<p><strong>ಮೊಳಕಾಲ್ಮುರು:</strong> ದಿನ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ತಾಪದಿಂದಾಗಿ ತಾಲ್ಲೂಕಿನ ಜನತೆ ಕಂಗಾಲಾಗಿದ್ದಾರೆ.<br /> ಪಟ್ಟಣದಲ್ಲಿ 38-39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಕಚೇರಿ ಸೇರಿದಂತೆ ನಾನಾ ಕಾರಣಗಳಿಗಾಗಿ ಇಲ್ಲಿಗೆ ಬರುವ ಜನತೆ ಬಿಸಲಿನ ತಾಪ ತೀರಿಸಿಕೊಳ್ಳಲು, ನೆರಳಿನ ಆಶ್ರಯಕ್ಕಾಗಿ ತೊಂದರೆಪಡುವ ದೃಶ್ಯಗಳು ಸಾಮಾನ್ಯವಾಗಿವೆ. ಹಣ್ಣಿನ ಬೆಲೆ ಸಹ ಹೆಚ್ಚಾಗಿದೆ. <br /> <br /> ಇದರಿಂದಾಗಿ ರಸ್ತೆಬದಿಯಲ್ಲಿ ದೊರೆಯುವ ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳ ಮೊರೆ ಹೋಗಿರುವುದು ಕಂಡುಬರುತ್ತಿದೆ.<br /> <br /> ತಾಲ್ಲೂಕಿನಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿ ಕೇಳಿಬರುತ್ತಿದೆ. ಸುಮಾರು 9 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ನೀಡಬೇಕಾಗಿದೆ ಎಂದು ಜಿಲ್ಲಾ ಪಂಚಾಯ್ತಿ ವರದಿ ಸಲ್ಲಿಸಿದೆ. ಮೂರು ಕಡೆ ಗೋಶಾಲೆಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ 10 ಸಾವಿರ ಜಾನುವಾರುಗಳು ಆಶ್ರಯ ಪಡೆದಿವೆ. <br /> <br /> ದೇವಸಮುದ್ರ ಹೋಬಳಿಯಲ್ಲಿ ಗುಳೆ ಹೆಚ್ಚಿದೆ. ಉದ್ಯೋಗಖಾತ್ರಿ ಯೋಜನೆ ಅಡಿ ಕಾರ್ಮಿಕರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಮತ್ತು ಕೂಲಿ ದೊರೆಯುತ್ತಿದೆ ಎಂಬ `ಯಕ್ಷಪ್ರಶ್ನೆ~ಗೆ ಎಲ್ಲಿಯೂ ಉತ್ತರ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿದೆ.<br /> <br /> ಕಳೆದ ವರ್ಷ ಬೆಳೆ ಪೂರ್ಣವಾಗಿ ಕೈಕೊಟ್ಟಿರುವ ಕಾರಣ ಈ ಭಾಗದ ಪ್ರಮುಖ ಬೆಳೆಯಾದ ಶೇಂಗಾವನ್ನು ಈ ವರ್ಷ ಬಿತ್ತನೆ ಮಾಡಲು ರೈತರ ಬಳಿ ಬಿತ್ತನೆ ಬೀಜವಿಲ್ಲ. ಈ ಬಾರಿ ರೂ6 ಸಾವಿರ ಕ್ವಿಂಟಲ್ಗೆ ಪಾವತಿಸಿ ಬಿತ್ತನೆ ಖರ್ಚು ನಿಭಾಯಿಸಲು ಸಾಧ್ಯವಾಗದೆ ಹೊಲವನ್ನು ಬೀಳು ಬಿಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರಾದ ತಿಪ್ಪೇಸ್ವಾಮಿ, ಮಲ್ಲಿಕಾರ್ಜುಪ್ಪ, ನಾಗಣ್ಣ, ಅಜ್ಜಯ್ಯ ಇತರರು ಹೇಳುತ್ತಾರೆ.<br /> <br /> ಕಳೆದ ಒಂದು ದಶಕದಲ್ಲಿಯೇ ಭೀಕರ ಎಂದು ಬಣ್ಣಿಸಲಾಗುತ್ತಿರುವ ಈ ಬಾರಿಯ ಬರಸ್ಥಿತಿ ನಿರ್ವಹಣೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ನೆರವಿಗೆ ಬರಬೇಕು ಎಂಬುದು ಸಾರ್ವಜನಿಕರ ಮನವಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ದಿನ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ತಾಪದಿಂದಾಗಿ ತಾಲ್ಲೂಕಿನ ಜನತೆ ಕಂಗಾಲಾಗಿದ್ದಾರೆ.