<p><strong>ವಾಷಿಂಗ್ಟನ್ (ಪಿಟಿಐ):</strong> ಭಯೋತ್ಪಾದಕ ದಾಳಿ ಭೀತಿಯಲ್ಲಿ ಬದುಕುತ್ತಿರುವ ಭಾರತವು ಹಣ ವರ್ಗಾವಣೆ ದಂಧೆ ಮತ್ತು ಭಯೋತ್ಪಾದಕರಿಗೆ ಹಣ ಒದಗಿಸುವ ಕಾರ್ಯಜಾಲದ ಆತಂಕ ಎದುರಿಸುತ್ತಿದೆ ಎಂದು ಅಂತರ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಸಿದೆ.<br /> <br /> ಆದರೂ, ಪ್ರಬಲವಾಗುತ್ತಿರುವ ಆರ್ಥಿಕತೆ ಮತ್ತು ಜನಸಂಖ್ಯೆಯ ಮೂಲಕ ಏಷ್ಯಾದಲ್ಲಿನ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳ ನಾಯಕನಾಗಿರುವ ಭಾರತ ಈ ಕೃತ್ಯಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು ಶ್ಲಾಘನೀಯ ಎಂದು ಐಎಂಎಫ್ ತನ್ನ ವರದಿಯಲ್ಲಿ ಪ್ರಶಂಸಿಸಿದೆ. 2010ರ ಜುಲೈನಲ್ಲಿ ಸಿದ್ಧಪಡಿಸಿರುವ ಈ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.<br /> <br /> ದೇಶದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಅಕ್ರಮ ಚಟುವಟಿಕೆಯು ಹಣ ವರ್ಗಾವಣೆ ದಂಧೆಗೆ ಕಾರಣವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮಾದಕವಸ್ತು ಕಳ್ಳಸಾಗಣೆ, ವಂಚನೆ, ಖೋಟಾನೋಟು ತಯಾರಿಕೆ, ಗಡಿಯಾಚೆಗಿನ ಸಂಘಟಿತ ಅಪರಾಧ, ಮಾನವ ಕಳ್ಳಸಾಗಣೆ, ಭ್ರಷ್ಟಾಚಾರ ಇದರ ಹಿಂದಿವೆ ಎಂದು ವರದಿ ವಿಶ್ಲೇಷಿಸಿದೆ.<br /> <br /> ದೇಶದಲ್ಲಿ ಕಾರ್ಯೋನ್ಮುಖವಾಗಿರುವ ಭಯೋತ್ಪಾದಕ ಸಂಘಟನೆಗಳ ಸಂಖ್ಯೆಯ ಬಗ್ಗೆ ಪ್ರಕಟಿತ ಅಂಕಿಅಂಶಗಳಿಲ್ಲ. ಎಂದು ಹೇಳಿದೆ. ಈ ಅಕ್ರಮಗಳ ನಿಯಂತ್ರಣಕ್ಕೆ ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸುವುದು, ಹಣ ವರ್ಗಾವಣೆ ತಡೆಗಾಗಿ ಸ್ವದೇಶಿ ಚೌಕಟ್ಟು ರೂಪಿಸುವುದು, ಮುಟ್ಟುಗೋಲು, ಗುರುತು ದಾಖಲೆಗಳ ವಿಶ್ವಾಸಾರ್ಹತೆ ವೃದ್ಧಿ, ಹಣಕಾಸು ಕ್ಷೇತ್ರದ ಪರಿಣಾಮಕಾರಿ ಮೇಲುಸ್ತುವಾರಿ, ಭಾರತದ ಗಡಿಯ ಸೂಕ್ತ ವೆುೀಲ್ವಿಚಾರಣೆ ಇತ್ಯಾದಿ ಸಲಹೆಗಳನ್ನು ವರದಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್ (ಪಿಟಿಐ):</strong> ಭಯೋತ್ಪಾದಕ ದಾಳಿ ಭೀತಿಯಲ್ಲಿ ಬದುಕುತ್ತಿರುವ ಭಾರತವು ಹಣ ವರ್ಗಾವಣೆ ದಂಧೆ ಮತ್ತು ಭಯೋತ್ಪಾದಕರಿಗೆ ಹಣ ಒದಗಿಸುವ ಕಾರ್ಯಜಾಲದ ಆತಂಕ ಎದುರಿಸುತ್ತಿದೆ ಎಂದು ಅಂತರ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಸಿದೆ.<br /> <br /> ಆದರೂ, ಪ್ರಬಲವಾಗುತ್ತಿರುವ ಆರ್ಥಿಕತೆ ಮತ್ತು ಜನಸಂಖ್ಯೆಯ ಮೂಲಕ ಏಷ್ಯಾದಲ್ಲಿನ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳ ನಾಯಕನಾಗಿರುವ ಭಾರತ ಈ ಕೃತ್ಯಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು ಶ್ಲಾಘನೀಯ ಎಂದು ಐಎಂಎಫ್ ತನ್ನ ವರದಿಯಲ್ಲಿ ಪ್ರಶಂಸಿಸಿದೆ. 2010ರ ಜುಲೈನಲ್ಲಿ ಸಿದ್ಧಪಡಿಸಿರುವ ಈ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.<br /> <br /> ದೇಶದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಅಕ್ರಮ ಚಟುವಟಿಕೆಯು ಹಣ ವರ್ಗಾವಣೆ ದಂಧೆಗೆ ಕಾರಣವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮಾದಕವಸ್ತು ಕಳ್ಳಸಾಗಣೆ, ವಂಚನೆ, ಖೋಟಾನೋಟು ತಯಾರಿಕೆ, ಗಡಿಯಾಚೆಗಿನ ಸಂಘಟಿತ ಅಪರಾಧ, ಮಾನವ ಕಳ್ಳಸಾಗಣೆ, ಭ್ರಷ್ಟಾಚಾರ ಇದರ ಹಿಂದಿವೆ ಎಂದು ವರದಿ ವಿಶ್ಲೇಷಿಸಿದೆ.<br /> <br /> ದೇಶದಲ್ಲಿ ಕಾರ್ಯೋನ್ಮುಖವಾಗಿರುವ ಭಯೋತ್ಪಾದಕ ಸಂಘಟನೆಗಳ ಸಂಖ್ಯೆಯ ಬಗ್ಗೆ ಪ್ರಕಟಿತ ಅಂಕಿಅಂಶಗಳಿಲ್ಲ. ಎಂದು ಹೇಳಿದೆ. ಈ ಅಕ್ರಮಗಳ ನಿಯಂತ್ರಣಕ್ಕೆ ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸುವುದು, ಹಣ ವರ್ಗಾವಣೆ ತಡೆಗಾಗಿ ಸ್ವದೇಶಿ ಚೌಕಟ್ಟು ರೂಪಿಸುವುದು, ಮುಟ್ಟುಗೋಲು, ಗುರುತು ದಾಖಲೆಗಳ ವಿಶ್ವಾಸಾರ್ಹತೆ ವೃದ್ಧಿ, ಹಣಕಾಸು ಕ್ಷೇತ್ರದ ಪರಿಣಾಮಕಾರಿ ಮೇಲುಸ್ತುವಾರಿ, ಭಾರತದ ಗಡಿಯ ಸೂಕ್ತ ವೆುೀಲ್ವಿಚಾರಣೆ ಇತ್ಯಾದಿ ಸಲಹೆಗಳನ್ನು ವರದಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>