<p>ಗದಗ: `ಅಧಿಕಾರ ದುರುಪಯೋಗ ಸಾಕು, ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ~ ಆಂದೋಲನದ ಅಂಗವಾಗಿ ಸೋಮವಾರ ಜನ ಸಂಗ್ರಾಮ ಪರಿಷತ್ ನೇತೃತ್ವದಲ್ಲಿ ಮಹಿಳೆಯರು ನಗರದಲ್ಲಿ ಮೆರವಣಿಗೆ ನಡೆಸಿದರು.<br /> <br /> ಕರ್ನಾಟಕ ಹಾಗೂ ಇಂಡಿಯನ್ ಕಮ್ಯೂನಿಟಿ ಆಕ್ಟಿವಿಸ್ಟ್ ನೆಟ್ವರ್ಕ್, ಶಿರಹಟ್ಟಿ ತಾಲ್ಲೂಕು ಸ್ವ-ಸಹಾಯ ಸಂಘಟನೆಗಳು ಮಾಚೇನಹಳ್ಳಿ, ಕಡಕೋಳ ಹಾಗೂ ಡೋಣಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ನಗರದ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ `ಉಳಿಸಿ ಉಳಿಸಿ ಕೃಷಿ ಭೂಮಿ ಊಳಿಸಿ, ಬೇಡ ಬೇಡ ಭ್ರಷ್ಟಾಚಾರ ಬೇಡ, ಹಸಿರೇ ಉಸಿರು~ ಎಂಬ ಫಲಕಗಳನ್ನು ಮೆರವಣಿ ಗೆಯಲ್ಲಿ ಹಿಡಿದು ಸಾಗಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.<br /> <br /> ಸಮಾಜ ಪರಿವರ್ತನ ಸಮುದಾಯ ಖಂಜಾಂಚಿ ಐ.ಜಿ.ಪುಲ್ಲಿ ಮಾತನಾಡಿ, ಗ್ರಾಮ ಸಭೆಗೆ ಪರಮಾಧಿಕಾರ ನೀಡಬೇಕು. ನಮ್ಮೂರಿಗೆ ನಾವೆ ಸರ್ಕಾರ ಆಗುವವರೆಗೆ ದೇಶದ ಅಭಿವೃದ್ಧಿ ಅಸಾಧ್ಯ. ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ ಆಂದೋಲನವನ್ನು ರಾಜ್ಯಾದಾದ್ಯಂತ ಹಮ್ಮಿಕೊಳ್ಳ ಲಾಗಿದೆ ಎಂದು ಹೇಳಿದರು. <br /> ಡಾ. ಬಸವರಾಜ ಧಾರವಾಡ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಆಗುವವರೆಗೆ ದೇಶದಲ್ಲಿ ಸಮಾನತೆ ಸಮಬಾಳು ತರುವುದು ಕಷ್ಟ. ಈ ನಿಟ್ಟಿನಲ್ಲಿ ಹಿರೇಮಠರ ಸಮಾಜಮುಖಿ ಹೋರಾಟ ಪ್ರತಿಯೊಬ್ಬ ಯುವಕರಿಗೆ ಪ್ರೇರಣೆಯಾಗಬೇಕಾಗಿದೆ ಎಂದರು.<br /> <br /> ಅನ್ಯಾಯದ ವಿರುದ್ಧ ಹೋರಾಡುವ ಯುವಕ- ಯುವತಿಯರು, ಸಮಾಜ ಮುಖಿ ಚಿಂತಕರು, ಸಾಹಿತಿಗಳು ಭಾಗವಹಿಸಬೇಕೆಂದು ಜನಸಂಗ್ರಾಮ ಪರಿಷತ್ ಜಿಲ್ಲಾ ಘಟಕದ ಸಂಚಾಲಕ ಗೋಣಿಬಸಪ್ಪ ಕೊರ್ಲಹಳ್ಳಿ ತಿಳಿಸಿದ್ದಾರೆ.</p>.<p><br /> ನಿವೃತ್ತ ಪ್ರಾಧ್ಯಾಪಕ ಹಾಗೂ ಶಿಕ್ಷಣ ತಜ್ಞ ಎಸ್.ಟಿ.ಬ್ಯಾಕೋಡ, ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನ ಗೌಡ ಗೋವಿಂದಗೌಡ್ರ, ವಿಜಯ ಕಲ್ಮನಿ, ಸಮಾಜ ಪರಿವರ್ತನಾ ಸಮುದಾಯದ ಡಿ.ಜಿ.ಚಿಕ್ಕೇರಿ, ಎಸ್.ಎ.