<p><strong>ಅಣುಸ್ಫೋಟ ನಿಷೇಧಕ್ಕೆ ರಷ್ಯ ನಿರಾಕರಣೆ</strong><br /> ಮಾಸ್ಕೊ, ಸೆ. 10 - ವಾಯುಮಂಡಲದಲ್ಲಿ ಪ್ರಾಯೋಗಿಕ ಅಣುಸ್ಫೋಟಕಗಳನ್ನು ನಿಷೇಧಿಸುವ ಬಗ್ಗೆ ಬ್ರಿಟನ್ ಮತ್ತು ಅಮೆರಿಕಗಳ ಜಂಟಿ ಸಲಹೆಯನ್ನು ಸೋವಿಯತ್ ಒಕ್ಕೂಟವು ತಿರಸ್ಕರಿಸಿದೆ.<br /> <br /> ಈ ನಿರಾಕರಣೆಯನ್ನೊಳಗೊಂಡ ಪತ್ರವನ್ನು ಇಂದು ವಿದೇಶಾಂಗ ಸಚಿವರ ಕಚೇರಿಯಲ್ಲಿ ರಷ್ಯದ ಉಪವಿದೇಶಾಂಗ ಮಂತ್ರಿಯೊಬ್ಬರು ಬ್ರಿಟನ್ ಮತ್ತು ಅಮೆರಿಕ ರಾಯಭಾರಿಗಳಿಗೆ ತಲುಪಿಸಿದರು.<br /> <br /> <strong>ಗೇಣಿ ಪುನರ್ ಸಂಪಾದನೆ ಅರ್ಜಿಗೆ ಅವಕಾಶ</strong><br /> ಬೆಂಗಳೂರು, ಸೆ. 10 - ಇಂದು ವಿಧಾನ ಸಭೆ ಅಧಿಕೃತ ತಿದ್ದುಪಡಿಯೊಂದನ್ನು ಅಂಗೀಕರಿಸಿ `1957ರ ಸೆಪ್ಟೆಂಬರ್ 10ಕ್ಕೆ ಹಿಂದೆ 6 ವರ್ಷಗಳ ಕಾಲ ಒಂದೇ ಸಮನೆ ಗೇಣಿಯಲ್ಲಿದ್ದು ಬಿಡಿಸಲ್ಪಟ್ಟವರು ಗೇಣಿಯ ಪುನರ್ ಸಂಪಾದನೆಗೆ ಅರ್ಜಿ ಹಾಕಿಕೊಳ್ಳಲು ಅವಕಾಶ ಕಲ್ಪಿಸಲು ತೀರ್ಮಾನಿಸಿತು.<br /> <br /> ರಾಜ್ಯದ 7 ಪ್ರದೇಶಗಳಿಗೆ ಸಂಬಂಧಿಸಿದಂತೆ 52ನೇ ಇಸವಿಯಿಂದ ಹಿಡಿದು 56ನೇ ಇಸವಿಯವರೆಗೆ ನಾನಾ ದಿನಗಳನ್ನು ಗೊತ್ತುಮಾಡಿ ಅಲ್ಲಿಂದ ಹಿಂದಕ್ಕೆ 6 ವರ್ಷಗಳ ಕಾಲ ಎಂದು ಮಸೂದೆಯಲ್ಲಿ ಗೊತ್ತು ಮಾಡಲಾಗಿದೆ.<br /> <br /> <strong>ಮಾಸ್ಕೋದಿಂದ ನೆಹರೂ ಪ್ರಯಾಣ</strong><br /> ಲಂಡನ್, ಸೆ. 10 - ಭಾರತದ ಪ್ರಧಾನ ಮಂತ್ರಿ ಪಂಡಿತ್ ನೆಹರೂರವರು ಇಂದು ಮಾಸ್ಕೋದಿಂದ ಪ್ರಯಾಣ ಮಾಡಿದರೆಂದು ಮಾಸ್ಕೋ ರೇಡಿಯೊ ಇಂದು ವರದಿ ಮಾಡಿದೆ.<br /> <br /> ವಿಮಾನ ನಿಲ್ದಾಣಕ್ಕೆ ಖ್ರುಶ್ಚೋವ್ ಮತ್ತಿತರರು ಆಗಮಿಸಿದ್ದು ನೆಹರೂರವರಿಗೆ ಸುಖ ಪ್ರಯಾಣ ಕೋರಿದರು.<br /> <br /> <strong>3ನೇ ಯೋಜನೆಯಲ್ಲಿ ಹೇಮಾವತಿ ಅಣೆಕಟ್ಟು<br /> </strong>ಬೆಂಗಳೂರು, ಸೆ. 10 - ಹೇಮಾವತಿ ಯೋಜನೆಯನ್ನು ತೃತೀಯ ಪಂಚವಾರ್ಷಿಕ ಯೋಜನೆಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯ ಪಡಿಸುವುದೆಂದು ಲೋಕೋಪಯೋಗಿ ಸಚಿವ ಶ್ರೀ ಎಚ್. ಕೆ. ವೀರಣ್ಣಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.<br /> <br /> ಈ ಯೋಜನೆಯನ್ನು ಎರಡು ಘಟ್ಟಗಳಲ್ಲಿ ಕೈಗೊಳ್ಳಬೇಕೆಂದು ಯೋಚಿಸಲಾಗಿದೆ ಎಂದು ಸಚಿವರು ಶ್ರೀ ಹಾರನಹಳ್ಳಿ ರಾಮಸ್ವಾಮಿ ಅವರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಣುಸ್ಫೋಟ ನಿಷೇಧಕ್ಕೆ ರಷ್ಯ ನಿರಾಕರಣೆ</strong><br /> ಮಾಸ್ಕೊ, ಸೆ. 