<p><strong>ಮಂಗಳೂರು</strong>: ಬಿಸಿಯೂಟ ನೌಕರರ ವೇತನ ಏರಿಕೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿತು.<br /> <br /> ಈ ಹೋರಾಟದದಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೂ500 ಏರಿಕೆ ಮಾಡಲು ಒಪ್ಪಿಕೊಂಡಿವೆ.<br /> <br /> ದ.ಕ. ಸಿಐಟಿಯು ಪ್ರದಾನ ಕಾರ್ಯದರ್ಶಿ ವಸಂತ ಆಚಾರಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿ, ಈ ಹೋರಾಟದಿಂದ ಬಿಸಿಯೂಟ ನೌಕರರ ವೇತನ ಏರಿಕೆಯಾಗಲು ಇಡೀ ನೌಕರರು ಕಾರಣ. ಕನಿಷ್ಠ ₨3000 ವೇತನ ನೀಡಬೇಕು ಎಂಬುದು ಬೇಡಿಕೆ ಆಗಿತ್ತು. ಈಗ ಏರಿಕೆ ಆಗಿರುವ ಮೊತ್ತವನ್ನು ಸ್ವೀಕರಿಸಿ, ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ವೇತನ ಏರಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.<br /> <br /> ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ರಮಣಿ ಮೂಡುಬಿದಿರೆ, ಜಯಂತಿ.ಬಿ. ಶೆಟ್ಟಿ, ರಾಧ ಮೂಡುಬಿದಿರೆ, ಬಿ.ಕೆ. ಇಮ್ತಿಯಾಜ್ ಬಿಸಿಯೂಟ ನೌಕರರ ಸಂಘದ ಪದ್ಮಾವತಿ ಶೆಟ್ಟಿ, ಗಿರಿಜ ಮೂಡುಬಿದಿರೆ, ಭವ್ಯ. ಜೆ., ಸರೋಜಿನಿ ಉಳ್ಳಾಲ ಸತ್ಯಾಗ್ರಹದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಬಿಸಿಯೂಟ ನೌಕರರ ವೇತನ ಏರಿಕೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿತು.<br /> <br /> ಈ ಹೋರಾಟದದಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೂ500 ಏರಿಕೆ ಮಾಡಲು ಒಪ್ಪಿಕೊಂಡಿವೆ.<br /> <br /> ದ.ಕ. ಸಿಐಟಿಯು ಪ್ರದಾನ ಕಾರ್ಯದರ್ಶಿ ವಸಂತ ಆಚಾರಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿ, ಈ ಹೋರಾಟದಿಂದ ಬಿಸಿಯೂಟ ನೌಕರರ ವೇತನ ಏರಿಕೆಯಾಗಲು ಇಡೀ ನೌಕರರು ಕಾರಣ. ಕನಿಷ್ಠ ₨3000 ವೇತನ ನೀಡಬೇಕು ಎಂಬುದು ಬೇಡಿಕೆ ಆಗಿತ್ತು. ಈಗ ಏರಿಕೆ ಆಗಿರುವ ಮೊತ್ತವನ್ನು ಸ್ವೀಕರಿಸಿ, ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ವೇತನ ಏರಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.<br /> <br /> ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ರಮಣಿ ಮೂಡುಬಿದಿರೆ, ಜಯಂತಿ.ಬಿ. ಶೆಟ್ಟಿ, ರಾಧ ಮೂಡುಬಿದಿರೆ, ಬಿ.ಕೆ. ಇಮ್ತಿಯಾಜ್ ಬಿಸಿಯೂಟ ನೌಕರರ ಸಂಘದ ಪದ್ಮಾವತಿ ಶೆಟ್ಟಿ, ಗಿರಿಜ ಮೂಡುಬಿದಿರೆ, ಭವ್ಯ. ಜೆ., ಸರೋಜಿನಿ ಉಳ್ಳಾಲ ಸತ್ಯಾಗ್ರಹದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>