<p>ಆರ್.ಎಸ್.ಎಸ್. ಸರ ಸಂಘ ಚಾಲಕ ಮೋಹನ್ ಭಾಗವತ್ರ ಭಾಷಣದ (ಪ್ರ. ವಾ.ಮಾ.7) ವರದಿ ಬಗ್ಗೆ ಪ್ರತಿಕ್ರಿಯೆ.<br /> ಉನ್ನತ ಸ್ಥಾನದಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ತಾವು ವ್ಯಕ್ತಪಡಿಸಿರುವ ಆತಂಕದ ಬಗೆಗೆ ನನಗೂ ದುಃಖವಾಗಿದೆ. ನಾನೊಬ್ಬ ವಯೋವೃದ್ಧ. 1948ನೇ ಇಸವಿಯಲ್ಲಿ ಸಂಘದ ಮೇಲಿನ ಬಹಿಷ್ಕಾರವನ್ನು ತೆಗೆಯುವಂತೆ ಚಳವಳಿ ನಡೆಸಿ ಜೈಲುವಾಸ ಅನುಭವಿಸಿದವನು. ನನ್ನ ಸಂಘ ಸಂಪರ್ಕ ಆಗಿನದು.<br /> <br /> ಆಗಿನ ಎಲ್ಲ ಸ್ವಯಂ ಸೇವಕ ಆದರ್ಶ ವ್ಯಕ್ತಿ ಪೂಜ್ಯ ಗುರೂಜಿಯವರು. ಆಗಿನ ಗುರೂಜಿಯವರ ಆದರ್ಶ ಇವತ್ತಿಗೂ ಎಲ್ಲ ಸ್ವಯಂ ಸೇವಕರನ್ನೂ ಮುನ್ನಡೆಸುತ್ತಿದೆ. ಕೆಲಕಾಲದ ಹಿಂದೆ 20ಕ್ಕೂ ಹೆಚ್ಚಿರದ ಸ್ವಯಂ ಸೇವಕ ಬಿ.ಜೆ.ಪಿ. ಸಂಸದರು, 100ಕ್ಕೂ ಮಿಕ್ಕಿ ಕರ್ನಾಟಕ ರಾಜ್ಯದ ಆಡಳಿತ ವಹಿಸಿಕೊಂಡಿರುವುದರಲ್ಲಿ ಈ ಸ್ವಯಂ ಸೇವಕರ ಕೊಡುಗೆ ಬಹಳಷ್ಟು.<br /> <br /> ಆದರೆ ಸಂಘ ಸಂಸ್ಕೃತಿಗೆ ಅಸಂಬದ್ಧವಾದ ಭ್ರಷ್ಟತೆ ಮತ್ತು ಸ್ವಾರ್ಥ ಆಕ್ರಮಿಸುತ್ತಿರುವುದು ಬಹಳ ಆತಂಕದ ಸಂಗತಿ. ಭ್ರಷ್ಟತೆಯಿಂದ ದೊರಕುವ ಸಂಪತ್ತಾಗಲೀ ಅಧಿಕಾರವಾಗಲೀ ನಿಜವಾದ ಸ್ವಯಂ ಸೇವಕರಿಗೆ ಬೇಕಿಲ್ಲ. ಮಾನ್ಯರೇ ತಮ್ಮ ಗಮನವನ್ನು ಈ ಕಡೆ ಹರಿಸಿ ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆದು ಸಂಘದ ಯುವ ಸ್ವಯಂ ಸೇವಕರನ್ನು ಆದರ್ಶ ಪಥದಲ್ಲಿ ನಡೆಸುವುದು ನಿಮ್ಮ ಆದ್ಯ ಕರ್ತವ್ಯ.<br /> <br /> ಈ 50 ವರ್ಷಗಳಲ್ಲಿ ಸಂಘ ಪರಿವಾರವಾಗಿ ಹುಟ್ಟಿ ಬೆಳೆಯುತ್ತಿರುವ 50ಕ್ಕೂ ಮಿಕ್ಕ ಅನೇಕ ಸಂಸ್ಥೆಗಳಲ್ಲಿ ಕಾಣಸಿಗದ ಈ ಸ್ವಾರ್ಥ ಮತ್ತು ಭ್ರಷ್ಟತೆ ರಾಜಕೀಯ ರಂಗದಲ್ಲಿ ಸುತ್ತಾಡುತ್ತಿದ್ದು ನನ್ನಂತಹ ಅನೇಕ ವಯೋವೃದ್ಧ ಸ್ವಯಂ ಸೇವಕರ ಮನನೋಯಿಸುತ್ತಿದೆ. ನಿಮ್ಮ ಪ್ರಾಮಾಣಿಕ ಆತ್ಮವಿಮರ್ಶೆ ನಿಮಗೆ ಮನದಟ್ಟು ಮಾಡಿಸುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆರ್.