<p> ನವದೆಹಲಿ (ಪಿಟಿಐ): ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶದಿಂದ ಸಿದ್ಧಪಡಿಸಲಾಗಿರುವ ಹೊಸ ಮಾರ್ಗಸೂಚಿಗಳನ್ನು ಸರ್ಕಾರ ಸದ್ಯವೇ ಪ್ರಕಟಿಸಲಿದೆ. ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಶೀಘ್ರ ಶಿಕ್ಷೆ ಕ್ರಮ ಸೇರಿದಂತೆ ಹಲವು ಕಟ್ಟುಪಾಡುಗಳನ್ನು ಇದು ಒಳಗೊಂಡಿದೆ.<br /> <br /> ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಚಳವಳಿ ನಿರತರಾಗಿದ್ದ ಸಂದರ್ಭದಲ್ಲಿ ಸರ್ಕಾರ ಮೂವರು ತಜ್ಞರ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿತ್ತು. ಈ ಸಮಿತಿ ನೀಡಿದ ವರದಿ ಆಧರಿಸಿ ಈ ಮಾರ್ಗಸೂಚಿ ನಿಗದಿ ಮಾಡಲಾಗಿದೆ. <br /> <br /> ಎಲ್ಲ ದೊಡ್ಡಮಟ್ಟದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು 12 ತಿಂಗಳ ಒಳಗೆ ಮುಗಿಸಬೇಕು; ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕು; ತನಿಖೆ ಮುಗಿದ ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು; ಸಣ್ಣ ಪ್ರಮಾಣದ ಅವ್ಯವಹಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಮುಗಿಸಬೇಕು- ಎಂಬ ಸಲಹೆಗಳು ತಜ್ಞರ ಸಮಿತಿ ವರದಿಯಲ್ಲಿ ಸೇರಿವೆ.<br /> <br /> ತನಿಖೆಗಾಗಿ ನೇಮಿಸುವ ಸಮಿತಿಯು ಪ್ರಸ್ತುತ ಸೇವೆಯಲ್ಲಿರುವ ಹಾಗೂ ನಿವೃತ್ತ ಸರ್ಕಾರಿ ನೌಕರರನ್ನು ಒಳಗೊಂಡಿರಬೇಕು; ತನಿಖಾ ಸಮಿತಿಗೆ ಸಂಭಾವನೆ ಮೊತ್ತ ಹೆಚ್ಚಿಸಬೇಕು; ರಾಜ್ಯಗಳಲ್ಲಿ ಶಾಸನಬದ್ಧ ಜಾಗೃತ ಆಯೋಗಗಳನ್ನು ರಚಿಸಬೇಕು; ತಪ್ಪಿತಸ್ಥರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವ ಜತೆಗೆ ಪಿಂಚಣಿ ಮತ್ತು ಪ್ರೋತ್ಸಾಹ ಧನ (ಗ್ರಾಚುಯಿಟಿ) ಕಡಿತಗೊಳಿಸಬೇಕು- ಇವು ಸಮಿತಿಯ ಇನ್ನಿತರ ಶಿಫಾರಸುಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ನವದೆಹಲಿ (ಪಿಟಿಐ): ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶದಿಂದ ಸಿದ್ಧಪಡಿಸಲಾಗಿರುವ ಹೊಸ ಮಾರ್ಗಸೂಚಿಗಳನ್ನು ಸರ್ಕಾರ ಸದ್ಯವೇ ಪ್ರಕಟಿಸಲಿದೆ. ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಶೀಘ್ರ ಶಿಕ್ಷೆ ಕ್ರಮ ಸೇರಿದಂತೆ ಹಲವು ಕಟ್ಟುಪಾಡುಗಳನ್ನು ಇದು ಒಳಗೊಂಡಿದೆ.<br /> <br /> ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಚಳವಳಿ ನಿರತರಾಗಿದ್ದ ಸಂದರ್ಭದಲ್ಲಿ ಸರ್ಕಾರ ಮೂವರು ತಜ್ಞರ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿತ್ತು. ಈ ಸಮಿತಿ ನೀಡಿದ ವರದಿ ಆಧರಿಸಿ ಈ ಮಾರ್ಗಸೂಚಿ ನಿಗದಿ ಮಾಡಲಾಗಿದೆ. <br /> <br /> ಎಲ್ಲ ದೊಡ್ಡಮಟ್ಟದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು 12 ತಿಂಗಳ ಒಳಗೆ ಮುಗಿಸಬೇಕು; ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕು; ತನಿಖೆ ಮುಗಿದ ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು; ಸಣ್ಣ ಪ್ರಮಾಣದ ಅವ್ಯವಹಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಮುಗಿಸಬೇಕು- ಎಂಬ ಸಲಹೆಗಳು ತಜ್ಞರ ಸಮಿತಿ ವರದಿಯಲ್ಲಿ ಸೇರಿವೆ.<br /> <br /> ತನಿಖೆಗಾಗಿ ನೇಮಿಸುವ ಸಮಿತಿಯು ಪ್ರಸ್ತುತ ಸೇವೆಯಲ್ಲಿರುವ ಹಾಗೂ ನಿವೃತ್ತ ಸರ್ಕಾರಿ ನೌಕರರನ್ನು ಒಳಗೊಂಡಿರಬೇಕು; ತನಿಖಾ ಸಮಿತಿಗೆ ಸಂಭಾವನೆ ಮೊತ್ತ ಹೆಚ್ಚಿಸಬೇಕು; ರಾಜ್ಯಗಳಲ್ಲಿ ಶಾಸನಬದ್ಧ ಜಾಗೃತ ಆಯೋಗಗಳನ್ನು ರಚಿಸಬೇಕು; ತಪ್ಪಿತಸ್ಥರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವ ಜತೆಗೆ ಪಿಂಚಣಿ ಮತ್ತು ಪ್ರೋತ್ಸಾಹ ಧನ (ಗ್ರಾಚುಯಿಟಿ) ಕಡಿತಗೊಳಿಸಬೇಕು- ಇವು ಸಮಿತಿಯ ಇನ್ನಿತರ ಶಿಫಾರಸುಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>