<p><strong>ನವದೆಹಲಿ (ಪಿಟಿಐ): </strong>ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಇತರ ನೆಲಮಾಳಿಗೆಗಳಲ್ಲಿ ಶೋಧಿಸಿರುವ ಬೆಲೆ ಬಾಳುವ ವಸ್ತುಗಳ ದಾಖಲೆ ಹಾಗೂ ಸಂರಕ್ಷಣಾ ಕಾರ್ಯ ಮುಗಿದ ಬಳಿಕವಷ್ಟೇ `ಬಿ~ನೆಲಮಾಳಿಗೆಯನ್ನು ತೆರೆಯಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.<br /> <br /> ದೇವಸ್ಥಾನದ ಭದ್ರತೆಯನ್ನು ಅರೆಸೇನಾ ಪಡೆಗೆ ಹಸ್ತಾಂತರಿಸಬೇಕೆನ್ನುವ ತಜ್ಞರ ಸಮಿತಿಯ ಮನವಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠವು, ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನ ರಕ್ಷಣೆಗಾಗಿ ದೇವಸ್ಥಾನಕ್ಕೆ ಸರ್ಪಗಾವಲು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.<br /> <br /> ಸಂಪತ್ತು ಹಾಗೂ ದೇವಸ್ಥಾನದ ರಕ್ಷಣೆಗೆ ಆಡಳಿತ ಮಂಡಳಿಯು ವಾರ್ಷಿಕವಾಗಿ 25 ಲಕ್ಷ ರೂಪಾಯಿ ನೀಡಲಿದೆ. ಅಗತ್ಯವಿರುವ ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದೂ ಪೀಠ ಹೇಳಿದೆ.<br /> <br /> `ಸಂಪತ್ತಿನ ಸಂರಕ್ಷಣೆಗಾಗಿ ಖಾಸಗಿ ಸಂಸ್ಥೆಗಳಿಗೆ ಯಾವುದೇ ಟೆಂಡರ್ ಕರೆದಿಲ್ಲ. ಈ ಕೆಲಸವನ್ನು ಕೇರಳ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತ (ಕೆಲ್ಟ್ರಾನ್) ಮಾಡಲಿದೆ. ಮೂರು ತಿಂಗಳ ಬಳಿಕ ಮತ್ತೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ~ ಎಂದು ತಿಳಿಸಿದೆ.<br /> <br /> ದೇವಸ್ಥಾನದ ಭದ್ರತೆ ಹಾಗೂ `ಬಿ~ ನೆಲಮಾಳಿಗೆ ತೆರೆಯುವ ಕುರಿತ ಆದೇಶವನ್ನು ಕೋರ್ಟ್ ಇದೇ ತಿಂಗಳ 16ರಂದು ಕಾಯ್ದಿರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಇತರ ನೆಲಮಾಳಿಗೆಗಳಲ್ಲಿ ಶೋಧಿಸಿರುವ ಬೆಲೆ ಬಾಳುವ ವಸ್ತುಗಳ ದಾಖಲೆ ಹಾಗೂ ಸಂರಕ್ಷಣಾ ಕಾರ್ಯ ಮುಗಿದ ಬಳಿಕವಷ್ಟೇ `ಬಿ~ನೆಲಮಾಳಿಗೆಯನ್ನು ತೆರೆಯಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.<br /> <br /> ದೇವಸ್ಥಾನದ ಭದ್ರತೆಯನ್ನು ಅರೆಸೇನಾ ಪಡೆಗೆ ಹಸ್ತಾಂತರಿಸಬೇಕೆನ್ನುವ ತಜ್ಞರ ಸಮಿತಿಯ ಮನವಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠವು, ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನ ರಕ್ಷಣೆಗಾಗಿ ದೇವಸ್ಥಾನಕ್ಕೆ ಸರ್ಪಗಾವಲು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.<br /> <br /> ಸಂಪತ್ತು ಹಾಗೂ ದೇವಸ್ಥಾನದ ರಕ್ಷಣೆಗೆ ಆಡಳಿತ ಮಂಡಳಿಯು ವಾರ್ಷಿಕವಾಗಿ 25 ಲಕ್ಷ ರೂಪಾಯಿ ನೀಡಲಿದೆ. ಅಗತ್ಯವಿರುವ ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದೂ ಪೀಠ ಹೇಳಿದೆ.<br /> <br /> `ಸಂಪತ್ತಿನ ಸಂರಕ್ಷಣೆಗಾಗಿ ಖಾಸಗಿ ಸಂಸ್ಥೆಗಳಿಗೆ ಯಾವುದೇ ಟೆಂಡರ್ ಕರೆದಿಲ್ಲ. ಈ ಕೆಲಸವನ್ನು ಕೇರಳ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತ (ಕೆಲ್ಟ್ರಾನ್) ಮಾಡಲಿದೆ. ಮೂರು ತಿಂಗಳ ಬಳಿಕ ಮತ್ತೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ~ ಎಂದು ತಿಳಿಸಿದೆ.<br /> <br /> ದೇವಸ್ಥಾನದ ಭದ್ರತೆ ಹಾಗೂ `ಬಿ~ ನೆಲಮಾಳಿಗೆ ತೆರೆಯುವ ಕುರಿತ ಆದೇಶವನ್ನು ಕೋರ್ಟ್ ಇದೇ ತಿಂಗಳ 16ರಂದು ಕಾಯ್ದಿರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>