<p><strong>ಬ್ಯಾಂಕಾಕ್ (ಪಿಟಿಐ): </strong>ಬ್ಯಾಡ್ಮಿಂಟನ್ ಜಗತ್ತಿಗೆ ಅಷ್ಟೇನು ಪರಿಚಿತರಲ್ಲದ ಭಾರತದ ಕೆ.ಶ್ರೀಕಾಂತ್ ಅಮೋಘ ಸಾಧನೆಯೊಂದಕ್ಕೆ ಕಾರಣರಾಗಿದ್ದಾರೆ. ಅಚ್ಚರಿ ಹಾಗೂ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದ ಅವರು ಭಾನುವಾರ ಇಲ್ಲಿ ಕೊನೆಗೊಂಡ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.<br /> <br /> ನಿಮಿಟ್ಬಟ್ರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಶ್ರೀಕಾಂತ್ 21-16, 21-12ರಲ್ಲಿ ಥಾಯ್ಲೆಂಡ್ನ ಬೂನ್ಸಾಕ್ ಪೋನ್ಸಾನ ಅವರಿಗೆ ಆಘಾತ ನೀಡಿ ಟ್ರೋಫಿ ಎತ್ತಿ ಹಿಡಿದರು. ಅಷ್ಟು ಮಾತ್ರವಲ್ಲದೇ, 5.2 ಲಕ್ಷ ರೂಪಾಯಿ ಬಹುಮಾನ ಪಡೆದರು.<br /> ಬ್ಯಾಡ್ಮಿಂಟನ್ ರಂಗದಲ್ಲಿ ಭಾರತ ಯಾವ ರೀತಿ ಪ್ರಗತಿ ಸಾಧಿಸುತ್ತಿದೆ ಎಂಬುವುದಕ್ಕೆ ಈ ಪ್ರದರ್ಶನವೇ ಸಾಕ್ಷಿ. ವಿಶೇಷವೆಂದರೆ ಪೋನ್ಸಾನ ಎಂಟನೇ ರ್ಯಾಂಕಿಂಗ್ನ ಆಟಗಾರ. ಅವರನ್ನೇ ಶ್ರೀಕಾಂತ್ ಬಗ್ಗುಬಡಿದಿದ್ದಾರೆ. 61ನೇ ರ್ಯಾಂಕಿಂಗ್ನಲ್ಲಿರುವ ಅವರು ಎರಡೂ ಗೇಮ್ಗಳಲ್ಲಿ ಪಾರಮ್ಯ ಮೆರೆದರು.<br /> <br /> ಶ್ರೀಕಾಂತ್ ಅವರ ಬ್ಯಾಡ್ಮಿಂಟನ್ ಜೀವನದ ಅತ್ಯುತ್ತಮ ಸಾಧನೆ ಇದಾಗಿದೆ. ಏಕೆಂದರೆ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ನಲ್ಲಿ ಅವರಿಗೆ ಒಲಿದು ಚೊಚ್ಚಲ ಪ್ರಶಸ್ತಿ ಇದು. ಅವರು ಈ ಹಿಂದೆ ಏಷ್ಯನ್ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. 2011ರ ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.<br /> <br /> ಸ್ಥಳೀಯ ಆಟಗಾರ ಪೋನ್ಸಾನ ಅವರನ್ನು ಮಣಿಸಲು ಶ್ರೀಕಾಂತ್ ಕೇವಲ 34 ನಿಮಿಷ ತೆಗೆದುಕೊಂಡರು. ಮೊದಲ ಗೇಮ್ ನಿಕಟ ಪೈಪೋಟಿಯಿಂದ ಕೂಡಿತ್ತು. ಒಂದು ಹಂತದಲ್ಲಿ ಉಭಯ ಆಟಗಾರರು 15-15ರಿಂದ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ಚುರುಕಿನ ಆಟವಾಡಿದ 13ನೇ ಶ್ರೇಯಾಂಕದ ಶ್ರೀಕಾಂತ್ ಮುನ್ನಡೆದರು. ಆದರೆ ಎರಡನೇ ಗೇಮ್ನಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಒಂಬತ್ತು ಸ್ಮ್ಯಾಷ್ ಸಿಡಿಸಿದರು.