<p><strong>ಯಲಬುರ್ಗಾ: </strong>ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ.ಶ್ರೀರಾಮುಲು ಬಿಜೆಪಿ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಿಎಸ್ಆರ್ ಕಾಂಗ್ರೆಸ್ ಮುಖಂಡರು ಕೂಡಾ ಬಿಜೆಪಿ ಸೇರಲು ಚರ್ಚೆ ನಡೆಸಿದ್ದಾರೆ.<br /> <br /> ಈ ಕುರಿತು ತಾಲ್ಲೂಕು ಮುಖಂಡ ನವೀನ ಗುಳಗಣ್ಣವರ್ ತಾಲ್ಲೂಕಿನ ಇಟಗಿ ಗ್ರಾಮದ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ.<br /> <br /> ಎರಡು ವರ್ಷಗಳಲ್ಲಿ ರಾಜ್ಯಮಟ್ಟದಲ್ಲಿ ಆಗಿರುವ ಅನೇಕ ಬದಲಾವಣೆಯಿಂದ ರಾಜಕೀಯವಾಗಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯದ ಅನುಭವವಾಗಿದೆ. ಸಂಸ್ಥಾಪಕ ರಾಮುಲು ಅವರು ಕೈಗೊಂಡಿರುವ ತೀರ್ಮಾನಗಳಿಗೆ ಬೆಂಬಲಾರ್ಥವಾಗಿ ತಾಲ್ಲೂಕಿನ ಕಾರ್ಯಕರ್ತರು ಹಾಗೂ ಮುಖಂಡರು ನಡೆದುಕೊಳ್ಳಬೇಕಾಗಿದೆ.<br /> <br /> ಅವರ ಮಾರ್ಗದರ್ಶನದಂತೆ ಕಾರ್ಯಕರ್ತರ ಸಭೆ ಕರೆದು ಅಭಿಪ್ರಾಯ ಸಂಗ್ರಹಕ್ಕಾಗಿ ಈ ಸಭೆ ಆಯೋಜಿಸಲಾಗಿದೆ. ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕೆಂಬುದು ಬಿಎಸ್ಆರ್ ಕಾಂಗ್ರೆಸ್ನ ರಾಮುಲು ಅವರ ಬಯಕೆಯಾಗಿದ್ದರ ಹಿನ್ನೆಲೆಯಲ್ಲಿ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದ್ದರಿಂದ ಅವರ ನಡೆಯಂತೆ ತಾಲ್ಲೂಕಿನ ಕಾರ್ಯಕರ್ತರು ನಡೆದುಕೊಂಡರೆ ಹೆಚ್ಚು ಸೂಕ್ತವಾದುದು ಎಂದು ನವೀನ ಗುಳಗಣ್ಣವರ್ ಅಭಿಪ್ರಾಯಪಟ್ಟರು.<br /> <br /> ಇದಕ್ಕು ಮುನ್ನ ಮಾತನಾಡಿದ ಬಿಎಸ್ಆರ್ ಕಾಂಗ್ರೆಸ್ ಮುಖಂಡ ದೊಡ್ಡನಗೌಡ ತೋಟಗಂಟಿ ಮಾತನಾಡಿ, ಯಾವುದೇ ಪಕ್ಷ ಸೇರಿದರೂ ಸೂಕ್ತ ಸ್ಥಾನಮಾನ ಸಿಗುವಂತಾಗಬೇಕು. ಎಲ್ಲರೂ ಸಮಾನರು ಎಂಬ ಭಾವನೆಯೊಂದಿಗೆ ಪಕ್ಷ ಸಂಘಟನೆಗೆ ಶ್ರಮಿಸುವ ವಾತಾವರಣ ಸೃಷ್ಟಿಯಾಗಬೇಕು. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಿ ಯೋಗ್ಯ ಪಕ್ಷಕ್ಕೆ ಸೇರಿವುದು ಮುಖ್ಯ ಎಂದು ಸಲಹೆ ನೀಡಿದರು.<br /> <br /> ಯುವ ಮುಖಂಡರಾದ ಮಂಜುನಾಥ ಕುದ್ರಿಮೋತಿ, ನಾಗನಗೌಡ ಜಾಲಿಹಾಳ, ಕಳಕಪ್ಪ ಉಪನಾಳ, ಅಮರೇಶ ಮಾಳೆಕೊಪ್ಪ ಸೇರಿದಂತೆ ಅನೇಕರು ಮಾತನಾಡಿ, ಬಿಜೆಪಿ ಪಕ್ಷ ಸೇರಿವುದೇ ಹೆಚ್ಚು ಸೂಕ್ತ ಮೊದಲಿನಂತೆ ಎಲ್ಲರೂ ಒಗ್ಗೂಡಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.<br /> <br /> ತಾ.ಪಂ. ಸದಸ್ಯ ರಾಜಶೇಖರ ಹೊಂಬಳ, ಗ್ರಾ.ಪಂ. ಸದಸ್ಯ ಪ್ರಕಾಶ ಬೋರಣ್ಣವರ, ರಾಮಣ್ಣ ಯಡ್ಡೋಣಿ, ಪ್ರಮುಖರಾದ ಮಹೇಶ ದಿವಟರ್, ವಿಕ್ರಮ, ನಿಂಗಪ್ಪ ರ್ಯಾವಣಕಿ, ಷಣ್ಮುಖಪ್ಪ ರಾಂಪೂರ, ಹಿರೇಹನಮಪ್ಪ ಬೊಮ್ಮನಾಳ, ಶರಣಪ್ಪ ಮುರಾರಿ, ವಸಂತ ಭಾವಮನಿ, ಶೇಖರಗೌಡ್ರ ಚಿಕ್ಕೊಪ್ಪ ಕನಕರಾಜ ಪೂಜಾರ, ಬಸವರಾಜ ಪೂಜಾರ ಸೇರಿದಂತೆ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ: </strong>ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ.ಶ್ರೀರಾಮುಲು ಬಿಜೆಪಿ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಿಎಸ್ಆರ್ ಕಾಂಗ್ರೆಸ್ ಮುಖಂಡರು ಕೂಡಾ ಬಿಜೆಪಿ ಸೇರಲು ಚರ್ಚೆ ನಡೆಸಿದ್ದಾರೆ.<br /> <br /> ಈ ಕುರಿತು ತಾಲ್ಲೂಕು ಮುಖಂಡ ನವೀನ ಗುಳಗಣ್ಣವರ್ ತಾಲ್ಲೂಕಿನ ಇಟಗಿ ಗ್ರಾಮದ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ.<br /> <br /> ಎರಡು ವರ್ಷಗಳಲ್ಲಿ ರಾಜ್ಯಮಟ್ಟದಲ್ಲಿ ಆಗಿರುವ ಅನೇಕ ಬದಲಾವಣೆಯಿಂದ ರಾಜಕೀಯವಾಗಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯದ ಅನುಭವವಾಗಿದೆ. ಸಂಸ್ಥಾಪಕ ರಾಮುಲು ಅವರು ಕೈಗೊಂಡಿರುವ ತೀರ್ಮಾನಗಳಿಗೆ ಬೆಂಬಲಾರ್ಥವಾಗಿ ತಾಲ್ಲೂಕಿನ ಕಾರ್ಯಕರ್ತರು ಹಾಗೂ ಮುಖಂಡರು ನಡೆದುಕೊಳ್ಳಬೇಕಾಗಿದೆ.