<p><strong>ವಾಷಿಂಗ್ಟನ್ (ಪಿಟಿಐ):</strong> ಇಲ್ಲಿನ ಕೆನಡಿ ಸೆಂಟರ್ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮೂರು ವಾರಗಳ ಭಾರತ ಉತ್ಸವ ‘ಮ್ಯಾಕ್ಸಿಮಮ್ ಇಂಡಿಯಾ’ಗೆ ಚಾಲನೆ ನೀಡಲಾಯಿತು.ಅಮೆರಿಕದಲ್ಲಿರುವ ಗಣ್ಯ ಭಾರತೀಯರಲ್ಲದೆ, ಅಮೆರಿಕದ ಹಿರಿಯ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾರ್ಚ್ 20ರವರೆಗೆ ನಡೆಯುವ ಈ ಉತ್ಸವದಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಕಲೆಗಳ ಪ್ರದರ್ಶನಗೊಳ್ಳಲಿವೆ. <br /> <br /> ಭಾರತ ಮತ್ತು ಅಮೆರಿಕ ನಡುವಿನ ಸಮಾನ ವಿಚಾರಧಾರೆಗಳ ಕುರಿತು ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿದ ಲೇಖಕ ಸುಕೇತು ಮೆಹ್ತಾ, ತೋರೋ ಚಿಂತನೆಯಿಂದ ಮಹಾತ್ಮಾ ಗಾಂಧಿ ಹಾಗೂ ಮಾರ್ಟಿನ್ ಲೂಥರ್ ಕಿಂಗ್ವರೆಗಿನ ಇತಿಹಾಸದ ಪ್ರಮುಖ ಕಾಲಘಟ್ಟಗಳಲ್ಲಿ ಈ ವಿಚಾರಧಾರೆಗಳು ಪರಸ್ಪರರ ಮೇಲೆ ಪ್ರಭಾವ ಬೀರಿತ್ತು ಎಂದರು. ಅಮೆರಿಕದಲ್ಲಿನ ಭಾರತದ ರಾಯಭಾರಿ ಮೀರಾ ಶಂಕರ್ ಮಾತನಾಡಿದರು.<br /> <br /> ಉತ್ಸವದ ಆರಂಭದ ಭಾಗವಾಗಿ ಭಾರತೀಯ ನರ್ತಕಿಯರಾದ ಮಾಧವಿ ಮುದ್ಗಿಲ್, ಅಲರ್ಮೇಲ್ ವಲ್ಲಿ ಅವರ ನೃತ್ಯ ಕಾರ್ಯಕ್ರಮ ನಡೆಯಿತಲ್ಲದೆ ತಬಲಾ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರ ತಬಲಾ ಕಾರ್ಯಕ್ರಮವೂ ಜರುಗಿತು. ಇದೇ ವೇಳೆ ತಾಜ್ ಹೋಟೆಲ್ನ ಪ್ರಶಸ್ತಿ ವಿಜೇತ 12 ಮಂದಿ ಬಾಣಸಿಗರು ತಯಾರಿಸಿದ ಭಾರತದ ವಿವಿಧ ಪ್ರದೇಶಗಳ ವಿಶೇಷ ಅಡುಗೆಯ ರುಚಿಯನ್ನು ಸಮಾರಂಭಕ್ಕೆ ಆಗಮಿಸಿದ ಗಣ್ಯರು ಸವಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್ (ಪಿಟಿಐ):</strong> ಇಲ್ಲಿನ ಕೆನಡಿ ಸೆಂಟರ್ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮೂರು ವಾರಗಳ ಭಾರತ ಉತ್ಸವ ‘ಮ್ಯಾಕ್ಸಿಮಮ್ ಇಂಡಿಯಾ’ಗೆ ಚಾಲನೆ ನೀಡಲಾಯಿತು.ಅಮೆರಿಕದಲ್ಲಿರುವ ಗಣ್ಯ ಭಾರತೀಯರಲ್ಲದೆ, ಅಮೆರಿಕದ ಹಿರಿಯ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾರ್ಚ್ 20ರವರೆಗೆ ನಡೆಯುವ ಈ ಉತ್ಸವದಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಕಲೆಗಳ ಪ್ರದರ್ಶನಗೊಳ್ಳಲಿವೆ. <br /> <br /> ಭಾರತ ಮತ್ತು ಅಮೆರಿಕ ನಡುವಿನ ಸಮಾನ ವಿಚಾರಧಾರೆಗಳ ಕುರಿತು ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿದ ಲೇಖಕ ಸುಕೇತು ಮೆಹ್ತಾ, ತೋರೋ ಚಿಂತನೆಯಿಂದ ಮಹಾತ್ಮಾ ಗಾಂಧಿ ಹಾಗೂ ಮಾರ್ಟಿನ್ ಲೂಥರ್ ಕಿಂಗ್ವರೆಗಿನ ಇತಿಹಾಸದ ಪ್ರಮುಖ ಕಾಲಘಟ್ಟಗಳಲ್ಲಿ ಈ ವಿಚಾರಧಾರೆಗಳು ಪರಸ್ಪರರ ಮೇಲೆ ಪ್ರಭಾವ ಬೀರಿತ್ತು ಎಂದರು. ಅಮೆರಿಕದಲ್ಲಿನ ಭಾರತದ ರಾಯಭಾರಿ ಮೀರಾ ಶಂಕರ್ ಮಾತನಾಡಿದರು.<br /> <br /> ಉತ್ಸವದ ಆರಂಭದ ಭಾಗವಾಗಿ ಭಾರತೀಯ ನರ್ತಕಿಯರಾದ ಮಾಧವಿ ಮುದ್ಗಿಲ್, ಅಲರ್ಮೇಲ್ ವಲ್ಲಿ ಅವರ ನೃತ್ಯ ಕಾರ್ಯಕ್ರಮ ನಡೆಯಿತಲ್ಲದೆ ತಬಲಾ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರ ತಬಲಾ ಕಾರ್ಯಕ್ರಮವೂ ಜರುಗಿತು. ಇದೇ ವೇಳೆ ತಾಜ್ ಹೋಟೆಲ್ನ ಪ್ರಶಸ್ತಿ ವಿಜೇತ 12 ಮಂದಿ ಬಾಣಸಿಗರು ತಯಾರಿಸಿದ ಭಾರತದ ವಿವಿಧ ಪ್ರದೇಶಗಳ ವಿಶೇಷ ಅಡುಗೆಯ ರುಚಿಯನ್ನು ಸಮಾರಂಭಕ್ಕೆ ಆಗಮಿಸಿದ ಗಣ್ಯರು ಸವಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>