<p>ನವದೆಹಲಿ (ಪಿಟಿಐ): ಆಟಗಾರರಲ್ಲಿ ಉತ್ಸಾಹ ತುಂಬುವ ಹಾಗೂ ನಾಯಕತ್ವದ ಕೌಶಲಗಳನ್ನು ಹೊಂದಿರುವ ನಾಯಕ ಮಹೇಂದ್ರ ಸಿಂಗ್ ದೋನಿ ಕ್ರಿಕೆಟ್ನಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ್ ಎಂದು ಆಲ್ರೌಂಡರ್ ಪ್ರವೀಣ್ ಕುಮಾರ್ ಬಣ್ಣಿಸಿದ್ದಾರೆ.<br /> <br /> ‘ಒತ್ತಡದ ಸಂದರ್ಭವನ್ನು ತುಂಬಾ ಅಚ್ಚುಕಟ್ಟುತನದಿಂದ ನಿಭಾಯಿಸುವ ಜಾಣ್ಮೆ ದೋನಿ ಅವರಲ್ಲಿದೆ. ಒಬಾಮ ಕಪ್ಪು ವರ್ಣದ ಮೊದಲ ಅಧ್ಯಕ್ಷರಾದ ಅವರ ಸಾಧನೆ ಹೇಗೆ ಸ್ಪೂರ್ತಿ ದಾಯಕವೋ ಅದೇ ರೀತಿ ಕ್ರಿಕೆಟ್ ನಲ್ಲಿಯೂ ದೋನಿ ಆ ಮಹತ್ವದ ಸಾಧನೆಯನ್ನು ಮಾಡುತ್ತಿದ್ದಾರೆ. ತಂಡವನ್ನು ಸಮತೋಲನದಲ್ಲಿ ತೂಗಿಸಿಕೊಂಡು ಹೋಗುವ ಚಾಣಕ್ಷತನ ಅವರಲ್ಲಿದೆ’ ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ.<br /> <br /> ಈ ಸಲದ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತ ಗೆಲ್ಲುವುದೇ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸದ್ಯದ ಭಾರತ ತಂಡ ಅತ್ಯುತ್ತಮವಾಗಿದೆ. ಟೂರ್ನಿ ಗೆಲ್ಲುವ ಎಲ್ಲಾ ಅವಕಾಶಗಳು ತಂಡಕ್ಕಿದೆ. ಆ ಸಾಮರ್ಥ್ಯವು ಭಾರತ ತಂಡ ಹೊಂದಿದೆ. ಪ್ರಶಸ್ತಿ ಗೆಲ್ಲಬೇಕು ಎನ್ನುವ ಮಹತ್ವದ ಆಸೆಯಿಂದ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ’ ಎಂದು ಉತ್ತರಿಸಿದರು.<br /> <br /> ಭಾರತ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರುವುದು ಅವಶ್ಯಕತೆಯಿದೆ. ಅಂದಾಗ ಮಾತ್ರ ಟ್ರೋಫಿ ಗೆಲ್ಲುವುದು ಸುಲಭವಾಗುತ್ತದೆ. ಉಪ ಖಂಡಗಳಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಪಿಚ್ಗಳು ಆತಿಥೇಯ ತಂಡಗಳಿಗೆ ಕೊಂಚ ಮಟ್ಟಿಗೆ ನೆರವು ನೀಡಬಹುದು. ಜಹೀರ್ ಖಾನ್ ಹಾಗೂ ಆಶೀಶ್ ನೆಹ್ರಾ ಅವರು ತಂಡದ ಬೌಲಿಂಗ್ ಬಲ ಹೆಚ್ಚಿಸಲಿದ್ದಾರೆ. ಒತ್ತಡದ ಸನ್ನಿವೇಶಗಳಲ್ಲಿ ಈ ಇಬ್ಬರೂ ಆಟಗಾರರು ನನ್ನ ನೆರವಿಗೆ ದಾವಿಸುತ್ತಾರೆ. ಅಗತ್ಯ ಸಲಹೆಯನ್ನೂ ನೀಡುತ್ತಾರೆ ಎಂದು ಪ್ರವೀಣ್ ಹೇಳಿದರು.