<br /> <br /> `ಅಂಗಳಕ್ಕೆ ಇಳಿದಾಗ ನನ್ನ ಮನಸ್ಸು ಖಾಲಿಯಾಗಿತ್ತು. ಯಾವುದೇ ಯೋಚನೆ ಇರಲಿಲ್ಲ. ಪೋನ್ಸಾನ ಸ್ಥಳೀಯ ಆಟಗಾರ ಹಾಗೂ ಅವರಿಗೆ ಪ್ರೇಕ್ಷಕರ ಬೆಂಬಲವಿದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಉಭಯ ಆಟಗಾರರಿಗೆ 50-50 ಅವಕಾಶವಿದೆ ಎಂದುಕೊಂಡಿದ್ದೆ. ಅದಕ್ಕಿಂತ ಮಿಗಿಲಾಗಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇತ್ತು' ಎಂದು ಪ್ರಶಸ್ತಿ ಗೆದ್ದ ಬಳಿಕ ಆಂಧ್ರಪ್ರದೇಶದ ಗುಂಟೂರಿನ ಶ್ರೀಕಾಂತ್ ನುಡಿದಿದ್ದಾರೆ.<br /> <br /> `ಶೇಕಡಾ ನೂರರಷ್ಟು ಪ್ರಯತ್ನ ಹಾಕಿ ಆಡುವುದು ನನ್ನ ಉದ್ದೇಶವಾಗಿತ್ತು. ಈಗ ಆ ಗೆಲುವಿನ ಖುಷಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಪೋಷಕರೊಂದಿಗೆ ಖುಷಿಯನ್ನು ಹಂಚಿಕೊಂಡೆ. ಮೊದಲು ಹೈದರಾಬಾದ್ಗೆ ಹೋಗುತ್ತೇನೆ. ಬಳಿಕ ಮುಂದಿನ ಟೂರ್ನಿ ಬಗ್ಗೆ ಯೋಚಿಸುತ್ತೇನೆ' ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.</p>.<p>`<strong>ಇದು ಡಬಲ್ ಧಮಾಕಾ'</strong><br /> ಹೈದರಾಬಾದ್ (ಪಿಟಿಐ): `ಇದು ನಮ್ಮ ಕುಟುಂಬಕ್ಕೆ ಡಬಲ್ ಧಮಾಕಾ' -ಹೀಗೆ ಸಂಭ್ರಮಿಸಿದ್ದು `ಥಾಯ್ಲೆಂಡ್ ಓಪನ್' ಪ್ರಶಸ್ತಿ ಗೆದ್ದ ಕೆ. ಶ್ರೀಕಾಂತ್ ಅವರ ಪಾಲಕರು.<br /> <br /> `ನಮಗೆ ತುಂಬಾ ಸಂತೋಷವಾಗಿದೆ. ಅವನು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾನೆ. ಅವನ ಕಠಿಣ ಅಭ್ಯಾಸವನ್ನು ಪದಗಳಲ್ಲಿ ಬಣ್ಣಿಸಲು ಅಸಾಧ್ಯ' ಎಂದು ಶ್ರೀಕಾಂತ್ ಅವರ ತಂದೆ ಕೆ.ವಿ.ಎಸ್. ಕೃಷ್ಣ ಪ್ರತಿಕ್ರಿಯಿಸಿದ್ದಾರೆ.<br /> <br /> ಕೆ. ಶ್ರೀಕಾಂತ್ ಸಿಂಗಲ್ಸ್ನಲ್ಲಿ ಗೆದ್ದರೆ, ಅವರ ಸಹೋದರ ಕೆ. ನಂದಗೋಪಾಲ್ ಮಾಲ್ಡೀವ್ಸ್ನಲ್ಲಿ ಭಾನುವಾರ ನಡೆದ `ಲಿ-ನಿಂಗ್ ಮಾಲ್ಡೀವ್ಸ್ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ'ಯ ಡಬಲ್ಸ್ನಲ್ಲಿ ವಿಜಯ ಸಾಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಂಕಾಕ್ (ಪಿಟಿಐ): </strong>ಬ್ಯಾಡ್ಮಿಂಟನ್ ಜಗತ್ತಿಗೆ ಅಷ್ಟೇನು ಪರಿಚಿತರಲ್ಲದ ಭಾರತದ ಕೆ.