<p>ಮಡಿಕೇರಿ: ಯುವಜನತೆ ದೇಶದ ವ್ಯವಸ್ಥೆ ನೀತಿಗಳ ವಿರುದ್ಧ ಸಮರಶೀಲ ಹೋರಾಟ ನಡೆಸಲು ದೃಢವಾದ ಹೆಜ್ಜೆಗಳನ್ನಿಡುವುದು ಅಗತ್ಯ ಎಂದು ಡಿವೈಎಫ್ಐನ ರಾಜ್ಯ ಉಪಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.<br /> <br /> ನಗರದ ಬಾಲಭವನದಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಸೆಪ್ಟೆಂಬರ್ 11 ರಿಂದ 15 ರವರೆಗೆ ನಡೆಯಲಿರುವ 9ನೇ ಅಖಿಲ ಭಾರತ ಯುವಜನ ಸಮ್ಮೇಳನದ ಭಾಗವಾಗಿ ನಡೆದ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವ ಜನತೆಯ ಪಾತ್ರ ಎಂಬ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.<br /> <br /> ದೇಶದಲ್ಲಿ ಆಳುವ ವರ್ಗದವರೇ ಭ್ರಷ್ಟಾಚಾರಿಗಳಾಗಿದ್ದು, ಕೇಂದ್ರದಲ್ಲಿ 2ಜಿ ಸ್ಟ್ರೆಕ್ಟ್ರಂ ಹಗರಣ, ರಾಜ್ಯದಲ್ಲಿ ಗಣಿಲೂಟಿ ಮತ್ತಿತರ ಹಗರಣಗಳನ್ನೊಳಗೊಂಡಂತೆ ಶಾಸಕಾಂಗ, ಕಾರ್ಯಾಂಗ ಮಾತ್ರವಲ್ಲ ನ್ಯಾಯಾಂಗವನ್ನೇ ಭ್ರಷ್ಟಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ ಎಂದು ವಿಷಾದಿಸಿದರು. <br /> <br /> ಮುಕ್ತ ಆರ್ಥಿಕ ನೀತಿಯ ಹಿನ್ನೆಲೆಯಲ್ಲಿ ದೇಶಕ್ಕೆ ಕಾಲಿಟ್ಟ ಕಂಪೆನಿಗಳು ಇಲ್ಲಿನ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ಬಿತ್ತಿ ಈ ಮೂಲಕ ಸಂಪತ್ತನ್ನು ಲೂಟಿ ಹೊಡೆತ್ತಿವೆ ಎಂದು ಆರೋಪಿಸಿದರು.<br /> <br /> ಜೆಡಿಎಸ್ನ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಇಂದಿನ ಸಾಕಷ್ಟು ಯುವಕರಲ್ಲಿ ಹೋರಾಟದ ಮನೋಭಾವವಿದ್ದರೂ, ಸೂಕ್ತ ವೇದಿಕೆಯನ್ನು ರಾಜಕೀಯ ಪಕ್ಷಗಳು ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು. <br /> <br /> ಹಣ ಸಂಪಾದಿಸಿದರೆ ಚುನಾವಣೆ ಗೆಲ್ಲಬಹುದು ಎಂಬ ಉದ್ದೇಶದಲ್ಲೇ ಇಂದಿನ ವ್ಯವಸ್ಥೆ ಸಾಗುತ್ತಿರುವುದರಿಂದ, ರಾಜಕಾರಣದ ವ್ಯವಸ್ಥೆಯಲ್ಲಿ ಬದಲಾವಣೆಯಾಗದೆ ಪರಿವರ್ತನೆ ಅಸಾಧ್ಯ ಎಂದು ಹೇಳಿದರು.<br /> <br /> ಜಾತಿ-ಧರ್ಮದ ಹೆಸರಿನಲ್ಲಿ ಶ್ರೇಷ್ಠ ಮತ್ತು ನಿಕೃಷ್ಟ ಭಾವನೆಗಳಿಂದ ಇಂದು ಜನರು ತಮ್ಮ ವಿವೇಚನಾ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಯುವಕರು ಹೋರಾಟದ ಕಿಚ್ಚುಗಳನ್ನು ರೂಢಿಸಿಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು. <br /> <br /> ಡಿವೈಎಫ್ಐ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಯುವ ಜನಾಂಗದಲ್ಲಿ ಜಾತಿ ವಿಷಬೀಜ ಬಿತ್ತಿ ಜನಾಂಗೀಯ ದ್ವೇಷದಲ್ಲಿ ಬಲಿಪಶು ಮಾಡಲಾಗುತ್ತಿದೆ. ಯುವಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.<br /> <br /> ಕೊಡಗು ಜಿಲ್ಲಾ ತಲೆಹೊರೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಹಸನಬ್ಬ ಮಾತನಾಡಿದರು. ಡಿವೈಎಫ್ಐನ ಜಿಲ್ಲಾ ಖಜಾಂಚಿ ರಮೇಶ್ ರೈ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಯುವಜನತೆ ದೇಶದ ವ್ಯವಸ್ಥೆ ನೀತಿಗಳ ವಿರುದ್ಧ ಸಮರಶೀಲ ಹೋರಾಟ ನಡೆಸಲು ದೃಢವಾದ ಹೆಜ್ಜೆಗಳನ್ನಿಡುವುದು ಅಗತ್ಯ ಎಂದು ಡಿವೈಎಫ್ಐನ ರಾಜ್ಯ ಉಪಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.