<br /> <br /> ಜಹೀರ್ ಹಾಗೂ ನೆಹ್ರಾ ಅವರು ತಂಡವನ್ನು ಒತ್ತಡದಿಂದ ಪಾರು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಟೂರ್ನಿಯಲ್ಲಿ ನಾನು ಕೂಡ ನನ್ನ ಸಾಮರ್ಥ್ಯವನ್ನು ಮೀರಿ ಆಡಲು ಯತ್ನಿಸುತ್ತೇನೆ. ಮೊದಲ ವಿಶ್ವಕಪ್ ಟೂರ್ನಿ ಆಡುತ್ತಿರುವ ನನಗೆ ನಿಜಕ್ಕೂ ಸಂತಸವಾಗಿದೆ. ನಿರೀಕ್ಷೆಯಂತೆ ಉತ್ತಮ ಆಟವಾಡಿ ತಂಡಕ್ಕೆ ಯಶಸ್ಸು ದೊರಕಿಸಿ ಕೊಡುವಲ್ಲಿ ಯತ್ನಿಸುತ್ತೇನೆ ಎಂದು ಅವರು ನುಡಿದರು.<br /> <br /> ಬ್ಯಾಟಿಂಗ್ ಮತ್ತು ಟಾಸ್ ಮುಖ್ಯ: ಭಾರತ ಈ ಸಲದ ವಿಶ್ವಕಪ್ ಟೂರ್ನಿ ಯಲ್ಲಿ ಯಶಸ್ಸು ಕಾಣಲು ಬ್ಯಾಟಿಂಗ್ ವಿಭಾಗದಲ್ಲಿ ಮಿಂಚುವುದು ಹಾಗೂ ಟಾಸ್ ಗೆಲ್ಲುವುದು ಅತ್ಯಂತ ಮುಖ್ಯ ವೆನಿಸುತ್ತದೆ ಎಂದು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.<br /> <br /> ಮೊದಲು ಟಾಸ್ ಗೆಲ್ಲಬೇಕು; ಅದರಲ್ಲೂ ಆತಿಥೇಯ ನಮ್ಮ ಪಿಚ್ಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಬೇಕು. ಮೊದಲು ಬ್ಯಾಟ್ ಮಾಡಿದರೆ ಎದುರಾಳಿ ತಂಡಕ್ಕೆ 300 ರನ್ಗಳವರೆಗೆ ಸವಾಲು ಒಡ್ಡಬೇಕು. ಬೌಲರ್ಗಳು ತಮ್ಮ ವಿಭಾಗದಲ್ಲಿ ಶ್ರಮಿಸಬೇಕು ಎಂದು ಅವರು ಹೇಳಿದ್ದಾರೆ.<br /> <br /> ಈ ಸಲದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರ ಲಿದೆ ಎನ್ನುವ ವಿಶ್ವಾಸ ನನ್ನದು. ಭಾರತ ಈ ಸಲ ವಿಶ್ವಕಪ್ ಗೆಲ್ಲುವು ದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ನುಡಿದರು. <br /> <br /> ವಿಕೇಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ನಾಯಕ ಮಹೇಂದ್ರ ಸಿಂಗ್ ದೋನಿ ಅತ್ಯಂತ ಸಮರ್ಥರಾಗಿದ್ದಾರೆ. ಅವರೊಬ್ಬ ಆಲ್ರೌಂಡರ್ ಎಂದು ಮೆಚ್ಚುಗೆ ಸೂಚಿಸಿದರು.<br /> <br /> ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ತಂಡಕ್ಕೆ ಬಲಿಷ್ಠ ನಾಯಕನ ಅಗತ್ಯವಿದೆ. ಆ ಕೆಲಸವನ್ನು ದೋನಿ ಮಾಡುತ್ತಿದ್ದಾರೆ ಎಂದು ನುಡಿದರು.