<p>ಮಂಡ್ಯ: ವಿವಿಧ ರಾಜ್ಯ, ಜಿಲ್ಲೆಗಳ ಯುವಜನರ ನಡುವಿನ ಮುಖಾಮುಖಿ ಮತ್ತು ಸಂಸ್ಕೃತಿ ವಿನಿಮಯಕ್ಕೆ ವೇದಿಕೆಯಾದ, ನಗರದಲ್ಲಿ ಆಯೋಜನೆಗೊಂಡಿದ್ದ 9 ದಿನಗಳ ರಾಷ್ಟ್ರೀಯ ಭಾವೈಕ್ಯ ಶಿಬಿರ ಭಾನುವಾರ ಸಮಾರೋಪಗೊಂಡಿತು.<br /> <br /> ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಮುಖರು, ಶಿಬಿರದಲ್ಲಿ ಪಡೆದ ಸದ್ಭಾವನಾ ಅನುಭವಗಳನ್ನು ತಮ್ಮ ಸಮಕಾಲೀನರ ಜೊತೆಗೆ ಹಂಚಿಕೊಳ್ಳುವ ಮೂಲಕ ಭಾವೈಕ್ಯವನ್ನು ಪಸರಿಸಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.<br /> <br /> ರಾಷ್ಟ್ರೀಯ ಸೇವಾ ಯೋಜನೆಯ ನಿವೃತ್ತ ಉಪ ಕಾರ್ಯಕ್ರಮ ಸಲಹೆಗಾರರಾದ ಡಾ. ಎಚ್.ಎಸ್.ಸುರೇಶ್ ಅವರು, ಧರ್ಮ ಎಂದಿಗೂ ಬೆಳಕಾಗಬೇಕೇ ವಿನಾ ಬೆಂಕಿ ಆಗಬಾರದು. ಜನವರಿ ಎಂಬುದು ಸಂಕ್ರಮಣದ ಕಾಲ. ಇದು, ಭಾವೈಕ್ಯ ಪಸರಿಸಲು ನಾಂದಿಯಾಗಲಿ ಎಂದು ಆಶಿಸಿದರು.<br /> <br /> ಜನವರಿ ತಿಂಗಳು ಸುಗ್ಗಿ ಕಾಲ. ಹೆಸರು ಬೇರೆಯಾದರೂ ಎಲ್ಲೆಡೆ ಫಸಲು ಕೈಗೆ ಸಿಗುವ ಕಾಲ. ಇದೇ ತಿಂಗಳಲ್ಲಿ ಯುವಜನರನ್ನು ಬೆಸೆಯುವ ಯುವಜನೋತ್ಸವ, ವಿವೇಕಾನಂದರ ಜನ್ಮದಿನ, ದೇಶದ ಐಕ್ಯತೆಯನ್ನು ಬಿಂಬಿಸುವ ಗಣರಾಜ್ಯ ದಿನವೂ ಬರುತ್ತದೆ. ಹೀಗಾಗಿಯೇ ಇದು ಸಂಕ್ರಮಣದ ಮಾಸ ಎಂದು ವ್ಯಾಖ್ಯಾನಿಸಿದರು.<br /> <br /> ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಪುಟ್ಟಮಾದಯ್ಯ, ನೆಹರು ಯುವಕೇಂದ್ರದ ನಿರ್ದೇಶಕ ಆರ್.ನಟರಾಜನ್ ಅವರು ಭಾಗವಹಿಸಿದ್ದರು.<br /> <br /> ಪ್ರಮಾಣಪತ್ರ ವಿತರಣೆ: ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರದ ವಿತರಣೆ, ವಿವಿಧ ಜಿಲ್ಲೆ, ರಾಜ್ಯಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನವು ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ವಿವಿಧ ರಾಜ್ಯ, ಜಿಲ್ಲೆಗಳ ಯುವಜನರ ನಡುವಿನ ಮುಖಾಮುಖಿ ಮತ್ತು ಸಂಸ್ಕೃತಿ ವಿನಿಮಯಕ್ಕೆ ವೇದಿಕೆಯಾದ, ನಗರದಲ್ಲಿ ಆಯೋಜನೆಗೊಂಡಿದ್ದ 9 ದಿನಗಳ ರಾಷ್ಟ್ರೀಯ ಭಾವೈಕ್ಯ ಶಿಬಿರ ಭಾನುವಾರ ಸಮಾರೋಪಗೊಂಡಿತು.<br /> <br /> ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಮುಖರು, ಶಿಬಿರದಲ್ಲಿ ಪಡೆದ ಸದ್ಭಾವನಾ ಅನುಭವಗಳನ್ನು ತಮ್ಮ ಸಮಕಾಲೀನರ ಜೊತೆಗೆ ಹಂಚಿಕೊಳ್ಳುವ ಮೂಲಕ ಭಾವೈಕ್ಯವನ್ನು ಪಸರಿಸಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.<br /> <br /> ರಾಷ್ಟ್ರೀಯ ಸೇವಾ ಯೋಜನೆಯ ನಿವೃತ್ತ ಉಪ ಕಾರ್ಯಕ್ರಮ ಸಲಹೆಗಾರರಾದ ಡಾ. ಎಚ್.ಎಸ್.ಸುರೇಶ್ ಅವರು, ಧರ್ಮ ಎಂದಿಗೂ ಬೆಳಕಾಗಬೇಕೇ ವಿನಾ ಬೆಂಕಿ ಆಗಬಾರದು. ಜನವರಿ ಎಂಬುದು ಸಂಕ್ರಮಣದ ಕಾಲ. ಇದು, ಭಾವೈಕ್ಯ ಪಸರಿಸಲು ನಾಂದಿಯಾಗಲಿ ಎಂದು ಆಶಿಸಿದರು.<br /> <br /> ಜನವರಿ ತಿಂಗಳು ಸುಗ್ಗಿ ಕಾಲ. ಹೆಸರು ಬೇರೆಯಾದರೂ ಎಲ್ಲೆಡೆ ಫಸಲು ಕೈಗೆ ಸಿಗುವ ಕಾಲ. ಇದೇ ತಿಂಗಳಲ್ಲಿ ಯುವಜನರನ್ನು ಬೆಸೆಯುವ ಯುವಜನೋತ್ಸವ, ವಿವೇಕಾನಂದರ ಜನ್ಮದಿನ, ದೇಶದ ಐಕ್ಯತೆಯನ್ನು ಬಿಂಬಿಸುವ ಗಣರಾಜ್ಯ ದಿನವೂ ಬರುತ್ತದೆ. ಹೀಗಾಗಿಯೇ ಇದು ಸಂಕ್ರಮಣದ ಮಾಸ ಎಂದು ವ್ಯಾಖ್ಯಾನಿಸಿದರು.<br /> <br /> ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಪುಟ್ಟಮಾದಯ್ಯ, ನೆಹರು ಯುವಕೇಂದ್ರದ ನಿರ್ದೇಶಕ ಆರ್.ನಟರಾಜನ್ ಅವರು ಭಾಗವಹಿಸಿದ್ದರು.<br /> <br /> ಪ್ರಮಾಣಪತ್ರ ವಿತರಣೆ: ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರದ ವಿತರಣೆ, ವಿವಿಧ ಜಿಲ್ಲೆ, ರಾಜ್ಯಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನವು ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>