<p><strong>ಕೆಜಿಎಫ್: </strong>ನಗರದ ರಾಬರ್ಟ್ಸನ್ಪೇಟೆ ಬಳಿ ಮಂಗಳವಾರ ಸಂಜೆ ಬೀಸಿದ ಭಾರಿ ಬಿರುಗಾಳಿಯಿಂದ ನಗರದ ಜನತೆ ಸೈನೆಡ್ ದೂಳಿನ ಸ್ನಾನ ಅನುಭವಿಸಿದರು.<br /> <br /> ಸಂಜೆ 4.30ರಿಂದ ಸುಮಾರು ಅರ್ಧ ಗಂಟೆ ಕಾಲ ಬೀಸಿದ ಬಿರುಗಾಳಿಯಿಂದ ಊರಿಗಾಂ, ಕೆನಡೀಸ್ ಲೈನ್, ಅಶೋಕನಗರ, ಡಾ.ಅಂಬೇಡ್ಕರ್ ರಸ್ತೆ, ಎಂ.ಜಿ.ಮಾರುಕಟ್ಟೆ ಸಂಕೀರ್ಣ ಹಾಗೂ ರಾಬರ್ಟ್ಸನ್ಪೇಟೆ ಸಂಪೂರ್ಣವಾಗಿ ದೂಳುಮಯವಾಯಿತು. <br /> <br /> ಬಿಜಿಎಂಎಲ್ನ ಸೈನೆಡ್ ಗುಡ್ಡದ ಮೇಲ್ಭಾಗದ ತೆಳುಮಣ್ಣು ಬಿರುಗಾಳಿಯೊಂದಿಗೆ ಮಿಶ್ರವಾಗಿ ಹರಡತೊಡಗಿದಾಗ ಇಡೀ ಪ್ರದೇಶದ ಜನತೆ ಸಂಕಟ ಪಡುವಂತಾಯಿತು.</p>.<p>ಬಸ್ ನಿಲ್ದಾಣದಲ್ಲಿದ್ದ ಸಾವಿರಾರು ಜನ ದೂಳಿನಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಓಡಿದರು. ಪಾದಚಾರಿಗಳು ಹಾಗೂ ವಾಹನ ಚಾಲಕರು ದೂಳಿನಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.<br /> <br /> ಮಂಗಳವಾರ ಬಹುತೇಕ ಅಂಗಡಿಗಳು ಮುಚ್ಚಿದ್ದ ಕಾರಣ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಯಿತು. ತೆರೆದಿದ್ದ ಅಂಗಡಿಗಳ ಮಾಲೀಕರು ಸಹ ಕೆಲ ಹೊತ್ತು ಅಂಗಡಿಗಳ ಬಾಗಿಲನ್ನು ಮುಚ್ಚಿ ಗಾಳಿ ನಿಲ್ಲುವುದನ್ನೇ ಕಾಯುತ್ತಿದ್ದರು.<br /> <br /> ಸೈನೆಡ್ ಗುಡ್ಡದಿಂದ ನಗರದ ಜನತೆ ಕಷ್ಟ ಅನುಭವಿಸುವುದು ಹೊಸತೇನೂ ಅಲ್ಲದಿದ್ದರೂ; ಸಾಮಾನ್ಯವಾಗಿ ಆಷಾಢದಲ್ಲಿ ಏಳುತ್ತಿದ್ದ ದೂಳು ಈಗ ಅಕಾಲದಲ್ಲಿ ಎದ್ದಿದ್ದು ತಾಪತ್ರಯಕ್ಕೆ ಕಾರಣವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್: </strong>ನಗರದ ರಾಬರ್ಟ್ಸನ್ಪೇಟೆ ಬಳಿ ಮಂಗಳವಾರ ಸಂಜೆ ಬೀಸಿದ ಭಾರಿ ಬಿರುಗಾಳಿಯಿಂದ ನಗರದ ಜನತೆ ಸೈನೆಡ್ ದೂಳಿನ ಸ್ನಾನ ಅನುಭವಿಸಿದರು.<br /> <br /> ಸಂಜೆ 4.30ರಿಂದ ಸುಮಾರು ಅರ್ಧ ಗಂಟೆ ಕಾಲ ಬೀಸಿದ ಬಿರುಗಾಳಿಯಿಂದ ಊರಿಗಾಂ, ಕೆನಡೀಸ್ ಲೈನ್, ಅಶೋಕನಗರ, ಡಾ.ಅಂಬೇಡ್ಕರ್ ರಸ್ತೆ, ಎಂ.ಜಿ.ಮಾರುಕಟ್ಟೆ ಸಂಕೀರ್ಣ ಹಾಗೂ ರಾಬರ್ಟ್ಸನ್ಪೇಟೆ ಸಂಪೂರ್ಣವಾಗಿ ದೂಳುಮಯವಾಯಿತು. <br /> <br /> ಬಿಜಿಎಂಎಲ್ನ ಸೈನೆಡ್ ಗುಡ್ಡದ ಮೇಲ್ಭಾಗದ ತೆಳುಮಣ್ಣು ಬಿರುಗಾಳಿಯೊಂದಿಗೆ ಮಿಶ್ರವಾಗಿ ಹರಡತೊಡಗಿದಾಗ ಇಡೀ ಪ್ರದೇಶದ ಜನತೆ ಸಂಕಟ ಪಡುವಂತಾಯಿತು.</p>.<p>ಬಸ್ ನಿಲ್ದಾಣದಲ್ಲಿದ್ದ ಸಾವಿರಾರು ಜನ ದೂಳಿನಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಓಡಿದರು. ಪಾದಚಾರಿಗಳು ಹಾಗೂ ವಾಹನ ಚಾಲಕರು ದೂಳಿನಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.<br /> <br /> ಮಂಗಳವಾರ ಬಹುತೇಕ ಅಂಗಡಿಗಳು ಮುಚ್ಚಿದ್ದ ಕಾರಣ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಯಿತು. ತೆರೆದಿದ್ದ ಅಂಗಡಿಗಳ ಮಾಲೀಕರು ಸಹ ಕೆಲ ಹೊತ್ತು ಅಂಗಡಿಗಳ ಬಾಗಿಲನ್ನು ಮುಚ್ಚಿ ಗಾಳಿ ನಿಲ್ಲುವುದನ್ನೇ ಕಾಯುತ್ತಿದ್ದರು.<br /> <br /> ಸೈನೆಡ್ ಗುಡ್ಡದಿಂದ ನಗರದ ಜನತೆ ಕಷ್ಟ ಅನುಭವಿಸುವುದು ಹೊಸತೇನೂ ಅಲ್ಲದಿದ್ದರೂ; ಸಾಮಾನ್ಯವಾಗಿ ಆಷಾಢದಲ್ಲಿ ಏಳುತ್ತಿದ್ದ ದೂಳು ಈಗ ಅಕಾಲದಲ್ಲಿ ಎದ್ದಿದ್ದು ತಾಪತ್ರಯಕ್ಕೆ ಕಾರಣವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>