<p><strong>ಪಿರಿಯಾಪಟ್ಟಣ</strong>: ಇಲ್ಲಿಯ ಬಡ ಆಟೋ ಚಾಲಕ ಗಣೇಶ್ ಅವರ ಪುತ್ರ 6 ವರ್ಷದ ಸಾತ್ವಿಕ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ಸಹಾಯ ಕೋರಿದ್ದಾರೆ.<br /> <br /> ಆಟೋ ಚಾಲನೆಯಿಂದ ಜೀವನ ನಡೆಸುತ್ತಿರುವ ತಾಲ್ಲೂಕಿನ ದೊಡ್ಡಹರವೆಯ ಗಣೇಶ್ ಅವರಿಗೆ ಸಾತ್ವಿಕ್ ಹಾಗೂ ದೀಪ್ತಿ ಮಕ್ಕಳಿದ್ದಾರೆ. ಸಾತ್ವಿಕ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ವಿಷಯ ಪಾಲಕರನ್ನು ಕಂಗೆಡಿಸಿದೆ. ಆಟೋ ಚಾಲನೆಯಿಂದ ಸಂಪಾದಿಸಿದ ಹಣ ಈ ಬಾಲಕನ ಆರೋಗ್ಯ ತಪಾಸಣೆಗೂ ಸಾಲುತ್ತಿಲ್ಲ. ಮಗನನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಸೇರಿಸಿದ್ದಾರೆ. <br /> <br /> ಚಿಕಿತ್ಸೆಗೆ ಕನಿಷ್ಠ ರೂ. 4 ರಿಂದ 5ಲಕ್ಷದಷ್ಟು ಹಣ ಭರಿಸಬೇಕಾಗಿದ್ದು, ಮಗನ ಉಳಿವಿಗಾಗಿ ಸಮಾಜದ ಸಹಾಯಹಸ್ತ ನಿರೀಕ್ಷಿಸಿದ್ದಾರೆ. ಸಹೃದಯರ ಮತ್ತು ಸಮಾಜ ಸೇವಾ ಸಂಘಟನೆಗಳು ನೆರವು ನೀಡುವಂತೆ ಗಣೇಶ್ ಮನವಿ ಮಾಡಿದ್ದಾರೆ.<br /> <br /> ಸಹಾಯ ಮಾಡಲಿಚ್ಛಿಸುವವರು ಕುಶಾಲನಗರ ಎಸ್ಬಿಎಂ ಶಾಖೆಯ ಉಳಿತಾಯ ಖಾತೆ ನಂ.54021158064ಕ್ಕೆ ಹಣ ಹಾಕಬಹುದು. ವಿವರಗಳಿಗೆ ಮೊ-9591172311 ಸಂಪರ್ಕಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿರಿಯಾಪಟ್ಟಣ</strong>: ಇಲ್ಲಿಯ ಬಡ ಆಟೋ ಚಾಲಕ ಗಣೇಶ್ ಅವರ ಪುತ್ರ 6 ವರ್ಷದ ಸಾತ್ವಿಕ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ಸಹಾಯ ಕೋರಿದ್ದಾರೆ.<br /> <br /> ಆಟೋ ಚಾಲನೆಯಿಂದ ಜೀವನ ನಡೆಸುತ್ತಿರುವ ತಾಲ್ಲೂಕಿನ ದೊಡ್ಡಹರವೆಯ ಗಣೇಶ್ ಅವರಿಗೆ ಸಾತ್ವಿಕ್ ಹಾಗೂ ದೀಪ್ತಿ ಮಕ್ಕಳಿದ್ದಾರೆ. ಸಾತ್ವಿಕ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ವಿಷಯ ಪಾಲಕರನ್ನು ಕಂಗೆಡಿಸಿದೆ. ಆಟೋ ಚಾಲನೆಯಿಂದ ಸಂಪಾದಿಸಿದ ಹಣ ಈ ಬಾಲಕನ ಆರೋಗ್ಯ ತಪಾಸಣೆಗೂ ಸಾಲುತ್ತಿಲ್ಲ. ಮಗನನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಸೇರಿಸಿದ್ದಾರೆ. <br /> <br /> ಚಿಕಿತ್ಸೆಗೆ ಕನಿಷ್ಠ ರೂ. 4 ರಿಂದ 5ಲಕ್ಷದಷ್ಟು ಹಣ ಭರಿಸಬೇಕಾಗಿದ್ದು, ಮಗನ ಉಳಿವಿಗಾಗಿ ಸಮಾಜದ ಸಹಾಯಹಸ್ತ ನಿರೀಕ್ಷಿಸಿದ್ದಾರೆ. ಸಹೃದಯರ ಮತ್ತು ಸಮಾಜ ಸೇವಾ ಸಂಘಟನೆಗಳು ನೆರವು ನೀಡುವಂತೆ ಗಣೇಶ್ ಮನವಿ ಮಾಡಿದ್ದಾರೆ.<br /> <br /> ಸಹಾಯ ಮಾಡಲಿಚ್ಛಿಸುವವರು ಕುಶಾಲನಗರ ಎಸ್ಬಿಎಂ ಶಾಖೆಯ ಉಳಿತಾಯ ಖಾತೆ ನಂ.54021158064ಕ್ಕೆ ಹಣ ಹಾಕಬಹುದು. ವಿವರಗಳಿಗೆ ಮೊ-9591172311 ಸಂಪರ್ಕಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>