<br /> <br /> ನಗರದ ಬಾಲಭವನದಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಸೆಪ್ಟೆಂಬರ್ 11 ರಿಂದ 15 ರವರೆಗೆ ನಡೆಯಲಿರುವ 9ನೇ ಅಖಿಲ ಭಾರತ ಯುವಜನ ಸಮ್ಮೇಳನದ ಭಾಗವಾಗಿ ನಡೆದ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವ ಜನತೆಯ ಪಾತ್ರ ಎಂಬ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.<br /> <br /> ದೇಶದಲ್ಲಿ ಆಳುವ ವರ್ಗದವರೇ ಭ್ರಷ್ಟಾಚಾರಿಗಳಾಗಿದ್ದು, ಕೇಂದ್ರದಲ್ಲಿ 2ಜಿ ಸ್ಟ್ರೆಕ್ಟ್ರಂ ಹಗರಣ, ರಾಜ್ಯದಲ್ಲಿ ಗಣಿಲೂಟಿ ಮತ್ತಿತರ ಹಗರಣಗಳನ್ನೊಳಗೊಂಡಂತೆ ಶಾಸಕಾಂಗ, ಕಾರ್ಯಾಂಗ ಮಾತ್ರವಲ್ಲ ನ್ಯಾಯಾಂಗವನ್ನೇ ಭ್ರಷ್ಟಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ ಎಂದು ವಿಷಾದಿಸಿದರು. <br /> <br /> ಮುಕ್ತ ಆರ್ಥಿಕ ನೀತಿಯ ಹಿನ್ನೆಲೆಯಲ್ಲಿ ದೇಶಕ್ಕೆ ಕಾಲಿಟ್ಟ ಕಂಪೆನಿಗಳು ಇಲ್ಲಿನ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ಬಿತ್ತಿ ಈ ಮೂಲಕ ಸಂಪತ್ತನ್ನು ಲೂಟಿ ಹೊಡೆತ್ತಿವೆ ಎಂದು ಆರೋಪಿಸಿದರು.<br /> <br /> ಜೆಡಿಎಸ್ನ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಇಂದಿನ ಸಾಕಷ್ಟು ಯುವಕರಲ್ಲಿ ಹೋರಾಟದ ಮನೋಭಾವವಿದ್ದರೂ, ಸೂಕ್ತ ವೇದಿಕೆಯನ್ನು ರಾಜಕೀಯ ಪಕ್ಷಗಳು ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು. <br /> <br /> ಹಣ ಸಂಪಾದಿಸಿದರೆ ಚುನಾವಣೆ ಗೆಲ್ಲಬಹುದು ಎಂಬ ಉದ್ದೇಶದಲ್ಲೇ ಇಂದಿನ ವ್ಯವಸ್ಥೆ ಸಾಗುತ್ತಿರುವುದರಿಂದ, ರಾಜಕಾರಣದ ವ್ಯವಸ್ಥೆಯಲ್ಲಿ ಬದಲಾವಣೆಯಾಗದೆ ಪರಿವರ್ತನೆ ಅಸಾಧ್ಯ ಎಂದು ಹೇಳಿದರು.<br /> <br /> ಜಾತಿ-ಧರ್ಮದ ಹೆಸರಿನಲ್ಲಿ ಶ್ರೇಷ್ಠ ಮತ್ತು ನಿಕೃಷ್ಟ ಭಾವನೆಗಳಿಂದ ಇಂದು ಜನರು ತಮ್ಮ ವಿವೇಚನಾ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಯುವಕರು ಹೋರಾಟದ ಕಿಚ್ಚುಗಳನ್ನು ರೂಢಿಸಿಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು. <br /> <br /> ಡಿವೈಎಫ್ಐ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಯುವ ಜನಾಂಗದಲ್ಲಿ ಜಾತಿ ವಿಷಬೀಜ ಬಿತ್ತಿ ಜನಾಂಗೀಯ ದ್ವೇಷದಲ್ಲಿ ಬಲಿಪಶು ಮಾಡಲಾಗುತ್ತಿದೆ. ಯುವಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.<br /> <br /> ಕೊಡಗು ಜಿಲ್ಲಾ ತಲೆಹೊರೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಹಸನಬ್ಬ ಮಾತನಾಡಿದರು. ಡಿವೈಎಫ್ಐನ ಜಿಲ್ಲಾ ಖಜಾಂಚಿ ರಮೇಶ್ ರೈ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>