<p> ಕುಮಟಾ : ಇಲ್ಲಿಯ ಸರಕಾರಿ ಆಸ್ಪತ್ರೆ ಸುತ್ತಲಿನ ಕಂದಾಯ ಭೂಮಿ ಅತಿಕ್ರಮಣದಾರರು ಸಂಬಂಧಪಟ್ಟ ಅಧಿಕಾರಿಗಳು ತಮ್ಮನ್ನು ತೆರವು ಗೊಳಿಸದಂತೆ ಸಹಾಯ ಮಾಡಬೇಕು ಎಂದು ಶುಕ್ರವಾರ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಅರ್ಪಿಸಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಅತಿಕ್ರಮಣದಾರರು, ಈ ಭಾಗದ ಸುಮಾರು 68 ಜನರ ಅತಿಕ್ರಮಣವನ್ನು ಜಿಲ್ಲಾಧಿಕಾರಿಗಳು ಸಕ್ರಮಗೊಳಿಸಿ ಅತಿಕ್ರಮಣದಾರರಿಂದ ಕರ ಪಾವತಿ ಮಾಡಿಸಿಕೊಂಡಿದ್ದಾರೆ. ಕೆಲ ಅತಿಕ್ರಮಣದಾರರಿಗೆ ಪಹಣಿ ಪತ್ರಿಕೆ ಸಿಕ್ಕದ್ದು, ಅದರ 9 ನೇ ನಂಬರ್ ಕಾಲಂನಲ್ಲಿ ಅತಿಕ್ರಮಣದಾರರ ಹೆಸರು ದಾಖ ಲಾಗಿದೆ. ಹೀಗಿರುವಾಗ ಸ್ಥಳೀಯ ಕಂದಾಯ ಇಲಾಖೆಯಿಂದ ಅತಿಕ್ರಮಣ ತೆರವುಗೊಳಿಸುವಂತೆ ತಮಗೆ ಪತ್ರ <br /> <br /> ಬಂದಿದೆ. ವಾಸಕ್ಕೆ ಮನೆ ಇಲ್ಲದ ನಾವೆಲ್ಲ ಐದು ರಿಂದ 1 ಗುಂಟೆವರೆಗೆ ಮಾತ್ರ ಮನೆ ಕಟ್ಟಿಕೊಳ್ಳಲು ಅತಿಕ್ರಮಣ ಮಾಡಿದ್ದೇವೆ. ಅದನ್ನು ಸರಕಾರ ಸಕ್ರಮಗೊಳಿಸಿ ಸಹಾಯ ಮಾಡಬೇಕು ಎಂದು ಶಾಸಕರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.<br /> <br /> ಮನವಿ ಸ್ವೀಕರಿಸಿದ ಶಾಸಕರು, ಕೆಲವರಿಗೆ ಜಮೀನು ಪಟ್ಟಾ, ಇನ್ನು ಕೆಲವರಿಗೆ ಪಹಣಿ ನೀಡಿ ಮತ್ತೆ ಜಾಗ ತೆರವುಗೊಳಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳು ನೊಟೀಸು ನೀಡಿದ್ದು, ತೀರಾ ಗೊಂದಲಕಾರಿ ಯಾಗಿದೆ.<br /> <br /> ವಾಸಕ್ಕೆ ಮನೆ ಇಲ್ಲದ ಜನರನ್ನು ಒಕ್ಕಲೆಬ್ಬಿಸಲು ಸರಕಾರ ಮುಂದಾದರೆ ತಾವು ಕಂದಾಯ ಇಲಾಖೆ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಭರವಸೆ ನೀಡಿದರು. ಜೆಡಿ(ಎಸ್)ನ ಬೀರಪ್ಪ ನಾಯ್ಕ, ನಾಗೇಶ ನಾಯ್ಕ ಮೊದಲಾದವರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಕುಮಟಾ : ಇಲ್ಲಿಯ ಸರಕಾರಿ ಆಸ್ಪತ್ರೆ ಸುತ್ತಲಿನ ಕಂದಾಯ ಭೂಮಿ ಅತಿಕ್ರಮಣದಾರರು ಸಂಬಂಧಪಟ್ಟ ಅಧಿಕಾರಿಗಳು ತಮ್ಮನ್ನು ತೆರವು ಗೊಳಿಸದಂತೆ ಸಹಾಯ ಮಾಡಬೇಕು ಎಂದು ಶುಕ್ರವಾರ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಅರ್ಪಿಸಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಅತಿಕ್ರಮಣದಾರರು, ಈ ಭಾಗದ ಸುಮಾರು 68 ಜನರ ಅತಿಕ್ರಮಣವನ್ನು ಜಿಲ್ಲಾಧಿಕಾರಿಗಳು ಸಕ್ರಮಗೊಳಿಸಿ ಅತಿಕ್ರಮಣದಾರರಿಂದ ಕರ ಪಾವತಿ ಮಾಡಿಸಿಕೊಂಡಿದ್ದಾರೆ. ಕೆಲ ಅತಿಕ್ರಮಣದಾರರಿಗೆ ಪಹಣಿ ಪತ್ರಿಕೆ ಸಿಕ್ಕದ್ದು, ಅದರ 9 ನೇ ನಂಬರ್ ಕಾಲಂನಲ್ಲಿ ಅತಿಕ್ರಮಣದಾರರ ಹೆಸರು ದಾಖ ಲಾಗಿದೆ. ಹೀಗಿರುವಾಗ ಸ್ಥಳೀಯ ಕಂದಾಯ ಇಲಾಖೆಯಿಂದ ಅತಿಕ್ರಮಣ ತೆರವುಗೊಳಿಸುವಂತೆ ತಮಗೆ ಪತ್ರ <br /> <br /> ಬಂದಿದೆ. ವಾಸಕ್ಕೆ ಮನೆ ಇಲ್ಲದ ನಾವೆಲ್ಲ ಐದು ರಿಂದ 1 ಗುಂಟೆವರೆಗೆ ಮಾತ್ರ ಮನೆ ಕಟ್ಟಿಕೊಳ್ಳಲು ಅತಿಕ್ರಮಣ ಮಾಡಿದ್ದೇವೆ. ಅದನ್ನು ಸರಕಾರ ಸಕ್ರಮಗೊಳಿಸಿ ಸಹಾಯ ಮಾಡಬೇಕು ಎಂದು ಶಾಸಕರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.<br /> <br /> ಮನವಿ ಸ್ವೀಕರಿಸಿದ ಶಾಸಕರು, ಕೆಲವರಿಗೆ ಜಮೀನು ಪಟ್ಟಾ, ಇನ್ನು ಕೆಲವರಿಗೆ ಪಹಣಿ ನೀಡಿ ಮತ್ತೆ ಜಾಗ ತೆರವುಗೊಳಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳು ನೊಟೀಸು ನೀಡಿದ್ದು, ತೀರಾ ಗೊಂದಲಕಾರಿ ಯಾಗಿದೆ.<br /> <br /> ವಾಸಕ್ಕೆ ಮನೆ ಇಲ್ಲದ ಜನರನ್ನು ಒಕ್ಕಲೆಬ್ಬಿಸಲು ಸರಕಾರ ಮುಂದಾದರೆ ತಾವು ಕಂದಾಯ ಇಲಾಖೆ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಭರವಸೆ ನೀಡಿದರು. ಜೆಡಿ(ಎಸ್)ನ ಬೀರಪ್ಪ ನಾಯ್ಕ, ನಾಗೇಶ ನಾಯ್ಕ ಮೊದಲಾದವರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>