<br /> <br /> ಅವರ ಮಾರ್ಗದರ್ಶನದಂತೆ ಕಾರ್ಯಕರ್ತರ ಸಭೆ ಕರೆದು ಅಭಿಪ್ರಾಯ ಸಂಗ್ರಹಕ್ಕಾಗಿ ಈ ಸಭೆ ಆಯೋಜಿಸಲಾಗಿದೆ. ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕೆಂಬುದು ಬಿಎಸ್ಆರ್ ಕಾಂಗ್ರೆಸ್ನ ರಾಮುಲು ಅವರ ಬಯಕೆಯಾಗಿದ್ದರ ಹಿನ್ನೆಲೆಯಲ್ಲಿ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದ್ದರಿಂದ ಅವರ ನಡೆಯಂತೆ ತಾಲ್ಲೂಕಿನ ಕಾರ್ಯಕರ್ತರು ನಡೆದುಕೊಂಡರೆ ಹೆಚ್ಚು ಸೂಕ್ತವಾದುದು ಎಂದು ನವೀನ ಗುಳಗಣ್ಣವರ್ ಅಭಿಪ್ರಾಯಪಟ್ಟರು.<br /> <br /> ಇದಕ್ಕು ಮುನ್ನ ಮಾತನಾಡಿದ ಬಿಎಸ್ಆರ್ ಕಾಂಗ್ರೆಸ್ ಮುಖಂಡ ದೊಡ್ಡನಗೌಡ ತೋಟಗಂಟಿ ಮಾತನಾಡಿ, ಯಾವುದೇ ಪಕ್ಷ ಸೇರಿದರೂ ಸೂಕ್ತ ಸ್ಥಾನಮಾನ ಸಿಗುವಂತಾಗಬೇಕು. ಎಲ್ಲರೂ ಸಮಾನರು ಎಂಬ ಭಾವನೆಯೊಂದಿಗೆ ಪಕ್ಷ ಸಂಘಟನೆಗೆ ಶ್ರಮಿಸುವ ವಾತಾವರಣ ಸೃಷ್ಟಿಯಾಗಬೇಕು. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಿ ಯೋಗ್ಯ ಪಕ್ಷಕ್ಕೆ ಸೇರಿವುದು ಮುಖ್ಯ ಎಂದು ಸಲಹೆ ನೀಡಿದರು.<br /> <br /> ಯುವ ಮುಖಂಡರಾದ ಮಂಜುನಾಥ ಕುದ್ರಿಮೋತಿ, ನಾಗನಗೌಡ ಜಾಲಿಹಾಳ, ಕಳಕಪ್ಪ ಉಪನಾಳ, ಅಮರೇಶ ಮಾಳೆಕೊಪ್ಪ ಸೇರಿದಂತೆ ಅನೇಕರು ಮಾತನಾಡಿ, ಬಿಜೆಪಿ ಪಕ್ಷ ಸೇರಿವುದೇ ಹೆಚ್ಚು ಸೂಕ್ತ ಮೊದಲಿನಂತೆ ಎಲ್ಲರೂ ಒಗ್ಗೂಡಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.<br /> <br /> ತಾ.ಪಂ. ಸದಸ್ಯ ರಾಜಶೇಖರ ಹೊಂಬಳ, ಗ್ರಾ.ಪಂ. ಸದಸ್ಯ ಪ್ರಕಾಶ ಬೋರಣ್ಣವರ, ರಾಮಣ್ಣ ಯಡ್ಡೋಣಿ, ಪ್ರಮುಖರಾದ ಮಹೇಶ ದಿವಟರ್, ವಿಕ್ರಮ, ನಿಂಗಪ್ಪ ರ್ಯಾವಣಕಿ, ಷಣ್ಮುಖಪ್ಪ ರಾಂಪೂರ, ಹಿರೇಹನಮಪ್ಪ ಬೊಮ್ಮನಾಳ, ಶರಣಪ್ಪ ಮುರಾರಿ, ವಸಂತ ಭಾವಮನಿ, ಶೇಖರಗೌಡ್ರ ಚಿಕ್ಕೊಪ್ಪ ಕನಕರಾಜ ಪೂಜಾರ, ಬಸವರಾಜ ಪೂಜಾರ ಸೇರಿದಂತೆ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>