<br /> ಪಟ್ಟಣದಲ್ಲಿ 38-39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಕಚೇರಿ ಸೇರಿದಂತೆ ನಾನಾ ಕಾರಣಗಳಿಗಾಗಿ ಇಲ್ಲಿಗೆ ಬರುವ ಜನತೆ ಬಿಸಲಿನ ತಾಪ ತೀರಿಸಿಕೊಳ್ಳಲು, ನೆರಳಿನ ಆಶ್ರಯಕ್ಕಾಗಿ ತೊಂದರೆಪಡುವ ದೃಶ್ಯಗಳು ಸಾಮಾನ್ಯವಾಗಿವೆ. ಹಣ್ಣಿನ ಬೆಲೆ ಸಹ ಹೆಚ್ಚಾಗಿದೆ. <br /> <br /> ಇದರಿಂದಾಗಿ ರಸ್ತೆಬದಿಯಲ್ಲಿ ದೊರೆಯುವ ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳ ಮೊರೆ ಹೋಗಿರುವುದು ಕಂಡುಬರುತ್ತಿದೆ.<br /> <br /> ತಾಲ್ಲೂಕಿನಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿ ಕೇಳಿಬರುತ್ತಿದೆ. ಸುಮಾರು 9 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ನೀಡಬೇಕಾಗಿದೆ ಎಂದು ಜಿಲ್ಲಾ ಪಂಚಾಯ್ತಿ ವರದಿ ಸಲ್ಲಿಸಿದೆ. ಮೂರು ಕಡೆ ಗೋಶಾಲೆಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ 10 ಸಾವಿರ ಜಾನುವಾರುಗಳು ಆಶ್ರಯ ಪಡೆದಿವೆ. <br /> <br /> ದೇವಸಮುದ್ರ ಹೋಬಳಿಯಲ್ಲಿ ಗುಳೆ ಹೆಚ್ಚಿದೆ. ಉದ್ಯೋಗಖಾತ್ರಿ ಯೋಜನೆ ಅಡಿ ಕಾರ್ಮಿಕರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಮತ್ತು ಕೂಲಿ ದೊರೆಯುತ್ತಿದೆ ಎಂಬ `ಯಕ್ಷಪ್ರಶ್ನೆ~ಗೆ ಎಲ್ಲಿಯೂ ಉತ್ತರ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿದೆ.<br /> <br /> ಕಳೆದ ವರ್ಷ ಬೆಳೆ ಪೂರ್ಣವಾಗಿ ಕೈಕೊಟ್ಟಿರುವ ಕಾರಣ ಈ ಭಾಗದ ಪ್ರಮುಖ ಬೆಳೆಯಾದ ಶೇಂಗಾವನ್ನು ಈ ವರ್ಷ ಬಿತ್ತನೆ ಮಾಡಲು ರೈತರ ಬಳಿ ಬಿತ್ತನೆ ಬೀಜವಿಲ್ಲ. ಈ ಬಾರಿ ರೂ6 ಸಾವಿರ ಕ್ವಿಂಟಲ್ಗೆ ಪಾವತಿಸಿ ಬಿತ್ತನೆ ಖರ್ಚು ನಿಭಾಯಿಸಲು ಸಾಧ್ಯವಾಗದೆ ಹೊಲವನ್ನು ಬೀಳು ಬಿಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರಾದ ತಿಪ್ಪೇಸ್ವಾಮಿ, ಮಲ್ಲಿಕಾರ್ಜುಪ್ಪ, ನಾಗಣ್ಣ, ಅಜ್ಜಯ್ಯ ಇತರರು ಹೇಳುತ್ತಾರೆ.<br /> <br /> ಕಳೆದ ಒಂದು ದಶಕದಲ್ಲಿಯೇ ಭೀಕರ ಎಂದು ಬಣ್ಣಿಸಲಾಗುತ್ತಿರುವ ಈ ಬಾರಿಯ ಬರಸ್ಥಿತಿ ನಿರ್ವಹಣೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ನೆರವಿಗೆ ಬರಬೇಕು ಎಂಬುದು ಸಾರ್ವಜನಿಕರ ಮನವಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>