ಶ್ರೀಕಾಂತ್ ಅಮೋಘ ಸಾಧನೆಯೊಂದಕ್ಕೆ ಕಾರಣರಾಗಿದ್ದಾರೆ. ಅಚ್ಚರಿ ಹಾಗೂ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದ ಅವರು ಭಾನುವಾರ ಇಲ್ಲಿ ಕೊನೆಗೊಂಡ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.<br /> <br /> ನಿಮಿಟ್ಬಟ್ರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಶ್ರೀಕಾಂತ್ 21-16, 21-12ರಲ್ಲಿ ಥಾಯ್ಲೆಂಡ್ನ ಬೂನ್ಸಾಕ್ ಪೋನ್ಸಾನ ಅವರಿಗೆ ಆಘಾತ ನೀಡಿ ಟ್ರೋಫಿ ಎತ್ತಿ ಹಿಡಿದರು. ಅಷ್ಟು ಮಾತ್ರವಲ್ಲದೇ, 5.2 ಲಕ್ಷ ರೂಪಾಯಿ ಬಹುಮಾನ ಪಡೆದರು.<br /> ಬ್ಯಾಡ್ಮಿಂಟನ್ ರಂಗದಲ್ಲಿ ಭಾರತ ಯಾವ ರೀತಿ ಪ್ರಗತಿ ಸಾಧಿಸುತ್ತಿದೆ ಎಂಬುವುದಕ್ಕೆ ಈ ಪ್ರದರ್ಶನವೇ ಸಾಕ್ಷಿ. ವಿಶೇಷವೆಂದರೆ ಪೋನ್ಸಾನ ಎಂಟನೇ ರ್ಯಾಂಕಿಂಗ್ನ ಆಟಗಾರ. ಅವರನ್ನೇ ಶ್ರೀಕಾಂತ್ ಬಗ್ಗುಬಡಿದಿದ್ದಾರೆ. 61ನೇ ರ್ಯಾಂಕಿಂಗ್ನಲ್ಲಿರುವ ಅವರು ಎರಡೂ ಗೇಮ್ಗಳಲ್ಲಿ ಪಾರಮ್ಯ ಮೆರೆದರು.<br /> <br /> ಶ್ರೀಕಾಂತ್ ಅವರ ಬ್ಯಾಡ್ಮಿಂಟನ್ ಜೀವನದ ಅತ್ಯುತ್ತಮ ಸಾಧನೆ ಇದಾಗಿದೆ. ಏಕೆಂದರೆ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ನಲ್ಲಿ ಅವರಿಗೆ ಒಲಿದು ಚೊಚ್ಚಲ ಪ್ರಶಸ್ತಿ ಇದು. ಅವರು ಈ ಹಿಂದೆ ಏಷ್ಯನ್ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. 2011ರ ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.<br /> <br /> ಸ್ಥಳೀಯ ಆಟಗಾರ ಪೋನ್ಸಾನ ಅವರನ್ನು ಮಣಿಸಲು ಶ್ರೀಕಾಂತ್ ಕೇವಲ 34 ನಿಮಿಷ ತೆಗೆದುಕೊಂಡರು. ಮೊದಲ ಗೇಮ್ ನಿಕಟ ಪೈಪೋಟಿಯಿಂದ ಕೂಡಿತ್ತು. ಒಂದು ಹಂತದಲ್ಲಿ ಉಭಯ ಆಟಗಾರರು 15-15ರಿಂದ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ಚುರುಕಿನ ಆಟವಾಡಿದ 13ನೇ ಶ್ರೇಯಾಂಕದ ಶ್ರೀಕಾಂತ್ ಮುನ್ನಡೆದರು. ಆದರೆ ಎರಡನೇ ಗೇಮ್ನಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಒಂಬತ್ತು ಸ್ಮ್ಯಾಷ್ ಸಿಡಿಸಿದರು.