<p><strong>ಅಹಮದಾಬಾದ್:</strong> `ಎಲ್ಲರಂತೆ ನನಗೂ ಕನಸುಗಳಿವೆ. ಆದರೆ ಭವಿಷ್ಯದ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅಂದಿನ ದಿನದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರತ್ತ ಮಾತ್ರ ನನ್ನ ಗಮನ~ ಎಂದು ಚೇತೇಶ್ವರ ಪೂಜಾರ ನುಡಿದಿದ್ದಾರೆ.<br /> <br /> ಇಂಗ್ಲೆಂಡ್ ಎದುರು ದ್ವಿಶತಕ ಗಳಿಸಿದ ಬಳಿಕ ತಮ್ಮ ನೆಚ್ಚಿನ ಹೀರೊ ರಾಹುಲ್ ದ್ರಾವಿಡ್ ಅಭಿನಂದನೆಯ ಸಂದೇಶ ಕಳುಹಿಸಿದರು ಎಂದೂ ಅವರು ಹೇಳಿದರು. ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿರುವ ದ್ರಾವಿಡ್ ಅಹಮದಾಬಾದ್ನಲ್ಲಿದ್ದಾರೆ. <br /> <br /> `ಈಗ ಇಂಗ್ಲೆಂಡ್ ತುಂಬಾ ಒತ್ತಡದಲ್ಲಿರುವಂತೆ ಕಾಣುತ್ತಿದೆ. ಈ ಪಂದ್ಯದಲ್ಲಿ ತಿರುಗೇಟು ನೀಡಲು ಅವರಿಗೆ ತುಂಬಾ ಕಷ್ಟವಿದೆ. ಪಿಚ್ ಕೂಡ ಸ್ಪಿನ್ನರ್ಗಳಿಗೆ ನೆರವು ನೀಡುತ್ತಿದೆ. ಐದನೇ ದಿನಕ್ಕೆ ಕಾಲಿಡುವ ಮುನ್ನವೇ ಪಂದ್ಯ ಮುಗಿಯಬಹುದು~ ಎಂದು ಪೂಜಾರ ತಿಳಿಸಿದರು.<br /> <br /> `ದೇಶಿ ಕ್ರಿಕೆಟ್ನಲ್ಲಿ ನಾನು ಉತ್ತಮ ಪ್ರದರ್ಶನ ನೀಡ್ದ್ದಿದೇನೆ. ದೇಶಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ನಡುವೆ ತುಂಬಾ ವ್ಯತ್ಯಾಸವಿದೆ. ಆದರೆ ಯಾವುದೇ ಪ್ರಕಾರದ ಆಟದಲ್ಲಿ ಸುಮ್ಮನೇ ವಿಕೆಟ್ ಒಪ್ಪಿಸಲು ನನಗೆ ಮನಸ್ಸಾಗುವುದಿಲ್ಲ. ದ್ವಿಶತಕ ಗಳಿಸಿದ ಮೇಲೂ ವಿಕೆಟ್ ರಕ್ಷಿಸಿಕೊಳ್ಳುವುದರತ್ತ ನಾನು ಒತ್ತು ನೀಡಿದ್ದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> `ಎಲ್ಲರಂತೆ ನನಗೂ ಕನಸುಗಳಿವೆ. ಆದರೆ ಭವಿಷ್ಯದ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅಂದಿನ ದಿನದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರತ್ತ ಮಾತ್ರ ನನ್ನ ಗಮನ~ ಎಂದು ಚೇತೇಶ್ವರ ಪೂಜಾರ ನುಡಿದಿದ್ದಾರೆ.<br /> <br /> ಇಂಗ್ಲೆಂಡ್ ಎದುರು ದ್ವಿಶತಕ ಗಳಿಸಿದ ಬಳಿಕ ತಮ್ಮ ನೆಚ್ಚಿನ ಹೀರೊ ರಾಹುಲ್ ದ್ರಾವಿಡ್ ಅಭಿನಂದನೆಯ ಸಂದೇಶ ಕಳುಹಿಸಿದರು ಎಂದೂ ಅವರು ಹೇಳಿದರು. ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿರುವ ದ್ರಾವಿಡ್ ಅಹಮದಾಬಾದ್ನಲ್ಲಿದ್ದಾರೆ. <br /> <br /> `ಈಗ ಇಂಗ್ಲೆಂಡ್ ತುಂಬಾ ಒತ್ತಡದಲ್ಲಿರುವಂತೆ ಕಾಣುತ್ತಿದೆ. ಈ ಪಂದ್ಯದಲ್ಲಿ ತಿರುಗೇಟು ನೀಡಲು ಅವರಿಗೆ ತುಂಬಾ ಕಷ್ಟವಿದೆ. ಪಿಚ್ ಕೂಡ ಸ್ಪಿನ್ನರ್ಗಳಿಗೆ ನೆರವು ನೀಡುತ್ತಿದೆ. ಐದನೇ ದಿನಕ್ಕೆ ಕಾಲಿಡುವ ಮುನ್ನವೇ ಪಂದ್ಯ ಮುಗಿಯಬಹುದು~ ಎಂದು ಪೂಜಾರ ತಿಳಿಸಿದರು.<br /> <br /> `ದೇಶಿ ಕ್ರಿಕೆಟ್ನಲ್ಲಿ ನಾನು ಉತ್ತಮ ಪ್ರದರ್ಶನ ನೀಡ್ದ್ದಿದೇನೆ. ದೇಶಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ನಡುವೆ ತುಂಬಾ ವ್ಯತ್ಯಾಸವಿದೆ. ಆದರೆ ಯಾವುದೇ ಪ್ರಕಾರದ ಆಟದಲ್ಲಿ ಸುಮ್ಮನೇ ವಿಕೆಟ್ ಒಪ್ಪಿಸಲು ನನಗೆ ಮನಸ್ಸಾಗುವುದಿಲ್ಲ. ದ್ವಿಶತಕ ಗಳಿಸಿದ ಮೇಲೂ ವಿಕೆಟ್ ರಕ್ಷಿಸಿಕೊಳ್ಳುವುದರತ್ತ ನಾನು ಒತ್ತು ನೀಡಿದ್ದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>