ಮಕ್ಕಾಬಿ, ಲೀಲಾವತಿ ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: `ಅಧಿಕಾರ ದುರುಪಯೋಗ ಸಾಕು, ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ~ ಆಂದೋಲನದ ಅಂಗವಾಗಿ ಸೋಮವಾರ ಜನ ಸಂಗ್ರಾಮ ಪರಿಷತ್ ನೇತೃತ್ವದಲ್ಲಿ ಮಹಿಳೆಯರು ನಗರದಲ್ಲಿ ಮೆರವಣಿಗೆ ನಡೆಸಿದರು.<br /> <br /> ಕರ್ನಾಟಕ ಹಾಗೂ ಇಂಡಿಯನ್ ಕಮ್ಯೂನಿಟಿ ಆಕ್ಟಿವಿಸ್ಟ್ ನೆಟ್ವರ್ಕ್, ಶಿರಹಟ್ಟಿ ತಾಲ್ಲೂಕು ಸ್ವ-ಸಹಾಯ ಸಂಘಟನೆಗಳು ಮಾಚೇನಹಳ್ಳಿ, ಕಡಕೋಳ ಹಾಗೂ ಡೋಣಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ನಗರದ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ `ಉಳಿಸಿ ಉಳಿಸಿ ಕೃಷಿ ಭೂಮಿ ಊಳಿಸಿ, ಬೇಡ ಬೇಡ ಭ್ರಷ್ಟಾಚಾರ ಬೇಡ, ಹಸಿರೇ ಉಸಿರು~ ಎಂಬ ಫಲಕಗಳನ್ನು ಮೆರವಣಿ ಗೆಯಲ್ಲಿ ಹಿಡಿದು ಸಾಗಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.<br /> <br /> ಸಮಾಜ ಪರಿವರ್ತನ ಸಮುದಾಯ ಖಂಜಾಂಚಿ ಐ.ಜಿ.ಪುಲ್ಲಿ ಮಾತನಾಡಿ, ಗ್ರಾಮ ಸಭೆಗೆ ಪರಮಾಧಿಕಾರ ನೀಡಬೇಕು. ನಮ್ಮೂರಿಗೆ ನಾವೆ ಸರ್ಕಾರ ಆಗುವವರೆಗೆ ದೇಶದ ಅಭಿವೃದ್ಧಿ ಅಸಾಧ್ಯ. ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ ಆಂದೋಲನವನ್ನು ರಾಜ್ಯಾದಾದ್ಯಂತ ಹಮ್ಮಿಕೊಳ್ಳ ಲಾಗಿದೆ ಎಂದು ಹೇಳಿದರು. <br /> ಡಾ. ಬಸವರಾಜ ಧಾರವಾಡ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಆಗುವವರೆಗೆ ದೇಶದಲ್ಲಿ ಸಮಾನತೆ ಸಮಬಾಳು ತರುವುದು ಕಷ್ಟ. ಈ ನಿಟ್ಟಿನಲ್ಲಿ ಹಿರೇಮಠರ ಸಮಾಜಮುಖಿ ಹೋರಾಟ ಪ್ರತಿಯೊಬ್ಬ ಯುವಕರಿಗೆ ಪ್ರೇರಣೆಯಾಗಬೇಕಾಗಿದೆ ಎಂದರು.<br /> <br /> ಅನ್ಯಾಯದ ವಿರುದ್ಧ ಹೋರಾಡುವ ಯುವಕ- ಯುವತಿಯರು, ಸಮಾಜ ಮುಖಿ ಚಿಂತಕರು, ಸಾಹಿತಿಗಳು ಭಾಗವಹಿಸಬೇಕೆಂದು ಜನಸಂಗ್ರಾಮ ಪರಿಷತ್ ಜಿಲ್ಲಾ ಘಟಕದ ಸಂಚಾಲಕ ಗೋಣಿಬಸಪ್ಪ ಕೊರ್ಲಹಳ್ಳಿ ತಿಳಿಸಿದ್ದಾರೆ.</p>.<p><br /> ನಿವೃತ್ತ ಪ್ರಾಧ್ಯಾಪಕ ಹಾಗೂ ಶಿಕ್ಷಣ ತಜ್ಞ ಎಸ್.ಟಿ.ಬ್ಯಾಕೋಡ, ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನ ಗೌಡ ಗೋವಿಂದಗೌಡ್ರ, ವಿಜಯ ಕಲ್ಮನಿ, ಸಮಾಜ ಪರಿವರ್ತನಾ ಸಮುದಾಯದ ಡಿ.ಜಿ.ಚಿಕ್ಕೇರಿ, ಎಸ್.ಎ.ಮಕ್ಕಾಬಿ, ಲೀಲಾವತಿ ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>