<p>ಮಂಗಳೂರು: ಜಿಲ್ಲಾ ಮಟ್ಟದ ಬತ್ತದ ಬೆಳೆ ಸ್ಪರ್ಧೆಯ ಪ್ರಥಮ ಸ್ಥಾನವು ಹೆಕ್ಟೇರ್ನಲ್ಲಿ 97.72 ಕ್ವಿಂಟಲ್ ಬತ್ತ ಬೆಳೆದ ಬಾಳ್ತಿಲ ಗ್ರಾಮದ ಆನಂದ ಶೆಟ್ಟರ ಪಾಲಾಗಿದೆ. ಬಹುಮಾನವಾಗಿ ರೂ. 15 ಸಾವಿರವೂ ದೊರಕಿದೆ.<br /> ನಗರದ ನೆಹರೂ ಮೈದಾನದಲ್ಲಿ ಗುರುವಾರ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 2010-11ನೇ ಸಾಲಿನ ಜಿಲ್ಲಾ ಕೃಷಿ ಪ್ರಶಸ್ತಿ ವಿಜೇತರನ್ನು ಗುರುತಿಸಿ ಸನ್ಮಾನಿಸಲಾಯಿತು. <br /> <br /> ದ್ವಿತೀಯ ಸ್ಥಾನ ಬೆಳ್ತಂಗಡಿ ತಾಲ್ಲೂಕಿನ ಸೋಣಂದೂರು ಗ್ರಾಮದ ಶಂಕರ ಪ್ರಭು (93.35 ಕ್ವಿಂಟಲ್) ಪಾಲಾಗಿದೆ. ದ್ವಿತೀಯ ಬಹುಮಾನ ಮೊತ್ತ ರೂ 10 ಸಾವಿರ. ಸುಳ್ಯ ತಾಲ್ಲೂಕಿನ ಕಮಲ ರೈ (79.27 ಕ್ವಿಂಟಲ್ ) ತೃತೀಯ ಸ್ಥಾನ (ರೂ. 5 ಸಾವಿರ) ಗಳಿಸಿದ್ದಾರೆ. <br /> <br /> ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿದ್ದು, ಸಮಿತಿ ಸಭೆ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಪದ್ಮಯ ನಾಯಕ್ ಪ್ರಜಾವಾಣಿಗೆ ತಿಳಿಸಿದರು.<br /> <br /> ಪ್ರಥಮ ಸ್ಥಾನ `ಹಂಚಿಕೆ~:ಮಂಗಳೂರು ತಾಲ್ಲೂಕಿನ ಬತ್ತದ ಬೆಳೆ ಸ್ಪರ್ಧೆಯಲ್ಲಿ ಪಂಜಿಮೊಗರಿನ ಎಲಿಯಾಸ್ ಡಿಸೋಜ (77.91 ಕ್ವಿಂಟಲ್), ಬೆಳ್ಮ ಗ್ರಾಮದ ಡಿ.ಅಬೂಬಕ್ಕರ್ ಪ್ರಥಮ ಸ್ಥಾನ ಹಂಚಿಕೊಂಡರು (ತಲಾ ರೂ 5 ಸಾವಿರ ಬಹುಮಾನ). ದ್ವಿತೀಯ ಸ್ಥಾನ ತಾಳಿಪ್ಪಾಡಿಯ ರಮೇಶ್ ಎನ್. ರಾವ್ (74.920 ಕ್ವಿಂಟಲ್) ಪಾಲಾಗಿದೆ. ಬಹುಮಾನ ಮೊತ್ತ ರೂ 5 ಸಾವಿರ. ಶಿಮಂತೂರು ಗ್ರಾಮದ ಸುಂದರಿ ಶೆಡ್ತಿ (74.15 ಕ್ವಿಂಟಲ್) ತೃತೀಯ ಬಹುಮಾನವಾಗಿ ರೂ 3 ಸಾವಿರ ಪಡೆದರು. <br /> <br /> 2009 ಮತ್ತು 2010ರಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಜಾನ್ ವೇಗಸ್ ಚೇಳೂರು ಮತ್ತು ಶಂಕರ ಭಟ್ ಅವರನ್ನೂ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಜಿಲ್ಲಾ ಮಟ್ಟದ ಬತ್ತದ ಬೆಳೆ ಸ್ಪರ್ಧೆಯ ಪ್ರಥಮ ಸ್ಥಾನವು ಹೆಕ್ಟೇರ್ನಲ್ಲಿ 97.72 ಕ್ವಿಂಟಲ್ ಬತ್ತ ಬೆಳೆದ ಬಾಳ್ತಿಲ ಗ್ರಾಮದ ಆನಂದ ಶೆಟ್ಟರ ಪಾಲಾಗಿದೆ. ಬಹುಮಾನವಾಗಿ ರೂ. 