<p>ವಿಜಯಪುರ: ಹಿಂದೂ- ಮುಸ್ಲಿಂರ ಭಾವೈಕ್ಯದ ಸಂಖೇತ ಎನ್ನುವಂತೆ ಪ್ರತಿವರ್ಷ ಆಚರಿಸುವ ಇಲ್ಲಿನ ರೇಣುಕಾ ಎಲ್ಲಮ್ಮದೇವಿಯ ಹೂವಿನ ಕರಗವು ಶುಕ್ರವಾರ ನಡೆಯಲಿದೆ. <br /> <br /> ಕಳೆದ 73 ವರ್ಷಗಳಿಂದ ಪಟ್ಟಣದಲ್ಲಿ ಹೂವಿನ ಹರಗ ಮಹೋತ್ಸವವು ನಡೆಯುತ್ತಿದ್ದು, ಕರಗದ ಪೂಜಾರಿ ಶಿಡ್ಲಘಟ್ಟ ರಾಘವಪ್ಪ 16 ವರ್ಷ, ಪುರಸಭಾ ಮಾಜಿ ಸದಸ್ಯ ಜೆ. ವಿ. ನಾರಾಯಣಪ್ಪ 38 ವರ್ಷ, ಎಂ. ಕೇಶವಪ್ಪ 2 ವರ್ಷ, ಜೆ.ವಿ. ರಾಮಾಂಜಿನಪ್ಪ ಕಳೆದ 17 ವರ್ಷಗಳಿಂದ ಕರಗವನ್ನು ಹೊರುತ್ತಿದ್ದಾರೆ.<br /> <br /> ಕೋಲಾರ ರಸ್ತೆಯ ಕರಗದ ಕುಂಟೆಯಿಂದ ಶಕ್ತಿದೇವತೆಯ ಆವಾಹನೆ ಮಾಡಿಕೊಂಡು ಶಕ್ತಿ ಪೀಠದಲ್ಲಿ ಕರಗವನ್ನು ಪ್ರತಿಷ್ಠಾಪಿಸುತ್ತಾರೆ. ನಂತರ ಸಂತೆ ಮೈದಾನದ ಬಳಿ ಏಳು ಸುತ್ತಿನ ಕೋಟೆ ಮಾದರಿಯನ್ನು ನಿರ್ಮಿಸಿ ಶಕ್ತಿ ಸ್ಥಳವನ್ನಾಗಿಸುತ್ತಾರೆ.<br /> <br /> ವಹ್ನಿಕುಲ ಜನಾಂಗದವರೇ ಈ ಆಚರಣೆಯ ಪ್ರಮುಖ ಅಂಗ. ಎಲ್ಲಮ್ಮ ದೇವಾಯಲದಲ್ಲಿ ಪೂಜೆ ನಡೆದ ಬಳಿಕ, ಹೂವಿನ ಕರಗವು ಮಸ್ತಾನ್ಸಾಬ್ ದರ್ಗಾದಲ್ಲಿ ಪೂಜೆ ಸ್ವೀಕರಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ಹಿಂದಿರುಗುತ್ತದೆ.<br /> <br /> ಗ್ರಾಮ ದೇವತೆ ರೇಣುಕಾ ಎಲ್ಲಮ್ಮ ದೇವಿ, ದ್ರೌಪದಿ, ಎಲ್ಲಮ್ಮ, ದುರ್ಗಮ್ಮ, ಮುತ್ಯಾಲಮ್ಮ ಮಹೇಶ್ವರಿ ಎಂಬ ಐದು ಅವತಾರವನ್ನು ಹೊಂದಿದ್ದು, ವಹ್ನಿಕುಲ ಕ್ಷತ್ರೀಯರು ದೇವಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ.<br /> <br /> ಪೌರಾಣಿಕ ಹಿನ್ನೆಲೆ: ಕರಗದ ಆಚರಿಸುವಗೆ ಹಲವು ಪುರಾಣ ಕತೆಗಳಿವೆ. ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ದ್ರೌಪದಿಯು ಪಾಂಡವರೊಡನೆ ಸ್ವರ್ಗದ ಹಾದಿಯಲ್ಲಿ ಸಾಗುತ್ತಿರುವಾಗ ಆಯಾಸದಿಂದ ಮೂರ್ಛೆ ಹೋಗುತ್ತಾಳೆ.