<p><strong>ಚಿಕ್ಕೋಡಿ: </strong>ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮವಾಗಿ 11 ಕುಟುಂಬಗಳಿಗೆ ಸೇರಿದ 9 ಗುಡಿಸಲು ಮತ್ತು ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಒಂದು ಮೇಕೆ, ಎರಡು ಮೇಕೆ ಮರಿಗಳು ದಹನಗೊಂಡಿವೆ. <br /> <br /> ಸಂಸಾರೋಪಯೋಗಿ ಮತ್ತು ಕೃಷಿ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣ ನಷ್ಟ ಉಂಟಾದ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರು 12.30ಕ್ಕೆ ಸಂಭವಿಸಿದೆ.<br /> <br /> ತಾಲ್ಲೂಕಿನ ಸದಲಗಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಡಗೋಲ ಗ್ರಾಮದ ಹೊರವಲಯದಲ್ಲಿರುವ ಕಲ್ಲಪ್ಪಾ ಖೈರಮೋಡೆ (ಸಮಗಾರ) ಸೇರಿದಂತೆ ಇತರ ಎಂಟು ಕುಟುಂಬಗಳು ಮತ್ತು ಛಾಯಾ ಕಾಂಬಳೆ, ಅಣ್ಣಾಸಾಬ ಭಾಗಾಯಿ, ಮಹಾದೇವ ಭಾಗಾಯಿ ಅವರಿಗೆ ಸೇರಿದ ಗುಡಿಸಲು ಮತ್ತು ಮನೆಗಳೇ ಬೆಂಕಿಗೆ ಆಹುತಿಯಾಗಿವೆ. <br /> <br /> ಜಿ.ಪಂ. ಸದಸ್ಯ ಗಣೇಶ ಹುಕ್ಕೇರಿ, ಸದಲಗಾ ಪ.ಪಂ ಅಧ್ಯಕ್ಷ ಬಸವರಾಜ ಗುಂಡಕಲ್ಲೆ ಹಾಗೂ ಸದಸ್ಯರು, ಪ.ಪಂ ಮಾಜಿ ಅಧ್ಯಕ್ಷ ಅಣ್ಣಾಸಾಬ ಗುಂಡಕಲ್ಲೆ, ಉಪತಹಶೀಲ್ದಾರ ಡಿ.ಎನ್.ಸಂಕೇಶ್ವರಿ, ಪ.ಪಂ ಮುಖ್ಯಾಧಿಕಾರಿ ಎಸ್.ಕೆ. ಮಲಕಾಪುರೆ ಮುಂತಾದವರು ಭೇಟಿ ನೀಡಿ ಹಾನಿಗೀಡಾಗಿರುವ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.<br /> <br /> <strong>ಪರಿಹಾರ: </strong>ಬೆಂಕಿ ಆಕಸ್ಮಿಕದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡಿರುವ ಕುಟುಂಬಗಳಿಗೆ ತಲಾ 5 ಸಾವಿರ ರೂ.ಗಳ ಪರಿಹಾರ ಘೋಷಿಸಲಾಗಿದ್ದು, ತುರ್ತಾಗಿ ತಲಾ ಎರಡು ಸಾವಿರ ರೂ.ಗಳ ಪರಿಹಾರಧನವನ್ನು ವಿತರಿಸಲಾಗಿದೆ. ಉಳಿದ ತಲಾ ಮೂರು ಸಾವಿರ ರೂ.ಗಳನ್ನು ಶನಿವಾರ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ: </strong>ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮವಾಗಿ 11 ಕುಟುಂಬಗಳಿಗೆ ಸೇರಿದ 9 ಗುಡಿಸಲು ಮತ್ತು ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಒಂದು ಮೇಕೆ, ಎರಡು ಮೇಕೆ ಮರಿಗಳು ದಹನಗೊಂಡಿವೆ. <br /> <br /> ಸಂಸಾರೋಪಯೋಗಿ ಮತ್ತು ಕೃಷಿ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣ ನಷ್ಟ ಉಂಟಾದ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರು 12.30ಕ್ಕೆ ಸಂಭವಿಸಿದೆ.<br /> <br /> ತಾಲ್ಲೂಕಿನ ಸದಲಗಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಡಗೋಲ ಗ್ರಾಮದ ಹೊರವಲಯದಲ್ಲಿರುವ ಕಲ್ಲಪ್ಪಾ ಖೈರಮೋಡೆ (ಸಮಗಾರ) ಸೇರಿದಂತೆ ಇತರ ಎಂಟು ಕುಟುಂಬಗಳು ಮತ್ತು ಛಾಯಾ ಕಾಂಬಳೆ, ಅಣ್ಣಾಸಾಬ ಭಾಗಾಯಿ, ಮಹಾದೇವ ಭಾಗಾಯಿ ಅವರಿಗೆ ಸೇರಿದ ಗುಡಿಸಲು ಮತ್ತು ಮನೆಗಳೇ ಬೆಂಕಿಗೆ ಆಹುತಿಯಾಗಿವೆ. <br /> <br /> ಜಿ.ಪಂ. ಸದಸ್ಯ ಗಣೇಶ ಹುಕ್ಕೇರಿ, ಸದಲಗಾ ಪ.ಪಂ ಅಧ್ಯಕ್ಷ ಬಸವರಾಜ ಗುಂಡಕಲ್ಲೆ ಹಾಗೂ ಸದಸ್ಯರು, ಪ.ಪಂ ಮಾಜಿ ಅಧ್ಯಕ್ಷ ಅಣ್ಣಾಸಾಬ ಗುಂಡಕಲ್ಲೆ, ಉಪತಹಶೀಲ್ದಾರ ಡಿ.ಎನ್.ಸಂಕೇಶ್ವರಿ, ಪ.ಪಂ ಮುಖ್ಯಾಧಿಕಾರಿ ಎಸ್.ಕೆ. ಮಲಕಾಪುರೆ ಮುಂತಾದವರು ಭೇಟಿ ನೀಡಿ ಹಾನಿಗೀಡಾಗಿರುವ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.<br /> <br /> <strong>ಪರಿಹಾರ: </strong>ಬೆಂಕಿ ಆಕಸ್ಮಿಕದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡಿರುವ ಕುಟುಂಬಗಳಿಗೆ ತಲಾ 5 ಸಾವಿರ ರೂ.ಗಳ ಪರಿಹಾರ ಘೋಷಿಸಲಾಗಿದ್ದು, ತುರ್ತಾಗಿ ತಲಾ ಎರಡು ಸಾವಿರ ರೂ.ಗಳ ಪರಿಹಾರಧನವನ್ನು ವಿತರಿಸಲಾಗಿದೆ. ಉಳಿದ ತಲಾ ಮೂರು ಸಾವಿರ ರೂ.ಗಳನ್ನು ಶನಿವಾರ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>