<p><strong>ವಿಜಾಪುರ:</strong> `ಜಿಲ್ಲೆಯಲ್ಲಿ ಶೇ.90ರಷ್ಟು ಬೆಳೆ ಹಾನಿಯಾಗಿದ್ದು, ತಕ್ಷಣವೇ ರೈತರಿಗೆ ಎಕರೆಗೆ ಕನಿಷ್ಠ 5 ಸಾವಿರ ರೂಪಾಯಿ ಪರಿಹಾರ ನೀಡಬೇಕು~ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಆಗ್ರಹಿಸಿದರು.<br /> <br /> `ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಬೇಕು. ರಾಜ್ಯ ಸರ್ಕಾರ ತಕ್ಷಣವೇ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರದಿಂದ ನೆರವು ಬಂದ ನಂತರ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು~ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.<br /> <br /> `ಬರ ಪರಿಹಾರ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈ ವರೆಗೆ ಬಿಡಿಗಾಸನ್ನೂ ನೀಡಿಲ್ಲ. ಅರಕೇರಿ, ನಿಡೋಣಿ, ಬಾಬಾನಗರದಲ್ಲಿ ಗೋಶಾಲೆ ಆರಂಭಿಸಲು ಅಲ್ಲಿಯವರು ಜಮೀನು-ನೀರು ನೀಡಲು ಮುಂದೆ ಬಂದಿದ್ದರೂ ಜಿಲ್ಲಾ ಆಡಳಿತ ಈ ವರೆಗೆ ಗೋಶಾಲೆ ಆರಂಭಿಸಿಲ್ಲ. ಮೇವಿನ ಸಂಗ್ರಹವನ್ನೂ ಮಾಡಿಟ್ಟುಕೊಂಡಿಲ್ಲ~ ಎಂದು ದೂರಿದರು.<br /> <br /> `ಟ್ಯಾಂಕರ್ ಮೂಲಕ ನೀರು ಪೂರೈಸಲು ಒಂದು ಟ್ರಿಪ್ಗೆ ಕೇವಲ ರೂ. 300 ದರ ನಿಗದಿ ಮಾಡಿದ್ದಾರೆ. ಹೀಗಾಗಿ ಟ್ಯಾಂಕರ್ನವರು ನೀರು ಪೂರೈಕೆಗೆ ಮುಂದೆ ಬರುತ್ತಿಲ್ಲ. ಈ ದರವನ್ನು ಕನಿಷ್ಠ ರೂ. 700ಕ್ಕೆ ಹೆಚ್ಚಿಸಿ, ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು~ ಎಂದು ಒತ್ತಾಯಿಸಿದರು.<br /> <br /> `ಜಾನುವಾರುಗಳಿಗೆ ಮೇವಿನ ತೀವ್ರ ಸಮಸ್ಯೆ ಎದುರಾಗಿದೆ. ಕಣಕಿ ಮತ್ತಿತರ ಮೇವು ಇಲ್ಲ. ಹೀಗಾಗಿ ಸರ್ಕಾರ ಕಬ್ಬನ್ನು ಖರೀದಿಸಿ ಪೂರೈಸಬೇಕು. ಕಾಲುವೆಗಳಿಗೆ ಪ್ರತಿ ವರ್ಷ ಫೆಬ್ರವರಿ-15ರ ವರೆಗೆ ಮಾತ್ರ ನೀರು ಪೂರೈಸಲಾಗುತ್ತಿದೆ. ಈ ಅವಧಿಯನ್ನು ಏಪ್ರೀಲ್ ಅಂತ್ಯದವರೆಗೆ ವಿಸ್ತರಿಸಬೇಕು. ಅಗತ್ಯಬಿದ್ದರೆ ಮಹಾರಾಷ್ಟ್ರದಿಂದ ನೀರು ಖರೀದಿಸಬೇಕು~ ಎಂದರು.<br /> <br /> `ಶಾಸಕರ ನೇತೃತ್ವದ ಕಾರ್ಯಪಡೆಯಲ್ಲಿ ಅನುಮೋದನೆ ನೀಡಿದ ಯಾವ ಕಾಮಗಾರಿಗೂ ಒಂದು ರೂಪಾಯಿ ಹಣ ಬಿಡಗುಡೆ ಮಾಡಿಲ್ಲ. ಒಂದೇ ಒಂದು ಕೊಳವೆ ಬಾವಿ ಕೊರೆದಿಲ್ಲ. ಹಿಂದಿನ ವರ್ಷದ ಯೋಜನೆಗಳಿಗೆ ಹಣ ನೀಡಿ ಇದೇ ವರ್ಷಕ್ಕೆ ನೀಡಿದ್ದೇವೆ ಎಂದು ಅಧಿಕಾರಿಗಳು-ಸರ್ಕಾರ ನಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ~ ಎಂದು ಆಪಾದಿಸಿದರು.<br /> <br /> `ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು 15 ದಿನಕ್ಕೊಮ್ಮೆ ಪರಿಶೀಲನೆ ನಡೆಸಬೇಕಿತ್ತು. ಕಾರ್ಯ ನಿರ್ವಹಣೆಯಲ್ಲಿ ಅವರೂ ವಿಫಲರಾಗಿದ್ದಾರೆ~ ಎಂದು ದೂರಿದರು.<br /> <br /> ಜಿ.ಪಂ. ಸದಸ್ಯರಾದ ಟಿ.ಕೆ. ಹಂಗರಗಿ, ಉಮೇಶ ಕೊಳಕೂರ, ಬಿ.ಬಿ. ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷರಾದ ಅರ್ಜುನ ರಾಠೋಡ, ಸೋಮನಾಥ ಬಾಗಲಕೋಟೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ:</strong> `ಜಿಲ್ಲೆಯಲ್ಲಿ ಶೇ.90ರಷ್ಟು ಬೆಳೆ ಹಾನಿಯಾಗಿದ್ದು, ತಕ್ಷಣವೇ ರೈತರಿಗೆ ಎಕರೆಗೆ ಕನಿಷ್ಠ 5 ಸಾವಿರ ರೂಪಾಯಿ ಪರಿಹಾರ ನೀಡಬೇಕು~ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಆಗ್ರಹಿಸಿದರು.<br /> <br /> `ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಬೇಕು. ರಾಜ್ಯ ಸರ್ಕಾರ ತಕ್ಷಣವೇ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರದಿಂದ ನೆರವು ಬಂದ ನಂತರ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು~ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.<br /> <br /> `ಬರ ಪರಿಹಾರ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈ ವರೆಗೆ ಬಿಡಿಗಾಸನ್ನೂ ನೀಡಿಲ್ಲ. ಅರಕೇರಿ, ನಿಡೋಣಿ, ಬಾಬಾನಗರದಲ್ಲಿ ಗೋಶಾಲೆ ಆರಂಭಿಸಲು ಅಲ್ಲಿಯವರು ಜಮೀನು-ನೀರು ನೀಡಲು ಮುಂದೆ ಬಂದಿದ್ದರೂ ಜಿಲ್ಲಾ ಆಡಳಿತ ಈ ವರೆಗೆ ಗೋಶಾಲೆ ಆರಂಭಿಸಿಲ್ಲ. ಮೇವಿನ ಸಂಗ್ರಹವನ್ನೂ ಮಾಡಿಟ್ಟುಕೊಂಡಿಲ್ಲ~ ಎಂದು ದೂರಿದರು.<br /> <br /> `ಟ್ಯಾಂಕರ್ ಮೂಲಕ ನೀರು ಪೂರೈಸಲು ಒಂದು ಟ್ರಿಪ್ಗೆ ಕೇವಲ ರೂ. 300 ದರ ನಿಗದಿ ಮಾಡಿದ್ದಾರೆ. ಹೀಗಾಗಿ ಟ್ಯಾಂಕರ್ನವರು ನೀರು ಪೂರೈಕೆಗೆ ಮುಂದೆ ಬರುತ್ತಿಲ್ಲ. ಈ ದರವನ್ನು ಕನಿಷ್ಠ ರೂ. 700ಕ್ಕೆ ಹೆಚ್ಚಿಸಿ, ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು~ ಎಂದು ಒತ್ತಾಯಿಸಿದರು.<br /> <br /> `ಜಾನುವಾರುಗಳಿಗೆ ಮೇವಿನ ತೀವ್ರ ಸಮಸ್ಯೆ ಎದುರಾಗಿದೆ. ಕಣಕಿ ಮತ್ತಿತರ ಮೇವು ಇಲ್ಲ. ಹೀಗಾಗಿ ಸರ್ಕಾರ ಕಬ್ಬನ್ನು ಖರೀದಿಸಿ ಪೂರೈಸಬೇಕು. ಕಾಲುವೆಗಳಿಗೆ ಪ್ರತಿ ವರ್ಷ ಫೆಬ್ರವರಿ-15ರ ವರೆಗೆ ಮಾತ್ರ ನೀರು ಪೂರೈಸಲಾಗುತ್ತಿದೆ. ಈ ಅವಧಿಯನ್ನು ಏಪ್ರೀಲ್ ಅಂತ್ಯದವರೆಗೆ ವಿಸ್ತರಿಸಬೇಕು. ಅಗತ್ಯಬಿದ್ದರೆ ಮಹಾರಾಷ್ಟ್ರದಿಂದ ನೀರು ಖರೀದಿಸಬೇಕು~ ಎಂದರು.<br /> <br /> `ಶಾಸಕರ ನೇತೃತ್ವದ ಕಾರ್ಯಪಡೆಯಲ್ಲಿ ಅನುಮೋದನೆ ನೀಡಿದ ಯಾವ ಕಾಮಗಾರಿಗೂ ಒಂದು ರೂಪಾಯಿ ಹಣ ಬಿಡಗುಡೆ ಮಾಡಿಲ್ಲ. ಒಂದೇ ಒಂದು ಕೊಳವೆ ಬಾವಿ ಕೊರೆದಿಲ್ಲ. ಹಿಂದಿನ ವರ್ಷದ ಯೋಜನೆಗಳಿಗೆ ಹಣ ನೀಡಿ ಇದೇ ವರ್ಷಕ್ಕೆ ನೀಡಿದ್ದೇವೆ ಎಂದು ಅಧಿಕಾರಿಗಳು-ಸರ್ಕಾರ ನಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ~ ಎಂದು ಆಪಾದಿಸಿದರು.<br /> <br /> `ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು 15 ದಿನಕ್ಕೊಮ್ಮೆ ಪರಿಶೀಲನೆ ನಡೆಸಬೇಕಿತ್ತು. ಕಾರ್ಯ ನಿರ್ವಹಣೆಯಲ್ಲಿ ಅವರೂ ವಿಫಲರಾಗಿದ್ದಾರೆ~ ಎಂದು ದೂರಿದರು.<br /> <br /> ಜಿ.ಪಂ. ಸದಸ್ಯರಾದ ಟಿ.ಕೆ. ಹಂಗರಗಿ, ಉಮೇಶ ಕೊಳಕೂರ, ಬಿ.ಬಿ. ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷರಾದ ಅರ್ಜುನ ರಾಠೋಡ, ಸೋಮನಾಥ ಬಾಗಲಕೋಟೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>