<br /> <br /> ಪಾಂಡವರು ಇದನ್ನು ಗಮನಿಸದೆ ಮಂದೆ ಸಾಗುವ ಸಂದರ್ಭದಲ್ಲಿ ತಿಮಿರಾಸುರ ರಂಬ ರಾಕ್ಷಸ ದ್ರೌಪದಿಯನ್ನು ಕೆಣಕುತ್ತಾನೆ. ಆಗ ತಿಮಿರಾಸುರ ಮತ್ತು ದ್ರೌಪದಿಯ ನಡುವೆ ಯುದ್ಧ ನಡೆದು ದ್ರೌಪದಿ ತ್ರಿಶೂಲದಿಂದ ತಿಮಿರಾಸುರನ ದೇಹಕ್ಕೆ ತಿವಿದಾಗ ರಕ್ತದ ಒಂದೊಂದು ಹನಿಯಲ್ಲಿಯೂ ಒಬ್ಬೊಬ್ಬ ರಾಕ್ಷಸನ ಉದಯವಾಗುತ್ತದೆ. <br /> <br /> ಇದನ್ನು ಕಂಡ ದ್ರೌಪದಿ ಈ ರಾಕ್ಷಸ ಪಡೆಯನ್ನು ನಾಶಗೊಳಿಸುವ ಸಲುವಾಗಿ ತಲೆಯನ್ನು ಕೆದರಿ ಯಜಮಾನನ್ನು, ಹಣೆಯಿಂದ ಗಣಾಚಾರಿ, ಕಿವಿಗಳಿಂದ ಗೌಡರು, ಬಾಯಿಂದ ಗಂಟೆ ಪೂಜಾರಿ, ತೋಳುಗಳಿಂದ ವೀರಬಾಹು ಕುಮಾರರನ್ನು ಸೃಷ್ಟಿಸಿ ರಾಕ್ಷಸ ಪಡೆಯನ್ನು ನಾಶಗೊಳಿಸಿ ಸ್ವರ್ಗದ ಹಾದಿಯಲ್ಲಿ ಮುನ್ನಡೆಯುತ್ತಾಳೆ. <br /> <br /> ದ್ರೌಪದಿಯ ಈ ಶಕ್ತಿ ರೂಪ ಕಂಡ ವಹ್ನಿಕುಲ ಕ್ಷತ್ರೀಯರು ವಿಷ್ಣುವಿನ ನಾಮಸ್ಮರಣೆಯನ್ನು ಮಾಡುತ್ತಾ ಗೋವಿಂದ, ಗೋವಿಂದ ಎಂದು ಆಕೆಯನ್ನು ಹಿಂಬಾಲಿಸಿ ಭೂಲೋಕದಲ್ಲಿ ನೆಲೆಸಲು ಬೇಡಿಕೊಂಡರು. ಆಗ ದ್ರೌಪದಿಯು ಅವರ ಕರೆಗೆ ಓಗೊಟ್ಟು ಅವರನ್ನು ಧರ್ಮಪಾಲನೆ ಮಾಡುವಂತೆ ಹರಸಿ, ಕರಗದ 3 ದಿನಗಳು ಅವರೊಡನೆ ಬಂದು ನೆಲೆಸುವುದಾಗಿ ಆಶ್ವಾಸನೆ ನೀಡಿದಳು. ಅಂದಿನಿಂದ ವಹ್ನಿಕುಲ ಜನಾಂಗ ವಂಶಪಾರಂಪರ್ಯವಾಗಿ ದ್ರೌಪದಮ್ಮನ ಕರಗ ಮಹೋತ್ಸವದ ಆಚರಣೆಯನ್ನು ಮಾಡಿಕೊಂಡು ಬರುತ್ತಿದೆ ಎಂಬ ಪ್ರತೀತಿ ಇದೆ.<br /> <br /> ಭಾವೈಕ್ಯ: ಕರಗದ ಹಿಂದಿನ ದಿನ ನಡೆಯುವ ದೀಪಾರತಿಯನ್ನು ಮುಸ್ಲಿಂ ಮಹಿಳೆಯರು ಅಲಂಕರಿಸುವರು. ಹಲವು ವರ್ಷಗಳಿಂದ ದಿಲ್ಷಾದ್ ಮತ್ತು ಆಕೆಯ ಮಗ ಸಲಾಂ ಈ ಕಾರ್ಯ ಮಾಡುತ್ತಿದ್ದಾರೆ. ದೀಪಾರತಿ ಹೊತ್ತು ಅಗ್ನಿಕೊಂಡ ಪ್ರವೇಶಿಸುವ ಕೆಲವು ಹಿಂದು ಮಹಿಳೆಯರು ದಿಲ್ಷಾದ್ ಬಳಿ ದೀಪಾರತಿಗಳನ್ನು ಸಿಂಗರಿಸಿಕೊಳ್ಳುತ್ತಾರೆ. ಹೂವಿನ ಕರಗ ಮಹೋತ್ಸವದಲ್ಲಿ ಎಲ್ಲಾ ಧರ್ಮಿಯರು ಪಾಲ್ಗೊಳ್ಳುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಹಿಂದೂ- ಮುಸ್ಲಿಂರ ಭಾವೈಕ್ಯದ ಸಂಖೇತ ಎನ್ನುವಂತೆ ಪ್ರತಿವರ್ಷ ಆಚರಿಸುವ ಇಲ್ಲಿನ ರೇಣುಕಾ ಎಲ್ಲಮ್ಮದೇವಿಯ ಹೂವಿನ ಕರಗವು ಶುಕ್ರವಾರ ನಡೆಯಲಿದೆ. <br /> <br /> ಕಳೆದ 73 ವರ್ಷಗಳಿಂದ ಪಟ್ಟಣದಲ್ಲಿ ಹೂವಿನ ಹರಗ ಮಹೋತ್ಸವವು ನಡೆಯುತ್ತಿದ್ದು, ಕರಗದ ಪೂಜಾರಿ ಶಿಡ್ಲಘಟ್ಟ ರಾಘವಪ್ಪ 16 ವರ್ಷ, ಪುರಸಭಾ ಮಾಜಿ ಸದಸ್ಯ ಜೆ. ವಿ. ನಾರಾಯಣಪ್ಪ 38 ವರ್ಷ, ಎಂ. ಕೇಶವಪ್ಪ 2 ವರ್ಷ, ಜೆ.ವಿ. ರಾಮಾಂಜಿನಪ್ಪ ಕಳೆದ 17 ವರ್ಷಗಳಿಂದ ಕರಗವನ್ನು ಹೊರುತ್ತಿದ್ದಾರೆ.<br /> <br /> ಕೋಲಾರ ರಸ್ತೆಯ ಕರಗದ ಕುಂಟೆಯಿಂದ ಶಕ್ತಿದೇವತೆಯ ಆವಾಹನೆ ಮಾಡಿಕೊಂಡು ಶಕ್ತಿ ಪೀಠದಲ್ಲಿ ಕರಗವನ್ನು ಪ್ರತಿಷ್ಠಾಪಿಸುತ್ತಾರೆ. ನಂತರ ಸಂತೆ ಮೈದಾನದ ಬಳಿ ಏಳು ಸುತ್ತಿನ ಕೋಟೆ ಮಾದರಿಯನ್ನು ನಿರ್ಮಿಸಿ ಶಕ್ತಿ ಸ್ಥಳವನ್ನಾಗಿಸುತ್ತಾರೆ.<br /> <br /> ವಹ್ನಿಕುಲ ಜನಾಂಗದವರೇ ಈ ಆಚರಣೆಯ ಪ್ರಮುಖ ಅಂಗ. ಎಲ್ಲಮ್ಮ ದೇವಾಯಲದಲ್ಲಿ ಪೂಜೆ ನಡೆದ ಬಳಿಕ, ಹೂವಿನ ಕರಗವು ಮಸ್ತಾನ್ಸಾಬ್ ದರ್ಗಾದಲ್ಲಿ ಪೂಜೆ ಸ್ವೀಕರಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ಹಿಂದಿರುಗುತ್ತದೆ.<br /> <br /> ಗ್ರಾಮ ದೇವತೆ ರೇಣುಕಾ ಎಲ್ಲಮ್ಮ ದೇವಿ, ದ್ರೌಪದಿ, ಎಲ್ಲಮ್ಮ, ದುರ್ಗಮ್ಮ, ಮುತ್ಯಾಲಮ್ಮ ಮಹೇಶ್ವರಿ ಎಂಬ ಐದು ಅವತಾರವನ್ನು ಹೊಂದಿದ್ದು, ವಹ್ನಿಕುಲ ಕ್ಷತ್ರೀಯರು ದೇವಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ.<br /> <br /> ಪೌರಾಣಿಕ ಹಿನ್ನೆಲೆ: ಕರಗದ ಆಚರಿಸುವಗೆ ಹಲವು ಪುರಾಣ ಕತೆಗಳಿವೆ. ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ದ್ರೌಪದಿಯು ಪಾಂಡವರೊಡನೆ ಸ್ವರ್ಗದ ಹಾದಿಯಲ್ಲಿ ಸಾಗುತ್ತಿರುವಾಗ ಆಯಾಸದಿಂದ ಮೂರ್ಛೆ ಹೋಗುತ್ತಾಳೆ.