<p><strong>ಹಳಿಯಾಳ:</strong> ತಾಲ್ಲೂಕಿನಾದ್ಯಂತ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ ವನ್ನು ಯಾವುದೇ ಮುನ್ಸೂಚನೆ ಇಲ್ಲದೇ ಕಡಿತಗೊಳಿಸುತ್ತಿರುವುದು ಹಾಗೂ ಪಡಿತರ ಚೀಟಿ ನೀಡದೇ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.<br /> <br /> ಸ್ಥಳೀಯ ಹೆಸ್ಕಾಂ ಇಲಾಖೆಯಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಜವಾಹರ ರಸ್ತೆಯ ಮಾರ್ಗವಾಗಿ ಮುಖ್ಯ ಬೀದಿಯಿಂದ ಸಾಗಿ ತಹಸೀಲ್ದಾರ ಅಜೀಜ್ ಆರ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿತು. ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ ಮನವಿ ಸಲ್ಲಿಸಿದರು.<br /> <br /> ಹಳಿಯಾಳ ತಾಲ್ಲೂಕಿನ ಬಡ ಕುಟುಂಬಗಳಿಗೆ ಅಳವಡಿಸಲಾದ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ ವನ್ನು ಹೆಸ್ಕಾಂ ಇಲಾಖೆ ಯಾವುದೇ ಮುನ್ಸೂಚನೆ ನಿಡದೇ ಸಂಪರ್ಕ ಕಡಿತಗೊಳಿಸುತ್ತಿದ್ದು ಸದ್ಯ ಪರೀಕ್ಷೆಯ ಸಮಯ ಇರುವುದರಿಂದ ಮಕ್ಕಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಕಾರಣ ಕೂಡಲೇ ಈ ವಿದ್ಯುತ್ ಸಂಕರ್ಪ ಕಡಿತ ಮಾಡುವುದನ್ನು ನಿಲ್ಲಿಸಿ ಬಾಕಿ ಹಣವನ್ನು ಕಂತಿನ ರೂಪದಲ್ಲಿ ತುಂಬಲು ಯೋಜನೆ ರೂಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.<br /> <br /> ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಚಿವರ ಮಾತಿಗೆ ಬೆಲೆಯೇ ನೀಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.ತಾಲ್ಲೂಕಿನ ಹಳ್ಳಿಗಳಿಗೆ ಕೇವಲ 6 ಗಂಟೆ ಕಾಲ 3 ಫೇಸ್ ವಿದ್ಯುತ್ನ್ನು ನೀಡಿ ರೈತರಿಗೆ ಅನ್ಯಾಯ ಮಾಡು ತ್ತಿದ್ದಾರೆ. ಬೆಳೆಗಳಿಗೆ ನೀರುಣಿಸಲು ಕನಿಷ್ಠ 12 ಗಂಟೆಯಾದರೂ 3 ಫೇಸ್ ವಿದ್ಯುತ್ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.<br /> <br /> ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ತಾಲ್ಲೂಕು ಆಧ್ಯಕ್ಷ ಆನಂದ ಶಿವನಗೌಡ, ಮುಖಂಡರಾದ ರಾಜು ಮುಲ್ಲಾ, ಗಣಪತಿ ಕರಂಜೇಕರ, ಗುರುನಾಥ ದಾನಪ್ಪನವರ, ಶಿವಾಜಿ ಪಾಟೀಲ, ವಿಲಾಸ ಯಡವಿ, ವಿಜಯ ಬೊಬಾಟಿ, ಜಯಲಕ್ಷ್ಮಿ ಚವ್ಹಾಣ, ಲಲಿತಾ ಕೋರ್ವೇಕರ, ಸಾವಿತ್ರಿ ಗೌಡ ಮತ್ತಿತರರು ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳಿಯಾಳ:</strong> ತಾಲ್ಲೂಕಿನಾದ್ಯಂತ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ ವನ್ನು ಯಾವುದೇ ಮುನ್ಸೂಚನೆ ಇಲ್ಲದೇ ಕಡಿತಗೊಳಿಸುತ್ತಿರುವುದು ಹಾಗೂ ಪಡಿತರ ಚೀಟಿ ನೀಡದೇ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.<br /> <br /> ಸ್ಥಳೀಯ ಹೆಸ್ಕಾಂ ಇಲಾಖೆಯಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಜವಾಹರ ರಸ್ತೆಯ ಮಾರ್ಗವಾಗಿ ಮುಖ್ಯ ಬೀದಿಯಿಂದ ಸಾಗಿ ತಹಸೀಲ್ದಾರ ಅಜೀಜ್ ಆರ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿತು. ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ ಮನವಿ ಸಲ್ಲಿಸಿದರು.<br /> <br /> ಹಳಿಯಾಳ ತಾಲ್ಲೂಕಿನ ಬಡ ಕುಟುಂಬಗಳಿಗೆ ಅಳವಡಿಸಲಾದ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ ವನ್ನು ಹೆಸ್ಕಾಂ ಇಲಾಖೆ ಯಾವುದೇ ಮುನ್ಸೂಚನೆ ನಿಡದೇ ಸಂಪರ್ಕ ಕಡಿತಗೊಳಿಸುತ್ತಿದ್ದು ಸದ್ಯ ಪರೀಕ್ಷೆಯ ಸಮಯ ಇರುವುದರಿಂದ ಮಕ್ಕಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಕಾರಣ ಕೂಡಲೇ ಈ ವಿದ್ಯುತ್ ಸಂಕರ್ಪ ಕಡಿತ ಮಾಡುವುದನ್ನು ನಿಲ್ಲಿಸಿ ಬಾಕಿ ಹಣವನ್ನು ಕಂತಿನ ರೂಪದಲ್ಲಿ ತುಂಬಲು ಯೋಜನೆ ರೂಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.<br /> <br /> ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಚಿವರ ಮಾತಿಗೆ ಬೆಲೆಯೇ ನೀಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.ತಾಲ್ಲೂಕಿನ ಹಳ್ಳಿಗಳಿಗೆ ಕೇವಲ 6 ಗಂಟೆ ಕಾಲ 3 ಫೇಸ್ ವಿದ್ಯುತ್ನ್ನು ನೀಡಿ ರೈತರಿಗೆ ಅನ್ಯಾಯ ಮಾಡು ತ್ತಿದ್ದಾರೆ. ಬೆಳೆಗಳಿಗೆ ನೀರುಣಿಸಲು ಕನಿಷ್ಠ 12 ಗಂಟೆಯಾದರೂ 3 ಫೇಸ್ ವಿದ್ಯುತ್ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.<br /> <br /> ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ತಾಲ್ಲೂಕು ಆಧ್ಯಕ್ಷ ಆನಂದ ಶಿವನಗೌಡ, ಮುಖಂಡರಾದ ರಾಜು ಮುಲ್ಲಾ, ಗಣಪತಿ ಕರಂಜೇಕರ, ಗುರುನಾಥ ದಾನಪ್ಪನವರ, ಶಿವಾಜಿ ಪಾಟೀಲ, ವಿಲಾಸ ಯಡವಿ, ವಿಜಯ ಬೊಬಾಟಿ, ಜಯಲಕ್ಷ್ಮಿ ಚವ್ಹಾಣ, ಲಲಿತಾ ಕೋರ್ವೇಕರ, ಸಾವಿತ್ರಿ ಗೌಡ ಮತ್ತಿತರರು ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>