ಎಸ್.ಎಸ್. ಸರ ಸಂಘ ಚಾಲಕ ಮೋಹನ್ ಭಾಗವತ್ರ ಭಾಷಣದ (ಪ್ರ. ವಾ.ಮಾ.7) ವರದಿ ಬಗ್ಗೆ ಪ್ರತಿಕ್ರಿಯೆ.<br /> ಉನ್ನತ ಸ್ಥಾನದಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ತಾವು ವ್ಯಕ್ತಪಡಿಸಿರುವ ಆತಂಕದ ಬಗೆಗೆ ನನಗೂ ದುಃಖವಾಗಿದೆ. ನಾನೊಬ್ಬ ವಯೋವೃದ್ಧ. 1948ನೇ ಇಸವಿಯಲ್ಲಿ ಸಂಘದ ಮೇಲಿನ ಬಹಿಷ್ಕಾರವನ್ನು ತೆಗೆಯುವಂತೆ ಚಳವಳಿ ನಡೆಸಿ ಜೈಲುವಾಸ ಅನುಭವಿಸಿದವನು. ನನ್ನ ಸಂಘ ಸಂಪರ್ಕ ಆಗಿನದು.<br /> <br /> ಆಗಿನ ಎಲ್ಲ ಸ್ವಯಂ ಸೇವಕ ಆದರ್ಶ ವ್ಯಕ್ತಿ ಪೂಜ್ಯ ಗುರೂಜಿಯವರು. ಆಗಿನ ಗುರೂಜಿಯವರ ಆದರ್ಶ ಇವತ್ತಿಗೂ ಎಲ್ಲ ಸ್ವಯಂ ಸೇವಕರನ್ನೂ ಮುನ್ನಡೆಸುತ್ತಿದೆ. ಕೆಲಕಾಲದ ಹಿಂದೆ 20ಕ್ಕೂ ಹೆಚ್ಚಿರದ ಸ್ವಯಂ ಸೇವಕ ಬಿ.ಜೆ.ಪಿ. ಸಂಸದರು, 100ಕ್ಕೂ ಮಿಕ್ಕಿ ಕರ್ನಾಟಕ ರಾಜ್ಯದ ಆಡಳಿತ ವಹಿಸಿಕೊಂಡಿರುವುದರಲ್ಲಿ ಈ ಸ್ವಯಂ ಸೇವಕರ ಕೊಡುಗೆ ಬಹಳಷ್ಟು.<br /> <br /> ಆದರೆ ಸಂಘ ಸಂಸ್ಕೃತಿಗೆ ಅಸಂಬದ್ಧವಾದ ಭ್ರಷ್ಟತೆ ಮತ್ತು ಸ್ವಾರ್ಥ ಆಕ್ರಮಿಸುತ್ತಿರುವುದು ಬಹಳ ಆತಂಕದ ಸಂಗತಿ. ಭ್ರಷ್ಟತೆಯಿಂದ ದೊರಕುವ ಸಂಪತ್ತಾಗಲೀ ಅಧಿಕಾರವಾಗಲೀ ನಿಜವಾದ ಸ್ವಯಂ ಸೇವಕರಿಗೆ ಬೇಕಿಲ್ಲ. ಮಾನ್ಯರೇ ತಮ್ಮ ಗಮನವನ್ನು ಈ ಕಡೆ ಹರಿಸಿ ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆದು ಸಂಘದ ಯುವ ಸ್ವಯಂ ಸೇವಕರನ್ನು ಆದರ್ಶ ಪಥದಲ್ಲಿ ನಡೆಸುವುದು ನಿಮ್ಮ ಆದ್ಯ ಕರ್ತವ್ಯ.<br /> <br /> ಈ 50 ವರ್ಷಗಳಲ್ಲಿ ಸಂಘ ಪರಿವಾರವಾಗಿ ಹುಟ್ಟಿ ಬೆಳೆಯುತ್ತಿರುವ 50ಕ್ಕೂ ಮಿಕ್ಕ ಅನೇಕ ಸಂಸ್ಥೆಗಳಲ್ಲಿ ಕಾಣಸಿಗದ ಈ ಸ್ವಾರ್ಥ ಮತ್ತು ಭ್ರಷ್ಟತೆ ರಾಜಕೀಯ ರಂಗದಲ್ಲಿ ಸುತ್ತಾಡುತ್ತಿದ್ದು ನನ್ನಂತಹ ಅನೇಕ ವಯೋವೃದ್ಧ ಸ್ವಯಂ ಸೇವಕರ ಮನನೋಯಿಸುತ್ತಿದೆ. ನಿಮ್ಮ ಪ್ರಾಮಾಣಿಕ ಆತ್ಮವಿಮರ್ಶೆ ನಿಮಗೆ ಮನದಟ್ಟು ಮಾಡಿಸುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>