<br /> <br /> ಪಾಂಡವರು ಇದನ್ನು ಗಮನಿಸದೆ ಮಂದೆ ಸಾಗುವ ಸಂದರ್ಭದಲ್ಲಿ ತಿಮಿರಾಸುರ ರಂಬ ರಾಕ್ಷಸ ದ್ರೌಪದಿಯನ್ನು ಕೆಣಕುತ್ತಾನೆ. ಆಗ ತಿಮಿರಾಸುರ ಮತ್ತು ದ್ರೌಪದಿಯ ನಡುವೆ ಯುದ್ಧ ನಡೆದು ದ್ರೌಪದಿ ತ್ರಿಶೂಲದಿಂದ ತಿಮಿರಾಸುರನ ದೇಹಕ್ಕೆ ತಿವಿದಾಗ ರಕ್ತದ ಒಂದೊಂದು ಹನಿಯಲ್ಲಿಯೂ ಒಬ್ಬೊಬ್ಬ ರಾಕ್ಷಸನ ಉದಯವಾಗುತ್ತದೆ. <br /> <br /> ಇದನ್ನು ಕಂಡ ದ್ರೌಪದಿ ಈ ರಾಕ್ಷಸ ಪಡೆಯನ್ನು ನಾಶಗೊಳಿಸುವ ಸಲುವಾಗಿ ತಲೆಯನ್ನು ಕೆದರಿ ಯಜಮಾನನ್ನು, ಹಣೆಯಿಂದ ಗಣಾಚಾರಿ, ಕಿವಿಗಳಿಂದ ಗೌಡರು, ಬಾಯಿಂದ ಗಂಟೆ ಪೂಜಾರಿ, ತೋಳುಗಳಿಂದ ವೀರಬಾಹು ಕುಮಾರರನ್ನು ಸೃಷ್ಟಿಸಿ ರಾಕ್ಷಸ ಪಡೆಯನ್ನು ನಾಶಗೊಳಿಸಿ ಸ್ವರ್ಗದ ಹಾದಿಯಲ್ಲಿ ಮುನ್ನಡೆಯುತ್ತಾಳೆ. <br /> <br /> ದ್ರೌಪದಿಯ ಈ ಶಕ್ತಿ ರೂಪ ಕಂಡ ವಹ್ನಿಕುಲ ಕ್ಷತ್ರೀಯರು ವಿಷ್ಣುವಿನ ನಾಮಸ್ಮರಣೆಯನ್ನು ಮಾಡುತ್ತಾ ಗೋವಿಂದ, ಗೋವಿಂದ ಎಂದು ಆಕೆಯನ್ನು ಹಿಂಬಾಲಿಸಿ ಭೂಲೋಕದಲ್ಲಿ ನೆಲೆಸಲು ಬೇಡಿಕೊಂಡರು. ಆಗ ದ್ರೌಪದಿಯು ಅವರ ಕರೆಗೆ ಓಗೊಟ್ಟು ಅವರನ್ನು ಧರ್ಮಪಾಲನೆ ಮಾಡುವಂತೆ ಹರಸಿ, ಕರಗದ 3 ದಿನಗಳು ಅವರೊಡನೆ ಬಂದು ನೆಲೆಸುವುದಾಗಿ ಆಶ್ವಾಸನೆ ನೀಡಿದಳು. ಅಂದಿನಿಂದ ವಹ್ನಿಕುಲ ಜನಾಂಗ ವಂಶಪಾರಂಪರ್ಯವಾಗಿ ದ್ರೌಪದಮ್ಮನ ಕರಗ ಮಹೋತ್ಸವದ ಆಚರಣೆಯನ್ನು ಮಾಡಿಕೊಂಡು ಬರುತ್ತಿದೆ ಎಂಬ ಪ್ರತೀತಿ ಇದೆ.<br /> <br /> ಭಾವೈಕ್ಯ: ಕರಗದ ಹಿಂದಿನ ದಿನ ನಡೆಯುವ ದೀಪಾರತಿಯನ್ನು ಮುಸ್ಲಿಂ ಮಹಿಳೆಯರು ಅಲಂಕರಿಸುವರು. ಹಲವು ವರ್ಷಗಳಿಂದ ದಿಲ್ಷಾದ್ ಮತ್ತು ಆಕೆಯ ಮಗ ಸಲಾಂ ಈ ಕಾರ್ಯ ಮಾಡುತ್ತಿದ್ದಾರೆ. ದೀಪಾರತಿ ಹೊತ್ತು ಅಗ್ನಿಕೊಂಡ ಪ್ರವೇಶಿಸುವ ಕೆಲವು ಹಿಂದು ಮಹಿಳೆಯರು ದಿಲ್ಷಾದ್ ಬಳಿ ದೀಪಾರತಿಗಳನ್ನು ಸಿಂಗರಿಸಿಕೊಳ್ಳುತ್ತಾರೆ. ಹೂವಿನ ಕರಗ ಮಹೋತ್ಸವದಲ್ಲಿ ಎಲ್ಲಾ ಧರ್ಮಿಯರು ಪಾಲ್ಗೊಳ್ಳುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>