<br /> <br /> ಭಾರತ ಈ ಸಲ ವಿಶ್ವಕಪ್ ಗೆಲ್ಲಬೇಕು ಎನ್ನುವುದು ನನ್ನ ಅಪೇಕ್ಷೆಯು ಹೌದು. ಅದಕ್ಕೆ ಕೆಲ ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಆಟಗಾರರಲ್ಲಿ ಉತ್ಸಾಹ ತುಂಬುವ ಹಾಗೂ ನಾಯಕತ್ವದ ಕೌಶಲಗಳನ್ನು ಹೊಂದಿರುವ ನಾಯಕ ಮಹೇಂದ್ರ ಸಿಂಗ್ ದೋನಿ ಕ್ರಿಕೆಟ್ನಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ್ ಎಂದು ಆಲ್ರೌಂಡರ್ ಪ್ರವೀಣ್ ಕುಮಾರ್ ಬಣ್ಣಿಸಿದ್ದಾರೆ.<br /> <br /> ‘ಒತ್ತಡದ ಸಂದರ್ಭವನ್ನು ತುಂಬಾ ಅಚ್ಚುಕಟ್ಟುತನದಿಂದ ನಿಭಾಯಿಸುವ ಜಾಣ್ಮೆ ದೋನಿ ಅವರಲ್ಲಿದೆ. ಒಬಾಮ ಕಪ್ಪು ವರ್ಣದ ಮೊದಲ ಅಧ್ಯಕ್ಷರಾದ ಅವರ ಸಾಧನೆ ಹೇಗೆ ಸ್ಪೂರ್ತಿ ದಾಯಕವೋ ಅದೇ ರೀತಿ ಕ್ರಿಕೆಟ್ ನಲ್ಲಿಯೂ ದೋನಿ ಆ ಮಹತ್ವದ ಸಾಧನೆಯನ್ನು ಮಾಡುತ್ತಿದ್ದಾರೆ. ತಂಡವನ್ನು ಸಮತೋಲನದಲ್ಲಿ ತೂಗಿಸಿಕೊಂಡು ಹೋಗುವ ಚಾಣಕ್ಷತನ ಅವರಲ್ಲಿದೆ’ ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ.<br /> <br /> ಈ ಸಲದ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತ ಗೆಲ್ಲುವುದೇ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸದ್ಯದ ಭಾರತ ತಂಡ ಅತ್ಯುತ್ತಮವಾಗಿದೆ. ಟೂರ್ನಿ ಗೆಲ್ಲುವ ಎಲ್ಲಾ ಅವಕಾಶಗಳು ತಂಡಕ್ಕಿದೆ. ಆ ಸಾಮರ್ಥ್ಯವು ಭಾರತ ತಂಡ ಹೊಂದಿದೆ. ಪ್ರಶಸ್ತಿ ಗೆಲ್ಲಬೇಕು ಎನ್ನುವ ಮಹತ್ವದ ಆಸೆಯಿಂದ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ’ ಎಂದು ಉತ್ತರಿಸಿದರು.<br /> <br /> ಭಾರತ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರುವುದು ಅವಶ್ಯಕತೆಯಿದೆ. ಅಂದಾಗ ಮಾತ್ರ ಟ್ರೋಫಿ ಗೆಲ್ಲುವುದು ಸುಲಭವಾಗುತ್ತದೆ. ಉಪ ಖಂಡಗಳಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಪಿಚ್ಗಳು ಆತಿಥೇಯ ತಂಡಗಳಿಗೆ ಕೊಂಚ ಮಟ್ಟಿಗೆ ನೆರವು ನೀಡಬಹುದು. ಜಹೀರ್ ಖಾನ್ ಹಾಗೂ ಆಶೀಶ್ ನೆಹ್ರಾ ಅವರು ತಂಡದ ಬೌಲಿಂಗ್ ಬಲ ಹೆಚ್ಚಿಸಲಿದ್ದಾರೆ. ಒತ್ತಡದ ಸನ್ನಿವೇಶಗಳಲ್ಲಿ ಈ ಇಬ್ಬರೂ ಆಟಗಾರರು ನನ್ನ ನೆರವಿಗೆ ದಾವಿಸುತ್ತಾರೆ. ಅಗತ್ಯ ಸಲಹೆಯನ್ನೂ ನೀಡುತ್ತಾರೆ ಎಂದು ಪ್ರವೀಣ್ ಹೇಳಿದರು.