15 ಸಾವಿರವೂ ದೊರಕಿದೆ.<br /> ನಗರದ ನೆಹರೂ ಮೈದಾನದಲ್ಲಿ ಗುರುವಾರ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 2010-11ನೇ ಸಾಲಿನ ಜಿಲ್ಲಾ ಕೃಷಿ ಪ್ರಶಸ್ತಿ ವಿಜೇತರನ್ನು ಗುರುತಿಸಿ ಸನ್ಮಾನಿಸಲಾಯಿತು. <br /> <br /> ದ್ವಿತೀಯ ಸ್ಥಾನ ಬೆಳ್ತಂಗಡಿ ತಾಲ್ಲೂಕಿನ ಸೋಣಂದೂರು ಗ್ರಾಮದ ಶಂಕರ ಪ್ರಭು (93.35 ಕ್ವಿಂಟಲ್) ಪಾಲಾಗಿದೆ. ದ್ವಿತೀಯ ಬಹುಮಾನ ಮೊತ್ತ ರೂ 10 ಸಾವಿರ. ಸುಳ್ಯ ತಾಲ್ಲೂಕಿನ ಕಮಲ ರೈ (79.27 ಕ್ವಿಂಟಲ್ ) ತೃತೀಯ ಸ್ಥಾನ (ರೂ. 5 ಸಾವಿರ) ಗಳಿಸಿದ್ದಾರೆ. <br /> <br /> ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿದ್ದು, ಸಮಿತಿ ಸಭೆ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಪದ್ಮಯ ನಾಯಕ್ ಪ್ರಜಾವಾಣಿಗೆ ತಿಳಿಸಿದರು.<br /> <br /> ಪ್ರಥಮ ಸ್ಥಾನ `ಹಂಚಿಕೆ~:ಮಂಗಳೂರು ತಾಲ್ಲೂಕಿನ ಬತ್ತದ ಬೆಳೆ ಸ್ಪರ್ಧೆಯಲ್ಲಿ ಪಂಜಿಮೊಗರಿನ ಎಲಿಯಾಸ್ ಡಿಸೋಜ (77.91 ಕ್ವಿಂಟಲ್), ಬೆಳ್ಮ ಗ್ರಾಮದ ಡಿ.ಅಬೂಬಕ್ಕರ್ ಪ್ರಥಮ ಸ್ಥಾನ ಹಂಚಿಕೊಂಡರು (ತಲಾ ರೂ 5 ಸಾವಿರ ಬಹುಮಾನ). ದ್ವಿತೀಯ ಸ್ಥಾನ ತಾಳಿಪ್ಪಾಡಿಯ ರಮೇಶ್ ಎನ್. ರಾವ್ (74.920 ಕ್ವಿಂಟಲ್) ಪಾಲಾಗಿದೆ. ಬಹುಮಾನ ಮೊತ್ತ ರೂ 5 ಸಾವಿರ. ಶಿಮಂತೂರು ಗ್ರಾಮದ ಸುಂದರಿ ಶೆಡ್ತಿ (74.15 ಕ್ವಿಂಟಲ್) ತೃತೀಯ ಬಹುಮಾನವಾಗಿ ರೂ 3 ಸಾವಿರ ಪಡೆದರು. <br /> <br /> 2009 ಮತ್ತು 2010ರಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಜಾನ್ ವೇಗಸ್ ಚೇಳೂರು ಮತ್ತು ಶಂಕರ ಭಟ್ ಅವರನ್ನೂ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>