<br /> <br /> `ಅಂಗಳಕ್ಕೆ ಇಳಿದಾಗ ನನ್ನ ಮನಸ್ಸು ಖಾಲಿಯಾಗಿತ್ತು. ಯಾವುದೇ ಯೋಚನೆ ಇರಲಿಲ್ಲ. ಪೋನ್ಸಾನ ಸ್ಥಳೀಯ ಆಟಗಾರ ಹಾಗೂ ಅವರಿಗೆ ಪ್ರೇಕ್ಷಕರ ಬೆಂಬಲವಿದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಉಭಯ ಆಟಗಾರರಿಗೆ 50-50 ಅವಕಾಶವಿದೆ ಎಂದುಕೊಂಡಿದ್ದೆ. ಅದಕ್ಕಿಂತ ಮಿಗಿಲಾಗಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇತ್ತು' ಎಂದು ಪ್ರಶಸ್ತಿ ಗೆದ್ದ ಬಳಿಕ ಆಂಧ್ರಪ್ರದೇಶದ ಗುಂಟೂರಿನ ಶ್ರೀಕಾಂತ್ ನುಡಿದಿದ್ದಾರೆ.<br /> <br /> `ಶೇಕಡಾ ನೂರರಷ್ಟು ಪ್ರಯತ್ನ ಹಾಕಿ ಆಡುವುದು ನನ್ನ ಉದ್ದೇಶವಾಗಿತ್ತು. ಈಗ ಆ ಗೆಲುವಿನ ಖುಷಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಪೋಷಕರೊಂದಿಗೆ ಖುಷಿಯನ್ನು ಹಂಚಿಕೊಂಡೆ. ಮೊದಲು ಹೈದರಾಬಾದ್ಗೆ ಹೋಗುತ್ತೇನೆ. ಬಳಿಕ ಮುಂದಿನ ಟೂರ್ನಿ ಬಗ್ಗೆ ಯೋಚಿಸುತ್ತೇನೆ' ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.</p>.<p>`<strong>ಇದು ಡಬಲ್ ಧಮಾಕಾ'</strong><br /> ಹೈದರಾಬಾದ್ (ಪಿಟಿಐ): `ಇದು ನಮ್ಮ ಕುಟುಂಬಕ್ಕೆ ಡಬಲ್ ಧಮಾಕಾ' -ಹೀಗೆ ಸಂಭ್ರಮಿಸಿದ್ದು `ಥಾಯ್ಲೆಂಡ್ ಓಪನ್' ಪ್ರಶಸ್ತಿ ಗೆದ್ದ ಕೆ. ಶ್ರೀಕಾಂತ್ ಅವರ ಪಾಲಕರು.<br /> <br /> `ನಮಗೆ ತುಂಬಾ ಸಂತೋಷವಾಗಿದೆ. ಅವನು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾನೆ. ಅವನ ಕಠಿಣ ಅಭ್ಯಾಸವನ್ನು ಪದಗಳಲ್ಲಿ ಬಣ್ಣಿಸಲು ಅಸಾಧ್ಯ' ಎಂದು ಶ್ರೀಕಾಂತ್ ಅವರ ತಂದೆ ಕೆ.ವಿ.ಎಸ್. ಕೃಷ್ಣ ಪ್ರತಿಕ್ರಿಯಿಸಿದ್ದಾರೆ.<br /> <br /> ಕೆ. ಶ್ರೀಕಾಂತ್ ಸಿಂಗಲ್ಸ್ನಲ್ಲಿ ಗೆದ್ದರೆ, ಅವರ ಸಹೋದರ ಕೆ. ನಂದಗೋಪಾಲ್ ಮಾಲ್ಡೀವ್ಸ್ನಲ್ಲಿ ಭಾನುವಾರ ನಡೆದ `ಲಿ-ನಿಂಗ್ ಮಾಲ್ಡೀವ್ಸ್ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ'ಯ ಡಬಲ್ಸ್ನಲ್ಲಿ ವಿಜಯ ಸಾಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>