ ಹರಿದುಕೊಂಡಿದ್ದು ಇಷ್ಟವಾಗಿದೆ’ ಎಂದು ಭಾವಿಸಿರುವ ಜೆಡಿಎಸ್ ನಾಯಕರು ತಮ್ಮ ಅಭ್ಯರ್ಥಿಯ ವರ್ಚಸ್ಸು ಹಾಳುಗೆಡವುತ್ತಿದ್ದಾರೆ. ವಿರೋಧಿಗಳಿಗೆ ರೆಡಿಮೇಡ್ ದಾಳ ಒದಗಿಸಿಕೊಟ್ಟಿದ್ದಾರೆ.<br /> <br /> ಸ್ಥಳೀಯ ಸಮಸ್ಯೆಗಳನ್ನು ಕಡೆಗಣಿಸಿರುವ ಮೂರೂ ಪಕ್ಷಗಳು ಸಲ್ಲದ ವಿಚಾರದ ಬಗ್ಗೆಯೇ ಚರ್ಚೆ ನಡೆಸುತ್ತಿರುವುದು ಮತದಾರರ ಅಸಮಾಧಾನಕ್ಕೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>