<br /> <br /> ಜಹೀರ್ ಹಾಗೂ ನೆಹ್ರಾ ಅವರು ತಂಡವನ್ನು ಒತ್ತಡದಿಂದ ಪಾರು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಟೂರ್ನಿಯಲ್ಲಿ ನಾನು ಕೂಡ ನನ್ನ ಸಾಮರ್ಥ್ಯವನ್ನು ಮೀರಿ ಆಡಲು ಯತ್ನಿಸುತ್ತೇನೆ. ಮೊದಲ ವಿಶ್ವಕಪ್ ಟೂರ್ನಿ ಆಡುತ್ತಿರುವ ನನಗೆ ನಿಜಕ್ಕೂ ಸಂತಸವಾಗಿದೆ. ನಿರೀಕ್ಷೆಯಂತೆ ಉತ್ತಮ ಆಟವಾಡಿ ತಂಡಕ್ಕೆ ಯಶಸ್ಸು ದೊರಕಿಸಿ ಕೊಡುವಲ್ಲಿ ಯತ್ನಿಸುತ್ತೇನೆ ಎಂದು ಅವರು ನುಡಿದರು.<br /> <br /> ಬ್ಯಾಟಿಂಗ್ ಮತ್ತು ಟಾಸ್ ಮುಖ್ಯ: ಭಾರತ ಈ ಸಲದ ವಿಶ್ವಕಪ್ ಟೂರ್ನಿ ಯಲ್ಲಿ ಯಶಸ್ಸು ಕಾಣಲು ಬ್ಯಾಟಿಂಗ್ ವಿಭಾಗದಲ್ಲಿ ಮಿಂಚುವುದು ಹಾಗೂ ಟಾಸ್ ಗೆಲ್ಲುವುದು ಅತ್ಯಂತ ಮುಖ್ಯ ವೆನಿಸುತ್ತದೆ ಎಂದು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.<br /> <br /> ಮೊದಲು ಟಾಸ್ ಗೆಲ್ಲಬೇಕು; ಅದರಲ್ಲೂ ಆತಿಥೇಯ ನಮ್ಮ ಪಿಚ್ಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಬೇಕು. ಮೊದಲು ಬ್ಯಾಟ್ ಮಾಡಿದರೆ ಎದುರಾಳಿ ತಂಡಕ್ಕೆ 300 ರನ್ಗಳವರೆಗೆ ಸವಾಲು ಒಡ್ಡಬೇಕು. ಬೌಲರ್ಗಳು ತಮ್ಮ ವಿಭಾಗದಲ್ಲಿ ಶ್ರಮಿಸಬೇಕು ಎಂದು ಅವರು ಹೇಳಿದ್ದಾರೆ.<br /> <br /> ಈ ಸಲದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರ ಲಿದೆ ಎನ್ನುವ ವಿಶ್ವಾಸ ನನ್ನದು. ಭಾರತ ಈ ಸಲ ವಿಶ್ವಕಪ್ ಗೆಲ್ಲುವು ದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ನುಡಿದರು. <br /> <br /> ವಿಕೇಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ನಾಯಕ ಮಹೇಂದ್ರ ಸಿಂಗ್ ದೋನಿ ಅತ್ಯಂತ ಸಮರ್ಥರಾಗಿದ್ದಾರೆ. ಅವರೊಬ್ಬ ಆಲ್ರೌಂಡರ್ ಎಂದು ಮೆಚ್ಚುಗೆ ಸೂಚಿಸಿದರು.<br /> <br /> ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ತಂಡಕ್ಕೆ ಬಲಿಷ್ಠ ನಾಯಕನ ಅಗತ್ಯವಿದೆ. ಆ ಕೆಲಸವನ್ನು ದೋನಿ ಮಾಡುತ್ತಿದ್ದಾರೆ ಎಂದು ನುಡಿದರು.<br /> <br /> ಭಾರತ ಈ ಸಲ ವಿಶ್ವಕಪ್ ಗೆಲ್ಲಬೇಕು ಎನ್ನುವುದು ನನ್ನ ಅಪೇಕ್ಷೆಯು ಹೌದು. ಅದಕ್ಕೆ ಕೆಲ ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>