<p>ದುಬೈ (ಪಿಟಿಐ): ಕಳೆದ 18 ವರ್ಷಗಳಿಂದ ವೇತನವೂ ಇಲ್ಲದೆ, ರಜೆಯೂ ಇಲ್ಲದೆ ದುಡಿಯುತ್ತಿದ್ದ ಭಾರತೀಯ ಕಾರ್ಮಿಕನಿಗೆ ಸ್ಥಳೀಯ ಪೊಲೀಸರ ಮಧ್ಯ ಪ್ರವೇಶದಿಂದಾಗಿ ತಾಯ್ನಾಡಿಗೆ ಮರಳುವ ಭಾಗ್ಯ ದೊರೆತಿದೆ.<br /> <br /> ಮೂಲತಃ ತಮಿಳುನಾಡಿನ ಪೆರಂಬಲೂರ್ ಜಿಲ್ಲೆಯ ಮಂಗಳಮೇಡು ತಾಲ್ಲೂಕಿನವರಾದ ಪಿ.ಪೆರಿಯಸ್ವಾಮಿ (45) 1994ರಲ್ಲಿ ಸೌದಿ ಅರೇಬಿಯಾದ ಹೇಲ್ ಪ್ರಾಂತ್ಯಕ್ಕೆ ಆಗಮಿಸಿ ಕುರಿಕಾಯುವ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. <br /> <br /> 18 ವರ್ಷಗಳ ಅವಧಿಯಲ್ಲಿ ಪೆರಿಯಸ್ವಾಮಿ ತಾಯ್ನಾಡಿಗೆ ವಾಪಸ್ಸಾಗುವ ತನ್ನ ಹಕ್ಕಿನ ಬಗ್ಗೆ ಎಂದೂ ಹೋರಾಟ ನಡೆಸಿರಲೇ ಇಲ್ಲ. ಬದಲಾಗಿ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರ ಕಷ್ಟ ಅರಿತ ಸೌದಿಯ ಸಹೃದಯಿಯೊಬ್ಬರು ಸ್ಥಳೀಯ ಪೊಲೀಸರು, ಗವರ್ನರ್ಗೆ ದೂರು ಸಲ್ಲಿಸಿದ್ದರು. <br /> <br /> ನಂತರದಲ್ಲಿ ಮಾಲೀಕನನ್ನು ಬಂಧಿಸಲಾಯಿತು. ಪೆರಿಯಸ್ವಾಮಿಗೆ ಬರಬೇಕಿದ್ದ ಬಾಕಿ ವೇತನ ಹಾಗೂ ವಿಮಾನ ಟಿಕೆಟ್ ಕೊಡಿಸುವ ವ್ಯವಸ್ಥೆ ಮಾಡುವಂತೆ ಗವರ್ನರ್ ಕಚೇರಿಯು ಪೆರಿಯಸ್ವಾಮಿ ಮಾಲೀಕನಿಗೆ ಸೂಚಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದುಬೈ (ಪಿಟಿಐ): ಕಳೆದ 18 ವರ್ಷಗಳಿಂದ ವೇತನವೂ ಇಲ್ಲದೆ, ರಜೆಯೂ ಇಲ್ಲದೆ ದುಡಿಯುತ್ತಿದ್ದ ಭಾರತೀಯ ಕಾರ್ಮಿಕನಿಗೆ ಸ್ಥಳೀಯ ಪೊಲೀಸರ ಮಧ್ಯ ಪ್ರವೇಶದಿಂದಾಗಿ ತಾಯ್ನಾಡಿಗೆ ಮರಳುವ ಭಾಗ್ಯ ದೊರೆತಿದೆ.<br /> <br /> ಮೂಲತಃ ತಮಿಳುನಾಡಿನ ಪೆರಂಬಲೂರ್ ಜಿಲ್ಲೆಯ ಮಂಗಳಮೇಡು ತಾಲ್ಲೂಕಿನವರಾದ ಪಿ.ಪೆರಿಯಸ್ವಾಮಿ (45) 1994ರಲ್ಲಿ ಸೌದಿ ಅರೇಬಿಯಾದ ಹೇಲ್ ಪ್ರಾಂತ್ಯಕ್ಕೆ ಆಗಮಿಸಿ ಕುರಿಕಾಯುವ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. <br /> <br /> 18 ವರ್ಷಗಳ ಅವಧಿಯಲ್ಲಿ ಪೆರಿಯಸ್ವಾಮಿ ತಾಯ್ನಾಡಿಗೆ ವಾಪಸ್ಸಾಗುವ ತನ್ನ ಹಕ್ಕಿನ ಬಗ್ಗೆ ಎಂದೂ ಹೋರಾಟ ನಡೆಸಿರಲೇ ಇಲ್ಲ. ಬದಲಾಗಿ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರ ಕಷ್ಟ ಅರಿತ ಸೌದಿಯ ಸಹೃದಯಿಯೊಬ್ಬರು ಸ್ಥಳೀಯ ಪೊಲೀಸರು, ಗವರ್ನರ್ಗೆ ದೂರು ಸಲ್ಲಿಸಿದ್ದರು. <br /> <br /> ನಂತರದಲ್ಲಿ ಮಾಲೀಕನನ್ನು ಬಂಧಿಸಲಾಯಿತು. ಪೆರಿಯಸ್ವಾಮಿಗೆ ಬರಬೇಕಿದ್ದ ಬಾಕಿ ವೇತನ ಹಾಗೂ ವಿಮಾನ ಟಿಕೆಟ್ ಕೊಡಿಸುವ ವ್ಯವಸ್ಥೆ ಮಾಡುವಂತೆ ಗವರ್ನರ್ ಕಚೇರಿಯು ಪೆರಿಯಸ್ವಾಮಿ ಮಾಲೀಕನಿಗೆ ಸೂಚಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>