10 - ವಾಯುಮಂಡಲದಲ್ಲಿ ಪ್ರಾಯೋಗಿಕ ಅಣುಸ್ಫೋಟಕಗಳನ್ನು ನಿಷೇಧಿಸುವ ಬಗ್ಗೆ ಬ್ರಿಟನ್ ಮತ್ತು ಅಮೆರಿಕಗಳ ಜಂಟಿ ಸಲಹೆಯನ್ನು ಸೋವಿಯತ್ ಒಕ್ಕೂಟವು ತಿರಸ್ಕರಿಸಿದೆ.<br /> <br /> ಈ ನಿರಾಕರಣೆಯನ್ನೊಳಗೊಂಡ ಪತ್ರವನ್ನು ಇಂದು ವಿದೇಶಾಂಗ ಸಚಿವರ ಕಚೇರಿಯಲ್ಲಿ ರಷ್ಯದ ಉಪವಿದೇಶಾಂಗ ಮಂತ್ರಿಯೊಬ್ಬರು ಬ್ರಿಟನ್ ಮತ್ತು ಅಮೆರಿಕ ರಾಯಭಾರಿಗಳಿಗೆ ತಲುಪಿಸಿದರು.<br /> <br /> <strong>ಗೇಣಿ ಪುನರ್ ಸಂಪಾದನೆ ಅರ್ಜಿಗೆ ಅವಕಾಶ</strong><br /> ಬೆಂಗಳೂರು, ಸೆ. 10 - ಇಂದು ವಿಧಾನ ಸಭೆ ಅಧಿಕೃತ ತಿದ್ದುಪಡಿಯೊಂದನ್ನು ಅಂಗೀಕರಿಸಿ `1957ರ ಸೆಪ್ಟೆಂಬರ್ 10ಕ್ಕೆ ಹಿಂದೆ 6 ವರ್ಷಗಳ ಕಾಲ ಒಂದೇ ಸಮನೆ ಗೇಣಿಯಲ್ಲಿದ್ದು ಬಿಡಿಸಲ್ಪಟ್ಟವರು ಗೇಣಿಯ ಪುನರ್ ಸಂಪಾದನೆಗೆ ಅರ್ಜಿ ಹಾಕಿಕೊಳ್ಳಲು ಅವಕಾಶ ಕಲ್ಪಿಸಲು ತೀರ್ಮಾನಿಸಿತು.<br /> <br /> ರಾಜ್ಯದ 7 ಪ್ರದೇಶಗಳಿಗೆ ಸಂಬಂಧಿಸಿದಂತೆ 52ನೇ ಇಸವಿಯಿಂದ ಹಿಡಿದು 56ನೇ ಇಸವಿಯವರೆಗೆ ನಾನಾ ದಿನಗಳನ್ನು ಗೊತ್ತುಮಾಡಿ ಅಲ್ಲಿಂದ ಹಿಂದಕ್ಕೆ 6 ವರ್ಷಗಳ ಕಾಲ ಎಂದು ಮಸೂದೆಯಲ್ಲಿ ಗೊತ್ತು ಮಾಡಲಾಗಿದೆ.<br /> <br /> <strong>ಮಾಸ್ಕೋದಿಂದ ನೆಹರೂ ಪ್ರಯಾಣ</strong><br /> ಲಂಡನ್, ಸೆ. 10 - ಭಾರತದ ಪ್ರಧಾನ ಮಂತ್ರಿ ಪಂಡಿತ್ ನೆಹರೂರವರು ಇಂದು ಮಾಸ್ಕೋದಿಂದ ಪ್ರಯಾಣ ಮಾಡಿದರೆಂದು ಮಾಸ್ಕೋ ರೇಡಿಯೊ ಇಂದು ವರದಿ ಮಾಡಿದೆ.<br /> <br /> ವಿಮಾನ ನಿಲ್ದಾಣಕ್ಕೆ ಖ್ರುಶ್ಚೋವ್ ಮತ್ತಿತರರು ಆಗಮಿಸಿದ್ದು ನೆಹರೂರವರಿಗೆ ಸುಖ ಪ್ರಯಾಣ ಕೋರಿದರು.<br /> <br /> <strong>3ನೇ ಯೋಜನೆಯಲ್ಲಿ ಹೇಮಾವತಿ ಅಣೆಕಟ್ಟು<br /> </strong>ಬೆಂಗಳೂರು, ಸೆ. 10 - ಹೇಮಾವತಿ ಯೋಜನೆಯನ್ನು ತೃತೀಯ ಪಂಚವಾರ್ಷಿಕ ಯೋಜನೆಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯ ಪಡಿಸುವುದೆಂದು ಲೋಕೋಪಯೋಗಿ ಸಚಿವ ಶ್ರೀ ಎಚ್. ಕೆ. ವೀರಣ್ಣಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.<br /> <br /> ಈ ಯೋಜನೆಯನ್ನು ಎರಡು ಘಟ್ಟಗಳಲ್ಲಿ ಕೈಗೊಳ್ಳಬೇಕೆಂದು ಯೋಚಿಸಲಾಗಿದೆ ಎಂದು ಸಚಿವರು ಶ್ರೀ ಹಾರನಹಳ್ಳಿ ರಾಮಸ್ವಾಮಿ ಅವರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>