<p><strong>ಬಳ್ಳಾರಿ: </strong>ರಾಯಚೂರು ಕೃಷಿ ವಿಶ್ವವಿದ್ಯಾಲಯವು 2011-12ನೇ ಸಾಲಿಗಾಗಿ ಕೃಷಿ ಕುರಿತ ಜ್ಞಾನ ಹಾಗು ಅಪಾರ ಅನುಭವದಿಂದ ಅತ್ಯುತ್ತಮ ಸಾಧನೆಗೈದು ಇತರ ರೈತರಿಗೆ ಮಾದರಿಯಾಗಿರುವ ರೈತ/ ರೈತ ಮಹಿಳೆಯರಿಗೆ ರೈತ ವಿಜ್ಞಾನಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.<br /> <br /> ಬಳ್ಳಾರಿ, ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ರೈತಬಾಂಧವರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಬರುವ ಏಪ್ರಿಲ್ 3ನೇ ವಾರ ಜರುಗುವ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.<br /> <br /> ಪ್ರಶಸ್ತಿ ಫಲಕ ಹಾಗೂ ರೂ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಆಸಕ್ತರು ಬೀದರ್ ಕೃಷಿ ವಿಜ್ಞಾನ ಕೇಂದ್ರ (ಮೊಬೈಲ್ ದೂರವಾಣಿ ಸಂಖ್ಯೆ 94806- 96318, ಗುಲ್ಬರ್ಗಾ 94806- 96315, ರದ್ದೇವಾಡಗಿ 94806- 96348, ರಾಯಚೂರು 94806- 96314, ಗಂಗಾವತಿ- 94806- 96316, ಹಗರಿ- 94806- 96317, ಭೀಮರಾಯನಗುಡಿ ಕೃಷಿ ವಿಸ್ತರಣಾ ಕೇಂದ್ರ- 94806- 96335, ಲಿಂಗಸೂಗೂರು- 94806- 96334, ಕೊಪ್ಪಳ- 94806- 96319 ಹಾಗೂ ಹಡಗಲಿ- 94806- 96336 ಕಚೇರಿಗಳಿಂದ ಮಾರ್ಚ್ 25ರೊಳಗೆ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 30ರೊಳಗಾಗಿ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ರಾಯಚೂರು- 584102 ಇವರಿಗೆ ಸಲ್ಲಿಸಬೇಕು. ಮಾಹಿತಿಗಾಗಿ ದೂರವಾಣಿ ಸಂಖ್ಯೆ 94806- 96313 ಅಥವಾ ಸ್ಥಿರ ದೂರವಾಣಿ ಸಂಖ್ಯೆ (08532) 220152 ಸಂಪರ್ಕಿಸಬಹುದು ಎಂದು ವಿ.ವಿ.ಯ ವಿಸ್ತರಣಾ ನಿರ್ದೇಶಕ ಡಾ. ಎಸ್.ಎನ್. ಹಂಚಿನಾಳ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ರಾಯಚೂರು ಕೃಷಿ ವಿಶ್ವವಿದ್ಯಾಲಯವು 2011-12ನೇ ಸಾಲಿಗಾಗಿ ಕೃಷಿ ಕುರಿತ ಜ್ಞಾನ ಹಾಗು ಅಪಾರ ಅನುಭವದಿಂದ ಅತ್ಯುತ್ತಮ ಸಾಧನೆಗೈದು ಇತರ ರೈತರಿಗೆ ಮಾದರಿಯಾಗಿರುವ ರೈತ/ ರೈತ ಮಹಿಳೆಯರಿಗೆ ರೈತ ವಿಜ್ಞಾನಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.<br /> <br /> ಬಳ್ಳಾರಿ, ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ರೈತಬಾಂಧವರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಬರುವ ಏಪ್ರಿಲ್ 3ನೇ ವಾರ ಜರುಗುವ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.<br /> <br /> ಪ್ರಶಸ್ತಿ ಫಲಕ ಹಾಗೂ ರೂ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಆಸಕ್ತರು ಬೀದರ್ ಕೃಷಿ ವಿಜ್ಞಾನ ಕೇಂದ್ರ (ಮೊಬೈಲ್ ದೂರವಾಣಿ ಸಂಖ್ಯೆ 94806- 96318, ಗುಲ್ಬರ್ಗಾ 94806- 96315, ರದ್ದೇವಾಡಗಿ 94806- 96348, ರಾಯಚೂರು 94806- 96314, ಗಂಗಾವತಿ- 94806- 96316, ಹಗರಿ- 94806- 96317, ಭೀಮರಾಯನಗುಡಿ ಕೃಷಿ ವಿಸ್ತರಣಾ ಕೇಂದ್ರ- 94806- 96335, ಲಿಂಗಸೂಗೂರು- 94806- 96334, ಕೊಪ್ಪಳ- 94806- 96319 ಹಾಗೂ ಹಡಗಲಿ- 94806- 96336 ಕಚೇರಿಗಳಿಂದ ಮಾರ್ಚ್ 25ರೊಳಗೆ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 30ರೊಳಗಾಗಿ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ರಾಯಚೂರು- 584102 ಇವರಿಗೆ ಸಲ್ಲಿಸಬೇಕು. ಮಾಹಿತಿಗಾಗಿ ದೂರವಾಣಿ ಸಂಖ್ಯೆ 94806- 96313 ಅಥವಾ ಸ್ಥಿರ ದೂರವಾಣಿ ಸಂಖ್ಯೆ (08532) 220152 ಸಂಪರ್ಕಿಸಬಹುದು ಎಂದು ವಿ.ವಿ.ಯ ವಿಸ್ತರಣಾ ನಿರ್ದೇಶಕ ಡಾ. ಎಸ್.ಎನ್. ಹಂಚಿನಾಳ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>