<p>ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಶಾಲಾ ಮಕ್ಕಳು ಪಠಣ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿರುವುದು ಸಮಯೋಚಿತವಾಗಿದೆ. <br /> <br /> ಪ್ರಸ್ತುತ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಅಸೂಯೆ-ದ್ವೇಷ, ಅಹಂಕಾರದ ಭಾವನೆಗಳು ಹೆಚ್ಚಾಗಿವೆ. ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಜನರಲ್ಲಿ ಧಾರ್ಮಿಕ ಗುಣಗಳು ಕಣ್ಮರೆಯಾಗುತ್ತಿವೆ.</p>.<p>ಎಲ್ಲ ಧರ್ಮಗಳೂ ಮಾನವೀಯ ಮೌಲ್ಯಗಳನ್ನೇ ಎತ್ತಿ ಹೇಳುತ್ತವೆ. ಆದರೂ ನೈತಿಕ ಶಿಕ್ಷಣದ ಕೊರತೆ ಇದೆ. ಸ್ವಾರ್ಥ ತುಂಬಿ ತುಳುಕುತ್ತಿದೆ. <br /> <br /> ಮಾನವೀಯ ಮೌಲ್ಯಗಳನ್ನು, ಸುಸಂಸ್ಕೃತ ನಡವಳಿಕೆಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕವೇ ಭವಿಷ್ಯದ ಸಮಾಜವನ್ನು ರೂಪಿಸುವ ಹೊಣೆ ಎಲ್ಲರ ಮೇಲಿದೆ.<br /> <br /> ಈ ನಿಟ್ಟಿನಲ್ಲಿ ಸರ್ಕಾರ ಭಗವದ್ಗೀತೆಯನ್ನು ಮಕ್ಕಳು ಪಠಣ ಮಾಡಲು ಚಿಂತಿಸಿರುವುದು ಸೂಕ್ತವಾಗಿದೆ. ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಲು ಇದು ಸೂಕ್ತ ಸಮಯ.</p>.<p>ಕೆಲವು ಕಾನ್ವೆಂಟ್ ಶಾಲೆಗಳಲ್ಲಿ ಯೇಸುವಿನ ನುಡಿಗಳನ್ನು ಪ್ರಾರ್ಥನೆ ಸಮಯದಲ್ಲಿ ಪಠಿಸುವ ಕ್ರಮವಿದೆ. <br /> <br /> ಉರ್ದು ಶಾಲೆಗಳ ಪ್ರಾರ್ಥನೆ ವೇಳೆಯಲ್ಲಿ ಒಂದೆರಡು ಧಾರ್ಮಿಕ ನುಡಿಗಳನ್ನು ಪಠಿಸುತ್ತಾರೆ.<br /> <br /> ಎಲ್ಲ ಧರ್ಮಗಳೂ ಮನುಕುಲದ ಒಳಿತನ್ನೇ ಬಯಸುವುದರಿಂದ ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಪಠಣ ಮಾಡುವುದು ತಪ್ಪಲ್ಲ. ಅದನ್ನು ಸಂಶಯದಿಂದ ನೋಡುವುದು ಬೇಡ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಶಾಲಾ ಮಕ್ಕಳು ಪಠಣ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿರುವುದು ಸಮಯೋಚಿತವಾಗಿದೆ. <br /> <br /> ಪ್ರಸ್ತುತ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಅಸೂಯೆ-ದ್ವೇಷ, ಅಹಂಕಾರದ ಭಾವನೆಗಳು ಹೆಚ್ಚಾಗಿವೆ. ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಜನರಲ್ಲಿ ಧಾರ್ಮಿಕ ಗುಣಗಳು ಕಣ್ಮರೆಯಾಗುತ್ತಿವೆ.</p>.<p>ಎಲ್ಲ ಧರ್ಮಗಳೂ ಮಾನವೀಯ ಮೌಲ್ಯಗಳನ್ನೇ ಎತ್ತಿ ಹೇಳುತ್ತವೆ. ಆದರೂ ನೈತಿಕ ಶಿಕ್ಷಣದ ಕೊರತೆ ಇದೆ. ಸ್ವಾರ್ಥ ತುಂಬಿ ತುಳುಕುತ್ತಿದೆ. <br /> <br /> ಮಾನವೀಯ ಮೌಲ್ಯಗಳನ್ನು, ಸುಸಂಸ್ಕೃತ ನಡವಳಿಕೆಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕವೇ ಭವಿಷ್ಯದ ಸಮಾಜವನ್ನು ರೂಪಿಸುವ ಹೊಣೆ ಎಲ್ಲರ ಮೇಲಿದೆ.<br /> <br /> ಈ ನಿಟ್ಟಿನಲ್ಲಿ ಸರ್ಕಾರ ಭಗವದ್ಗೀತೆಯನ್ನು ಮಕ್ಕಳು ಪಠಣ ಮಾಡಲು ಚಿಂತಿಸಿರುವುದು ಸೂಕ್ತವಾಗಿದೆ. ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಲು ಇದು ಸೂಕ್ತ ಸಮಯ.</p>.<p>ಕೆಲವು ಕಾನ್ವೆಂಟ್ ಶಾಲೆಗಳಲ್ಲಿ ಯೇಸುವಿನ ನುಡಿಗಳನ್ನು ಪ್ರಾರ್ಥನೆ ಸಮಯದಲ್ಲಿ ಪಠಿಸುವ ಕ್ರಮವಿದೆ. <br /> <br /> ಉರ್ದು ಶಾಲೆಗಳ ಪ್ರಾರ್ಥನೆ ವೇಳೆಯಲ್ಲಿ ಒಂದೆರಡು ಧಾರ್ಮಿಕ ನುಡಿಗಳನ್ನು ಪಠಿಸುತ್ತಾರೆ.<br /> <br /> ಎಲ್ಲ ಧರ್ಮಗಳೂ ಮನುಕುಲದ ಒಳಿತನ್ನೇ ಬಯಸುವುದರಿಂದ ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಪಠಣ ಮಾಡುವುದು ತಪ್ಪಲ್ಲ. ಅದನ್ನು ಸಂಶಯದಿಂದ ನೋಡುವುದು ಬೇಡ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>